LOCAL NEWS

ನಿರಂತರ ಮಳೆಗೆ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಿ ಏನಾಯಿತು ಗೊತ್ತಾ…!!

ಮಳೆ ಸುರೀತಾ ಇದೆ… ನದಿ ಹರೀತಾ ಇದೆ.. ಜಲಾಶಯ ತುಂಬುತ್ತಿದೆ. ನೀರಿನ ಸಮಸ್ಯೆ ಬಗೆಹರೀತಾ ಇದೆ….   ಬೆಳಗಾವಿ -ಸಹ್ಯಾದ್ರಿ ಬೆಟ್ಟದ ಶ್ರೇಣಿ,ಹಾಗೂ ಪಶ್ಚಿಮ ಘಟ್ಟದ ಮಡಿಲಲ್ಲಿ ಇರುವ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ‌.ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆ ಸುರಿದಿದ್ದು ರಾಮದುರ್ಗ ತಾಲ್ಲೂಕಿನಲ್ಲಿ ಅತೀ ಕಡಿಮೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಖಾನಾಪೂರ ತಾಲ್ಲೂಕಿನಲ್ಲಿ 41.2 mm ಜಿಲ್ಲೆಯಲ್ಲೇ ಅತೀ …

Read More »

ಅಲ್ಲೂ ವಿರೋಧ ಪಕ್ಷದ ನಾಯಕ ಇಲ್ಲ.ಇಲ್ಲೂ ವಿರೋಧ ಪಕ್ಷದ ನಾಯಕ ಇಲ್ಲ…..!!!

ಬೆಳಗಾವಿ-ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸಿ,ಪಾಲಿಕೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಹುಮತದ ಅಧಿಕಾರ ಪಡೆದಿರುವ ಬಿಜೆಪಿಯ ಆಡಳಿತದ ಪ್ರಪ್ರಥಮ ಸಾಮಾನ್ಯ ಸಭೆ,ನಾಳೆ ಶುಕ್ರವಾರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆಯಲಿದೆ. ವಿಧಾನಸಭೆಯ ಬಜೆಟ್ ಅಧಿವೇಶನ ವಿರೋಧ ಪಕ್ಷದ ನಾಯಕನಿಲ್ಲದೇ ನಡೆಯುತ್ತಿದೆ.ಅಲ್ಲಿ ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರ ಕಗ್ಗಂಟಾಗಿದ್ದು,ಇಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲೂ ವಿರೋಧ ಪಕ್ಷದ ನಾಯಕನ ವಿಚಾರ ಕಾಂಗ್ರೆಸ್ಸಿಗೆ ಕಗ್ಗಂಟಾಗಿದೆ.ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪಾಲಿಕೆಯಲ್ಲಿ ತಿಕ್ಕಾಟ ಮುಂದುವರೆದಿದ್ದು,ಈ …

Read More »

ಮಕ್ಕಳ ಕಲ್ಯಾಣದ ಕುರಿತು,ಅಧಿಕಾರಿಗಳ ನೀರೀಳಿಸಿದ ಬೆಳಗಾವಿ ಡಿಸಿ.

ಪೋಕ್ಸೋ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬ ಆಗಬಾರದು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, : ಪೋಕ್ಸೋ ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ಕ್ರಮ ವಹಿಸಬೇಕು. ಇದಲ್ಲದೇ ಜಿಲ್ಲೆಯಲ್ಲಿ ಭಿಕ್ಷುಕ, ನಿರ್ಗತಿಕ, ಅನಾಥ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ(ಜು.19) ನಡೆದ …

Read More »

ಲೈವ್ ವಿಡಿಯೋ ಮಾಡಿ,ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ.

