LOCAL NEWS

ಕೋವೀಡ್ ವ್ಯಾಕ್ಸೀನ್ ನಾಳೆ ಬೆಳಗಾವಿ ಜಿಲ್ಲೆಯ 7 ಕಡೆ ಡ್ರೈರನ್..

ಬೆಳಗಾವಿ- ಸರ್ಕಾರದ ಮಾರ್ಗದರ್ಶನದಂತೆ ನಾಳೆ ಬೆಳಗಾವಿ ಜಿಲ್ಲೆಯ 7 ಕಡೆ ಕೋವೀಡ್ ವ್ಯಾಕ್ಸೀನ್ ಡ್ರೈ ರನ್ ನಡೆಯಲಿದೆ. *ಎರಡು ಮೆಡಿಕಲ್ ಕಾಲೇಜು, ಒಂದು ಖಾಸಗಿ ಆಸ್ಪತ್ರೆ, ಒಂದು ಪಿಹೆಚ್‌ಸಿ, ಒಂದು ಯುಪಿಹೆಚ್‌ಸಿ, ಒಂದು ಸಿಹೆಚ್‌ಸಿ, ಒಂದು ತಾಲೂಕು ಆಸ್ಪತ್ರೆಯಲ್ಲಿ ಡ್ರೈರನ್ ನಾಳೆ ನಡೆಯಲಿದೆ. ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಜೆ‌ಎನ್‌ಎಮ್‌ಸಿ ಮೆಡಿಕಲ್ ಕಾಲೇಜು, ಬಿಮ್ಸ್ ಮೆಡಿಕಲ್ ಕಾಲೇಜು, ಗೋವಾ ವೇಸ್ ಬಳಿಯ ಲೇಕ್ ವ್ಯೂ ಆಸ್ಪತ್ರೆ, ನಿಪ್ಪಾಣಿ ನಗರ ಪ್ರಾಥಮಿಕ …

Read More »

ಬೆಳಗಾವಿಯಲ್ಲಿ ಬಿಜೆಪಿ ಮೇಯರ್ ಮಾಡ್ತೀವಿ-ಭೈರತಿ ಬಸವರಾಜ್

ಬೆಳಗಾವಿ- ಬೆಳಗಾವಿ ಪಾಲಿಕೆ ಚುನಾವಣೆ ವಿಚಾರ ಕುರಿತು ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ,ಬೆಳಗಾವಿ ಪಾಲಿಕೆ ಗೆ ಬಿಜೆಪಿ ಯಿಂದ ಅಭ್ಯರ್ಥಿಗಳು ಕಣಕ್ಕೆ ಇಳಸ್ತೀವಿ,ನಮ್ಮ ಪಕ್ಷದಿಂದ ಅಭ್ಯರ್ಥಿಗಳ ನ್ನ ಖಂಡಿತವಾಗಿ ನಿಲ್ಲಿಸುತ್ತೇವೆ,ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರ್ತಿವಿ. ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಮೇಯರ್ , ಮಾಡ್ತಿವಿ ಎಂದು ಸಚಿವ ಭೈರತಿ ಬಸವರಾಜ ಬೆಳಗಾವಿಯಲ್ಲೇ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ. ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಶೀಲನೆ ಮಾಡಿದ ಬಳಿಕ ಮಾದ್ಯಮಗಳ ಜೊತೆ …

Read More »

ಇತ ನಿಜವಾಗಿಯೂ ಬೆಳಗಾವಿಯ ಭಜರಂಗಿ ಭಾಯಿಜಾನ್..!!!!

