Breaking News

LOCAL NEWS

ಬಜೆಟ್ ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು ? ನಿಮಗೆ ಗೊತ್ತಾ..

ಬೆಳಗಾವಿ – ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ಮೂರು ಹೊಸ ತಾಲ್ಲೂಕುಗಳು ಸಿಗುವದರ ಜೊತೆಗೆ ಇನ್ನೂ ಕೆಲವು ಉಡುಗರೆಗಳು ಲಭಿಸಿವೆ ಬೆಳಗಾವಿ ನಗರ ಲಸಿಕಾ ಸಂಸ್ಥೆಯ ಆವರಣದಲ್ಲಿ ಅಂದರೆ ವ್ಯಾಕ್ಸೀನ್ ಡಿಪೋದಲ್ಲಿ ಆಯುಷ್ ಔಷಧಿ ತಯಾರಿಕೆ ಕೇಂದ್ರ ಸ್ಥಾಪನೆ, ೫ ಕೋಟಿ ಮೀಸಲು ಇಡಲಾಗಿದೆ -ಮಲಪ್ರಭಾ ನದಿಯಿಂದ ಕಿತ್ತೂರು ಕ್ಷೇತ್ರದ ಗದ್ದಿಕೆರೆಗೆ ನೀರು ತುಂಬಿಸುವ ಯೋಜನೆಗೆ ಹಸಿರು ನಿಶಾನೆ ದೊರೆತಿದೆ ಸರ್ಕಾರದ ಈ …

Read More »

ಹಲಗಾದಲ್ಲಿ 19 ಎಕರೆ ಭೂಮಿಯನ್ನು ವಶಕ್ಕೆ ಪಡೆದ ಪಾಲಿಕೆ

ಬೆಳಗಾವಿ- ಮಹಾನಗರ ಪಾಲಿಕೆ ಸಮೀಪದ ಹಲಗಾ ಗ್ರಾಮದಲ್ಲಿ ಸಿವೇಜ್ ಟ್ರಿಟಮೆಂಟ್ ಪ್ಲಾಂಟ ಕೊಳಚೆ ಸಂಸ್ಕರಣಾ ಘಟಕ ನಿರ್ಮಿಸಲು 19 ಎಕರೆ ಭೂಮಿಯನ್ನು ಭೂಸ್ವಾಧಿನ ಮಾಡಿಕೊಂಡಿದ್ದು ಬುಧವಾರ ಪಾಲಿಕೆ ಅಧಿಕಾರಿಗಳು ಪೋಲೀಸ್ ಬಂದೋಬಸ್ತಿಯಲ್ಲಿ 19 ಎಕರೆ ಜಾಗೆಯನ್ನು ತಮ್ಮ ವಶಕ್ಕೆ ಪಡೆದುಕೊಂಡರು ಪಾಲಿಕೆ ಆಯುಕ್ತ ಶಶಿಧರ ಕುರೇರ ನೀರು ಸರಬರಾಜು ಮಂಡಳಿಯ ಪ್ರಸನ್ನ ಮೂರ್ತಿ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಲಗಾ ಗ್ರಾಮದ ಜಾಗೆಯನ್ನು ತಮ್ಮ ವಶಕ್ಕೆ ಪಡೆಯಲು ಹೋದಾಗ ಇಲ್ಲಿಯ ರೈತರು …

Read More »

ಅತೀ ಹೆಚ್ಚು ತಾಲ್ಲೂಕುಗಳನ್ನು ಹೊಂದಿದ ದೊಡ್ಡ ಜಿಲ್ಲೆ ಬೆಳಗಾವಿ

ಬೆಳಗಾವಿ- ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಡಿಸಿದ ಬಜೆಟ್ ನಲ್ಲಿ ರಾಜ್ಯದಲ್ಲಿ ಹೊಸ ತಾಲ್ಲೂಕು ಗಳ ರಚನೆ ಮಾಡುವದಾಗಿ ಘೋಷಣೆ ಮಾಡಿದ್ದು ಈಗಾಗಲೇ ಹನ್ನೊಂದು ತಾಲ್ಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮೂರು ಹೊಸ ತಾಲ್ಲೂಕು ಗಳು ರಚನೆಯಾಗಲಿವೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ,ಕಾಗವಾಡ ಮತ್ತು ಮೂಡಲಗಿ ಮೂರು ತಾಲ್ಲೂಕು ಗಳು ಬಜೆಟ್ ನಲ್ಲಿ ಘೋಷಣೆಯಾಗಿದ್ದು ಬೆಳಗಾವಿ ಜಿಲ್ಲೆ ಹದಿನಾಲ್ಕು ತಾಲ್ಲೂಕುಗಳನ್ನು ಹೊಂದಿರುವ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿ ಹೊರಹೊಮ್ಮಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ …

