Breaking News

LOCAL NEWS

ಬಿಜೆಪಿ ನಾಯಕನ ಹತ್ಯೆ ಖಂಡಿಸಿ ಪ್ರತಿಭಟನೆ

ಬೆಳಗಾವಿ: ಬಿಜೆಪಿ ಕಾರ್ಯದರ್ಶಿ ಹಾಗೂ ಆರ್.ಎಸ್.ಎಸ್. ಕಾರ್ಯಕರ್ತ ರುದ್ರೇಶ ದುಷ್ಕರ್ಮಿಗಳಿಂದಾದ ಕಗ್ಗೊಲೆ ಖಂಡಿಸಿ ಬೆಳಗಾವಿ ಉತ್ತರ ಹಾಗೂ ಗ್ರಾಮಾಂತರ ಬಿಜೆಪಿ ಘಟಕದ ಕಾರ್ಯಕರ್ತರು ಪ್ರತಿಭಟನೆ ಜಿಲ್ಲಾಧಿಕಾರಿಗೆ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಚನ್ನಮ್ಮ ವೃತ್ತದಿಂದ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು. ಬೆಂಗಳೂರು ಶಿವಾಜಿ ನಗರದ ಆರ್‍ಬಿಎನ್‍ಎಮ್‍ಎಸ್ ಕ್ರೀಡಾಂಗಣದಲ್ಲಿ ರುದ್ರೇಶ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬರ್ಬರ ಹತ್ಯೆ ಮಾಡಿದ್ದಾರೆ. ಹಾಗೂ …

Read More »

ಶಶಿಧರ ಕುರೇರ ವರ್ಗಾವಣೆ ಆದೇಶ ರದ್ದು ,

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಗೆ ಐಎಎಸ್ ಅಧಿಕಾರರಿಯನ್ನು ಪಾಲಿಕೆ ಆಯುಕ್ತ ರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದಾಗಿದೆ. ಆದೇಶ ಹೊರಡಿಸಿದ ೧೨ ಗಂಟೆಯ ಒಳಗಾಗಿಯೇ ಸರ್ಕಾರ ಆದೇಶವನ್ನು ರದ್ದು ಮಾಡಿ ಬೆಳಗಾವಿ ಪಾಲಿಕೆಯ ಆಯುಕ್ತರಾಗಿ ಶಶಿಧರ ಕುರೇರ್ ಅವರೇ ಮುಂದುವರಿಯುವಂತೆ ಆದೇಶಿಸಿದೆ. ರಾಜ್ಯ ಸರ್ಕಾರ ಮಂಗಳವಾರ ಐಎಎಸ್ ಎಂ.ಪಿ.ಮಲ್ಲಾಯಿ ಅವರನ್ನು ನೇಮಕ ಮಾಡಲಾಗಿತ್ತು. ಸರ್ಕಾರ ಕೊನೆಗೂ ತನ್ನ ನಿರ್ಧಾರವನ್ನು ಬದಲಿಸಿದೆ. ಪಾಲಿಕೆ ಆಯುಕ್ತ ಶಶಿಧರ ಕುರೇರ …

Read More »

ಕಿತ್ತೂರ ತಾಲೂಕಿಗೆ ದಂಡಾಧಿಕಾರಿ,ಉತ್ಸವದಲ್ಲಿ ಘೋಷಣೆ…!

ಬೆಳಗಾವಿ-ವೀರ ರಾಣಿ ಕಿತ್ತೂರ ಚನ್ನಮ್ಮಾಜಿ ಐತಿಹಾಸಿಕ ಕಿತ್ತೂರು ಪೂರ್ಣ ಪ್ರಮಾಣದ ತಾಲೂಕು ಆಗುವ ಕಾಲ ಈಗ ಕೂಡಿ ಬಂದಿದೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಿತ್ತೂರ ಉತ್ಸವವನ್ನು ಊದ್ಘಾಟಿಸಲಿದ್ದು ಈ ಸಂಧರ್ಭದಲ್ಲಿ ಅವರು ಕಿತ್ತೂರ ತಾಲೂಕಿಗೆ ದಂಡಾಧಿಕಾರಿಯನ್ನು ನೇಮಕ ಮಾಡಿರುವ ಬಗ್ಗೆ ಅಧಿಕೃತವಾಗಿ ಘೋಷನೆ ಮಾಡಲಿದ್ದಾರೆ ಕಿತ್ತೂರು ತಾಲೂಕ ಪ್ರದೇಶವಾಗಿ ಘೋಷಣೆಯಾಗಿ ಹಲವಾರು ವರ್ಷಗಳು ಗತಿಸಿ ಹೋಗಿವೆ ಆದರೆ ಕಿತ್ತೂರ ತಾಲೂಕಿನಲ್ಲಿ ಈ ವರೆಗೆ ವಿಶೇಷ ತಹಶಿಲ್ದಾರ ಅವರೇ …

