Breaking News

LOCAL NEWS

ಅತ್ಯಾಚಾರಕ್ಕೊಳಗಾದ ಹೆಣ್ಣು ಮಗುವಿನ ಸ್ಥಿತಿ ಚಿಂತಾಜನಕ

ಬೆಳಗಾವಿ-ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣ ಕುರಿತು ಬೆಳಗಾವಿಯ ಯುವಕರು ತೀವ್ರ ಆಕ್ರೋಶ ವ್ಯೆಕ್ತಪಡಿಸಿದ್ದಾರೆ ಅರೋಪಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುವ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಜಿಲ್ಲಾ ಆಸ್ಪತ್ರೆಯ ಬಳಿ ಜಮಾಯಿಸಿದ ಯುವಕರು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಪಟ್ಟು ಹಿಡದಿರುವ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಯ ಬಳಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ಏರ್ಪಡಿಸಲಾಗಿದೆ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ದ್ವಾರದಲ್ಲಿ …

Read More »

ಎರಡು ವರ್ಷದ ಮಗುವಿನ ಮೇಲೆ ಕಾಮುಕನ ಅಟ್ಟಹಾಸ ಮಮ್ಮಲ ಮರಗಿದ ಜನ

ಬೆಳಗಾವಿ ಬೆಳಗಾವಿಯಲ್ಲಿ ಕಾಮುಕನೊಬ್ಬ ತನ್ನ ಅಟ್ಟಹಾಸ ಮೆರೆದಿದ್ದಾನೆ. ಎರಡು ವರ್ಷದ ಕಂದಮ್ಮನನ್ನ ಅತ್ಯಾಚಾರ ಮಾಡಿ, ಕೊಲೆಗೆ ಯತ್ನಿಸಿದ್ದಾನೆ. ಬಾಲಕಿ ತ್ರೀವ್ರ ರಕ್ತಸ್ರಾವದಿಂದ ನರಳಿದ್ರು ಕರುಣೆ ತೋರದ ಪಾಪಿ, ಕುಡಿದ ಮತ್ತಿನಲ್ಲಿ ಬಾಲಕಿಗೆ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿದ್ದಾನೆ. ಸದ್ಯ ಅಸ್ವಸ್ಥ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಇಂಥದೊಂದು ಅಮಾನವಿಯ ಘಟನೆ ನಡೆದಿದ್ದು,ಕಾಮುಕನೊಬ್ಬ ತನ್ನ ಕಾಮವಾಂಚೆಗೆ ಮುಗ್ದ ಕಂದಮ್ಮನನ್ನ ಬಳಸಿಕೊಂಡಿದ್ದಾನೆ. ಪ್ರಪಂಚದ …

Read More »

ಕೋರ್ಟ್ ರಸ್ತೆಯ ಬ್ಯಾರಿಕೇಡ್ ಗಳಿಗೆ ಕಾಂಕ್ರೀಟ್,ವಕೀಲರ ಜೊತೆ ವಾಗ್ವಾದ

  ಬೆಳಗಾವಿ- ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ರಸ್ತೆಯಲ್ಲಿರುವ ಬ್ಯಾರೀಕೇಡ್ ಗಳನ್ನು ಎರಡು ದಿನದ ಹಿಂದೆ ಕೆಲವು ಕಿಡಗೇಡಿಗಳು ಕಿತ್ತು ಬೀಸಾಕಿದ ಹಿನ್ನಲೆಯಲ್ಲಿ ಇಂದು ರಾತ್ರಿ ಪೋಲೀಸರ ಬಿಗಿ ಭದ್ರತೆಯಲ್ಲಿ ರಸ್ತೆಯಲ್ಲಿ ಮತ್ತೇ ಬ್ಯಾರಿಕೇಡ್ ಗಳನ್ನು ಅಳವಡಿಸಿ ಕಾಂಕ್ರೀಟ್ ಹಾಕುವ ಮೂಲಕ ಬ್ಯಾರೀಕೇಡ್ ಗಳನ್ನು ಇನ್ನಷ್ಟು ಭದ್ರಗೊಳಿಸಲಾಯಿತು ಎಸಿಪಿ ಶಂಕರ ಮಾರಿಹಾಳ ಅವರ ನೇತ್ರತ್ವದ ಪೋಲೀಸರ ತಂಡ ಬಿಗೆ ಭದ್ರತೆಯಲ್ಲಿ ಬ್ಯಾರೀಕೇಡ್ ಗಳಿಗೆ ಕಾಂಕ್ರೀಟ್ ಹಾಕುವ ಕಾಮಗಾರಿ ಆರಂಭಿಸಿದ ಬಳಿಕ …