Read More »

ಶೇಖ್ ಕಾಲೇಜ್ ಕ್ಯಾಂಪಸ್ ನಲ್ಲಿ NTTF ಸೆಂಟರ್

ಬೆಳಗಾವಿ:15 ಶೇಖ ಸಮೂಹ ಸಂಸ್ಥೆಗಳ ಮತ್ತು ಎನ್ ಟಿಟಿಎಫ್ ಸಹಯೋಗದಲ್ಲಿ ಶೇಖ ಕ್ಯಾಂಪಸ್ ನಲ್ಲಿ ಎನ್ ಟಿಟಿಎಫ್ ಸೆಂಟರನ್ನು ಸ್ಥಾಪಿಸಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಮೆಕಾಟ್ರಾನಿಕ್ಸ್ ತರಬೇತಿಯನ್ನು ಪ್ರಾರಂಭಿಸಲಾಗುವುದು ಎಂದು ಶೇಖ ಸಂಸ್ಥೆಯ ಅಧ್ಯಕ್ಷ ಅಬು ಶೇಖ ಹೇಳಿದರು. ಅವರು ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, 1967ರಲ್ಲಿ ದಿ. ಡಾ. ಎ.ಎಮ್. ಶೇಖ ನೇತೃತ್ವದಲ್ಲಿ ಪ್ರಾರಂಭಿಸಲ್ಪಟ್ಟ ಎ.ಎಮ್.ಶೇಖ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪಯಣದಲ್ಲಿ ಸಾಕಷ್ಟು ವಿದ್ಯಾಥಿ೯ಗಳು ಶಿಕ್ಷಣವನ್ನು …

Read More »

ಸತೀಶ ಜಾರಕಿಹೊಳಿಗೆ ಸಚಿವ ರಮೇಶ್ ಟಾಂಗ್..

ಬೆಳಗಾವಿ: ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಅವರು ಸತೀಶ ಜಾರಕಿಹೊಳಿ ಅವರ ಹೇಳಿಕೆಗೆ ತಿರಗೇಟು ನೀಡಿದ್ದಾರೆ ನಾನು ಸತೀಶ್ ಜಾರಕಿಹೊಳಿ ಬಗ್ಗೆ ಹೇಳಿಕೆ ನೀಡಿದ್ದು ಒಳ್ಳೆಯ ಉದ್ದೇಶದಿಂದ . ಅವರ ಮನಸ್ಸು ನೊಯಿಸಿದ್ದರೆ ನೇರವಾಗಿ ಅವರನ್ನು ಭೇಟಿಯಾಗಿ ಮಾತನಾಡುವೆ. ಆದರೆ ಲಖನ್ ಯಮಕನಮರ್ಡಿ ಕ್ಷೇತ್ರದಿಂದ ನಿಲ್ಲುವಂತೆ ಪಕ್ಷದ ವರಿಷ್ಠರೇ ಸೂಚನೆ ನೀಡಿದ್ದು ನಿಜ ಎಂದು ರಮೇಶ ಜಾರಕಿಹೊಳಿ ಸ್ಪಷ್ಠ ಪಡಿಸಿದ್ದಾರೆ ೨೦೦೮ ರ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಗೆ ಯಮಕನಮರ್ಡಿ …

Read More »

ಬೆಳಗಾವಿಯ ಅಶ್ವತ್ಥಾಮ ಮಂದಿರ ದಕ್ಷಿಣ ಭಾರತದದ ಏಕೈಕ ಮಂದಿರ

ಬೆಳಗಾವಿ- ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರ ದಕ್ಷಿಣ ಭಾರತದ ಏಕೈಕ ಮಂದಿರವಾಗಿದೆ ಹೋಳಿ ಹಬ್ಬದ ದಿನ ಸಾವಿರಾರು ಜನ ಭಕ್ತರು ತಮ್ಮ ಶಾಪ ವಿಮೋಚನೆಗಾಗಿ ಮಂದಿರದ ಎದುರು ಉರುಳು ಸೇವೆ ಮಾಡಿ ಅಶ್ವತ್ಥಾಮ ನನ್ನು ಆರಾಧಿಸುತ್ತಾರೆ ಭಾರತದಲ್ಲಿ ಒಟ್ಟು ಎರಡು ಅಶ್ವತ್ಥಾಮ ಮಂದಿರಗಳಿವೆ ಒಂದು ಉತ್ತರ ಭಾರತದಲ್ಲಿದೆ ಇನ್ನೊಂದು ಮಂದಿರ ಇರೋದು ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿ ಹೋಳಿ ಹಬ್ಬದ ದಿನ ಭಕ್ತರ ದಂಡು ಮಂದಿರದ ಎದುರು ಉರುಳು …

Read More »

ನಾಳೆ ಬಂದೋಬಸ್ತ…ಇಂದೇ ಹೋಲಿ..ಮಸ್ತ..ಮಸ್ತ.ಪೊಲೀಸರ ತ್ಯಾಗ ಜಬರದಸ್ತ..

