Breaking News

LOCAL NEWS

ಕಲ್ಲು…ಬಾಟಲಿ..ಇಟ್ಟಂಗಿ..ಇಟ್ಕೊಂಡಾವ್ರ..ಪೋಲೀಸರ ಕೈಗೆ ಸಿಕ್ಕೊಂಡಾರ್..!!

ಬೆಳಗಾವಿ ಕುಂದಾನಗರಿ ಬೆಳಗಾವಿಯಲ್ಲಿ ಮೊನ್ನೆ ನಡೆದಿದ್ದ ಕೋಮು ಗಲಭೆ ಸದ್ಯ ನಿಯಂತ್ರಣಕ್ಕೆ ಬಂದಿದೆ. ಗಲಭೆ ಪೀಡಿತ ಪ್ರದೇಶದಲ್ಲಿ ಬೀಗಿ ಪೊಲೀಸ್ ಭದ್ರತೆ ಮುಂದೊರೆದಿದ್ದು, ನಿನ್ನೆ ಸಂಜೆ ಪೊಲೀಸ್ರು ಗಲಭೆ ಪೀಡಿತ ಪ್ರದೇಶದಲ್ಲಿ ಏಕಾಏಕಿ ದಾಳಿ ನಡೆಸಿ ಗಲಾಟೆ ಮಾಡಲು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಕಲ್ಲು ಮತ್ತು ಗಾಜಿ ಬಾಟಲಿಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ ಡಿಸಿಪಿಗಳಾದ ಸೀಮಾ ಲಾಟಕರ್ ಮತ್ತು  ಅಮರನಾಥ ರೆಡ್ಡಿ ನೇತೃತ್ವದಲ್ಲಿ ಆರು ಪ್ರತ್ಯೇಕ ಅಧಿಕಾರಿಗಳ ತಂಡವು ಗಲಭೆ ಪೀಡಿತ ಪ್ರದೇಶದ …

Read More »

ದೇವಿ ಯಲ್ಲಮ್ಮನ ನಾಡಿನಲ್ಲಿ… ಕೈ… ಹಿಡಿದ ಮಲ್ಲಮ್ಮ…..!!!

ಬೆಳಗಾವಿ- ಯೋಗೇಶ್ ಗೌಡ್ರ ಧರ್ಮ ಪತ್ನಿ ಮಲ್ಲಮ್ಮ ಇಂದು ಸಂಜೆ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಲಕ್ಷ್ಮೀ ಹೆಬ್ಬಾಳಕರ ಅವರು ಮಲ್ಲಮ್ಮ ಯೋಗೇಶಗೌಡ ಗೌಡರ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು ಮಲ್ಲಮ್ಮ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾದ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಲಕ್ಷ್ಮೀ …

Read More »

ಗಲೀಜು ಮಾಡುವ ಮಹನೀಯರ ಪತ್ತೆಗೆ ಕ್ಯಾಮರಾ ಕಣ್ಗಾವಲು..!

ಬೆಳಗಾವಿ – ಬೆಳಗಾವಿ ನಗರದಲ್ಲಿ ಸರಗಳ್ಳರನ್ನು ಕಿಡಗೇಡಿಗಳನ್ನು,ಸಮಾಜ ಘಾತುಕ ಶಕ್ತಿಗಳನ್ನು ಗುರುತಿಸಲು ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿದ್ದನ್ನು ನೀವು ಕೇಳಿದ್ದಿರಾ ,ನೋಡಿದ್ದೀರಾ ಆದ್ರೆ ರಸ್ತೆಯ ಮೇಲೆ ಚರಂಡಿಗಳಲ್ಲಿ ಕಸ ಎಸೆದು ಗಲೀಜು ಮಾಡುವ ಮಹನೀಯರನ್ನು ಪತ್ತೆ ಮಾಡಲು ಸ್ಥಳೀಯ ನಗರ ಸೇವಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿ ಎಲ್ಲರ ಗಮನ ಸೆಳೆದಿದ್ದಾರೆ ಚನ್ನಮ್ಮ ನಗರ ಪ್ರದೇಶದ ನಗರ ಸೇವಕ ಬೆಳಗಾವಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ …

Read More »

ಬೆಳಗಾವಿ ಜಿಲ್ಲಾ ವಿಭಜನೆಗೆ ಪಾಪು ತೀವ್ರ ವಿರೋಧ.