Read More »

ಮೂಡಲಗಿ ಬಂದ್….. ಬೀದಿಗಿಳಿದ ಜನ, ಟಯರ್ ಗೆ ಬೆಂಕಿ ಸರ್ಕಾರದ ವಿರುದ್ಧ ಆಕ್ರೋಶ

ಬೆಳಗಾವಿ- ಗೋಕಾಕ ತಾಲೂಕಿನ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಿ ಅಧಿಕೃತವಾಗಿ ಘೋಷಣೆ ಮಾಡಿದ್ದರು ಏಕಾಏಕಿ ಸರ್ಕಾರ ಮೂಡಲಗಿ ತಾಲೂಕು ರಚನೆ ಕೈಬಿಟ್ಟಿರುವುದರಿಂದ ಆಕ್ರೋಶಗೊಂಡ ನಾಗರೀಕರು ಇಂದು ಬೀದಿಗಿಳಿದು ಪ್ರತಿಭಟನೆ  ನಡೆಸುತ್ತಿದ್ದು, ಮೂಡಲಗಿ ಪಟ್ಟಣದಲ್ಲಿ ತ್ಚೇಶಮಯ ವಾತಾವರಣ ನಿರ್ಮಾಣಗೊಂಡಿದೆ. ರಾಜ್ಯ ಸರ್ಕಾರ ಮೂಡಲಗಿ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ರಚಿಸಿದ್ದು, ಗೆಜೆಟ್ ಕೂಡ ಹೊರಡಿಸಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಹೊಸ ತಾಲೂಕುಗಳ ರಚನೆ ಪಟ್ಟಿಯಲ್ಲಿ ಮೂಡಲಗಿಯನ್ನು ಕೈ ಬಿಟ್ಟಿದ್ದರಿಂದ ನಿಯೋಜಿತ ಮೂಡಲಗಿ ತಾಲೂಕಾ  ಚಾಲನಾ ಸಮಿತಿ …

Read More »

ಸೆಪ್ಟೆಂಬರ್ 21 ರಿಂದ ಬೆಳಗಾವಿಯ ರೆಲ್ವೆ ಓವರ್ ಬ್ರಿಡ್ಜನಲ್ಲಿ ಸಂಚಾರ ಬಂದ್..

ಬೆಳಗಾವಿ- ಬೆಳಗಾವಿ ನಗರದ ಖಾನಾಪೂರ ರಸ್ತೆಯಲ್ಲಿರುವ ರೆಲ್ವೆ ಓವರ್ ಬ್ರಿಡ್ಜ ನಲ್ಲಿ ಸೆಪ್ಟೆಂಬರ್ 21 ರಿಂದ ವಾಹನ ಸಂಚಾರ ಬಂದ್ ಆಗಲಿದೆ ಶತಮಾನ ಕಂಡಿರುವ ಈ ರೆಲ್ವೆ ಮೇಲ್ಸೇತುವೆ ಶೀಥಿಲಗೊಂಡಿದ್ದು ಅದನ್ನು ನೆಲಸಮ ಮಾಡುವಂತೆ ಮಾದ್ಯಮಗಳು ಈ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದವು ರೆಲ್ವೆ ಇಲಾಖೆ,ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪರಶೀಲನೆ ಮಾಡಿ ಈ ಸೇತುವೆ ಅಪಾಯದ ಅಂಚಿನಲ್ಲಿದೆ ಎಂದು ವರದಿ ನೀಡಿದ್ದವು …

Read More »

ಮೂಡಲಗಿ ಗೆ ಸರ್ಕಾರದ ಮೂಗುದಾರ…ನಿಪ್ಪಾಣಿ ಕಾಗವಾಡಗೆ ತಾಲೂಕಿನ ಹಾರ…!

  ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಐತಿಹಾಸಿಕ ಹಿನ್ನೆಲೆಯುಳ್ಳ ಜಿಲ್ಲೆಯಾಗಿದ್ದು ಈಗ ಭೌಗೋಳಿಕವಾಗಿ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿ ಹೊರಹೊಮ್ಮಲಿದೆ ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಹನ್ನೊಂದು ತಾಲ್ಲೂಕುಗಳ ಇದ್ದು ಜಲ್ಲೆಯ ನಿಪ್ಪಾಣಿ ಮತ್ತು ಕಾಗವಾಡ ತಾಲ್ಲೂಕಿನ ಸ್ಥಾನಮಾನ ಪಡೆದಿದ್ದು ಬೆಳಗಾವಿ ಜಿಲ್ಲೆ ಈಗ ಒಟ್ಟು ಹದಿಮೂರು ತಾಲ್ಲೂಕು ಗಳನ್ನು ಹೊಂದಿರುವ ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಲಿದೆ ಸರ್ಕಾರ ಈ ಹಿಂದೆ ಹೊರಡಿಸಿದ ಗೆಜೆಟ್ ದಲ್ಲಿ ಗೋಕಾಕ ತಾಲ್ಲೂಕಿನ ಮೂಡಲಗಿ ಗ್ರಾಮವೂ …

Read More »

ಹಳ್ಳ ಹಿಡಿದ ಬೆಳಗಾವಿ ಕಾಂಗ್ರೆಸ್ ಭವನ ಕಟ್ಟಡ ಕಾಮಗಾರಿ

ಬೆಳಗಾವಿ- ಬೆಳಗಾವಿ ಜಿಲ್ಲೆ ಐತಿಹಾಸಿಕ ಜಿಲ್ಲೆ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿಯೇ ಮೊಟ್ಟ ಮುದಲ ಕಾಂಗ್ರೆಸ್ ಮಹಾ ಅಧಿವೇಶನ ನಡೆದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ವಂತ ಕಚೇರಿ ಕಟ್ಟಡ ಆಗಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಕನಸು ಕಂಡಿದ್ದರು ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಜಿಲ್ಲಾಧ್ಯಕ್ಷರಾಗಿರುವಾಗ ಕಚೇರಿ ಕಟ್ಟಡ ನಿರ್ಮಾಣದ ಪ್ರಸ್ತಾವನೆಯನ್ನು ಆಗಿನ ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ ಅವರ ಮುಂದಿಟ್ಟಾಗ ಸತೀಶ ಜಾರಕಿಹೊಳಿ ಅವರು ಸರ್ಕಾರದ ಮೇಲೆ ಒತ್ತಡ …

Read More »

ಚನ್ನಮ್ಮ ವಿವಿ ನೇಮಕಾತಿ ಆಕ್ರಮ,ವಿವಿಧ ಸಂಘಟನೆಗಳ ಕಿಡಿ

ಬೆಳಗಾವಿ- ಗಡಿನಾಡು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲೀಗ ಭಾರಿ ಅಕ್ರಮಗಳ ಹೂರಣವೇ ಬೆಳಕಿಗೆ ಬರತೊಡಗಿದೆ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತರುವ ಆಕ್ರಮಗಳನ್ನು ತಡೆಯುವಂತೆ ವಿವಿಧ ದಲಿತ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಕ್ರಮಕ್ಕಾಗಿ ವಾರದ ಗಡುವು ನೀಡಿದೆ ವಿವಿಯಲ್ಲಿನ ಅಕ್ರಮ ನೇಮಕಾತಿಗಳ ಕುರಿತು ವಿಚಾರಣೆ ನಡೆಸಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹಲವು ಸತ್ಯ ಸಂಗತಿಗಳನ್ನ ಹೊರಹಾಕಿದ್ದು ಅಕ್ರಮ ನೇಮಕಾತಿ ಹೊಂದಿದ ಕುಲಸಚಿವರು ಸೇರಿದಂತೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ …

Read More »

ಮಾರುತಿ ಝನ್ ಕಾರ್ ಹರಿದು ನಲವತ್ತು ಕುರಿಗಳ ಸಾವು

ಬೆಳಗಾವಿ- ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಮಾರುತಿ ಝನ್ ಕಾರು ಹರಿದು ನಲವತ್ತಕ್ಕೂ ಹೆಚ್ವು ಕುರಿಗಳು ಸಾವನ್ನೊಪ್ಪಿದ ಘಟನೆ ನಡೆದಿದೆ ಕಾರ್ ಕುರಿಗಳ ಮೇಲೆ ಹರಿದ ಪರಿಣಾಮ ೪೦ ಕುರಿಗಳು ಸಾವನ್ನೊಪ್ಪಿವೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿ ಕಟಕೋಳ ಸಮೀಪ ಸಾಲಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ ಬಾಗಲಕೋಟ ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಲೋಕಾಪುರದಿಂದ ಹೊರಟ ಕಾರ್ ಕುರಿಗಳ ಹರಿದು ರಸ್ತೆಯಲ್ಲಿ ರಕ್ತದೋಕುಳಿ ನಡೆದಿದೆ ಕಟಕೋಳ ಪೊಲಿಸ್ ಠಾಣೆ …

