Breaking News

LOCAL NEWS

ಹಣಕಾಸಿನ ವ್ಯೆವಹಾರಕ್ಕಾಗಿ ಚೋಪ್ರಾ ಮೇಲೆ ಹಲ್ಲೆ ಮೂವರ ಬಂಧನ,ನಾಳೆ ಸವದತ್ತಿ ಬಂದ್ ಗೆ ಕರೆ

ಬೆಳಗಾವಿ- ಉದ್ಯಮಿ ಆನಂದ ಚೋಪ್ರಾ ಕೊಲೆಗೆ ಯತ್ನ‌ ಪ್ರಕರಣ ಬೇಧಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ ಕೊಲೆ ಯತ್ನದಲ್ಲಿ ಭಾಗಿಯಾಗಿದ್ದ 3ಜನ ಆರೋಪಿಗಳ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ 1.ಮಂಜು ಪಚಾಂಗಿ(30) 2. ಸುನೀಲ್ ತಾರಿಹಾಲಾ(33) ಕಾರ್ಮಿಕ ಗುತ್ತಿಗೆದಾರ 3. ಬಸವರಾಜ್ ಅರ್ಮಾನಿ(33) ರೈತ ಮೂರು ಜನ ಆರೋಪಿಗಳು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ನಿವಾಸಿಗಳಾಗಿದ್ದಾರೆ ಹಣಕಾಸಿನ ವ್ಯವಹಾರದ ಕುರಿತು ಆನಂದ ಚೋಪ್ರಾ ಕೊಲೆಗೆ ಯತ್ನ ನಡೆದಿರುವದು ಗೊತ್ತಗಿದೆ …

Read More »

ಮಠಾಧೀಶರ ಹೋರಾಟದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ನಾಳೆ ಬೆಳಗಾವಿಗೆ

ಬೆಳಗಾವಿ- ಉತ್ತರ ಕರ್ನಾಟಕ ಪ್ರದೇಶಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿ ನಾಳೆ ಉತ್ತರ ಕರ್ನಾಟಕದ ಮಠಾಧೀಶರು ಬೆಳಗಾವಿಯ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಲಿದ್ದು ಪ್ರತಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ ಉತ್ತರ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಪ್ರತಿಭಟನೆಯನ್ನು ಆಯೋಜಿಸಿದ್ದು ಸುವರ್ಣ ವಿಧಾನ ಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವ ಜೊತೆಗೆ ತಾರತಮ್ಯ ನಿವಾರಣೆಗೆ ಮಠಾಧೀಶರು ಒತ್ತಾಯ ಮಾಡಲಿದ್ದಾರೆ ಮಠಾಧೀಶರ ಹೋರಾಟದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ …

Read More »

ಆನಂದ ಚೋಪ್ರಾ ಹಲ್ಲೆ ಪ್ರಕರಣ,ಧಾರವಾಡದಲ್ಲಿ ನಾಲ್ವರು ಜನ ಪೋಲೀಸರ ವಶಕ್ಕೆ

ಬೆಳಗಾವಿ- ಸವದತ್ತಿಯ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಆನಂದ ಚೋಪ್ರಾ ಅವರ ಮೇಲೆ ನಿನ್ನೆ ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿ ಪೋಲೀಸರು ತನಿಖೆ ಚುರುಕು ಗೊಳಿಸಿದ್ದಾರೆ : ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಆನಂದ ಚೋಪ್ರಾ ಕೊಲೆ ಯತ್ನ ಪ್ರಕರಣ ನಿನ್ನೆ ಮದ್ಯರಾತ್ರಿ ನಡೆದಿತ್ತು ಈ ಪ್ರಕರಣಕ್ಕೆ ಸಮಂಧಿಸಿದಂತೆ ಧಾರವಾಡದಲ್ಲಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೋಲೀಸರು ತನಿಖೆ ಆರಂಭಿಸಿದ್ದಾರೆ ವಿದ್ಯಾಗಿರಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ …

Read More »