ಬೆಳಗಾವಿ,-  ನಾಡೋಜ್ ಪಾಟೀಲ್ ಪುಟ್ಟಪ್ಪ ಅಧ್ಯಕ್ಷತೆಯಲ್ಲಿ ಮಹತ್ವ ಸಭೆ ಬೆಳಗಾವಿಯಲ್ಲಿ ನಡೆಯಿತು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ಕನ್ನಡ ಪರ ಹೋರಾಟಗಾರರು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿದಿದ್ದರು ಸಭೆಯಲ್ಲಿ ನಾಗನೂರು ರುದ್ರಾಕ್ಷಿಮಠ ಸಿದ್ದರಾಮ ಸ್ವಾಮೀಜಿ, ವಿವಿಧ ಕನ್ನಡ ಪರ, ವಕೀಲರ ಸಂಘದ ಮುಖಂಡರು ಭಾಗಿಯಾಗಿದ್ದರು ಸಭೆಯಲ್ಲಿ ಬೆಳಗಾವಿ ವಿಭಜನೆಗೆ ವಿರೋಧ ವ್ಯೆಕ್ತವಾಯಿತು ನಾಡೋಜ ಪಾಟೀಲ ಬ ಪುಟ್ಟಪ್ಪ ಮಾತನಾಡಿ ಮಾಜಿ ಸಿಎಂ ಜೆ.ಎಚ.ಪಟೇಲರು ಬೆಳಗಾವಿ ವಿಭಜಿಸಿದ್ರು ಬೆಳಗಾವಿ, ಗೋಕಾಕ್, …

Read More »

ಬೆಳಗಾವಿಯಲ್ಲಿ ಕಲ್ಲು ತೂರಾಟ ,ವಾಹನಗಳಿಗೆ ಬೆಂಕಿ ಪೋಲೀಸ್ ಅಧಿಕಾರಿಗಳಿಗೆ ಗಾಯ

ನಿನ್ನೆ ರಾತ್ರಿ ಬೆಳಗಾವಿಯಲ್ಲಿ ಎರಡು ಕೋಮಿನ ಗುಂಪುಗಳ ಮಧ್ಯೆ ನಡೆದ ಗಲಾಟೆ ನಡೆದಿದ್ದು ಬೆಳಗಾವಿ ನಗರ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಅಯ್ಯಪ್ಪ ಸ್ವಾಮಿ ಪೇಂಡಾಲಕ್ಕೆ ದುಷ್ಕರ್ಮಿಗಳು ಕಲ್ಲು ಒಗೆದ ಹಿನ್ನಲೆ ಬೆಳಗಾವಿ ನಗರ ಹೊತ್ತಿ ಉರಿದಿದೆ.  ನಗರದಲ್ಲಿ ರಾತ್ರಿ ಕಲ್ಲು, ಇಟ್ಟಿಗೆ ಮತ್ತು ಸೋಡಾ ಬಾಟಲಿ ತೂರಾಟ ನಡೆದಿದ್ದು 10 ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳಿ ಸೇರಂದಂತೆ ೭ ಜನರಿಗೆ ಗಾಯಗಳಾಗಿವೆ. ಮನೆ,  ಅಟೋ ಮತ್ತು ಬೈಕ್‌ಗಳಿಗೆ …

Read More »

ಗುಜರಾತ ಹಿಮಾಚಲದಲ್ಲಿ ಮೋದಿ ಮ್ಯಾಜಿಕ್..ಬೆಳಗಾವಿಯಲ್ಲಿ ಬಲ್ಲೇ..ಬಲ್ಲೇ..!!!

