Breaking News

LOCAL NEWS

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಸಲು ರಿಟರ್ನಿಂಗ್ ಆಫಿಸರ್ ನೇಮಕ

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಸಲು,ಸರ್ಕಾರ ತೀರ್ಮಾಣಿಸಿದೆ.ಚುನವಣೆ ನಡೆಸಲು ರಿಟರ್ನಿಂಗ್ ಆಫಿಸರ್ ನೇಮಕ ಮಾಡಿ,ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಭೀಮ್ಸ್ ಆಡಳಿತಾಧಿಕಾರಿ ಸಯೀದಾ ಆಫ್ರೀನ್ ಎಸ್ ಬಳ್ಳಾರಿ ಇವರನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ರಿಟರ್ನಿಂಗ್ ಆಫಿಸರ್ ಎಂದು ನೇಮಕ ಮಾಡಲಾಗಿದ್ದು,ಸಹಕಾರ ಚುನಾವಣಾ ಪ್ರಾಧಿಕಾರದ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಈ ಮೊದಲು ಕಾಡಾ ಉಪ ಅಡಳಿತಾಧಿಕಾರಿ ಜಯಶ್ರೀ ಶಿಂತ್ರಿ ಅವರನ್ನು ರಿಟರ್ನಿಂಗ್ ಆಫಿಸರ್ ಎಂದು ನೇಮಿಸಲಾಗಿದ್ದು,ಸರ್ಕಾರ …

Read More »

ಗೋಮೌಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ ಪ್ರಕರಣ, ಐವರ ಬಂಧನ

ಬೆಳಗಾವಿ- ಬೆಳಗಾವಿಯಿಂದ ಗೋವಾ ರಾಜ್ಯಕ್ಕೆ ಗೋಮೌಂಸ ಸಾಗಿಸುತ್ತಿದ್ದ ವಾಹನಕ್ಕೆ ಕರ್ಲೇ ಗ್ರಾಮದ ಹತ್ತಿರ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರು ಐವರನ್ನು ಬಂಧಿಸಿದ್ದಾರೆ. ಜೂನ್ 5 ರಂದು ರಾತ್ರಿ ಗೋವಾ ರಾಜ್ಯಕ್ಕೆ ಗೋಮೌಂಸ ಸಾಗಿಸುತ್ತಿದ್ದ ವಾಹನವನ್ನು ಕರ್ಲೇ ಗ್ರಾಮದ ಹತ್ತಿರ ತಡೆದು ಬೆಂಕಿ ಹಚ್ಚಲಾಗಿತ್ತು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಈ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿ ನಗರದ ವಡಗಾವಿಯ ಆಕಾಶ ಮನೋಹರ …

Read More »

ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಬೆಳಗಾವಿ ಶಾಸಕರ ನಿಯೋಗ

ಬೆಂಗಳೂರು, ಜೂನ್ 10 : ಕೊರೋನಾದಿಂದ ಉದ್ಭವಿಸಿರುವ ಸಂಕಷ್ಟದ ಪರಿಣಾಮ ರಾಜ್ಯದ ನೇಕಾರರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗದೆ ತೀವ್ರ ತೊಂದರೆಗೆ ಈಡಾಗಿದ್ದು, ಇಂತಹ ನೇಕಾರ ಸಮುದಾಯದ ಸಹಾಯಕ್ಕೆ ಮುಂದಾಗುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು. ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಸಚಿವರ ನೇತೃತ್ವದ ನಿಯೋಗ ರಾಜ್ಯ ಸರ್ಕಾರ …

Read More »

ಬೆಳಗಾವಿಗೆ ಸರ್ರನೇ ಬಂದು…ಭರ್ರನೇ ಹೋದರೂ, ಉಮಾಶ್ರೀ,ಹೇಳಿದ್ದೇನು ಗೊತ್ತಾ….!!