ಸವದತ್ತಿಯ ಪ್ರಭಾವಿ ನಾಯಕ ಆನಂದ ಚೋಪ್ರಾ ಮೇಲೆ ಹಲ್ಲೆ

ಬೆಳಗಾವಿ- ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ ಸವದತ್ತಿ ಕ್ಷೇತ್ರದ ಪ್ರಭಾವಿ ನಾಯಕ ಆನಂದ ಚೋಪ್ರಾ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು ಚೋಪ್ರಾ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕೀಮ್ಸ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆತಯತ್ತಿದ್ದಾರೆ ನಿನ್ನೆ ಮದ್ಯರಾತ್ರಿ ಬೈಕ್ ಮೇಲೆ ಆನಂದ ಚೋಪ್ರಾ ಹುಲಿ ರಸ್ತೆಯಲ್ಲಿ ಸಂಚರಿಸುತ್ತಿರುವಾಗ ದಾಳಿ ಮಾಡಿರುವ ದುಷ್ಕರ್ಮಿಗಳು ಚೋಪ್ರಾ ಕೊಲೆಗೆ ಯತ್ನಿಸಿದ್ದಾರೆ ಚೋಪ್ರಾ ತೆಲೆಗೆ ಗಂಭೀರ ಗಾಯವಾಗಿದ್ದು ಚೋಪ್ರಾ ಅವರನ್ನು …

Read More »

ಕೌಂಟರ್ ಮೇಲೆ ಕುಳಿತಿದ್ದು ಗ್ರಾಮೀಣ ಕ್ಷೇತ್ರದ ಬಾಸು….ಅಹವಾಲು ಕೇಳಿದ್ದು ಆರು ತಾಸು…..!!!!!!

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಆಯೋಜಿಸುತ್ತಿರುವ ಜನತಾ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಶನಿವಾರ ಸಾಂಬ್ರಾದಲ್ಲಿ ನಡೆದ ಜನತಾ ದರ್ಶನದಲ್ಲಿ ಹಲವಾರು ಜನ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಆದೇಶದ ಪತ್ರಗಳನ್ನು ದೊರಕಿಸಿಕೊಟ್ಟ ಪ್ರಸಂಗವು ನಡೆಯಿತು. ಬೆಳಗ್ಗೆ ಸಾಂಬ್ರಾ ಗ್ರಾಮದ ದುರ್ಗಾಮಾತಾ ದೇವಸ್ಥಾನದಲ್ಲಿ ನಡೆದ ಜನತಾ ದರ್ಶನದಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗ್ಗೆ 10:30ರಿಂದ ಸಂಜೆ 4 ಗಂಟೆಯ ವರೆಗೆ ಕೌಂಟರ್ ಮೇಲೆ ಕುಳಿತ ಲಕ್ಷ್ಮೀ ಹೆಬ್ಬಾಳಕರ …

Read More »

ಕೇಬಲ್ ಹಾಕಿ ರಸ್ತೆ ಹಾಳು ಮಾಡಿದ್ದು ಹೆಸ್ಕಾಮರ್ರೀ….ಲೆಬಲ್ ಸಿಕ್ಕಿದ್ದು ನಮಗ್ರೀ….!!!!

ಬೆಳಗಾವಿ ಲೋಕೋಪಯೋಗಿ, ಜಲಮಂಡಳಿ ಹಾಗೂ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ಮಹಾನಗರ ಪಾಲಿಕೆಯ ಮರ್ಯಾದೆ ಹಾಳಾಗುತ್ತಿದೆ ಎಂದು ಮೇಯರ್ ಬಸಪ್ಪ ಚಿಕ್ಕಲದಿನ್ನಿ ತರಾಟೆಗೆ ತೆಗೆದುಕೊಂಡರು. ಶನಿವಾರ ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಆಡಳಿತಾತ್ಮಕ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ ಗುಣಮಟ್ಟದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಿದರೂ ಹೆಸ್ಕಾಂ, ಜಲಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಪಾಲಿಕೆಯ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ. ಸುಸಜ್ಜಿತವಾದ ರಸ್ತೆಯನ್ನು ಅಗೆಯುವ ಮುನ್ನ …

Read More »