ಬೆಳಗಾವಿ -ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಬರದಸ್ತ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕಮಲ ಪಡೆಯಲ್ಲಿ ಸಂಭ್ರಮ ಮನೆ ಮಾಡಿದೆ ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಬಣ್ಣದ ಹೊಳಿ ಆಡಿ ಸಂಭ್ರಮ ವ್ಯೆಕ್ತ ಪಡಿಸಿದ ಕಾರ್ಯಕರ್ತರು ಡೋಲು ಭಾರಿಸಿ, ಕುಣಿದು ಘೋಷಣೆ ಕೂಗಿ ಸಂಭ್ರಮ ವ್ಯೆಕ್ತಪಡಿಸಿದರು ಪರಸ್ಪರ ಕೇಸರಿ ಬಣ್ಣ ಎರೆಚಿ ಸಿಹಿ ಹಂಚಿ ಡೋಲು ಬಾರಿಸಿ ಬಿಜೆಪಿ ಧ್ವಜ ಹಾರಿಸುತ್ತ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತರು ಮೋದಿ …

Read More »

ಬೆಳಗಾವಿ ದಕ್ಷಿಣ ಕ್ಷೇತ್ರವನ್ನು ಹೈಜಾಕ್ ಮಾಡಿದ ಲಕ್ಷ್ಮೀ ನಾರಾಯಣ..ನಾರಾಯಣ.!!!

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮನೆ.ಮನೆಗೆ ಲಕ್ಷ್ಮೀ ನಾರಾಯಣ ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ವಿಧಾನ ಪರಿಷತ್ತ ಸದಸ್ಯ ಲಕ್ಷ್ಮೀ ನಾರಾಯಣ ಅವರಿಗೆ ಇಂಪೋರ್ಟ್ ಮಾಡುವದು ಬೇಡ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿರುವ ವಿರೋಧದ ಮಧ್ಯೆಯೂ ಎಂಡಿ ಲಕ್ಷ್ಮೀ ನಾರಾಯಣ ದಕ್ಷಿಣ ಕ್ಷೇತ್ರದನೆ ಮನೆಗೆ ತೆರಳಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸೆಡ್ಡು ಹೊಡೆದಿದ್ದಾರೆ ಎಂಡಿ ಲಕ್ಷ್ಮೀ ನಾರಾಯಣ ಬೆಳಗಾವಿ ದಕ್ಷಿಣದಿಂದ ಸ್ಪರ್ದೆ ಮಾಡುವದು ಬೇಡ ಎಂದು ಮಾಜಿ ಮಂತ್ರಿ ಸತೀಶ …

Read More »

ತಂದೆಯ ಅಂತ್ಯಕ್ರಿಯೆಗೂ ಕರಗದ ಮಗನ ಮನಸ್ಸು….ಮಾನವೀಯತೆ ಸತ್ತಿದೆ..!!!

ಬೆಳಗಾವಿ-ಎಂಥ ಪಾಪಿ ಸತ್ತರೂ ಮನುಷ್ಯತ್ವ ಮನಸ್ಸು ಮರಗುತ್ತದೆ. ವೈರಿ ಸತ್ತರೂ ಅಂತಿಮ ದರ್ಶನ ಪಡೆದುಕೊಳ್ಳುವ ಅಂತಃಕರಣದ ಪರಂಪರೆ ಈ ನೆಲದಲ್ಲಿದೆ. ಒಂದು ಕಾಗೆ ಸತ್ತರೆ ಸುತ್ತಲಿನ ಎಲ್ಲ ಕಾಗೆಗಳು ಸೇರಿ ದುಃಖಿಸುತ್ತವೆ. ಮಂಗಸತ್ತರೆ ಜೊತೆಯಿರುವ ಮರಗುವ ಸನ್ನಿವೇಶಗಳನ್ನು ನಾವು ಈಗಲೂ ನೋಡುತ್ತೇವೆ. ಪ್ರೀತಿಸುವ ಮನುಷ್ಯ ಸತ್ತಾಗ ಅವನ ಹೆಣದ ಮೇಲೆಯೋ ಇಲ್ಲಾ ಗೋರಿಯ ಮೇಲೆ ಗೋನುಚಲ್ಲಿ ಕಣ್ಣೀರಿಟ್ಟ ನಾಯಿಗಳ ಮನ ಮಿಡಿಯು ಸನ್ನಿವೇಶಗಳು ಇನ್ನೂ ನೋಡಲು ಸಿಗುತ್ತವೆ.ಎಂಥ ಅಮಾನವೀಯತೆ ಇದೆ …

