Breaking News

Breaking News

ಚಿರತೆ ಬಂದೈತಿ, ಓಡಲೇ….ಓಡಲೇ… ಓಡಲೇ…!

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ.ಇಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಹಿಂಡಲಗಾ ಗಣಪತಿ ಮಂದಿರದ ಬಳಿ ಇರುವ ಮಿಲಿಟರಿ ಕ್ವಾಟರ್ಸ್ ಹತ್ತಿರ ಚಿರತೆ ಕಾಣಿಸಿಕೊಂಡಿದೆ. ಹಿಂಡಲಗಾ ಗಣಪತಿ ಮಂದಿರದ ಹತ್ತಿರದಲ್ಲೇ ಇರುವ ಹನುಮಾನ ನಗರದ ಡಬಲ್ ರಸ್ತೆಯಲ್ಲಿರುವ ಮಿಲಿಟರಿ ಕ್ವಾಟರ್ಸ್ ಗೇಟ್ ಬಳಿ ಚಿರತೆ ಕಾಣಿಸಿಕೊಂಡು ಮತ್ತೆ ಗಾಲ್ಫ್ ಮೈದಾನದಲ್ಲಿ ಪರಾರಿಯಾಗಿದೆ. ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಗೆ ಜಿಸಿಬಿಯಿಂದ ಕಾರ್ಯಾಚರಣೆ ನಡೆಯುತ್ತಿರುವಾಗ,ಗಿಡಗಂಟೆಯಲ್ಲಿ ಅಡಗಿ ಕುಳಿತಿದ್ದ ಚಿರತೆ …

Read More »

ಬೆಳಗಾವಿಯಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ, ಬೋನಿಗೆ ಬೀಳಲಿಲ್ಲ…!!

ಬೆಳಗಾವಿ-ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ.ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾ ಸಂಖ್ಯೆ 10ರಲ್ಲಿ ಚಿರತೆ ಸೆರೆಯಾಗಿದೆ.ನಿನ್ನೆ ರಾತ್ರಿ 10.22ಗಂಟೆಗೆ ಸುಮಾರಿಗೆ ಕ್ಯಾಮರಾದಲ್ಲಿ ಚಿರತೆ ಗಾಲ್ಫ್ ಮೈದಾನದಲ್ಲಿ ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು ಅರಣ್ಯ ಇಲಾಖೆ ಈಗ ಫುಲ್ ಅಲರ್ಟ್ ಆಗಿದೆ.ಚಿರತೆ ಪೋಟೋ ಆಧರಿಸಿ ಆದೇ ಭಾಗದಲ್ಲಿ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ನಿರ್ಧಾರಿಸಿದೆ. ಚಿರತೆ ಗಾಲ್ಪ್ ಮೈದಾನದಲ್ಲಿಯೇ ಓಡಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು,ಗಾಲ್ಪ್ ಮೈದಾನದ ಸುತ್ತ …

Read More »

ಆನೆಗಳಿಂದ ದಾರಿಯ ಜೊತೆಗೆ ಸವಾರಿ,ಆದ್ರೂ ಚಿರತೆ ಪರಾರಿ…..!!

ಬೆಳಗಾವಿ- ಬೆಳಗಾವಿಯ ಗಾಲ್ಫ್ ಮೈದಾನ ಈಗ ಚಿರತೆಯ ಅಡ್ಡೆಯಾಗಿದೆ.ಈ ಅಡ್ಡೆಗೆ ಎರಡು ಆನೆಗಳು ಕಾರ್ಯಾಚರಣೆಗೆ ದಾರಿಯ ಜೊತೆಗೆ ಸವಾರಿಯ ವ್ಯವಸ್ಥೆ ಮಾಡಿದ್ರೂ ಸಹ,ಚಿರತೆ ಕಾರ್ಯಪಡೆಯ ಕಣ್ಣಿಗೆ ಬೀಳದೇ ಪರಾರಿಯಾಯಿತು. ಬೆಳ್ಳಂ ಬೆಳಗ್ಗೆ ಚಿರತೆ ಗಾಲ್ಫ್ ಮೈದಾನದಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತುಗಳು ಮೂಡಿದ್ದವು ಚಿರತೆ ಅಲ್ಲೆ ಇರುವದು ಖಾತ್ರಯಾಗಿತ್ತು,ಸುಮಾರು ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆದ್ರೂ ಚಿರತೆಯ ಸುಳಿವು ಸಿಗಲಿಲ್ಲ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಿರತೆ ಪತ್ತೆ …

Read More »

ಅರಭಾವಿ ಕ್ಷೇತ್ರದ ಎಲ್ಲ ರಸ್ತೆ ಸುಧಾರಣೆಗೆ,ಸಾಹುಕಾರ್ ಸಂಕಲ್ಪ..!!