ಬೆಳಗಾವಿ-ಬೆಳಗಾವಿಗೆ ಮಾಜಿ ಸಚಿವೆ ಉಮಾಶ್ರೀ ಭೇಟಿ,ನೀಡಿ ಬೆಳಗಾವಿ ಜಿಲ್ಲೆಯಲ್ಲಿ ಮೂವರು ನೇಕಾರರ ಆತ್ಮಹತ್ಯೆ ಮಾಡಿಕೊಂಡಿದ್ದು , ಆತ್ಮಹತ್ಯೆ ಮಾಡಿಕೊಂಡ ನೇಕಾರರ ಮನೆಗಳಿಗೆ ಮಾಜಿ ಸಚಿವೆ ಉಮಾಶ್ರೀ ಭೇಟಿ ನೀಡಿ ಸಾಂತ್ವನ ಹೇಳಿದರು. ಬೆಳಗಾವಿಯ ವಡಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೇಕಾರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಉಮಾಶ್ರೀ, ಸಿಎಂ ಮನಸ್ಸು ಮಾಡಿದ್ರೇ ತಕ್ಷಣ ಪರಿಹಾರ ಘೋಷಣೆ ಮಾಡಬಹುದು, ಜಿಎಸ್‌ಟಿ ಮತ್ತು ನೋಟ್ ಬ್ಯಾನ್ ನಿಂದ …

Read More »

ಬೆಳಗಾವಿಯಲ್ಲಿ ಇಂದು ಕೇವಲ ಒಂದು, ಇನ್ ಕಮೀಂಗ್ 38 ಹೋಮ್ ಗೋಯಿಂಗ್

ಬೆಳಗಾವಿ- ಗಡಿನಾಡ ಗರಡಿಯಲ್ಲಿ ಹೆಮ್ಮಾರಿ ಕೊರೊನಾ ಕುಣಿತ ಮುಂದುವರೆದಿದೆ ಇಂದು ಬುಧವಾರ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಬ್ಬರು ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 300 ರ ಗಡಿ ದಾಟಿದ್ದು 302 ಕ್ಕೆ ಏರಿದೆ.ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಜು ವ್ಯಾಪಕವಾಗಿ ಹರಡುತ್ತಿದೆ.ಇಂದು ಪತ್ತೆಯಾದ ಸೊಂಕಿತರು ಮಹಾರಾಷ್ಟ್ರದ ನಂಟು ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿದರೂ ಸಹ ಅಷ್ಟೇ ತೊರಿತವಾಗಿ ಸೊಂಕಿತರು …

Read More »

ಬೆಳಗಾವಿಯಲ್ಲಿ ಗುಡ್ ನ್ಯುಸ್ ಇಂದು 38 ಸೊಂಕಿತರ ಗುಣಮುಖ,ಆಸ್ಪತ್ರೆಯಿಂದ ಡಿಸ್ಚಾರ್ಜ

ಬೆಳಗಾವಿ-ಬೆಳಗಾವಿಯಲ್ಲಿ ಹೊರಬಿತ್ತು ಗುಡ್ ನ್ಯುಸ್ ಹೊರಬಿದ್ದಿದೆ. ಇಂದು 38 ಸೊಂಕಿತರ ಗುಣಮುಖರಾಗಿ,ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ. ಇಂದು ಗುಣಮುಖರಾಗಿ,ಡಿಸ್ಚಾರ್ಜ ಆಗಿರುವವರು,ಹುಕ್ಕೇರಿ,ಅಥಣಿ,ರಾಯಬಾಗ ತಾಲ್ಲೂಕಿನವರಾಗಿದ್ದಾರೆ. Today total 38 covid-19 patients are discharged from BIMS hospital, Belagavi.