Read More »

ಮೂಕ ವೇದನೆ…ಭಾರವಾದ ಸಹನೆ..ಆಗಬೇಕಿದೆ ಪರಿವರ್ತನೆ……!!!!

ಬೆಳಗಾವಿ- ಎತ್ತಿನ ಜೋಡಿಯ ಕೊರಳಿಗೆ ಎತ್ತಿನ ಗಾಡಿ ಅದರಲ್ಲಿ ನಾಲ್ಕರಿಂದ ಐದು ಟನ್ ಕಬ್ಬು ಹೇರಿ ಕಬ್ಬಿನ ಗದ್ದೆಯಿಂದ ಕಾರ್ಖಾನೆಯ ವರೆಗೆ ಐದರಿಂದ ಆರು ಕಿ ಮೀ ವರೆಗೆ ಈ ಮೂಕ ಜೀವಗಳು ಕಬ್ಬು ಎಳೆಯ ಬೇಕಾದರೆ ಪರಿಸ್ಥಿತಿ ಏನಾಗಬಹುದೆಂದು ಉಹಿಸಲು ಸಾಧ್ಯವೇ ಇಲ್ಲ ಕಿತ್ತೂರ ತಾಲ್ಲೂಕಿನ ಎಂ ಕೆ ಹುಬ್ಬಳ್ಳಿ ಗ್ರಾಮದಲ್ಲಿ ದಾಸ್ತಿಕೊಪ್ಪ ಗ್ರಾಮದ ಸಮೀಪ ಎತ್ತಿನ ಜೋಡಿಯೊಂದು ಕಬ್ಬು ತುಂಬಿದ ಎತ್ತಿನ ಗಾಡಿ ಎಳೆಯಲು ಪರದಾಡುತ್ತಿರುವಾಗ ಹೆಗಲ …

Read More »

ಹಿಂದೂ ಸಂಘಟನೆಗಳ ಮೆರವಣಿಗೆ,ಪೋಲೀಸ್ ಅಧಿಕಾರಿಗಳ ನಡುವೆ ವಾಗ್ವಾದ

ಬೆಳಗಾವಿ-ಬೆಳಗಾವಿ ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ಖಂಡಿಸಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಬೃಹತ ಪ್ರತಿಭಟನೆ ನಡೆಯಿತು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದಿಂದ ಪ್ರತಿಭಟನೆ ಆಯೋಜಿಸಲಾಗಿತ್ತು ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಆರಂಭವಾದ ಮೆರವಣಿಗೆ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿತು ಪೋಲೀಸರು ಸೂಚಿಸಿದ ಮಾರ್ಗದಿಂದ ತೆರಳಲು ಪ್ರತಿಭಟನಾ ಕಾರರು ನಿರಾಕರಿಸಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ವಾಗ್ವಾದ …

Read More »