ಬೆಳಗಾವಿ- ಬೆಳಗಾವಿ ಪಕ್ಕದ ಕಾಕತಿಯಲ್ಲಿ ಭಜರಂಗಿ ಭಾಯಿಜಾನ್ ಹಿಂದಿ ಚಲನ ಚಿತ್ರ ಮಾದರಿಯ ಘಟನೆ ನಡೆದಿದೆ.ನಟ ಸಲ್ಮಾನ್ ಖಾನ್ ಪಾಕಿಸ್ತಾನದ ಬಾಲಕಿ ಮುನ್ನೀ ಯನ್ನು ಪಾಕಿಸ್ತಾನಕ್ಕೆ ತಲುಪಿಸಿದರೆ ಕಾಕತಿಯ ವಿನಾಯಕ ನೇಪಾಳಿ ಯನ್ನು ನೇಪಾಳಕ್ಕೆ ತಲುಪಿಸಿ ಬೆಳಗಾವಿಯ ಭಜರಂಗಿ ಭಾಯಿಜಾನ್ ಆಗಿದ್ದಾರೆ. ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್ ಮಾತುಬಾರದ ಮೂಕಿ ಬಾಲಕಿಯೊಬ್ಬಳನ್ನು ನೆರೆಯ ಪಾಕಿಸ್ತಾನಕ್ಕೆ ಸೇರಿಸಲು ಪಟ್ಟ ಕಷ್ಟವನ್ನು ಎಳೆಎಳೆಯಾಗಿ ಚಿತ್ರಿಸಲಾಗಿದೆ. ಇಂತಹದ್ದೇ ಸಿನಿಮಾ ಮಾದರಿ ಘಟನೆಯೊಂದು …

Read More »

ಇಂದು ಬೆಳಗಾವಿ ಸಿಟಿಯಲ್ಲಿ ಅರ್ಬನ್ ಡೆವಲಪ್ಮೆಂಟ್ ಮಿನಿಸ್ಟರ್ ರೌಂಡ್ಸ್….

ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಬಿ.ಎ.ಬಸವರಾಜ್ ಅವರು ಇಂದು ಗುರುವಾರ (ಜ.7) ಮಧ್ಯಾಹ್ನ 3 ಗಂಟೆಯಿಂದಲೇ ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾ. ಇಂದು ಕೇವಲ ಕಾಮಗಾರಿಗಳ ಪರಶೀಲನೆ ನಡೆಯಲಿದ್ದು ನಾಳೆ ಪ್ರಗತಿ ಪರಶೀಲನಾ ಸಭೆ ನಡೆಯಲಿವೆ ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ. ಇಂದು ಮದ್ಯಾಹ್ನ 3-00 ಗಂಟೆಯಿಂದ ಬೆಳಗಾವಿ ನಗರದಲ್ಲಿ ನಗರಾಭಿವೃದ್ಧಿ ಸಚಿವರು ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಶೀಲನೆ ಮಾಡಲಿದ್ದು ಸಚಿವರು ಎಲ್ಲೆಲ್ಲಿ ಹೋಗ್ತಾರೆ ವಿವರ ಇಲ್ಲಿದೆ ನೋಡಿ.. ನಗರಾಭಿವೃದ್ಧಿ ಸಚಿವರ …

Read More »

ನುಡಿದಂತೆ ನಡೆದ ಸರ್ಕಾರ- ಡಾ.ಸೋನಾಲಿ ಹರ್ಷ

ಬೆಳಗಾವಿ- ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವದು,ಗೋರಕ್ಷಕರ ಬಹುದಿನಗಳ ಕನಸಾಗಿತ್ತು,ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಲಕ್ಷಾಂತರ ಗೋ ರಕ್ಷಕರ ಕನಸು ನನಸು ಮಾಡಿದ್ದು,ಸರ್ಕಾರದ ಕ್ರಮ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಠಿಸಿದೆ ಎಂದು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಹರ್ಷ ವ್ಯೆಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ,ರಾಜ್ಯದಹಿತವನ್ನು ಕಾಪಾಡಿದ್ದು ಅಭಿನಂದಾರ್ಹ ಸಂಗತಿಯಾಗಿದ್ದು,ಸರ್ಕಾರ ರಾಜ್ಯದಲ್ಲಿ ಗೋಹತ್ಯೆ …

Read More »