108 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿ. 68 ಕೋಟಿ ರೂ. ರಸ್ತೆ ಕಾಮಗಾರಿಗಳಿಗೆ ಪ್ರಸ್ತಾವಣೆ ಸಲ್ಲಿಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನರೇಗಾ ಯೋಜನೆಯಡಿ ಅರಭಾವಿ ಕ್ಷೇತ್ರದ 34 ಗ್ರಾಮ ಪಂಚಾಯತಿಗಳಿಗೆ ತಲಾ 48 ಲಕ್ಷ ರೂ. ಬಿಡುಗಡೆ. ತೋಟದ ರಸ್ತೆಗಳಿಗೆ ತಕ್ಷಣವೇ ಕ್ರಿಯಾ ರೂಪಿಸಿ ಗೋಕಾಕ : ಅರಭಾವಿ ಮತಕ್ಷೇತ್ರದ ಎಲ್ಲ 34 ಗ್ರಾಮ ಪಂಚಾಯತಿಗಳಿಗೆ ರೈತರ ತೋಟದ ರಸ್ತೆಗಳ ನಿರ್ಮಾಣಕ್ಕಾಗಿ ನರೇಗಾ ಯೋಜನೆಯಡಿ …

Read More »

ಬೆಳಗಾವಿ ಪಾಲಿಕೆ,ಮೇಯರ್ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟ..

ಬೆಳಗಾವಿ ಕೊನೆಗೂ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್ ಚುನಾವಣೆಗೆ ದಾರಿ‌ ಸುಗಮವಾಗಿದೆ. ಈ ಕುರಿತು ಎರಡೂ ಸ್ಥಾನಗಳಿಗೆ ಸರಕಾರ ಮೀಸಲಾತಿ ಪ್ರಕಟಿಸಿದೆ‌. ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿಡಲಾಗಿದ್ದು, ಕಳೆದ‌ ಒಂದು‌ ವರ್ಷದಿಂದ ಅಧಿಕಾರ ಇಲ್ಲದೆ ಪರದಾಡುತ್ತಿದ್ದ ಪಾಲಿಕೆ ಸದಸ್ಯರಿಗೆ ಸರಕಾರ ಸಿಹಿ ಸುದ್ದಿ ಕೊಟ್ಟಿದೆ. ಇನ್ನೂ ‌ಮುಂದೆ ಮೇಯರ್, ಉಪಮೇಯರ್ ಚುನಾವಣೆಯ ಪ್ರಕ್ರಿಯೆ ಆರಂಭವಾಗಲಿದೆ. ಚುನಾವಣಾಧಿಕಾರಿಯಾಗಿರುವ ಬೆಳಗಾವಿ ಪ್ರಾದೇಶಿಕ …

Read More »

ದಾಳಿ..ದಾಳಿ..ದಾಳಿ…ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ…..

ಬೆಳಗಾವಿ- ಮೂಡಲಗಿ, ಬೆಳಗಾವಿ,ಚಂದೂರುಟೇಕ್,ಕಾಗವಾಡ ಆಯ್ತು,ಈಗ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲೂ ಸಹ ಚಿರತೆ ದಾಳಿ ನಡೆಸಿದೆ. ಬೆಳಗಾವಿ ಮಹಾನಗರದಲ್ಲಿ ಚಿರತೆ ಪತ್ತೆಗೆ ಆನೆ ಕಾರ್ಯಾಚರಣೆ ನಡೆಯುತ್ತಿದ್ದರೆ.ಅತ್ತ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ ಚಿರತೆಎಮ್ಮೆಯ ಕರುವಿನ ಮೇಲೆ ದಾಳಿ ಮಾಡಿ ಪರಾರಿಯಾಗಿದೆ. ಇಂಗಳಿ ಗ್ರಾಮದ ಕೃಷ್ಣಾ ಜಾಧವ್ ಎಂಬ ರೈತನಿಗೆ ಸೇರಿದ ಎಮ್ಮೆ ಕರು ಈಗ ಚಿರತೆ ದಾಳಿಗೆ ಬಲಿಯಾಗಿದೆ.ರಾತೋರಾತ್ರಿ ಎಮ್ಮೆ ಕರುವಿನ ಮೇಲೆ ದಾಳಿ ಮಾಡಿ ಪರಾರಿಯಾಗಿರುವ ಚಿರತೆ ಇಂಗಳಿ …

Read More »

ಚಿರತೆ ಹಿಡ್ಯಾಕ್ ಹಂದಿ ಹಿಡಿಯುವ ಬಲೆ ಬಳಕೆ…!!

ಬೆಳಗಾವಿ-ಚಿರತೆ ಹಿಡಿಯಲು ಬೆಳಗಾವಿಗೆ ಎರಡು ಆನೆ,ವಿಶೇಷ ತಂಡ,ಜೊತೆಗೆ ಗಾಡಿ ತುಂಬ ಹಂದಿ ಹಿಡಿಯುವ ಬಲೆಗಳನ್ನು ಬೆಳಗಾವಿಗೆ ತರಲಾಗಿದೆ. ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆ ಕಾರ್ಯಾಚರಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಅರ್ಜುನ,ಮತ್ತು ಆಲಿಯಾ ಬ ಎರಡು ಆನೆಗಳು ಈಗ ಕಾರ್ಯಾಚರಣೆಗೆ ರೆಡಿಯಾಗುತ್ತಿವೆ.ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯುವ ತಂಡಕ್ಕೆ ಕಾರ್ಯಾಚರಣೆ ಯಾವ ರೀತಿ ನಡೆಸಬೇಕು ಎನ್ನುವದರ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಶಾಸಕ ಅನೀಲ ಬೆನಕೆ,ಸಿಸಿಎಫ್ ಮಂಜುನಾಥ ಚವ್ಹಾನ್ ಸೇರಿದಂತೆ …