Read More »

ಗೌರಿ ಲಂಕೇಶ ಹತ್ಯೆ ಪ್ರಕರಣ ಸಿಬಿಐ ಗೆ ಒಪ್ಪಿಸಿ- ಹೆಬ್ಬಾಳಕರ

ಬೆಳಗಾವಿ- ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಖಂಡಿಸಿ.. ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದಿಂದ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮೇಣದ ಬತ್ತಿ ಹಚ್ಚಿ ಗೌರಿ ಲಂಕೇಶ ಅವರಿಗೆ ಶೃದ್ಧಾಂಜಲಿ ಅರ್ಪಿಸುವದರ ಜೊತೆಗೆ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು ಕರ್ನಾಟಕದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. …

Read More »

ಲವ್ ಮಾಡಿದವನೇ ಲವರ್ ಕೊಲೆ ಮಾಡಿ ಸೂಟಕೇಸ್ ನಲ್ಲಿ ಹಾಕಿ ಬೀಸಿದ..

ಬೆಳಗಾವಿ- ಪ್ರೀತಿಸಿ ನಾಟಕವಾಡಿ ಸ್ನೇಹಿತರಿಂದಲೇ ಅತ್ಯಾಚಾರ ವೆಸಗಿ ಯುವತಿಯ ಕೊಲೆ ಮಾಡಿದ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಮುಂಬೈನ ಅಂಬರನಾಥದಲ್ಲಿ ಕೊಲೆ ಮಾಡಿ ಬ್ಯಾಗ್ ನಲ್ಲಿ ತಂದ ಕೊಲೆಗಡುಕರು ಬೆಳಗಾವಿಯ ಹೊರ ವಲಯದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕ ಮೊರಿಯಲ್ಲಿ ಬಿಸಾಕಿದ ಹೋಗಿದ್ದಾರೆ. ನಾಗಪುರ ಮೂಲದ ಅಂಕಿತಾ ಸುನಿಲ್ ಕನೋಜಿಯಾ.(೨೨) ಕೊಲೆಯಾದ ಯುವತಿ ಎಂದು ತಿಳಿದು ಬಂದಿದೆ. ಆದರೆ ಆರೋಪಿಗಳ ಹೆಸರು …

Read More »

ಖಾನಾಪೂರ ತಾಲ್ಲೂಕಿನಲ್ಲಿ ರಸ್ತೆ ಅಪಘಾತ ಮೂವರ ಸಾವು

ಕದಂಬ ಬಸ್ ಮತ್ತು ಮಾರುತಿ ಓಮಿನಿ ಮುಖಾಮುಖಿ ಡಿಕ್ಕಿ ಯಾದ ಪರಿಣಾಮ ಓಮಿನಿಯಲ್ಲಿದ್ದ ಮೂರು ಜನ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ನಡೆದಿದೆ ಎರಡು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅಕ್ರಾಳಿ ಬಳಿ ಘಟನೆ ನಡೆದಿದೆ ಉತ್ತರ ಕನ್ನಡ ಜಿಲ್ಲೆಯ ರಾಮನಗರ ಮೂಲದ ಶಮೀರ್ ಮುಲ್ಲಾ ೨೬,ಪ್ರಕಾಶ್ ೨೭, ಶಂಕರ್ ಸ್ಥಳದಲ್ಲೇ ಸಾವುಕಂಡ ದುರ್ದೈವಿಗಳು ಎಂದು ಗುರುತಿಸಲಾಗಿದೆ ಗೋವಾ ದಿಂದ ಖಾನಾಪುರಕ್ಕೆ ತೆರಳುತಿದ್ದ ಗೋವಾ ಸಾರಿಗೆ ಬಸ್ …

Read More »

ಗುಂಡಿನಿಂದ ಪ್ರಗತಿಪರರ ವಿಚಾರಗಳನ್ನು ಕೊಲ್ಲಲು ಸಾಧ್ಯವೇ ಇಲ್ಲ..

