Breaking News

LOCAL NEWS

ಕೊನೆಯ ಕ್ಷಣದಲ್ಲಿ ಸಚಿವರ ಪಟ್ಟಿಯಿಂದ ಉಮೇಶ್ ಕತ್ತಿ ಔಟ್….!!!

ಬೆಳಗಾವಿ- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 10+3 ಸೂತ್ರಕ್ಕೆ ಬಿಜೆಪಿ ಹೈಕಮಾಂಡ್ ಸಮ್ಮತಿ ನೀಡದೇ ಇರುವದರಿಂದ ಕೇವಲ ಹತ್ತು ಜನ ಶಾಸಕರಿಗೆ ಮಾತ್ರ ಮಂತ್ರಿ ಭಾಗ್ಯ ಲಭಿಸಿದ್ದು ಬೆಳಗಾವಿ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕ ಉಮೇಶ್ ಕತ್ತಿ ಕೊನೆಯ ಕ್ಷಣದಲ್ಲಿ ಸಚಿವರ ಪಟ್ಟಿಯಿಂದ ಔಟ್ ಆಗಿದ್ದಾರೆ ಮಾಜಿ ಸಚಿವ ಉಮೇಶ್ ಕತ್ತಿ ಅವರು ಸಚಿವರಾಗ್ತಾರೆ ಎಂದು ಸ್ವತಃ ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಮಾದ್ಯಮಗಳ ಎದುರು ಹೇಳಿಕೆ ನೀಡಿದ್ದರು ಇಂದು ಮದ್ಯಾಹ್ನದವರೆಗೆ …

Read More »

ಉಮೇಶ್ ಕತ್ತಿಯ ಕೃಷಿಹೊಂಡ,ಶ್ರೀಮಂತರ ತೋಟಕ್ಕೆ ಸಾಹುಕಾರನ,ನೀರಾವರಿ.,..!!!!

ಉಮೇಶ್ ಕತ್ತಿಯ ಕೃಷಿಹೊಂಡ,ಶ್ರೀಮಂತರ ತೋಟಕ್ಕೆ ಸಾಹುಕಾರನ,ನೀರಾವರಿ.,..!!!! ಬೆಳಗಾವಿ- ನಾಳೆ ರಾಜ್ಯ ಸಚಿವ ಸಂಪುಟದ ವಿಸ್ತರಣೆ ನಡೆಯಲಿದೆ.ಜಿಲ್ಲೆಯ ಸಾಹುಕಾರ್,ರಮೇಶ್ ಜಾರಕಿಹೊಳಿ,ಉಮೇಶ್ ಕತ್ತಿ,ಮತ್ತು ಶ್ರೀಮಂತ ಪಾಟೀಲ ಅವರು ಮಂತ್ರಿಯಾಗುವದು ಬಹುತೇಕ ಖಚಿತವಾಗಿದೆ. ಯಾರಿಗೆ ಯಾವ ಖಾತೆ ? ಎನ್ನುವ ಲೆಕ್ಕಾಚಾರ ಈಗ ಶುರುವಾಗಿದೆ‌.ರಮೇಶ್ ಜಾರಕಿಹೊಳಿ ಅವರ ಬೇಡಿಕೆಯಂತೆ,ನೀರಾವರಿ,ಉಮೇಶ್ ಕತ್ತಿ ಅವರಿಗೆ ಕೃಷಿ,ಶ್ರೀಮಂತ ಪಾಟೀಲರಿಗೆ ತೋಟಗಾರಿಕೆ,ಇಲಾಖೆಯ ಖಾತೆಗಳು ಸಿಗುವ ಸಾದ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಕೃಷಿ ಬಜೆಟ್ ಮಂಡಿಸಿ ಇತಿಹಾಸ ಸೃಷ್ಠಿಸಿದ್ದ …

Read More »

ಅಧಿಕಾರಕ್ಕಿಂತ ಪಕ್ಷ ದೊಡ್ಡದು-ಅಭಯ ಪಾಟೀಲ

ಬೆಳಗಾವಿ- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಒಬ್ಬೊಬ್ಬರಾಗಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ ಆದ್ರೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಅಧಿಕಾರಕ್ಕಿಂತ ಪಕ್ಷ ದೊಡ್ಡದು ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ . ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ,ರಾಜ್ಯದಲ್ಲಿ ಸಮರೋಪಾದಿಯಲ್ಲಿ ನೆರೆಪರಿಹಾರದ …

Read More »

ಎಂ ಈ ಎಸ್ ನಿಷೇಧಿಸಲು ಬೆಳಗಾವಿಯಲ್ಲಿ ರಕ್ತ ಪತ್ರ….