Read More »

ಕಣ್ಣಿದ್ದೂ.. ಕುರುಡರಾಗಬೇಡಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಡಿಸಿ ತಾಕೀತು.

ಬೆಳಗಾವಿ: ಆರೋಗ್ಯ ಇಲಾಖೆಯ ಪ್ರಗತಿ ತೃಪ್ತಿಕರವಾಗಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಹೆಣ್ಣು ಬ್ರೂಣ ಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿ ಮಾಡಿಲ್ಲ. ಜಿಲ್ಲೆಯಲ್ಲಿ ಸಾಕ್ಷಿ ಸಮೇತ ಒಂದೂ ಪ್ರಕರಣವನ್ನು ಬಯಲಿಗೆಳೆಯಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಹೆಣ್ಣು ಬ್ರೂಣ ಪತ್ತೆ ಮಾಡುವ ದುಷ್ಕøತ್ಯ ನಡೆದಿದೆ. ಕಚೇರಿಯಲ್ಲಿ ಕುಳಿತುಕೊಂಡು ಕಥೆ ಹೇಳಬೇಡಿ. ಕಣ್ಣಿದ್ದೂ ಕುರುಡರಾಗಬೇಡಿ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅವರು ತಮ್ಮ ಕಚೇರಿಯ ಸಭಾಭವನದಲ್ಲಿ …

Read More »

ಬೆಳಗಾವಿ ಮಹಾನಗರ ಪಾಲಿಕೆಗೆ I A S ಕಮಿಷ್ನರ್ ..?

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ I A S ಅಧಿಕಾರಿಯೊಬ್ಬರನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಿಸಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಮೂಲಗಳು ತಿಳಿಸಿವೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲಿ I A S ಅಧಿಕಾರಿಗಳೇ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತದ್ದರು ಆದರೆ ಬೆಳಗಾವಿಯಲ್ಲಿ ಮಾತ್ರ ಕೆ ಎ ಎಸ್ ಅಧಿಕಾರಿಗಳು ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು ಬೆಳಗಾವಿ ನಗರ ಈಗ ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಸೇರಿಕೊಂಡಿರುವದರಿಂದ ರಾಜ್ಯ ಸರ್ಕಾರ ಮಂಗಳವಾರ ಸಂಜೆ ಬೆಳಗಾವಿ ಮಹಾನಗರ ಪಾಲಿಕೆ I …

Read More »

ಪ್ರತ್ಯೇಕ ರಾಜ್ಯಕ್ಕೆ ಜನಾಭಿಪ್ರಾಯ ಸಂಗ್ರಹ- ಗಡಾದ

ಬೆಳಗಾವಿ-   ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃಧ್ದಿಯನ್ನು ನಿರ್ಲಕ್ಷ ಮಾಡಿದ್ದನ್ನು ಖಂಡಿಸಿ, ಉತ್ತರ ಕರ್ನಾಟಕ ಅಭಿವೃದ್ದ ವೇಧಿಕೆ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ಮಾಡಬೇಕಾ ಬೇಡವಾ ಎಂದು ಜನಾಭಿಪ್ರಾಯಕ್ಕೆ ಮುಂದಾಗಿದೆ. ಹೌದು ಕರ್ನಾಟಕ ಏಕಿಕರಣ ವಾಗಿ 5 ದಶಕಗಳು ಕಳೆದರು ಆಡಳಿತಕ್ಕೆ ಬಂದ ಸರ್ಕಾರಗಳು ಉತ್ತರ ಕರ್ನಾಟಕದ 13 ಜಿಲ್ಲೆಗಳ ಅಭಿವೃದ್ದಿಯನ್ನು ಸಂಪೂರ್ಣ ನಿರ್ಲಕ್ಷ ಮಾಡುತ್ತಾ ಬಂದಿವೆ. ಎಲ್ಲ ಸರ್ಕಾರಗಳು ಉತ್ತರ ದಕ್ಷಣ ಎಂಬ …