ರಾಯಬಾಗ-ಲೈವ್ ವಿಡಿಯೋ ಮಾಡಿ,ವ್ಯಕ್ತಿಯೊಬ್ಬ ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ಹಾಲಪ್ಪ ಸುರಾಣಿ (27) ಎಂಬಾತ,ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ನಡೆದಿದೆ. ರಾಯಬಾಗ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ,ಹಾಲಪ್ಪ ಸುರಾಣಿಗೆ ಸದಾಶಿವ ನಿಡೋಣಿ ಎಂಬಾತ 2018 ರಿಂದ ತೊಂದರೆ ಕೊಡುತ್ತಿದ್ದ ,ಅದಕ್ಕಾಗಿಯೇನಾನು ಮನನೊಂದ ನನ್ನ ಎರಡ ಮಕ್ಕಳು ಹಾಗೂ ನನ್ನ ಪತ್ನಿ ಬಿಟ್ಟು ಮಧ್ಯರಾತ್ರಿ …

Read More »

ಲಕ್ಷ್ಮೀ ಪುತ್ರ ಮೃನಾಲ ಹೆಬ್ಬಾಳಕರ್ ಕಣಕ್ಕಿಳಿಸಲು ತಯಾರಿ…!!!

ಬೆಳಗಾವಿ- ಲೋಕಸಭೆ ಚುನಾವಣೆಗೆ ದೇಶದಲ್ಲೇ ಈಗ ಅಖಾಡಾ ರೆಡಿಯಾಗುತ್ತಿದೆ.ಹೀಗಾಗಿ ಬೆಳಗಾವಿಯಲ್ಲೂ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ.ಬೆಳಗಾವಿ ಲೋಕಸಭೆ ಚುನಾವಣೆಗೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ ಮೃನಾಲ ಹೆಬ್ಬಾಳಕರ್ ಅವರನ್ನು ಕಣಕ್ಕಿಳಿಸುವ ಚರ್ಚೆ ಜೋರಾಗಿಯೇ ನಡೆದಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರ ಬಿಜೆಪಿ ಹಿಡಿತದಲ್ಲಿದ್ದು ಇದನ್ನು ಮರಳಿ ಪಡೆಯಲು ಕಾಂಗ್ರೆಸ್ ಪ್ರಭಾವಿ ನಾಯಕನನ್ನು ಕಣಕ್ಕಿಳಿಸಲು ಚಿಂತನೆ ಆರಂಭಿಸಿದ್ದು ಜಿಲ್ಲೆಯಲ್ಲಿ ಅಲ್ಪಾವಧಿಯಲ್ಲೇ ರಾಜಕೀಯದಲ್ಲಿ ಅತೀ ವೇಗವಾಗಿ ಪಾಪುಲರ್ ಆಗಿರುವ …

Read More »

ವಿಠೋಬಾ… ಭಕ್ತರ ದರ್ಶನಕ್ಕಾಗಿ ಮತ್ತೆ ಬಾ…!!

ಬೆಳಗಾವಿ- ಮುಂಗಾರು ಈ ಬಾರಿ ಲೇಟಾಗಿ ಬಂದ ಕಾರಣ, ಹಿಡಕಲ್ ಜಲಾಶಯ ಸಂಪೂರ್ಣವಾಗಿ ಬತ್ತಿ ಹೋದ ಕಾರಣ ಬೆಳಗಾವಿಯ ಹಿಡಕಲ್ ಜಲಾಶಯದಲ್ಲಿ ಮುಳುಗಿದ್ದ ಅತ್ಯಂತ ಹಳೇಯದಾದ ವಿಠೋಬಾ ದೇವಸ್ಥಾನ ಭಕ್ತರ ದರ್ಶನಕ್ಕೆ ಲಭ್ಯವಾಗಿತ್ತು. ಹುನ್ನೂರು ಗ್ರಾಮವನ್ನು ಹಿಡಕಲ್ ಜಲಾಶಯದ ನಿರ್ಮಾಣದ ಸಂಧರ್ಭದಲ್ಲಿ ಸಂಪೂರ್ಣವಾಗಿ ಸ್ಥಳಾಂತರ ಮಾಡಲಾಗಿತ್ತು.ಈ ಗ್ರಾಮದಲ್ಲಿದ್ದ ವಿಠ್ಠಲ ದೇವರ ಮಂದಿರ ಜಲಾಶಯದಲ್ಲೇ ಮುಳುಗಿತ್ತು, ಆದ್ರೆ ಈ ಬಾರಿ ಈ ದೇಗುಲ ಭಕ್ತರ ದರ್ಶನಕ್ಕೆ ಲಭ್ಯವಾಗಿತ್ತು,ಕಳೆದ ಒಂದು ತಿಂಗಳಿಂದ ದಿನನಿತ್ಯ …

Read More »

LOVE… ಗಾಗಿ ಗಂಡನ ಕಥೆ ಮುಗಿಸಿದ ಖಿಲಾಡಿ ಪ್ರೀಯಾಂಕಾ ಇವಳೇ….!!