ಬೆಳಗಾವಿ – ಗಡಿ ಭಾಗದ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುತ್ತಿರುವ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿ ಯನ್ನು ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಎಲ್ಲರ ಗಮನ ಸೆಳೆದಿದ್ದಾರೆ. ಗಡಿ ಸಂರಕ್ಷಣಾ ಆಯೋಗದ ಅದ್ಯಕ್ಷ ಕೆ. ಎಲ್  ಮಂಜುನಾಥ ಅವರಿಗೆ ಈ ಪತ್ರವನ್ನು ಸಮರ್ಪಿಸಿದ್ದಾರೆ.ಆಯೋಗದ ಅದ್ಯಕ್ಷರು ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಕನ್ನಡ ಸಂಘಟನೆಗಳು, ಮತ್ತು ಗಡಿಭಾಗದ ಬುದ್ಧಿಜೀವಿಗಳ …

Read More »

ಬೆಳಗಾವಿಯಲ್ಲಿ ಬಿಜೆಪಿ ಸಂಕಟ ವಿಸ್ತರಣೆ,…ನನಗೂ ಸ್ಥಾನ ಕೊಡಿ ಎಂದು ತಗಾದೆ ತೆಗೆದ ಶಾಸಕ ಮಾಮನಿ

ಬೆಳಗಾವಿಯಲ್ಲಿ ಬಿಜೆಪಿ ಸಂಕಟ ವಿಸ್ತರಣೆ, ನನಗೂ ಸ್ಥಾನ ಕೊಡಿ ಎಂದು ತಗಾದೆ ತೆಗೆದ ಶಾಸಕ ಮಾಮನಿ ಬೆಳಗಾವಿ- ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುವ ಮೊದಲೇ ಬೆಳಗಾವಿಯಲ್ಲಿ ಬಿಜೆಪಿಯ ಸಂಕಟ ವಿಸ್ತರಣೆಯಾಗಿದೆ ಸವದತ್ತಿ ಯಲ್ಲಮ್ಮನ ಕ್ಷೇತ್ರದ ಶಾಸಕ ಆನಂದ ಮಾಮನಿ ನನಗೂ ಸದಥಾನ ಕೊಡಿ ,ಎಂದು ತಗಾದೆ ತೆಗೆದಿದ್ದಾರೆ ,ಹೀಗಾಗಿ ಬೆಳಗಾವಿಯಿಂದಲೇ ಭಿನ್ನಮತ ಸ್ಪೋಟವಾಗಿದೆ. ಡೆಪ್ಯೂಟಿ ಸ್ಪೀಕರ್ ಹುದ್ದೆಗೆ ಆನಂದ್ ಮಾಮನಿ ಬೇಡಿಕೆ ಇಟ್ಟಿದ್ದು ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ …

Read More »

ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡೋ ವಿಚಾರದಲ್ಲಿ ಪಕ್ಷಕ್ಕೆ ಮುಜಗುರ ಮಾಡೋಕ್ಕೆ ಹೋಗೋಲ್ಲ- ಶ್ರೀರಾಮಲು

ಬೆಳಗಾವಿ- ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬೇಕೆಂಬ ಒತ್ತಾಯಿಸುವ ವಿಚಾರವಾಗಿ ನಾನು ಈ ಬಗ್ಗೆ ಉಲ್ಲೇಖ ಮಾಡೋಕೆ ಹೋಗಲ್ಲ, ಯಾರಿಗೂ ಮುಜುಗರ ಮಾಡೋಕೆ ಹೋಗಲ್ಲ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಕಾದು ನೋಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಬೆಳಗಾವಿಯಲ್ಲಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾದ್ಯಮ ಮಿತ್ರರ ಜೊತೆ ಮಾತನಾಡಿ ನಾನು ಮೊದಲಿನಿಂದಲೂ ಆ್ಯಕ್ಟೀವ್ ಇದೀನಿ, ಮುಂದೆಯೂ ಆ್ಯಕ್ಟೀವ್ ಇರ್ತೀನಿ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀರಾಮುಲುಗೆ ಡಿಸಿಎಂ ಹುದ್ದೆ‌ …

Read More »

ಸವದಿ ಸ್ಥಾನ ಖಾತ್ರಿ…ಗೆ ದ್ದ ಮೂವರು ಮಂತ್ರಿ…ಉಮೇಶ ಕತ್ತಿಗೂ ಲಾಟರಿ….!!!