ಪ್ರತ್ಯೇಕ ರಾಜ್ಯದ ಗಲಿಬಿಲಿ….ರಾಜಕೀಯ ಪಕ್ಷಗಳ ಚಿಲಿಪಿಲಿ

ಬೆಳಗಾವಿ- ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದ್ದು ನಿಜ ನ್ಯಾಯಕ್ಕಾಗಿ ನಮ್ಮ ಹೋರಾಟ ಎಂದು ಸತೀಶ ಜಾರಕಿಹೊಳಿ,ಉಮೇಶ ಕತ್ತಿ ಶ್ರೀರಾಮಲು ಹೇಳಿದ ಬೆನ್ನಲ್ಲಿಯೇ ಜೆಡಿಎಸ್ ಚೇತರಿಸಿಕೊಂಡಿದ್ದು ಜೆಡಿಎಸ್ ಮೌತ್ ಪೀಸ್ ಮಾಡಲಗಿ ಈಗ ಬಾಯಿ ಬಿಚ್ಚಿದ್ದಾರೆ ಅಭಿವೃದ್ಧಿ ವಿಚಾರ ಉತ್ತರ ಕರ್ನಾಟಕಕ್ಕೆ ಅನ್ಯಾಯ ವಿಚಾರ ಕುರಿತು ಬೆಳಗಾವಿಯಲ್ಲಿ ಹೇಳಿಕೆ ನೀಡಿರುವ ಜೆಡಿಎ ಸ್ ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ ಬಿಜೆಪಿ ಶಾಸಕ ಶ್ರೀರಾಮುಲು ಪ್ರತ್ಯೇಕ ರಾಜ್ಯದ ಹೇಳಿಕೆ. ಯಾವುದೇ ಕಾರಣಕ್ಕೂ ರಾಜ್ಯ …

Read More »

ಸರ್ಕಾರದ ಸವಲತ್ತಿಗಾಗಿ ಅರ್ಜಿ….ಹೆಬ್ಬಾಳಕರ ಜನತಾ ದರ್ಶನದಲ್ಲಿ ಫುಲ್ ಗರ್ದಿ….!!!!

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಈಗ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಕ್ಷೇತ್ರದ ಜನತೆಗೆ ಸರ್ಕಾರದ ಸವಲತ್ತುಗಳನ್ನು ಮನೆ ಮನೆಗೆ ಮುಟ್ಟಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಜನತಾ ದರ್ಶನ ಆರಂಭಿಸಿದ್ದು, ಪ್ರಾಯೋಗಿಕವಾಗಿ ನಿಲಜಿ ಗ್ರಾಮದಲ್ಲಿ ಆಯೋಜಿಸಿದ ಜನತಾ ದರ್ಶನಕ್ಕೆ ನೂರಾರು ಜನ ಪಾಲ್ಗೊಂಡು ಸರ್ಕಾರದ ವಿವಿಧ ಸವಲತ್ತುಗಳಿಗಾಗಿ ತಮ್ಮ ಹೆಸರು ನೊಂದಾಯಿಸಿದ್ದಾರೆ. ನಿಲಜಿ ಗ್ರಾಮದ ದುರ್ಗಾಮಾತಾ ಮಂಗಳ ಕಾರ್ಯಾಲಯದಲ್ಲಿ ಜರುಗಿದ ಪೆನಶನ್ ಅದಾಲತ್ ಮತ್ತು ರೇಶನ್ ಕಾರ್ಡ್‍ಗಳ ನೊಂದಣಿ …

Read More »

ಬೆಳಗಾವಿ ರಸ್ತೆಗಳು ಬಿಡಾಡಿ…..ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ಬಿಜೆಪಿಯ ಜೋಡಿ ಖಿಲಾಡಿ…..!!!!

ಬೆಳಗಾವಿ ನಗರದಲ್ಲಿರುವ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಇದಕ್ಕೆ ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಗುತ್ತಿಗೆದಾರರ ಜೊತೆ ಅಧಿಕಾರಿಗಳು ಶಾಮೀಲಾಗಿರುವದು ಕಾರಣ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ಶಾಸಕ ಅನಿಲ ಬೆನಕೆ ನೇರ ಆರೋಪ ಮಾಡಿದರು. ನಗರದಲ್ಲಿ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು ಚುನಾವಣೆಗೆ ಒಂದು ತಿಂಗಳು ಮೊದಲು ಮಾಡಿದ ಮಹಾನಗರಪಾಲಿಕೆ, ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹಾಳಾಗಿವೆ. …

Read More »

ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳು ಭೇಟಿ ಅಧಿಕಾರಿಗಳು ತರಾಟೆಗೆ

ಬೆಳಗಾವಿ- ಬೆಳಗಾವಿ ಜಿಲ್ಲಾಸ್ಪತ್ರೆಗೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆಯ ನ್ನು ಕಂಡು ದಂಗಾದರು ಬೆಳಗಾವಿ ಜಿಲ್ಲಾ ಆಸ್ಪತ್ರೆ ವಿಪರೀತ ಮಳೆಯಿಂದಾಗಿ ಸೋರುತ್ತಿದ್ದು ಕೂಡಲೇ ಆಸ್ಪತ್ರೆಯ ಛಾವಣಿ ಸೋರದಂತೆ ಕ್ರಮ ಕೈಗೊಳ್ಳಬೇಕು ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು ಆಸ್ಪತ್ರೆಗೆ ಸೋಲಾರ್ ಅಳವಡಿಸುವ ಸಂಧರ್ಭದಲ್ಲಿ ಛಾವಣಿಯನ್ನು ಡ್ರೀಲ್ ನಿಂದ ಕೊರೆಯಿಸಿ ಸೋಲಾರ್ ಅಳವಡಿಸಿದ್ದರಿಂದ ಆಸ್ಪತ್ರೆಯ ಅಧಿಕಾರಿಗಳು ಸಬೂಬು ಹೇಳಿದಾಗ ಅದಕ್ಕೆ ಆಕ್ರೋಶ ವ್ಯೆಕ್ತ ಪಡಿಸಿದ ಡಿಸಿ …

Read More »

ಪೇನಶನ್….ರೇಶನ್ ಇಲ್ವೇ…ಹಾಗಿದ್ರೆ ನೋ ಟೆನಶ್ಯನ್….!!!!

ಬೆಳಗಾವಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಸರಕಾರದ ವಿವಿಧ ಪಿಂಚಣಿ ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪವೇತನ, ಸಂದ್ಯಾ ಸುರಕ್ಷಾ, ಮನಸ್ವೀನಿ ವೇತನ ಹಾಗೂ ಪಡಿತರ ಚೀಟಿ ಹೊಂದಿರದ ಕುಟುಂಬಗಳ ನೋಂದಣಿ ಕಾರ್ಯಕ್ರಮ ಹಾಗೂ ಪೇನ್‍ಶೆನ್ ಅದಾಲತ್ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಮ್ಮಿಕೊಂಡಿದ್ದಾರೆ. ದಿನಾಂಕ 26ರಂದು ಸಿಂದೋಳಿ, ಬಸರಿಕಟ್ಟಿ, ನಿಲಜಿ ಗ್ರಾಮಗಳ ನೋಂದಣಿ ಅಭಿಯಾನ ಮುಂಜಾನೆ 10 ಗಂಟೆಯಿಂದ ನಿಲಜಿ ಗ್ರಾಮದ ಶ್ರೀರಾಮ ಕಾಲೋನಿಯಲ್ಲಿರುವ ದುರ್ಗಾಮಾತಾ …

Read More »

ತಟ್ಟೆಯಲ್ಲಿ ಊಟ ಇಟ್ಕೊಂಡು ನೆಪ ಹೇಳಬೇಡಿ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್

ಬೆಳಗಾವಿ : ನರೇಗಾ ಯೋಜನೆಯಲ್ಲಿ ಸರಿಯಾಗಿ ಯೋಜನೆ ರೂಪಿಸದಿದ್ದರೆ ನಿಗಧಿತ ಸಮಯದಲ್ಲಿ ಗುರಿ ಮುಟ್ಟಲು ಸಾಧ್ಯವಿಲ್ಲ. ಉದ್ಯೋಗ ಖಾತ್ರಿ ಹಣ ಸರಿಯಾಗಿ ಬಳಸಿಕೊಂಡು ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ಯ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು. ಅವರು ಮಂಗಳವಾರ ಇಲ್ಲಿನ ಜಿಪಂ ಸಭಾ ಭವನದಲ್ಲಿ ಜಿಪಂನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನರೇಗಾ ಯೋಜನೆಯಲ್ಲಿ ದನದ ಕೊಟ್ಟಿಗೆ, ಅಂಗನವಾಡಿ ಕಟ್ಟಡ, ಸ್ಮಶಾನ ಕೌಂಪೌಡ, …

Read More »