Read More »

ಊಟದಲ್ಲಿ ಕೀಟ, ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಅಧಿಕಾರಿಯ ನೇಮಕ

ಬೆಳಗಾವಿ- ಊಟದಲ್ಲಿ,ಜಿರಲೆ,ಇರುವೆ, ಸೇರಿದಂತೆ ಇತರ ಕೀಟಗಳು ಮಿಕ್ಸ್ ಆಗುತ್ತಿವೆ,ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕುರಿತು ವಿಶೇಷ ನಿಗಾ ವಹಿಸಲು ವಿಶೇಷ ಅಧಿಕಾರಿಯನ್ನು ನೇಮಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೊಂಕಿತರು,ತಮಗೆ ವಿತರಿಸಿದ ಆಹಾರದಲ್ಲಿ ಜಿರಲೆ,ಇರುವೆ ಮಿಕ್ಸ್ ಆಗುತ್ತಿವೆ ಎಂದು ವಿಡಿಯೋ ಮಾಡಿ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಮೂರು ದಿನಗಳಿಂದ ಪೋಸ್ಟ್ ಮಾಡುತ್ತಿದ್ದರು.ಸೊಂಕಿತರು ಪೋಸ್ಟ್ ಮಾಡಿದ ವಿಡಿಯೋಗಳು ವೈರಲ್ ಆದ ಹಿನ್ನಲೆಯಲ್ಲಿ …

Read More »

ಮಲ್ಲಿಕಾರ್ಜುನ್ ಖರ್ಗೆ ಜೀವ ಬೆದರಿಕೆಯ ಹಿಂದೆ ಆರ್ ಎಸ್ ಎಸ್ ಕೈವಾಡ- ಪಿ.ವ್ಹಿ ಮೋಹನ್ ಗಂಭೀರ ಆರೋಪ.

ಬೆಳಗಾವಿ- ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪಿ.ವಿ ಮೋಹನ್ ಈಗ ಮೌನ ಮುರಿದಿದ್ದಾರೆ.ಪತ್ರಿಕಾಗೋಷ್ಠಿ ಕರೆದು ಬೆಳಗಾವಿ ಜಿಲ್ಲಾಡಳಿತ ಮತ್ತು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕೆಪಿಸಿಸಿ ಅದ್ಯಕ್ಷ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ಕೊಡದಿದ್ದರೂ ಕಾರ್ಯಮ ನಡೆಯುತ್ತದೆ ಎಂದು ಪಿ ವಿ ಮೋಹನ್ ರಾಜ್ಯಸರ್ಕಾರಕ್ಕೆ ಸವಾಲು ಹಾಕಿದ್ದು,ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ …

Read More »

ಬೆಳಗಾವಿಯಲ್ಲಿ 4 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, ಜೂನ್ -ಕೋವಿಡ್-೧೯ ಸೋಂಕು ತಗುಲಿದ್ದ 4 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬಿಡುಗಡೆ ಹೊಂದಿದವರ ವಿವರ: ಪಿ–3686-ದಡ್ಡಿ(ಹುಕ್ಕೇರಿ) ಪಿ– 4577-ಸೌಂದತ್ತಿ ಪಿ– 4562- ದಡ್ಡಿ(ಹುಕ್ಕೇರಿ) ಪಿ–4563- ದಡ್ಡಿ(ಹುಕ್ಕೇರಿ) ***

Read More »

ನೇಕಾರರಿಂದ ಸೀರೆ ಖರೀದಿ ಪರಿಶೀಲಿಸಿ ನಿರ್ಧಾರ: ಸಚಿವ ಶ್ರೀಮಂತ ಪಾಟೀಲ

ಬೆಳಗಾವಿ-ವಿಡ್-೧೯ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೇಕಾರ ಕುಟುಂಬಗಳಿಂದ ನೇರವಾಗಿ ಸೀರೆ ಖರೀದಿಸುವುದು ಹಾಗೂ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ ಭರವಸೆ ನೀಡಿದರು. ಪ್ರವಾಸಿಮಂದಿರದಲ್ಲಿ ಮಂಗಳವಾರ (ಜೂ.9) ನಡೆದ ನೇಕಾರರ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊಲಿಗೆ ಯಂತ್ರ ಖರೀದಿ, ವಿದ್ಯುತ್ ಮಗ್ಗಗಳ ಅಳವಡಿಕೆ ಸೇರಿದಂತೆ ನೇಕಾರರಿಗೆ …