ಸವದಿ ಸ್ಥಾನ ಖಾತ್ರಿ…ಗೆ ದ್ದ ಮೂವರು ಮಂತ್ರಿ…ಉಮೇಶ ಕತ್ತಿಗೂ ಲಾಟರಿ….!!! ಬೆಳಗಾವಿ- ಉಪ ಸಮರದಲ್ಲಿ ಬೆಳಗಾವಿ ಜಿಲ್ಲೆಯಿಂದ ಗೆದ್ದ ಮೂವರಿಗೂ ಮಂತ್ರಿ ಮಾಡುತ್ತೇವೆ,ಡಿಸಿಎಂ ಸವದಿ ಅವರು ಮುಂದುವರೆಯುತ್ತಾರೆ ,ಜೊತೆಗೆ ಉಮೇಶ ಕತ್ತಿ ಅವರು ಮಂತ್ರಿ ಆಗ್ತಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿ ಮಾಹಿತಿ ನೀಡಿದ್ದಾರೆ ಇಂದು ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಿದ ಕಮಾಂಡ್ ಆ್ಯಂಡ ಕಂಟ್ರೋಲ್ ಸೆಂಟರ್ ಉದ್ಘಾಟಿಸಿ ಪತ್ರಿಕಾಗೋಷ್ಠಿ ನಡೆಸಿದ ಅವರು ,ಸಚಿವ ಸಂಪುಟ …

Read More »

ಸ್ವಂತ ಮಗನಿಗೆ ಆಸ್ತಿಯಲ್ಲಿ ಸಿಂಹಪಾಲು…..ಸಾಕಿದ ಮಗ ಕಂಗಾಲು….ಈ ರೋಷಾಗ್ನಿಯಲ್ಲಿ ಮೂವರ ಜೀವ ಮಣ್ಣುಪಾಲು….!!!!

ಬೆಳಗಾವಿ- ಆಸ್ತಿ ಇದ್ರೆ ಮಗ ಇರಲೇ ಬೇಕು ಎಂದು ಅಕ್ಕನ ಮಗನನ್ನು ಸಾಕಿ,ನಂತರ ಎರಡನೇಯ ಮದುವೆಯಾಗಿ,ಮೊದಲನೇಯ ಹೆಂಡತಿಯನ್ನು ಹೊರಹಾಕಿ ಸಾಕಿದ ಮಗನನ್ನೂ ಹೊರ ಹಾಕಿದ ರೋಷಾಗ್ನಿಯಲ್ಲಿ ಮೂವರ ಜೀವ ಬಸ್ಮವಾದ ಘಟನೆ ದೊಡ್ಡವಾಡ ಗ್ರಾಮದಲ್ಲಿ ನಡೆದಿದೆ ಇತ್ತೀಚಿಗೆ ದೊಡ್ಡವಾಡ ಗ್ರಾಮದಲ್ಲಿ ಗಂಡ,ಹೆಂಡತಿ,ಮತ್ತು ಮಗನ ಕೊಲೆ ಪ್ರಕರಣ ನಡೆದಿತ್ತು ಈ ಕೊಲೆ ಪ್ರಕರಣವನ್ನು ಬೇಧಿಸಿರುವ ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ಪ್ರಕರಣದಲ್ಲಿ ಮೂವರನ್ನು ಕೊಚ್ವಿ ಕೊಲೆ ಮಾಡಿದ್ದು ಒಬ್ಬನೇ …

Read More »