ಮೂಡಲಗಿ- ಮನೆಯವರು ಸೋದರಮಾವನ ಜೊತೆ ಮದುವೆ ಮಾಡಿಸಿದ ಬಳಿಕವೂ ಗಂಡನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ,ಹಳೆಯ ಲವರ್ ನನ್ನು ಕರೆಯಿಸಿ ಗಂಡನ ಕಥೆ ಮುಗಿಸಿದ ಖಿಲಾಡಿ ಹೆಂಡತಿ ಇವಳೇ….. ಮೂಡಲಗಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಲವ್ ಕೇಸ್ ಒಂದು ಅಮಾಯಕನನ್ನು ಬಲಿ ಪಡೆದ ಪ್ರೇಮ್ ಕಹಾನಿ ನಡೆದಿದೆ.ಭೀಮನ ಅಮವಾಸ್ಯೆಯಂದೇ ಪತಿಯ ಕೊಲೆ ಮಾಡಿಸಿದ ಪತ್ನಿಯ ಬಂಧನವಾಗಿದೆ.ಮಾಡಿಕೊಂಡ ಗಂಡನ ಕಥೆ ಮುಗಿಸಿ ಪ್ರೇಮಿಯ ಜೊತೆ ಬದುಕು ಸಾಗಿಸುವ ಸ್ಕೇಚ್ ಹಾಕಿದ್ದ ಇವಳು ಈಗ …

Read More »

ಬೆಳಗಾವಿ ಜಿಲ್ಲೆಯಲ್ಲಿ ಮುಂದುವರೆದ ಮರ್ಡರ್ ಗಳ ಸರಣಿ…!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಮೇಲೆ ಯಾರ ದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ, ಇಲ್ಲಿ ಸಿಂಗಲ್ ಆದ್ಮೇಲೆ ಡಬಲ್ ಹೀಗೆ ಮರ್ಡರ್ ಗಳ ಸರಣಿ ಮುಂದುವರೆದಿದೆ,ಇಂದು ಬೆಳ್ಳಂ ಬೆಳಗ್ಗೆ ಜಿಲ್ಲೆಯಲ್ಲಿ ಮೊತ್ತೋರ್ವ ಯುವಕನ ಮರ್ಡರ್ ಆಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಹತ್ಯೆಯಾದ ಯುವಕನ ಕುಟುಂಬಸ್ಥರನ್ನು ವಿಚಾರಣೆ ನಡೆಸುತ್ತಿದ್ದು ಕೊಲೆಗೆ …

Read More »

ಎರಡೂವರೆ ಲಕ್ಷ ರೂ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ.

ಬೆಳಗಾವಿ-ವ್ಯಾಪಾರಿಯೊಬ್ಬನ ಬ್ಯಾಗ್ ನಲ್ಲಿ ಇದ್ದ ಎರಡೂವರೆ ಲಕ್ಷ ರೂಗಳನ್ನು ಬೆಳಗಾವಿಯ ರಿಕ್ಷಾ ಚಾಲಕನೊಬ್ಬ ಪೋಲೀಸರಿಗೆ ಮರಳಿಸಿ ಪ್ರಾಮಾಣಿಕತೆಯನ್ನು ಮೆರೆದ ಘಟನೆ ನಡೆದಿದೆ. ಬೆಳಗಾವಿಯ ಫ್ಲೈವುಡ್ ವ್ಯಾಪಾರಿ ಸುರೇಶ್ ಉರ್ಫ್ ಅರ್ಜುನ್ ಜೈನ್ ತಿಲಕವಾಡಿಯ ಬ್ಯಾಂಕಿನಿಂದ ಎರಡೂವರೆ ಲಕ್ಷ ರೂ ಡ್ರಾ ಮಾಡುಕೊಂಡಿದ್ದ,ಈತನ ಕ್ಯಾಶ್ ಬ್ಯಾಗ್ ಕ್ಯಾಂಪ್ ಪ್ರದೇಶದಲ್ಲಿ ಬಿದ್ದಾಗ, ಈ ಬ್ಯಾಗ್ ಗವಳಿ ಗಲ್ಲಿಯ ರಿಕ್ಷಾ ಚಾಲಕ ಹೊಸೂರಕರ ಎಂಬಾತರಿಗೆ ಸಿಕ್ಕಿತ್ತು. ಈ ರಿಕ್ಷಾ ಚಾಲಕ ಕ್ಯಾಶ್ ಬ್ಯಾಗನ್ನು ಕ್ಯಾಂಪ್ …