Read More »

ಮಂಗಳವಾರ ಬೆಳಗಾವಿಗೆ ಜವಳಿ ಸಚಿವ ಶ್ರೀಮಂತ ಪಾಟೀಲ

ಬೆಳಗಾವಿ- ರಾಜ್ಯದ ಕೈಮಗ್ಗ,ಜವಳಿ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ಇಂದು ಯಮಕನಮರಡಿ,ಮತ್ತು ಬೆಳಗಾವಿಗೆ ಭೇಟಿ ನೀಡಿ ನೇಕಾರರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಯಮಕನಮರಡಿ ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ಬೆಳಗಾವಿ ನಗರಕ್ಕೆ ಆಗಮಿಸಿ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮದ್ಯಾಹ್ನ 12-30 ಕ್ಕೆ ನೇಕಾರ ಸಮಾಜದ ಮುಖಂಡರ ಜೊತೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ.

Read More »

ಕೋರೆಗೆ ಕ್ಯಾರೆ ಎನ್ನಲಿಲ್ಲ….ಕತ್ತಿಗೆ ಬಾರೆ ಎನ್ನಲಿಲ್ಲ……!!

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಈ ರಾಜ್ಯದ ನಾಯಕರಿಗೆ ಅರ್ಥ ಆಗಿಲ್ಲ,ಆದ್ರೆ ದೆಹಲಿಯ ಬಿಜೆಪಿ ನಾಯಕರಿಗೆ ಬೆಳಗಾವಿ ಜಿಲ್ಲಾ ರಾಜಕಾರಣ ಸಂಪೂರ್ಣವಾಗಿ ಅರ್ಥವಾಗಿದೆ ಎನ್ನುವದಕ್ಕೆ,ರಾಜ್ಯಸಭಾ ಟಿಕೆಟ್ ಕುರಿತು ಇಂದು ಕೈಗೊಂಡ ನಿರ್ಧಾರವೇ ಅದಕ್ಕೆ ಸಾಕ್ಷಿಯಾಗಿದೆ. ಇಂದು ಬಿಜೆಪಿ ಕೈಗೊಂಡ ನಿರ್ಧಾರ ಕಡಾಡಿಯವರ ಅದೃಷ್ಟವೂ ಜೊತೆಗೆ ರಾಜಕೀಯ ಜಾಣತನವೂ ಹೌದು.. ಒಬ್ಬ ಪ್ರಾಮಾಣಿಕ ಕಾರ್ಯಕರ್ತನಿಗೆ ಸಂದ ಗೌರವವೂ ಹೌದು. ರಾಜ್ಯಸಭಾ ಟಿಕೆಟ್ ಕತ್ತಿ ಸಹೋದರರಿಗೆ ಬೇಕಾಗಿರಲಿಲ್ಲ,ಆದ್ರೆ ಪ್ರಭಾಕರ ಕೋರೆಗೆ ಟಿಕೆಟ್ ತಪ್ಪಿಸಲು ಕತ್ತಿಸಹೋದರರು …

Read More »