ಶನಿವಾರ ಬೆಳಗಾವಿಯ ರಡ್ಡಿ ಸಮಾಜ ಭವನ ಲೋಕಾರ್ಪಣೆ

ಬೆಳಗಾವಿ: ಸದಾಶಿವ ನಗರದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ದರ್ಜೆಯಲ್ಲಿ ನಿರ್ಮಿಸಿರುವ ರಡ್ಡಿ ಭವನ ಜ.25ರಂದು ಶನಿವಾರ ಲೋಕಾರ್ಪಣೆಗೊಳ್ಳಲಿದೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ ಈ ಬಗ್ಗೆ ತಿಳಿಸಿದರು. 2017ರ ಮಾ.22ರಂದು ನಮ್ಮ ಸಂಘದ ನೋಂದಣಿ ಮಾಡಿದ್ದೆವು. 13,270 ಚದರ ಅಡಿಯಲ್ಲಿ ತಲೆ ಎತ್ತಿರುವ ಭವನ ನಿರ್ಮಾಣಕ್ಕೆ ದಿ.ಭೀಮರಡ್ಡಿ ಮಳಲಿ 2 ಕೋಟಿ ರೂ. ಬೆಲೆಬಾಳುವ ಜಾಗವನ್ನು ದಾನವನ್ನಾಗಿ ನೀಡಿದ್ದರು. …

Read More »

ಬೆಳಗಾವಿಯ ಚವ್ಹಾಟಗಲ್ಲಿಯಲ್ಲಿ ಓರ್ವನಿಗೆ ಚೂರಿ ಇರಿತ,ಆಸ್ಪತ್ರೆಗೆ ದಾಖಲು

ಬೆಳಗಾವಿಯ ಚವ್ಹಾಟಗಲ್ಲಿಯಲ್ಲಿ ಓರ್ವನಿಗೆ ಚೂರಿ ಇರಿತವಾಗಿದ್ದು ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ ಅರ್ದ ಘಂಟೆಯ ಮೊದಲು ಈ ಘಟನೆ ನಡೆದಿದ್ದು ಆನಂದ ಪೂಜಾರಿ ಎಂಬಾತನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಲಾಗಿದೆ ಆನಂದ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಘಟನೆಗೆ ಕಾರಣ ಏನು ಎಂಬುದು ಇನ್ನುವರೆಗೆ ಗೊತ್ತಾಗಿಲ್ಲ ಸ್ಥಳಕ್ಕೆ ಪೋಲೀಸರು ದೌಡಾಯಿಸಿದ್ದಾರೆ

Read More »

ಬೆಳಗಾವಿ ಜಿಲ್ಲಾ ವಕ್ಫ ಮಂಡಳಿಯ ಅಧ್ಯಕ್ಷರಾಗಿ ತಾಜ್ ಶೇಖ್ ನೇಮಕ…

ಬೆಳಗಾವಿ ಜಿಲ್ಲಾ ವಕ್ಫ ಮಂಡಳಿಯ ಅಧ್ಯಕ್ಷರಾಗಿ ತಾಜ್ ಶೇಖ್ ನೇಮಕ… ಬೆಳಗಾವಿ- ಬೆಳಗಾವಿ ಜಿಲ್ಲಾ ವಕ್ಫ ಮಂಡಳಿಯ ಅಧ್ಯಕ್ಷರನ್ನಾಗಿ ಬೆಳಗಾವಿಯ ತಾಜ್ ಎ ಶೇಖ್ ಅರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಪಾದ್ಯಕ್ಷರಾಗಿ ಗೋಕಾಕಿನ ಶಕೀಲ ಅಪ್ಪಾಸಾಹೇಬ್ ಧಾರವಾಡಕರ,ಮತ್ತು ಬೆಳಗಾವಿಯ ಆಝಾದ್ ಅಹ್ಮದ ಗಫ್ಪಾರ್ ಸಾಬ ಮುಲ್ಲಾ ಅವರನ್ನು ನೇಮಕ ಮಾಡಲಾಗಿದೆ . ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಗಮ ಮಂಡಳಿಗಳಿಗೆ ಕಾರ್ಯಕರ್ತರನ್ನು ನೇಮಿಸುವ ಕೆಲಸ ಜೋರಾಗಿಯೇ …

Read More »

ಗಡಿ ವಿವಾದದ ಕುರಿತು ಕೇಂದ್ರ ನಿಲುವು ಸ್ಪಷ್ಠಪಡಿಸಿದ ಮೇಲೆಯೂ ಮಹಾರಾಷ್ಟ್ರ ನಾಯಕರು ಸಾಮರಸ್ಯ ಕೆಡಿಸುವದು ಸರಿಯಲ್ಲ- ಬೊಮ್ಮಾಯಿ