Read More »

ಮಟನ್ ಗಾಗಿ ಕಿತ್ತಾಟ ಮದುವೆಯಲ್ಲಿ ಬಡಿದಾಟ

ಬೆಳಗಾವಿ- ಬೆಳಗಾವಿಯ ವಡಗಾವಿಯ ಇದಗಾ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮದುವೆಯ ರಿಸಿಪ್ಷನ್ ನಡೆಯುತ್ತಿದ್ದು ಊಟ ಬಡಿಸುವಾಗ ಮಟನ್ ಪೀಸ್ ಹಾಕದ ಕಾರಣ ವಧು ವರರ ಎರಡು ಕಡೆಯ ಯುವಕರು ಪರಸ್ಪರ ಹೊಡೆದಾಡಿದ ಘಟನೆ ನಡೆದಿದೆ ಖಂಜರ್ ಗಲ್ಲಿಯ ವಧುವಿನ ಜೊತೆ ವಡಗಾಂವಿಯ ವರನ ಮದುವೆ ಆಗಿತ್ತು ಕೋತ್ವಾಲ ಗಲ್ಲಿಯ ಕಲ್ಯಾಣ ಮಂಟಪದಲ್ಲಿ ನಿಖಾ ಆಗಿತ್ತು ಸೋಮವಾರ ವಲೀಮಾ ವಡಗಾವಿಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವಾಗ ಮಟನ್ ಪೀಸ್ ಸಿಗದ ಕಾರಣ …

Read More »

ಕರಡಿಗುದ್ದಿ ಬಳಿ ರಸ್ತೆ ಅಪಘಾತ ನಾಲ್ವರ ಸಾವು ,ಜಾಂಬೋಟಿ ಬಳಿ ಓರ್ವನ ಸಾವು

ಬೆಳಗಾವಿ- ಬೆಳಗಾವಿಯ ಕರಡಿಗುದ್ದಿ ಬಳಿ ಭೀಕರ ರಸ್ತೆ ಅಪಘಾತ.  ಸಂಭವಿಸಿದೆ ಲಾರಿ ಕಾರ್ ನಡುವೆ ಡಿಕ್ಕಿ, ಸ್ಥಳದಲ್ಲೇ ನಾಲ್ವರು ಜನ ಮೃತಪಟ್ಟಿದ್ದಾರೆ . ಬೆಳಗಾವಿ- ಬಾಗಲಕೋಟೆ ಹೆದ್ದಾರಿಯಲ್ಲಿ  ಈ ಘಟನೆ.ಸಂಭವಿಸಿದೆ ಮೃತರು ಕಾಕತಿ ಮೂಲದವರು. ಎಂದು ಹೇಳಲಾಗುತ್ತಿದೆ ಸ್ಥಳಕ್ಕೆ ಪೊಲೀಸರ ಭೇಟಿ  ನೀಡಿ   ಪರಿಶೀಲನೆ ನಡೆಸಿದ್ದಾರೆ ಮೃತರ ಹೆಸರು ತಿಳಿದು ಬಂದಿಲ್ಲ ಅದರಂತೆ ಜಾಂಬೋಟಿ ಬಳಿ ಬೈಕ್ ಗೆ ಕಾರ್ ಡಿಕ್ಕಿ ಹೊಡೆದು    ಮತ್ತೊಂದು ಅಪಘಾತ ಸಂಭವಿಸಿದ್ದು …

Read More »

ಕ್ಯುರೇಟಿವ್ ಪಿಟಿಶನ್. ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆಯ ಟೇನಶನ್