ಬಜೆಟ್ ನಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡದಿದ್ದರೆ ಆಮರಣ ಉಪವಾಸ

ಚಿಕ್ಕೋಡಿ-ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಜಾರಕಿಹೊಳಿ‌ ಸಹೋದರರ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದ್ದು,ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡದಿದ್ದರೆ,ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವದಾಗಿ ಹಿರಿಯ ಹೋರಾಟಗಾರ ಬಿ ಆರ್ ಸಂಗಪ್ಪಗೋಳ್ ಎಚ್ಚರಿಕೆ ನೀಡಿದ್ದಾರೆ. ಚಿಕ್ಕೋಡಿಯಲ್ಲಿ ಸಂಗಪ್ಪಗೋಳ ನೇತ್ರತ್ವದಲ್ಲಿ ಸುದ್ಧಿಗೋಷ್ಠಿ ನಡೆಸಿದ ಹೋರಾಟಗಾರರು, ಚಿಕ್ಕೋಡಿಯನ್ನು ನಿರ್ಲಕ್ಷಿಸಿ ಗೋಕಾಕ್ ಜಿಲ್ಲೆ ಮಾಡಲು ಜಾರಕಿಹೊಳಿ‌ ಸಹೋದರರು ಮುಂದಾಗಿದ್ದಾರೆ. ಗೋಕಾಕ್ ಜಿಲ್ಲೆ ಮಾಡುವುದಾಗಿ ಹೇಳಿದ್ದ ರಮೇಶ ಹಾಗೂ ಸತೀಶ್ ಜಾರಕಿಹೊಳಿ‌ ಚಿಕ್ಕೋಡಿಯನ್ನು ಕಡೆಗಣಿಸಿದ್ದಾರೆ …

Read More »

ಡಿಸಿ ಕಚೇರಿ ಎದುರು,ಪೋಲೀಸರ ಜೊತೆ ಎಂಈಎಸ ,ಮುಖಂಡರ ವಾಗ್ವಾದ

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಎದುರು ಹಾರಿಸಿರುವ ಕನ್ನಡದ ಸ್ವಾಭಿಮಾನದ ಧ್ವಜವನ್ನು ತೆರವು ಮಾಡುವಂತೆ ಆಗ್ರಹಿಸಿ,ಎಂಈಎಸ್ ಮತ್ತು ಶಿವಸೇನೆಯ ಮುಖಂಡರು,ಗಲಾಟೆ ಶುರು ಮಾಡಿದ್ದಾರೆ. ಧ್ವಜ ತೆರವು ಮಾಡುವಂತೆ ಆಗ್ರಹಿಸಿ ಡಿಸಿ ಕಚೇರಿಗೆ ಆಗಮಿಸಿದ ಈ ನಾಡವಿರೋಧಿಗಳು ನಾವು ತಕ್ಷಣ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಬೇಕು,ಎಂದು ಡಿಸಿ ಕಚೇರಿಗೆ ನುಗ್ಗುಲು ಪ್ರಯತ್ನಿಸಿದಾಗ ಪೋಲೀಸರು ಅವರನ್ನು ತಡೆದಿದ್ದಾರೆ. ಪಾಲಿಕೆ ಎದುರು ಹಾರಿಸಿರುವ ಕನ್ನಡ ಧ್ವಜವನ್ನು ಕೂಡಲೇ ತೆರವು ಮಾಡಬೇಕು ಇಲ್ಲವಾದಲ್ಲಿ ಜನೇವರಿ 21 ರಂದು ಪಾಲಿಕೆ ಎದುರು …

Read More »

ಬೆಳಗಾವಿ, ಕಾಂಗ್ರೆಸ್ ಕಚೇರಿಯಲ್ಲಿ ಫುಲ್ ಗರ್ದಿ….!!!