ಹುಕ್ಕೇರಿಯಲ್ಲಿ ಉಮೇಶ ಕತ್ತಿ ವಿರುದ್ಧ ಅಟ್ರಾಸಿಟಿ ಕೇಸ್ …

ಬೆಳಗಾವಿ- ಮಾಜಿ ಸಚಿವ ಉಮೇಶ ಕತ್ತಿ ಅವರು ದಲಿತ ಸಮಾಜವನ್ನು ಅ ಸಂವಿಧಾನಿಕ ಪದಗಳ ಪ್ರಯೋಗ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಸಂಕೇಶ್ವರ ಬಂದ್ ಕರೆ ನೀಡುವದರ ಜೊತೆಗೆ ಸಂಕೇಶ್ವರದಲ್ಲಿ ಉಮೇಶ ಕತ್ತಿ ಅವರ ಅಣಕು ಶವ ಯಾತ್ರೆ ನಡೆಸಿದರು ವಿವಿಧ ಸಂಘಟನೆಗಳು ಉಮೇಶ ಕತ್ತಿ ಅವರ ಹೇಳಿಕೆಯನ್ನು ವಿರೋಧಿಸಿ ಸಂಕೇಶ್ವರದಲ್ಲಿ ಬೃಹತ್ತ ಪ್ರತಿಭಟನೆ ಮಾಡುವದರ ಜೊತೆಗೆ ಉಮೇಶ ಕತ್ತಿ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ …

Read More »

ಹೂವಿನಿಂದ ಮಾಡ್ಯಾರ ಎತ್ತಿನ ಗಾಡಿ…ನೋಡಾಕ ಬರ್ರೀ ಓಡೋಡಿ…!!!!

ಬೆಳಗಾವಿ- ಹೂವು ಚೆಲುವೆಲ್ಲಾ ನಂದೆಂದಿತು ತನ್ನ ಅಂದ ನೋಡಲು ಬಾ..ಎಂದಿತು ಬೆಳಗಾವಿಯ ಕ್ಲಬ್ ರಸ್ತೆಯ ಹ್ಯೂಂ ಪಾರ್ಕ ನಲ್ಲಿ ತೋಟಗಾರಿಕೆ ಇಲಾಖೆ ಮಾಡಿರುವ ಹೂವಿನ ಅಲಂಕಾರ ಫಲಫುಷ್ಪಗಳ ಸೌಂಧರ್ಯ ನೋಡಲು ಎರಡು ಕಣ್ಣುಗಳು ಸಾಲೋದಿಲ್ಲ ಇಂದು ಸಂಜೆ ಆರಂಭವಾಗುವ ತೋಟಗಾರಿಕೆ ಇಲಾಖೆಯ ಫಲ ಪುಷ್ಪ ಪ್ರದರ್ಶನ ಮೂರು ದಿನಗಳ ಕಾಲ ನಡೆಲಿದೆ ಫಲ ಫುಷ್ಪ ಪ್ರದರ್ಶನದಲ್ಲಿ ಏನೇನು ಇದೆ ಅಂತ ಹೇಳಿದರೆ ಸಾಲದು ಪ್ರತಿಯೊಬ್ಬರೂ ಬಂದು ನೋಡವ ಹಾಗೆ ಕ್ಲಬ್ …

Read More »

ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಶ್ರೀರಾಮ ಸೇನೆ ಪ್ರತಿಭಟನೆ…

ಬೆಳಗಾವಿ- ರಾಜ್ಯದಲ್ಲಿ ಹಾಗು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿಶ್ರೀರಾಮ‌ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದ ಶ್ರೀರಾಮ ಸೇನೆ ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಹಿಂಧು ಪರ ಮತ್ತು ರಾಷ್ಟ್ರ ಭಕ್ತರ ಹತ್ಯೆ ವಿರೋಧಿಸಿ ಕೂಡಲೇ ಆರೋಪಿಗಳ ಪತ್ತೆ ಮಾಡಬೇಕೆಂದು ಒತ್ತಾಯಿಸಲಾಯಿತು ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡುಸ್ಕರ ನೆತೃತ್ವದಲ್ಲಿ ಪ್ರತಿಭಟನೆ ನಡೆಯಿತು ರಾಮಾಕಾಂತ ಕೊಂಡುಸ್ಕರ ಮಾತನಾಡಿ ಉತ್ತರ ಕನ್ನಡ …

Read More »

ಬೆಳಗಾವಿ ಸಿಟಿ ಇರಬೇಕು ಕ್ಲೀನ್..ಗಪ್ ಚುಪ್ ತಂದಿಟ್ರು ಡಸ್ಟಬೀನ್…..!!!