ಬೆಳಗಾವಿ- ಕುಖ್ಯಾತ ರೇಪಿಸ್ಟ ಉಮೇಶ ರೆಡ್ಡಿಗೆ ಜೀವದಾನ ನೀಡುವ ಎಲ್ಲ ಬಾಗಿಲುಗಳು ಬಹುಶ ಬಂದ್ ಆದಂತೆ ಕಾಣುತ್ತಿದೆ ಸುಪ್ರೀಂ ಕೋರ್ಟಿನಲ್ಲಿ ಉಮೇಶ ರೆಡ್ಡಿ ದಾಖಲಿಸಿದ ಮರು ಪರಶೀಲನಾ ಅರ್ಜಿ ತಿರಸ್ಕೃತಗೊಂಡಿದ್ದು ಆತ ಮತ್ತೆ ಸುಪ್ರೀಂ ಕೋರ್ಟಿನಲ್ಲಿ ಕ್ಯುರೇಟಿವ್ ಪಿಟಿಶನ್ ದಾಖಲಿಸಲು ನಿರ್ಧರಿಸಿದ್ದು ಈ ಪಿಟಿಶನ್ ತಿರಸ್ಕೃತಗೊಳ್ಳುವ ಸಾದ್ಯತೆ ಇದ್ದು ಉಮೇಶ ರೆಡ್ಡಿಗೆ ಗಲ್ಲು ಗ್ಯಾರಂಟಿಯಾದಂತಾಗಿದೆ ಸೋಮವಾರ ಕ್ಯರೇಟಿವ್ ಪಿಟಿಶನ್ ದಾಖಲಾದರೆ ಅದು ಕೂಡಾ ತಿರಸ್ಕೃತಗೊಂಡು ಸೋಮವಾರ ಸಂಜೆಯೇ ಉಮೇಶ ರೆಡ್ಡಿಯ …

Read More »

ಸತೀಶ ಜಾರಕಿಹೊಳಿ ಹೈಕಮಾಂಡ್ ಚಿತ್ರದ ಆಡಿಶನ್ ಗೆ ಸಿದ್ಧರಾಮಯ್ಯ ಹಾಜರ್

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ನಿರ್ಮಾಣದ ಹೈಕಮಾಂಡ ಚಿತ್ರದ ಆಡಿಶನ್ ಬೆಳಗಾವಿಯಲ್ಲಿ ನಡೆಯಿತು ಇದರಲ್ಲಿ ಜ್ಯುನೀಯರ ಸಿದ್ಧರಾಮಯ್ಯ ಪಾಲ್ಗೊಂಡು ಎಲ್ಲರ ಗಮನ ಸೆಳೆದರು ಸಚಿವ ಸ್ಥಾನ ಕಿತ್ತುಕೊಂಡ್ರೂ ಇದುವರೆಗೆ ಅಪ್ಪಿತಪ್ಪಿ ಈ ಕುರಿತು ಮಾತನಾಡದ ಮಾಜಿ ಸಚಿವ ಸತೀಶ ಜಾರಕಿಹೋಳಿ, ಹೈಕಮಾಂಡ ವಿರುದ್ಧ ಒಳ ಒಳಗೆ ಕತ್ತಿ ಮಸೆಯುತ್ತಿದ್ದರು. ಆದ್ರೆ ಇವತ್ತು ಮೌನಮುರಿದಿದ್ದಾರೆ. ರಾಜಕೀಯ ರಿಯಲ್ ಕಹಾನಿಯನ್ನ ಚಿತ್ರದ ರೂಪದಲ್ಲಿ ಹೊರ ತಂದು ರಾಜ್ಯದ ಜನತೆ ಮುಂದೆ ಇಡಲು ಮುಂದಾಗಿದ್ದಾರೆ. …

Read More »

ಕಿತ್ತೂರ ರಾಷ್ಟ್ರೀಯ ಸ್ಮಾರಕ ಘೋಷಣೆಗೆ ಪ್ರಯತ್ನ-ಜಾರಕಿಹೊಳಿ

ಬೆಳಗಾವಿ: ಇದೇ 23ರಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಈ ಉತ್ಸವದ ಅಂಗವಾಗಿ ಬೈಲಹೊಂಗಲನಲ್ಲಿರುವ ಕಿತ್ತೂರು ರಾಣಿ ಚನ್ನಮ್ಮನ ಸಮಾಧಿ ಬಳಿಯಿಂದ ಚನ್ನಮ್ಮನ ವಿಜಯೋತ್ಸವ ವೀರಜ್ಯೋತಿ ಸಂಚಾರಕ್ಕೆ ಭಾನುವಾರ(ಅ.16) ಚಾಲನೆ ನೀಡಲಾಯಿತು. ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಪ್ರತೀಕವಾಗಿರುವ ಈ ವೀರಜ್ಯೋತಿಯ ಸಂಚಾರದೊಂದಿಗೆ ಈ ಬಾರಿಯ ಕಿತ್ತೂರು ಉತ್ಸವಕ್ಕೆ ಅಧಿಕೃತ ಚಾಲನೆ ದೊರೆತಂತಾಗಿದೆ. ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮೇಶ ಜಾರಕಿಹೊಳಿ ಅವರು, …