ಬೆಳಗಾವಿ- ನಾಳೆ ಸೋಮವಾರ ಹೋಳಿ ಹಬ್ಬ ಬೆಳಿಗ್ಗೆ ಕೋಳಿ ಕೂಗುತ್ತಿದ್ದಂತೆಯೇ ಪೋಲೀಸರು ಬಂದೋಬಸ್ತಿಗೆ ಹೋಗಲೇ ಬೇಕು ಇವರಿಗೆ ಹಬ್ಬದ ದಿನ ರಜೆ ಸಿಗುವುದಿಲ್ಲ ಹಬ್ಬದ ಮಜಾ ಏನು ? ಅನ್ನೋದು ಪಾಪ ಇವರಿಗೆ ಗೊತ್ತಿಲ್ಲ ಹಬ್ಬದ ದಿನ ಜನ ಹಬ್ಬ ಆಚರಿಸಲಿ ನಾವು ಒಂದು ದಿನ ಮೊದಲೇ ಹಬ್ಬ ಆಚರಿಸೋಣ ಎಂದು ಒಂದು ದಿನ ಮುಂಚಿತವಾಗಿಯೇ ಖಡೇ ಬಝಾರ ಪೋಲೀಸರು ಬಣ್ಣದಾಟ ಆಡಿ ಎಲ್ಲರ ಗಮನ ಸೆಳೆದಿದ್ದಾರೆ ಖಡೇಬಝಾರ ಸಿಪಿಐ …

Read More »

ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..

  ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಹೃದಯ ಕಸಿ,ಮಾಡುವ ಚಿಕಿತ್ಸಾ ವ್ಯೆವಸ್ಥೆ ಆರಂಭವಾಗಿದೆ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಬೆಂಗಳೂರಿನಲ್ಲಿ ಮಾತ್ರ ಹೃದಯ ಕಸಿ ಮಾಡುವ ವ್ಯೆವಸ್ಥೆ ಇತ್ತು ಉತ್ತರ ಕರ್ಣಾಟಕದ ಜನರಿಗೆ ಅನಕೂಲವಾಗುವ ದೃಷ್ಠಿಯಿಂದ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಕಿಡ್ನಿ ಕಸಿ ಮತ್ತು …

Read More »

ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು

ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾವಿ ಬಾಗಲಕೋಟೆ,ವಿಜಯಪೂರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳನ್ನು ಸರ್ಕಾರ. ಮಂಜೂರು ಮಾಡಿದೆ ಎಂದು ಉತ್ತರ ವಲಯದ ಐಜಿಪಿ ರಾಮಚಂದ್ರ ರಾವ್ ತಿಳಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ಜಿಲ್ಲೆಯ ಹಾರೂಗೇರಿ,ಖಡಕಲಾಟ, ಚಿಕ್ಕೇಡಿ ಸಂಚಾರ ಮತ್ತು ಮಹಿಳಾ ಠಾಣೆಗಳು ಮಂಜೂರಾಗಿದೆ ಬಾಗಲಜೋಟೆ ಜಿಲ್ಲೆಗೆ ಎರಡು ವಿಜಯಪೂರ ಜಿಲ್ಲೆಗೆ ಮೂರು ಧಾರವಾಡ ಮತ್ತು …

Read More »