Read More »

ಎರಡು ಆನೆಗಳೊಂದಿಗೆ ಬೆಳಗಾವಿ ತಲುಪಿದ ಸಕ್ರೆಬೈಲ್ ಟೀಂ…

ಚಿರತೆ ಪತ್ತೆ ಕಾರ್ಯಾಚರಣೆಗಾಗಿ ಶಿವಮೊಗ್ಗದ ಸಕ್ರೆಬೈಲ ನಿಂದ ಎರಡು ಆನೆಗಳ ಜೊತೆ  ಎಕ್ಸಪರ್ಟ್ ಟೀಂ ಮದ್ಯರಾತ್ರಿ ಎರಡು ಗಂಟೆಗೆ ಬೆಳಗಾವಿ ತಲುಪಿದೆ..ಆನೆಗಳು ರೆಸ್ಟ್ ಮಾಡುತ್ತಿದ್ದು ಇನ್ನೇನು ಕಾರ್ಯಾಚರಣೆ ಶುರುವಾಗಲಿದೆ ಬೆಳಗಾವಿ: ಇಲ್ಲಿಯ ಗಾಲ್ಫ್ ಮೈದಾನದಲ್ಲಿ 20 ದಿನಗಳಿಂದ ಅರಿತುಕೊಂಡಿರುವ ಚಿರತೆ ಸೆರೆ ಹಿಡಿಯಲು ಶಿವಮೊಗ್ಗದ ಸಕ್ರೇಬೈಲು ಆನೆಬಿಡಾರದಿಂದ ಬುಧವಾರ ಬೆಳಗ್ಗೆ ಬಂದ ಎರಡು ಆನೆಗಳು ಕಾರ್ಯಾಚರಣೆ ಆರಂಭಿಸಿವೆ. ಅರಣ್ಯ ಸಚಿವರ ಕ್ಷೇತ್ರದಲ್ಲಿ ಚಿರತೆ ಸೆರೆ ಕಾರ್ಯಾಚರಣೆಗೆ ಆಗಮಿಸಿರುವ ಈ ಎರಡೂ …

Read More »

ಬೆಳಗಾವಿಯಲ್ಲಿ ಕೇವಲ 24 ಗಂಟೆಯಲ್ಲಿ ಗುಡ್ ಜಾಬ್….!!

24 ಗಂಟೆಯಲ್ಲಿಯೇ ಅನುಕಂಪ ಆಧಾರದ ನೌಕರಿ; ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, – ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ‌ಪ್ರಥಮ ದರ್ಜೆ ಸಹಾಯಕರೊಬ್ಬರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದರಿಂದ ಅವರ ಅವಲಂಬಿತ ಕಿರಿಯ ಸಹೋದರನಿಗೆ ಕೇವಲ 24 ಗಂಟೆಯಲ್ಲಿ ಅನುಕಂಪ ಆಧಾರಿತ ನೇರ ನೇಮಕಾತಿ ಆದೇಶ ನೀಡುವ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಳಕಳಿಯನ್ನು ಮೆರೆದಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಚಿನ್ …

Read More »

ಬೆಳಗಾವಿ ಡಿಸಿ ಆರ್ಡರ್ ಹತ್ತು ರೂ ಕ್ವಾಯಿನ್ ನಡೀತೈತಿ..

10 ರೂಪಾಯಿ ನಾಣ್ಯ ಚಾಲ್ತಿಯಲ್ಲಿದೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, – ಹತ್ತು ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿವೆ ಎಂದು ಭಾರತೀಯ ರಿಜರ್ವ್ ಬ್ಯಾಂಕು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಸಾರ್ವಜನಿಕರು‌ ಹಾಗೂ ವ್ಯಾಪಾರಸ್ಥರು ಮುಕ್ತವಾಗಿ ಇವುಗಳನ್ನು ಚಲಾವಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕೆಲವೆಡೆ ಹತ್ತು ರೂಪಾಯಿ ನಾಣ್ಯವನ್ನು ಸ್ವೀಕರಿಸಲು ಕೆಲವು ವರ್ತಕರು-ವ್ಯಾಪಾರಸ್ಥರು ನಿರಾಕರಿಸುತ್ತಿದ್ದಾರೆ ಎಂಬ ದೂರುಗಳಿವೆ. ಆದರೆ ಈ ನಾಣ್ಯಗಳು ಚಲಾವಣೆಯಲ್ಲಿರುತ್ತವೆ ಎಂದು ನವೆಂಬರ್ 20, …

Read More »
Sahifa Theme License is not validated, Go to the theme options page to validate the license, You need a single license for each domain name.