ಬೆಳಗಾವಿ- ಬೆಳಗಾವಿ ಗಡಿ ವಿಚಾರದ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಢಪಡಿಸಿದೆ ಮಹಾರಾಷ್ಟ್ರದ ಅರ್ಜಿಯನ್ನು ಡಿಸ್ ಮಿಸ್ ಮಾಡಿ ಎಂದು ಹೇಳಿದ್ದು ,ಮಹಾರಾಷ್ಟ್ರದ ಅರ್ಜಿಯನ್ನು ತರಸ್ಕರಿಸುವಂತೆ ಕೇಂದ್ರ ಸರ್ಕಾರ ಹೇಳಿದ ಮೇಲೆಯೂ ಮಹಾರಾಷ್ಟ್ರ ಸರ್ಕಾರ ಗಡಿ ವಿವಾದವನ್ನು ಕೆದಕುವದು ಸರಿಯಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ,ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳ ಸಭೆ ಕರೆದು …

Read More »

ಸಾವಯವ-ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಜ.೨೫ ರಿಂದ

ಸಾವಯವ-ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಜ.೨೫ ರಿಂದ ಬೆಳಗಾವಿ, ಜ.೨೨(ಕರ್ನಾಟಕ ವಾರ್ತೆ): ಕಡಿಮೆ ಮಳೆಯಾದಾಗಲೂ ಲಾಭದಾಯಕ ಬೆಳೆ ಬೆಳೆಯಬಹುದು ಹಾಗೂ ಜನರು ಸಿರಿಧಾನ್ಯಗಳನ್ನು ಆಹಾರವಾಗಿ ಬಳಸಿದರೆ ವಿವಿಧ ರೋಗಗಳನ್ನು ನಿಯಂತ್ರಿಸಿಕೊಳ್ಳಬಹುದು. ಈ ಕಾರಣಗಳಿಗಾಗಿ ಸಿರಿಧಾನ್ಯಗಳು ಬಹಳ ಮಹತ್ವದ್ದಾಗಿವೆ. ಉತ್ತಮ ಆರೋಗ್ಯಕ್ಕಾಗಿ, ಉತ್ತಮ ಪರಿಸರಕ್ಕಾಗಿ ಹಾಗೂ ರೈತರ ಶ್ರೇಯಸ್ಸಿಗಾಗಿ ಸಿರಿಧಾನ್ಯಗಳು ಅವಶ್ಯಕವಾಗಿವೆ ಈ ಕುರಿತು ಜಾಗೃತಿ ಮೂಡಿಸಲು ಜನವರಿ 25 ಹಾಗೂ 26 ರಂದು ಬೆಳಗಾವಿಯ ಶಿವಬಸವ ನಗರದ ಎಸ್. …

Read More »

ಬಡಾಲ್ ಅಂಕಲಗಿಯಲ್ಲಿ,ಅಂಕಲಗಿಯೇ ರಾಜೇಂದ್ರ

  ಬೆಳಗಾವಿ (20)- ಬಡಾಲ ಅಂಕಲಗಿ ಪಿಕೆಪಿಎಸ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಕ್ಕೆ ಹಿನ್ನಡೆಯಾಗಿದೆ 12 ನಿರ್ದೇಶಕ ಸ್ಥಾನದ ಪೈಕಿ ಎಲ್ಲಾ ಸ್ಥಾನವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಬಣ ಜಯ ಸಾಧಿಸಿದೆ. ಜನೆವರಿ 18 ಕ್ಕೆ ನಡೆದ ಚುನಾವಣೆ ಅತ್ಯಂತ ಪ್ರತಿಷ್ಠಿತವಾವಿತ್ತು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ‌ ಬಣ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಬಣದ ನಡುವೆ ನೇರಾ ಹಣಾಹಣಿ ಏರ್ಪಟ್ಟಿತ್ತು …

Read More »

ನಾಳೆ ಬೆಳಗಾವಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ

ನಾಳೆ ಬೆಳಗಾವಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೆಳಗಾವಿ- ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ ಮದ್ಯಾಹ್ನ 12-30 ಗಂಟೆಗೆ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸುವ ಅವರು 1 ಘಂಟೆಗೆ ಜೀರಗೆ ಸಭಾ ಭವನದಲ್ಲಿ ಸಿದ್ಧಾ ಇವೆಂಟ್ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ನಂತರ ರಸ್ತೆ ಮೂಲಕ ಹುಬ್ಬಳ್ಳಿಗೆ ತೆರಳಲಿದ್ದಾರೆ

Read More »