ಬೆಳಗಾವಿಯಲ್ಲಿ ಮಹಿಳೆಯರಿಗಾಗಿ ವುಮೇನಿಯಾ ಹೋಲಿ- ಹೆಬ್ಬಾಳಕರ್

ಬೆಳಗಾವಿ- ಸಂಸರಾದ ಜಂಜಾಟ ಮರೆತು ಮಹಿಳೆಯರು ಮಕ್ಕಳು ಹೋಳಿ ಸಂಭ್ರಮಿಸಲು ವುಮೇನಿಯಾ ಆಯೋಜನೆ ಮಾಡಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹೆಬ್ಬಾಳಕರ್ ಹೇಳಿದ್ದಾರೆ. ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆಯುವ ವುಮೇನಿಯಾ ಹೋಳಿ ಆಚರಣೆಯ ಪೂರ್ವಸಿದ್ದತೆ ಪರಿಶೀಲನೆ ಮಾಡಿ ಮಾತನಾಡಿದ್ರು. ಹೋಲಿ ಆಚರಣೆಯಲ್ಲಿ ಎಂ ಟಿವಿ ನಾಗ್ಡಾ, ನೈತಿಕ್ ನಾಗ್ಡಾ ಮತ್ತು ತಂಡದ ಸಂಗೀತ  ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಕ್ಕಳಿಗೆ ಕೃತಕ ಕಾರಂಜಿ, ಮಹಿಳೆಯರಿಗೆ ಸಂಗೀತ ಕಾರ್ಯಕ್ರಮ ಆಯೋಜನೆ …

Read More »

ಬೆಳಗಾವಿ ವಿಶ್ವಕನ್ನಡ ಸಮ್ಮೇಳಕ್ಕೆ ಆರು ವರ್ಷ… ಆರಿಲ್ಲ ಇನ್ನೂ ಕನ್ನಡದ ಹರುಷ…

ಬೆಳಗಾವಿ- ಗಡಿನಾಡ ಗುಡಿಯಲ್ಲಿ ಕನ್ನಡದ ಝೇಂಕಾರದ ಧ್ವನಿ ಪ್ರತಿಧ್ವನಿಸಿ ಇಂದಿಗೆ ಬರೋಬ್ಬರಿ ಆರು ವರ್ಷ ಗತಿಸಿವೆ. ಸಮ್ಮೇಳನ ಮುಗಿದು ಆರು ವರ್ಷ ಗತಿಸಿದರೂ ಕನ್ನಡದ ಕಂಪು ಆರಿಲ್ಲ. ಸಮ್ಮೇಳನದ ಹುರುಪು ಕಡಿಮೆ ಆಗಿಲ್ಲ. ಈ ಉತ್ಸವದ ಉತ್ಸಾಹ ಇಂದಿಗೂ ಬೆಳಗಾವಿಯ ಕಣಕಣದಲ್ಲಿಯೂ ಮನೆ ಮಾಡಿದೆ. ಮಾರ್ಚ್ ೧೧ , ೨೦೧೧ ರಲ್ಲಿ ಮೂರು ದಿನಗಳ ಕಶಲ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಿತ್ತು ಬಾಲಿವುಡ್ ನಟಿ ಕನ್ನಡತಿ ಐಶ್ವರ್ಯ ರಾಯ್ …

Read More »

ಕಮಲ ಮಾಡಿತು ಕಮಾಲ್…ಮೋದಿ ಗಾಳಿ ಸದಾಕಾಲ್..!

ಬೆಳಗಾವಿ- ಪಂಚ ರಾಜ್ಯಗಳ ಚುನಾವಣೆ ಯಲ್ಲಿ ಬಿಜೆಪಿ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನಲೆಯಲ್ಲಿ ಬೆಳಗಾವಿಯ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಅಭಯ ಪಾಟೀಲರ ನೇತ್ರತ್ವದಲ್ಲಿ ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಿಸಿದರು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಬಿಜೆಪ ಕಚೇರಿಯಲ್ಲಿ ಸಮಾವೇಶಗೊಂಡು ಕೇಸರಿ ಗುಲಾಲು ಹಾರಿಸಿ ಸಿಹಿ ಹಂಚಿ ಢೋಲ್ ತಾಶಾ ತಾಳಕ್ಕೆ ತಕ್ಕಂತೆ ಕುಣಿದು ಸಂಬ್ರಮಾಚರಿಸಿದರು ಮಳಳಾ ಕಾರ್ಯಕರ್ತರು ಹರ.ಹರ.ಮೋದಿ ಎನ್ನುವ ಘೋಷಣೆಗಳನ್ನು ಕೂಗುತ್ತ ಕುಣಿಯುವ ಮೂಲಕ ಎಲ್ಲರ ಗಮನ …

Read More »