Read More »

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಅಪ್ಸರ್ ಪಾಷಾ ಈಗ ಮುಂಬಯಿ ಪೋಲೀಸರ ವಶಕ್ಕೆ…!!

ಬೆಳಗಾವಿ- ಬೆಳಗಾವಿಯ ಹಿಂಡಲಗಾ ಜೈಲಿಗೆ ಭೇಟಿ ನೀಡಿದ ಮುಂಬಯಿ ಪೋಲೀಸ್ರು, ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದ ಅಪ್ಸರ್ ಪಾಷಾ ಎಂಬಾತನನ್ನು ಮುಂಬಯಿಗೆ ಕರೆದುಕೊಂಡು ಹೋಗಿದ್ದಾರೆ. ಹಿಂಡಲಗಾ ಜೈಲಿನಿಂದಲೇ ಕೇಂದ್ರ ಸಚಿವ ನೀತಿನ್ ಗಡ್ಕರಿ ಜೀವ ಬೆದರಿಕೆ ಪ್ರಕರಣ ಈಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ.ನಿತೀನ್ ಗಡ್ಕರಿ ಬೆದರಿಕೆ ಹಿಂದೆ ಲಷ್ಕರ್ ಇ ತೋಯ್ಬಾ ಸಂಘಟನೆ ಉಗ್ರನ ಪ್ರಚೋದನೆ ಇದೆ ಎನ್ನುವ ಮಾಹಿತಿ ಮುಂಬಯಿ ಪೋಲೀಸರಿಗೆ ಸಿಕ್ಕಿದೆ.ಲಷ್ಕರ್ ಇ ತೋಯ್ಬಾ ಸಂಘಟನೆ …

Read More »

ಗೃಹಲಕ್ಷ್ಮೀ ಯೋಜನೆ: ಜು.19 ರಿಂದ ನೋಂದಣಿ

ಫಲಾನುಭವಿಗಳ ನೋಂದಣಿಗೆ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ಬೆಳಗಾವಿ, -): ಸರಕಾರದ ಮಾರ್ಗಸೂಚಿಯ ಪ್ರಕಾರ ಗೃಹಲಕ್ಷ್ಮೀ ಫಲಾನುಭವಿಗಳ ಸಮರ್ಪಕ ನೋಂದಣಿಗಾಗಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಗೃಹಲಕ್ಷ್ಮೀ ಫಲಾನುಭವಿಗಳ ನೋಂದಣಿಗೆ ಸಂಬಂಧಿಸಿದಂತೆ ವಿಡಿಯೋ ಸಂವಾದದ ಮೂಲಕ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದ …

Read More »

ಬೆಳಗಾವಿಯ ಪ್ರಸಿದ್ಧ ದೇಗುಲ,ಅಭಿವೃದ್ಧಿ ಆಗೋದು ಯಾವಾಗ…!!

ಬೆಳಗಾವಿ: ಸದತ್ತಿಯ ಯಲ್ಲಮ್ಮನ ದೇವಸ್ಥಾನ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಟಾಪ್ ೧೦ ದೇವಸ್ಥಾನಗಳಲ್ಲಿ ಒಂದು ಹಾಗೂ ಮಹಿಳಾ ಭಕ್ತರ ಅತ್ಯಧಿಕ ಪ್ರಮಾಣದಲ್ಲಿ ಭೇಟಿ ನೀಡುವ ಕ್ಷೇತ್ರ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಆದರೆ, ಮೂಲಸೌಕರ್ಯಗಳ ವಿಚಾರಕ್ಕೆ ಬಂದರೆ ದೇವಸ್ಥಾನ ಅತಿ ಹಿಂದುಳಿದಿರುವುದು ಸುಳ್ಳಲ್ಲ. ಹೌದು, ಪ್ರತಿವರ್ಷ ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟç, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶಾದ್ಯಂತ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಅದರಲ್ಲೂ …

Read More »

ಚಂದ್ರಯಾನದ ಬಿಡಿಭಾಗಗಳು ತಯಾರಾಗಿದ್ದು ಕ್ರಾಂತಿಯ ನೆಲ ಬೆಳಗಾವಿಯಲ್ಲಿ….!!!