ಬೆಳಗಾವಿ-ಬಾಡಿಗೆ ಕಟ್ಟಡದಲ್ಲಿದ್ದ ಕಾಂಗ್ರೆಸ್ ಕಚೇರಿಯನ್ನು ಕೆಲವೇ ಕೆಲವು ಕಾಂಗ್ರೆಸ್ ನಾಯಕರು ಕಂಟ್ರೋಲ್ ಮಾಡ್ತಾ ಇದ್ರು,ಅದು ಅವರ ಕಚೇರಿಯಂತಾ,ಕಾರ್ಯಕರ್ತರು ಹಿಂದೆ,ಮುಂದೆ ನೋಡ್ತಾ ಇದ್ರು.ಆದ್ರೆ ಈಗ ಕಾಲ ಬದಲಾಗಿದೆ.ಕಾಂಗ್ರೆಸ್ ಕಚೇರಿಗೆ ಪಕ್ಷದ ಸ್ವಂತ ಕಟ್ಟಡವಿದ್ದು,ಕಾಂಗ್ರೆಸ್ ಚಟುವಟಿಕೆಗಳು ಚುರುಕು ಗೊಂಡಿವೆ. ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಗುತ್ತಿದ್ದಂತೆಯೇ ಅರ್ದಮರ್ದ ವಾಗಿದ್ದ ಬೆಳಗಾವಿ ಕಾಂಗ್ರೆಸ್ ಭವನದ ಕಟ್ಟಡ ಕಾಮಗಾರಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪೂರ್ಣಗೊಳಿಸಿದರು.ಜೊತೆಗೆ ಈ ಕಟ್ಟಡಕ್ಕೆ ಹೊಸ ಲುಕ್ ಕೊಡುವದರ ಜೊತೆಗೆ ಎಲ್ಲ …

Read More »

ಗೋಹತ್ಯೆ ನಿಷೇಧ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಬೆಳಗಾವಿ-ಸುಗ್ರೀವಾಜ್ಞೆಯ ಪ್ರಕಾರ ರಾಜ್ಯದಲ್ಲಿ ಜಾನುವಾರು ಸಾಗಾಣಿಕೆ, ಹತ್ಯೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ, ಹತ್ಯೆಗಾಗಿ ಜಾನುವಾರು ಮಾರಾಟ, ಖರೀದಿ ಮೇಲೆ ಸಹ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ, ಹತ್ಯೆಗಾಗಿ ಮಾರಾಟ ಮಾಡಿದರೆ ಆ ಜಾನುವಾರುಗಳನ್ನು ಜಪ್ತಿ ಮಾಡಲಾಗುವುದು. ನಿಯಮ ಉಲ್ಲಂಘಿಸಿದರೆ ಮೂರು ವರ್ಷದಿಂದ ಏಳು ವರ್ಷ ಜೈಲು ಶಿಕ್ಷೆ ಸಹ ವಿಧಿಸಲಾಗುವುದು ಎಂದು ಹೇಳಲಾಗಿದೆ. ಅಲ್ಲದೆ 50 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ದಂಡ ಸಹ ವಿಧಿಸಲಾಗುವುದು. ಆದರೆ, ಕೃಷಿ ಮತ್ತು …

Read More »

ಹು..ಆರ್ ಯೂ ಎಂದಾಗ….ಐ ಯಮ್ ಗಾಡ್ ಅಂತೀದ್ದಾನೆ…..!!!

ಈತ ಫಾರೇನರ್….ಆದ್ರೂ.. ಪರದೇಶಿ…!! ಬೆಳಗಾವಿ-ಕಳೆದ ಎರಡು ವಾರಗಳಿಂದ,ಬೆಳಗಾವಿ ಪಕ್ಕದ ಕಣಬರ್ಗಿ ಗ್ರಾಮದ ಬಸ್ ನಿಲ್ಧಾಣದಲ್ಲಿ ಪರದೇಶಿಯೊಬ್ಬ ವಾಸ ಮಾಡಿದ್ದಾನೆ.ಈತ ನೋಡಲು ಮ್ಯಾಡ್ ಅನಿಸಿದ್ರೂ ಹು..ಆರ್ ಯೂ ಎಂದಾಗ ಐ ಯಮ್ ಗಾಡ್ ಅಂತೀದ್ದಾನೆ. ಈತ ಮೂಲತಹ ಜರ್ಮನ್ ದೇಶದವ,ಗೋವಾದಿಂದ ಅಲೆದಾಡುತ್ತ ಕೊನೆಗೆ ಕಣಬರ್ಗಿ ಗ್ರಾಮಕ್ಕೆ ತಲುಪಿದ್ದಾನೆ. ಕಳೆದ ಎರಡು ವಾರಗಳಿಂದ ಇಲ್ಲಿಯ ಬಸ್ ನಿಲ್ಧಾಣದಲ್ಲೇ ಠಿಖಾನಿ ಹೂಡಿದ್ದಾನೆ ಗ್ರಾಮಸ್ಥರು ಈತ ಫಾರೇನರ್ ಅಂತಾ ರೊಟ್ಟಿಯ ಬದಲು ಆ್ಯಪಲ್ ಕೊಡುತ್ತಿದ್ದಾರೆ.ಸ್ಥಳೀಯರ ಆ್ಯಪಲ್ …