ಅನೀಲ ಬೆನಕೆಗೆ ಬಿಜೆಪಿಯಲ್ಲಿ ಕೊನೆಗೂ “ಉತ್ತರ” ಸಿಗಲಿಲ್ಲ

ಬೆಳಗಾವಿಯ- ರಾಜಕೀಯ ವಲಯದಲ್ಲಿ ಅಂದುಕೊಂತೆ ಯಾವುದು ನಡೆಯುವುದಿಲ್ಲ ಬಯಸಿದ್ದು ಸಿಗೋದಿಲ್ಲ ಅನ್ನೋದಕ್ಕೆ ಅನೀಲ ಬೆನಕೆ ಅವರೇ ಅದಕ್ಕೆ ಸಾಕ್ಷಿಯಾಗಿದ್ದಾರೆ ಬಿಜೆಪಿಯಲ್ಲಿ ಅನೀಲ ಬೆನಕೆ ಪ್ರಶ್ನೆಗಳಿಗೆ   ”ಉತ್ತರ” ಸಿಗದೇ ನಿರುತ್ತರರಾಗಿರುವ ಅನೀಲ ಬೆನಕೆ ಅವರ ಮುಂದಿನ ರಾಜಕೀಯ ನಡೆ ಯಾವ ಕಡೆ ಅನ್ನೋದು ಎಲ್ಲರಲ್ಲಿ ಕುತೂಹಲ ಕೆರಳಿಸಿದೆ ಅನೀಲ ಬೆನಕೆ ಬಿಜೆಪಿಯ ನಗರಾಧ್ಯಕ್ಷರಾಗಿದ್ದರು ಬಿಜೆಪಿಯಲ್ಲಿ ನಡೆದ ಚದುರಂಗದ ಆಟದಲ್ಲಿ ಬೆನಕೆ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡರು ಬೆಳಗಾವಿ ಉತ್ತರದಲ್ಲಿ ಬಿಜೆಪಿ ಟಿಕೆಟ್ …

Read More »

ಮೂರು ಹುಲ್ಲಿನ ಬನವೆಗಳು ಬೆಂಕಿಗಾಹುತಿ ಆಕಳ ಕರುಗೆ ಗಾಯ

ಬೆಳಗಾವಿ- ಆಕಸ್ಮಿಕವಾಗಿ ಮೂರು ಹುಲ್ಲಿನ ಬನವೆಗಳು ಬೆಂಕಿಗಾಹುತಿಯಾಗಿ ಆಕಳ ಕರುವೊಂದು ಬೆಂಕಿಯ ಝಳಕ್ಕೆ ಗಾಯಗೊಂಡಿದೆ ಆಕಸ್ಮಿಕ ಅಗ್ನಿ ಅವಘಟದಿಂದ ಮೂರು ಹುಲ್ಲಿನ ಬನವೆಗಳು ಸುಟ್ಟು ಭಸ್ಮವಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ಹೊರವಲಯದಲ್ಲಿ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಭಾರಿ ದುರಂತ ತಪ್ಪಿದೆ. ಗದ್ದಿಕರವಿನಕೊಪ್ಪ ಗ್ರಾಮದ ಶಿವಪ್ಪ ಮುಂಡೊಳಿ ಹಾಗೂ ವೀರಭದ್ರ ಮುಂಡೊಳಿ ಗೆ ಸೇರಿದ ಬನವೆಗಳು ಎಂದು ತಿಳಿದು ಬಂದಿದೆ.ಇನ್ನು ಬನವೆ ಪಕ್ಕದಲ್ಲಿ ಕಟ್ಟಿದ್ದ …

Read More »

ಬ್ಯಾಂಕ ಖಾತೆಗೆ ಆಧಾರ್ ಲಿಂಕ್ ಕೊಟ್ಟರೆ ಮಾತ್ರ ಬೆಳೆ ಪರಿಹಾರ

ಬೆಳಗಾವಿ- ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ರೈತರ ಖಾತೆಗಳಿಗೆ ನೇರವಾಗಿ ಬೆಳೆ ಪರಿಹಾರ ಜಮಾ ಮಾಡಲಿದ್ದು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಕೊಡುವವರೆಗೂ ಬೆಳೆ ಪರಿಹಾರ ಖಾತೆಗಳಿಗೆ ಜಮಾ ಆಗುವದಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟನೆ ಯನ್ನು ಹೊರಡಿಸಿದ್ದಾರೆ ರೈತರು ಕೂಡಲೇ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಕೊಡಬೇಕು ಅಲ್ಲಿಯವರೆಗೆ ಬೆಳೆ ಪರಿಹಾರ ಸಿಗೋದಿಲ್ಲ ಅದಕ್ಕಾಗಿ ಆಧಾರ್ ಕಾರ್ಡಗಳನ್ನು ಹೊಂದಿರದ ರೈತರು ಆಧಾರ್ ಕಾರ್ಡ ಮಾಡಿಸಬೇಕು ಈ ಬಾರಿ …

Read More »