ಬೆಳಗಾವಿ- ಬೆಳಗಾವಿ ನಗರದಲ್ಲಿ ದುಡ್ಡು ಇರೋವ್ರಿಗೆ ಕೊರತೆ ಇಲ್ಲ ಇಲ್ಲಿ ನೂರಾರು ಕೋಟಿ ಸಾವಿರಾರು ಕೋಟಿಯ ಕುಬೇರರು ಇದ್ದಾರೆ ದುಡ್ಡು ಇದ್ದೋರು ಹಿಗೂ ಸಮಾಜ ಸೇವೆ ಮಾಡಬಹುದೇ ಅನ್ನೋದಕ್ಕೆ ಬೆಳಗಾವಿಯ ಬಿಪಿನ್ ಪಾಟೀಲ್ ಅವರು ಮಾದರಿಯಾಗಿದ್ದಾರೆ ಶನಿವಾರ ಬೆಳಗಾವಿಯ ಆಝಂ ನಗರದಲ್ಲಿ ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿದ್ರು ಒಂದು ರಿಕ್ಷಾದಲ್ಲಿ ದೊಡ್ಡ ದೊಡ್ಡ ಡಸ್ಟಬೀನ್ ಬಾಕ್ಸಗಳನ್ನು ಹಾಕಿಕೊಂಡು ಆಝಂ ನಗರ ಸರ್ಕಲ್ ನಲ್ಲಿ ಬಂದಿಳಿದ ಬಿಪಿನ್ ಪಾಟೀಲ್ ಎಲ್ಲೆಲ್ಲಿ …

Read More »

ಬೆಳಗಾವಿಯ ಮರಾಠಾ ರೆಜಮೆಂಟ್ ಸೆಂಟರ್ ನಲ್ಲಿ ಇಂಡೋ- ಮಾಲ್ಡೀವ್ಸ ,ಸಮರಭ್ಯಾಸ

ಬೆಳಗಾವಿಯ ಮರಾಠಾ ರೆಜಮೆಂಟ್ ಇಡೀ ದೇಶದಲ್ಲಿಯೇ ಪ್ರಸಿದ್ಧಿ ಇಲ್ಲಿರುವ ಕಮಾಂಡೋ ಟ್ರೇನಿಂಗ್ ಸೆಂಟರ್ ಜಾಗತಿಕ ಪ್ರಸಿದ್ಧಿ ಪಡೆದಿದೆ ಭಾರತದ ಜೊತೆ ಜಂಟೆ ಸಮರಾಭ್ಯಾಸ ನಡೆಸಲು ಮಾಲ್ಡೀವ್ಸ ಸೈನಿಕರು ಬೆಳಗಾವಿಯ ಮರಾಠಾ ರೆಜಮೆಂಟ್ ಸೆಂಟರ್ ಗೆ ಬಂದಿಳಿದಿದ್ದಾರೆ ಅತ್ಯುತ್ತಮ ಸೈನಿಕ ತರಬೇತಿಗಳಲ್ಲಿ ಒಂದಾಗಿರುವ ಮರಾಠಾ ರೆಜಮೆಂಟ್ ಕೇಂದ್ರದಲ್ಲಿ ಕಮಾಂಡೋ ಟ್ರೈನಿಂಗ್ ಸೇರಿದಂತೆ ದೇಶದ ಗಡಿ ಕಾಯುವ ಯೋಧರಿಗೆ ತರಬೇತಿ ಕೊಡಲಾಗುತ್ತದೆ ಇದೇ ಟ್ರೈನಿಂಗ್ ಸೆಂಟರ್ ನಲ್ಲಿ ಇಂದಿನಿಂದ 14ದಿನಗಳ ಕಾಲ ಭಾರತ …

Read More »