ರಾಜ್ಯದಲ್ಲಿ ನೀರಿನ ಫಿಲ್ಟರ್ ಘಟಕಗಳ ದುರಸ್ಥಿ ಕಾರ್ಯ ಆರಂಭ- ಕೃಷ್ಣ ಭೈರೇಗೌಡ

ಬೆಳಗಾವಿ ರಾಜ್ಯದಲ್ಲಿ 2498 ಶುದ್ಧಕುಡಿಯುವ ನೀರಿನ ಘಟಕಗಳು ಕಾರ್ಯಾರಂಭ ಮಾಡಿದ ಘಟಕ ಬಂದ್ ಆದವುಗಳನ್ನು ಅವುಗಳನ್ನು ಸಹ ಕಳೆದ 15 ದಿನಗಳಿಂದ ರಾಜ್ಯದ್ಯಂತ ದುರಸ್ಥಿಗೊಳಿಸುವ ಕಾಮಗಾರಿ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಹೇಳಿದರು. ಅವರು ಮಂಗಳವಾರ ಬೈಲಹೊಂಗಲ್ ತಾಲೂಕಿನ ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿರುವ ಬರುವ ಕಾರ್ಯಕ್ರಮಗಳ ಕ್ಷೇತ್ರ ವೀಕ್ಷಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕುಡಿಯುವ ಶುದ್ಧ ನೀರಿನ ಘಟಕಗಳು ಬಹಳ ಕೆಟ್ಟಿವೆ ಎಂದು ಸಾರ್ವಜನಿಕರಿಂದ ದೂರು ಬಂದ …

Read More »

ಹನಿ….ಹನಿ…ಮಳೆ ಬಿತ್ರೀ…..ರೋಗಿ ಕೈಯ್ಯಾಗ ಛತ್ರಿ….ಸರ್ಕಾರಿ ದವಾಖಾನೆ ಆಯ್ತು .ಕಸಾಯಿ ಖಾನೆ….!!!!!!!

ಬೆಳಗಾವಿ- ಮಳೆ ಬಂದೈತಿ…ಅಂದ್ರೆ ಸಿವ್ಹಿಲ್ ಆಸ್ಪತ್ರೆ ರೋಗಿಗಳಿಗೆ ಪ್ರಾಬ್ಲಮ್ ಆಗೈತಿ ಅಂತ ತಿಳಿಯಬೇಕು ಯಾಕಂದ್ರ ಮಳೆ ಸುರಿದು ಆಸ್ಪತ್ರೆ ಸೋರಿದ್ರಾಸ್ಪತ್ರೆಯೊಳಗಿನ ರೋಗಿಗಳು ಛತ್ರಿ ಹಿಡ್ಕೊಂಡು ಮಲಗುವ ಪರಿಸ್ಥಿತಿ ಐತ್ರಿ ಸಾಹೇಬ್ತ ಕರುಣೆ …ಮಾನವೀಯತೆ ಇದ್ರೆ ಕ್ರಮ ಕೈಗೊಳ್ಳಿ ಮಳೆಗಾಲ ಆರಂಭವಾದ್ರೆ ಶಾಲೆಗಳು ಸೋರುವುದು ಸಾಮಾನ್ಯ… ಆದ್ರೆ ಜಿಲ್ಲಾಸ್ಪತ್ರೆ ಸೋರುತ್ತೆ ಅಂದ್ರೆ ನಂಬ್ತೀರಾ. ಬೆಳಗಾವಿ ಜಿಲ್ಲಾಸ್ಪತ್ರೆ ಮಳೆಯಾದ್ರೆ ಸಾಕು ಅವ್ಯವ್ಶಸ್ಥೆ ಆಗರವಾಗುತ್ತದೆ.. ಯಾವುದೇ ವಾರ್ಡಗೆ ಹೋದ್ರೂ ಟಿಪ್ ಟಿಪ್ ಮಳೆ ಹನಿಗಳು …

Read More »

ಜಿಪಂ ಸ್ಥಾಯಿ ಸಮಿತಿ ಚುನಾವಣೆ: ಅಧ್ಯಕ್ಷ-ಸದಸ್ಯರ ಅವಿರೋಧ ಆಯ್ಕೆ

ಬೆಳಗಾವಿ): ಜಿಲ್ಲಾ ಪಂಚಾಯತ ಎರಡನೇ ಅವಧಿಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಗಳ ಆಯ್ಕೆಗೆ ಸೋಮವಾರ (ಜು.23) ಜರುಗಿದ ಚುನಾವಣೆಯಲ್ಲಿ ಎಲ್ಲ ಅಧ್ಯಕ್ಷರು ಹಾಗೂ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಮೇಶ ಪರಶುರಾಮ ಗೋರಲ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಂಕರ ಭರಮಪ್ಪಾ ಮಾಡಲಗಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಶೈಲಜಾ ವಿದ್ಯಾಧರ ಕಾಗೆ ಅವರು …

Read More »