ಬೆಳಗಾವಿ- ಚಂದ್ರಯಾನ 3 ರ ರಾಕೇಟ್ ಹಾಗೂ ಲಾಂಚರ್ ಗಳ ಬಿಡಿಭಾಗಗಳು ತಯಾರಾಗಿದ್ದು ಐತಿಹಾಸಿಕ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ಅನ್ನೋದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಇಸ್ರೋದ (ISRO‌) ಮಹತ್ವಾಕಾಂಕ್ಷೆಯ ಚಂದ್ರಯಾನ-3 (Chandrayaan-3) ಉಪಗ್ರಹದ ರಾಕೆಟ್ ಹಾಗೂ ಲಾಂಚರ್‌ಗಳ ಬಿಡಿಭಾಗಗಳು ಬೆಳಗಾವಿಯಲ್ಲಿ (Belagavi) ತಯಾರಾಗಿವೆ. ನಗರದ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‍ನಲ್ಲಿ ಈ ಬಿಡಿಭಾಗಗಳು ತಯಾರಾಗಿವೆ. ಈ ವಿಚಾರವಾಗಿ ಸಂಸ್ಥೆಯ ಎಂಡಿ ದೀಪಕ್ ಧಡೂತಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿ, ಚಂದ್ರಯಾನ-3 …

Read More »

ಅವರು ಏನ್ ಕೇಳ್ತಾರೆ ನಾವು ಹೆಲ್ಪ್ ಮಾಡಲಿಕ್ಕೆ ರೆಡಿ ಇದ್ದೇವೆ.- ಸಾಹುಕಾರ್

ಬೆಳಗಾವಿ-ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯಾದ ಹಿನ್ನಲೆಯಲ್ಲಿಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ,ಕಮೀಟಿಯ ಸದಸ್ಯರಿಗೆ ಸಾಂತ್ವನ ಹೇಳಿದ್ರುಕಾಮಕುಮಾರ ನಂದಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಆಶ್ರಮದ ಟ್ರಸ್ಟಿಗಳ ಬಳಿ ಮಾತುಕತೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪ್ರಕರಣದ ತನಿಖೆ ಕುರಿತು ಸಚಿವರಿಗೆ ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರು ಮಾಹಿತಿ ನೀಡಿದ್ರು.ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ …

Read More »

ಬೆಳಗಾವಿಯ ಪೀರನವಾಡಿ ಹತ್ತಿರ ಯುವಕನ ಶವ ಪತ್ತೆ.

ಬೆಳಗಾವಿ- ಬೆಳಗಾವಿಯ ಪೀರನವಾಡಿ ಹತ್ತಿರದ ಜೈನ ಕಾಲೇಜು ಹತ್ತಿರ ಇಂದು ಬೆಳಗ್ಗೆ ಯುವಕನ ಶವ ಪತ್ತೆಯಾಗಿದೆ. ಮಚ್ಛೆ ಗ್ರಾಮದ ಅರ್ಬಾಜ್ ಮುಲ್ಲಾ ಎಂಬಾತನ ಶವ ಪತ್ತೆಯಾಗಿದ್ದು,ಈತ ಮೂಲತಹ ಮಚ್ಛೆ ಗ್ರಾಮದ ಯುವಕನಾಗಿದ್ದು ವಾಹನಗಳ ಸರ್ವಿಸಂಗ್ ಸೆಂಟರ್ ನಲ್ಲಿ ಈತ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಯುವಕನ ಕೊಲೆ ಮಾಡಿ ಈತನ ಶವವನ್ನು ಪೀರನವಾಡಿಯ ಜೈನ ಕಾಲೇಜ್ ಹತ್ತಿರ ಎಸೆದಿದ್ದಾರೆ ಎಂದು ಶಂಕಿಸಲಾಗಿದ್ದು ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸ್ರು …

Read More »