ಕಡಾಡಿ ಬಳಿ ಓಡೋಡಿ ಬಂದ ರಾಜ್ಯಸಭಾ ಟಿಕೆಟ್

ಬೆಳಗಾವಿ- ಇಬ್ಬರ ಜಗಳ ಮೂರನೇಯ ವ್ಯೆಕ್ತ ಗೆ ಯಾವ ರೀತಿ ಲಾಭ ಮಾಡಿ ಕೊಡುತ್ತದೆ ಎನ್ನುವದಕ್ಜೆ ಕೋರೆ ಕತ್ತಿ ಕಿತ್ತಾಟವೇ ಅದಕ್ಕೆ ಸಾಕ್ಷಿಯಾಗಿದ್ದು.ರಾಜ್ಯ ಸಭಾ ಟಿಕೆಟ್ ಈರಣ್ಣಾ ಕಡಾಡಿಗೆ ಒಲಿದು ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣಾ ಕಡಾಡಿ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು ಬಿಜೆಪಿ ಹೈಕಮಾಂಡ್ ಪ್ರಾಮಾಣಿಕ ಕಾರ್ಯಕರ್ತನಿಗೆ ರಾಜ್ಯಸಭಾ ಟಿಕೆಟ್ ನೀಡಿದ್ದು ಕಿತ್ತಾಟ ನಡೆಸಿದ ಪ್ರಭಾವಿ ನಾಯಕರಿಗೆ ಅಚ್ಚರಿ ಮೂಡಿಸಿದೆ. …

Read More »

ರಾಜ್ಯದ ಜವಳಿ ಮಂತ್ರಿ…ಶ್ರೀಮಂತ….ನೇಕಾರ ಬಡವ….!!!

ಬೆಳಗಾವಿ- ಲಾಲ್ ಡೌನ್ ನಿಂದಾಗಿ ನೇಕಾರರ ಬದುಕು ಬೀದಿಗೆ ಬಂದಿದೆ.ತೀವ್ರ ಸಂಕಷ್ಟ ಅನುಭವಿಸುತ್ತಿರುವ ಅವರು ಆತ್ಮಹತ್ಯೆಯ ಹಾದಿ ಹಿಡಿದರೂ ಬೆಳಗಾವಿ ಜಿಲ್ಲೆಯವರೇ ಆಗಿರುವ ಜವಳಿ ಮಂತ್ರಿ ಶ್ರೀಮಂತ ಪಾಟೀಲರು ಮಹಾರಾಷ್ಟ್ರದ ಸಾಂಗ್ಲಿ ಬಿಟ್ಟು ಬೆಳಗಾವಿಗೆ ಬರುವ ಮನಸ್ಸು ಮಾಡುತ್ತಿಲ್ಲ. ಕಾಗವಾಡ ಕ್ಷೇತ್ರದ ಜನ ಶ್ರೀಮಂತನನ್ನು ಗೆಲ್ಲಿಸಿ ಕಳಿಸಿದ ಬಳಿಕ ಅವರ ಅದೃಷ್ಟವೋ ನೇಕಾರರ ದುರಾದೃಷ್ಟವೋ ಇವರು ಜವಳಿ ಮಂತ್ರಿಯಾದಾಗಿನಿಂದ ನೇಕಾರರ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲದಂತಾಗಿದೆ.ಈ ರಾಜ್ಯಕ್ಕೆ ಒಬ್ಬ ಶ್ರೀಮಂತ …

Read More »

ಬೆಳಗಾವಿಯಲ್ಲಿ ತ್ರೀಬಲ್ ಸಂಚ್ಯುರಿ ಬಾರಿಸಿದ ಕೊರೋನಾ

ಬೆಳಗಾವಿ- ಬೆಳಗಾವಿಯಲ್ಲಿ ಕೊರೊನಾ ಹೆಮ್ಮಾರಿ ತಾಂಡವ ಮುಂದುವರೆದಿದೆ.ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 38 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 301 ಕ್ಕೇರಿದೆ.ಇಂದು ಪತ್ತೆಯಾದ 38 ಜನ ಸೊಂಕಿತರು ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದಿದ್ದಾರೆ. ಇಂದು ಪತ್ತೆಯಾದ ಸೊಂಕಿತರು ಯಾವ ಗ್ರಾಮದವರು ಎನ್ನುವದು ತಿಳಿದು ಬಂದುಲ್ಕ

Read More »