Read More »

ಹಳ್ಳಿ ಟೂ ದಿಲ್ಲಿ ಕಾಂಗ್ರೆಸ್ ಪಕ್ಷದ ಪಾವರ್ ಟೂರ್….!!

ಬೆಳಗಾವಿ-ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ 13 ನೂತನ ಗ್ರಾಮ‌ ಪಂಚಾಯಿತಿ ಸದಸ್ಯರು ಸೇರಿ 50 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ನೂತನ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ನೂತನ ಕಾರ್ಯಕರ್ತರಿಗೆ ಶಾಲು ಹೊದಿಸಿ ಪಕ್ಷಕ್ಕೆ ಬರ ಮಾಡಿಕೊಂಡ ನಂತರ ಮಾತನಾಡಿದ ಶಾಸಕರು, ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಅಭಿವೃದ್ದಿ ಕೆಲಸಗಳಿಗೆ …

Read More »

ಬೆಳಗಾವಿ ಜಿಲ್ಲೆಯ  (ವಿ) ” ಭಜನೆಗೆ” 23 ವರ್ಷಗಳ ಇತಿಹಾಸ…!!!

ಬೆಳಗಾವಿ-ಬೆಳಗಾವಿ ಜಿಲ್ಲೆಯನ್ನು ಎರಡೊಮೂರೊ ತುಕುಡಿ ಮಾಡಿ ಒಡೆಯಬೇಕೆಂಬಚ ರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.ಮೂರೊನಾ ಲ್ಕೊ ವರ್ಷಕ್ಕೊಮ್ಮೆ ವಿಭಜನೆಯೆಂಬ”  ಭಜನೆ” ನಡೆಯುತ್ತಲೇ ಇರುತ್ತದೆ.ಜನತೆಯಹಾಗೂ ಆಡಳಿತದ ಹಿತದೃಷ್ಟಿಯಿಂದ ಎಂಬ ಕಾರಣವೊಡ್ಡಿ ಜಿಲ್ಲೆಯನ್ನು ಮೂರುಭಾ ಗಗಳನ್ನಾಗಿ ಒಡೆಯಬೇಕೆಂಬ ಮಾತಿಗೆ ಬಹುತೇಕ ರಾಜಕೀಯ ಕಾರಣಗಳೇಇವೆ. ಜಿಲ್ಲೆಯ ವಿಭಜನೆಗೆ 23 ವರ್ಷಗಳ ಇತಿಹಾಸವೇ ಇದೆ.1997 ರ ಅಗಷ್ಟ 22 ರಂದು ನಡೆದ ಸಚಿವ ಸಂಪುಟ ಕೈಕೊಂಡ ನಿರ್ಧಾರದಂತೆ ಜಿಲ್ಲೆಯನ್ನು ಬೆಳಗಾವಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳನ್ನಾಗಿ ವಿಭಜಿಸಲಾಗಿತ್ತು.ಬೆಳಗಾವಿ …

Read More »

ಬೆಳಗಾವಿ ಚಿಕ್ಕೋಡಿ ಸೇರಿ 22 ಶಿಕ್ಷಕರಿಗೆ ಕೋವೀಡ್ ಸೊಂಕು..