ಗುಂಡಿನಿಂದ ಸಾಮಾಜಿಕ ನ್ಯಾಯದ ಪರ,ಕೋಮುವಾದದ ವಿರುದ್ದ ಹೋರಾಟ ನಿಲ್ಲಿಸಲು ಸಾದ್ಯವಿಲ್ಲ.ಗುಂಡಿನಿಂದ ಯಾರೊಬ್ಬರೂ ವಿಚಾರಗಳನ್ನು ಕೊಲ್ಲಲು ಸಾಧ್ಯವೇ ಇಲ್ಲ ಗೌರಿ ಲಂಕೇಶ ನಮ್ಮನ್ನು ಬಿಟ್ಟು ಅಗಲಿರಬಹುದು ಆದರೆ ಅವರ ವಿಚಾರಗಳು ನಮ್ಮ ಜೊತೆಗಿವೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೋಳಿ ಹೇಳಿದ್ದಾರೆ ಗೌರಿ ಲಂಕೇಶ ಹತ್ಯೆಯಿಂದ ಪ್ರಗತಿಪರ ಹೋರಾಟಕ್ಕೆ ನಷ್ಟವಾಗಿದೆ. ಪ್ರಗತಿಪರ ಹೋರಾಟಗಾರನನ್ನ ಗುರಿಯಾಗಿಸಿ ಹತ್ಯೆಗಳು ನಡೆಯುತ್ತಿವೆ. ಗೌರಿ ಲಂಕೇಶ ಅವರ ಸ್ಥಾನವನ್ನ ಬೇರೆಯವರು ತುಂಬುತ್ತಾರೆ. ಮನುವಾದಿಗಳು ಈ ದೇಶದಲ್ಲಿ …

Read More »

ಜಿಲ್ಲಾ ಮಂತ್ರಿಗಳಿಗೆ ಜಿಲ್ಲಾಡಳಿತದಿಂದ ಸತ್ಕಾರ

ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಮಂಗಳವಾರ ಬೆಳಿಗ್ಗೆ ನಗರದ ನರಗುಂದಕರ ಭಾವೆ ಚೌಕದಲ್ಲಿರುವ ಸಾರ್ವಜನಿಕ ಗಣೇಶ ಉತ್ಸವ ಮಂಡಳದವರು ಪ್ರತಿಷ್ಠಾಪಿಸಿದ ಗಣೇಶನ ದರ್ಶನ ಪಡೆದರು ಜಿಲ್ಲಾಧಿಕಾರಿ ಜಿಯಾವುಲ್ಲಾ ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಇತರ ಅಧಿಕಾರಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು ಶ್ರೀ ಗಣೇಶನ ದರ್ಶನ ಪಡೆದು ಮಾತನಾಡಿದ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಮಹಾರಾಷ್ಟ್ರದ ಪೂನಾ ಹೊರತುಪಡಿಸಿದರೆ ಬೆಳಗಾವಿಯಲ್ಲಿ ಅತ್ಯಂತ ವಿಶಿಷ್ಟವಾಗಿ ಅದ್ಧೂರಿಯಿಂದ ಗಣೇಶ …

Read More »

ಎಸಿಪಿ ಜೈಕುಮಾರ್ ಗೆ ಶಾಸಕ ಸಂಜಯ ಪಾಟೀಲ್ ಅವಾಜ್….!

ಬೆಳಗಾವಿ: ಬಿಜೆಪಿ ಬೈಕ್ ರ‌್ಯಾಲಿ ವೇಳೆ ಬಿಜೆಪಿ ಶಾಸಕ ಸಂಜಯ್ ಪಾಟೀಲರಿಂದ ಪೊಲೀಸರಿಗೆ ಆವಾಜ್.ಹಾಕಿದ ಘಟನೆ ನಡೆದಿದೆ ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳೂರು ಚಲೋ ಬೈಕ್ ರ್ಯಾಲಿ ನಡೆಸಲು ಶಾಸಕ ಸಂಜಯ ಪಾಟೀಲ ಬಿಜೆಪಿ ಕಾರ್ಯಕರ್ತರ ಜೊತೆ ಚನ್ನಮ್ಮ ವೃತ್ತಕ್ಕೆ ಬಂದಾಗ ಶಾಸಕ ಸಂಜಯ ಮತ್ತು ಪೋಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು ಖಡೆಬಜಾರ್ ಎಸಿಪಿ ಜಯಕುಮಾರ್ ಅವರಿಗೆ ಏರು ಧ್ವನಿಯಲ್ಲಿ ಚಿರಾಡಿದ ಶಾಸಕ ಸಂಜಯ ಪಾಟೀಲ ಏನೇ …

Read More »