ಬೆಳಗಾವಿ- ಸರ್ಕಾರ ಶಾಲಾ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಬೆನ್ನಲ್ಲಿಯೇ ಬೆಳಗಾವಿ,ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 22 ಶಿಕ್ಷರಿಗೆ ಕೋವೀಡ್ ಸೊಂಕು ತಗಲಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದ 10,ಬೆಳಗಾವಿ ನಗರ ವಲಯದ 4 ,ರಾಮದುರ್ಗ3,ಕಿತ್ತೂರು 1 ಶಿಕ್ಷಕರಿಗೆ ಅಂದ್ರೆ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 18 ಶಿಕ್ಷಕರಿಗೆ ಕೋವೀಡ್ ಸೊಂಕು ತಗಲಿದ್ದು ದೃಡವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4 ಶಿಕ್ಷಕರಿಗೆ ಕೋವೀಡ್ ಸೊಂಕು ತಗಲಿದೆ.ರಾಯಬಾಗದ 2 …

Read More »

ಪತ್ರಕರ್ತ ಸಂಜಯ ಸೂರ್ಯವಂಶಿಗೆ ವಿಶೇಷ, ಪುರಸ್ಕಾರ…

ಬೆಳಗಾವಿ-ಕಳೆದ ಎರಡು ದಶಕಗಳಿಂದ ವಿವಿಧ ಮರಾಠಿ ದಿನಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿರುವ,ಪುಡಾರಿ ಮರಾಠಿ ದಿನಪತ್ರಿಕೆಯ ಬೆಳಗಾವಿ ವಿಭಾಗದ ಸ್ಥಾನಿಕ ಸಂಪಾದಕಾಗಿರುವ ಸಂಜಯ ಸೂರ್ಯವಂಶಿ,ಅವರು ಮಹಾರಾಷ್ಟ್ರ ಪತ್ರಕರ್ತರ ಸಂಘ ನೀಡುವ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರ ಪತ್ರಕರ್ತರ ಸಂಘ ಪ್ರತಿ ವರ್ಷ ಮಹಾರಾಷ್ಟ್ರ ರಾಜ್ಯದ ಹೊರಗಡೆ ಸೇವೆ ಮಾಡುತ್ತಿರುವ ಮರಾಠಿ ಮತ್ರಕರ್ತರನ್ನು ಗೌರವಿಸುತ್ತಾ ಬಂದಿದ್ದು ಈ ಬಾರಿ ಈ ವಿಶೇಷ ಪುರಸ್ಕಾರಕ್ಕೆ ಬೆಳಗಾವಿಯ ಖ್ಯಾತ ಪತ್ರಕರ್ತ ಸಂಜಯ ಸೂರ್ಯವಂಶಿ ಆಯ್ಕೆಯಾಗಿರುವದು …

Read More »

ಬೆಳಗಾವಿ ಗ್ರಾಮೀಣದಲ್ಲಿ ನಮ್ಮ ಕ್ಯಾಂಡೀಡೇಟ್ ಅದ್ರ ಇಲ್ಲ ಬಿಡಿ- ಸತೀಶ್ ಜಾರಕಿಹೊಳಿ

ಬೆಳಗಾವಿ- ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿ ಗೆಲ್ಲಿಸುವೆ ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆ ವಿಚಾರವನ್ನು ಮಾದ್ಯಮಗಳು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಕೇಳಿದಾಗ, ನಿಲ್ಲಾವ್ರು ಗಟ್ಟಿ ಇದಾರೆ, ನಮ್ಮ ಕ್ಯಾಂಡಿಡೇಟ್ ಗಟ್ಟಿ ಇದೆ, ನಮ್ಮ ಕ್ಯಾಂಡಿಡೇಟ್ ಕೂಡಾ ಅದ್ರ ಇಲ್ಲಾ ಬಿಡಿ ನಮ್ಮದು ಕ್ಯಾಂಡಿಡೇಟ್ ಕೂಡಾ ಗಟ್ಟಿ ಇದೆ ಎಂದು ಸತೀಶ್ ಜಾರಕಿಹೊಳಿ ಉತ್ತರಿಸಿದರು. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಲಕ್ಷ್ಮೀ …

Read More »