Read More »

ಕಬ್ಬಿಗೆ ಎಸ್‍ಎಪಿ ದರ ನಿಗದಿ ಮಾಡಲು ಒತ್ತಾಯ:

ಬೆಳಗಾವಿ: ಜಿಲ್ಲೆಯಲ್ಲಿ ಈಗ ಕಬ್ಬು ನುರಿಸುವ ಹಂಗಾಮು ಆರಂಭವಾಗಿದೆ ಹೀಗಾಗಿ ರೈತ ಹೋರಾಟಗಾರರು ಈಗ ಬೆಳಗಾವಿ ಜಿಲ್ಲೆಗೆ ವಲಸೆ ಬರುವ ಸೀಜನ್ ಆರಂಭವಾಗಿದ್ದು ರೈತ ನಾಯಕ ಕುರಬರಶಾಂತಕುಮಾರ ಕಬ್ಬಿಗೆ ಎಸ್ ಎ ಪಿ ದರ ನಿಗದಿ ಮಾಡುವಂತೆ ಸರ್ಕಾರದ ವಿರುದ್ಧ ಗುಡಗಿದ್ದಾರೆ ಕಬ್ಬು ಬೆಳೆಗಾರರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನ್ಯಾಯವೆಸಗುತ್ತಿದ್ದು, ಇದುವರೆಗೂ ಎಫ್‍ಆರ್‍ಫಿ ದರ ಪರಿಷ್ಕರಣೆ ಹಾಗೂ ಎಸ್‍ಎಪಿ ದರ ನಿಗದಿಗೊಳಿಸಿಲ್ಲ. ಇದನ್ನು ಖಂಡಿಸಿ ಅಕ್ಟೋಬರ್ 19 ರಂದು …

Read More »

ವಿಧ್ಯಾರ್ಥಿಗಳಿಗೆ ಆಸರೆಯಾದ ಲಕ್ಷ್ಮೀತಾಯಿ ಫೌಂಡೇಶನ್

ಬೆಳಗಾವಿ-ಜಾಂಬೋಟಿಯಿಂದ ಬೆಳಗಾವಿಗೆ ವಾಪಸ್ ಆಗುವ ಸಂಧರ್ಭದಲ್ಲಿ ರಣಕುಂಡೆ ಗ್ರಾಮದ ಕ್ರಾಸ್ ನಲ್ಲಿ ಕೆಲವು ವಿಧ್ಯಾರ್ಥಿನಿಯರು ಬಿಸಿಲಲ್ಲಿ ಬಸ್ಸಿಗಾಗಿ ಕಾಯುತ್ತಿರುವದನ್ನು ಗಮನಿಸಿದ ಲಕ್ಷ್ಮೀ ಹೆಬ್ಬಾಳಕರ ಅವರು ಹಳ್ಳಿಯ ವಿಧ್ಯಾರ್ಥಿಗಳ ನೋವು ಅರ್ಥ ಮಾಡಿಕೊಂಡು ಹದಿನೈದು ದಿನದಲ್ಲಿಯೇ ತಮ್ಮ ಸ್ವಂತ ಖರ್ಚಿನಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿ ಅದನ್ನು ವಿಧ್ಯಾರ್ಥಿಗಳ ಕೈಯಿಂದಲೇ ಉದ್ಘಾಟಿಸಿ ಇತರರಿಗೆ ಮಾದರಿಯಾಗಿದ್ದಾರೆ ಲಕ್ಷ್ಮೀ ಹೆಬ್ಬಾಳಕರ ಅವರ ಲಕ್ಷ್ಮೀತಾಯಿ ಫೌಂಡೇಶನ್ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸದ್ದಿಲ್ಲದೆ ಸಮಾಜ ಸೇವೆಯನ್ನು ಮಾಡುತ್ತಿದೆ …

Read More »

ಜಾತಿ ಮರಾಠಾ, ಹಾಡುವುದು ಕವ್ವಾಲಿ…!

ಬೆಳಗಾವಿ: ಬೆಳಗಾವಿ ನಗರದಲ್ಲಿ ಕೊಲ್ಲಾಪುರ ಮೂಲದ ನಾಲ್ಕು ಜನ ಗಾನ ಗಾರುಡಿಗರು ಬೆಳಗಾವಿ ನಗರಕ್ಕೆ ಲಗ್ಗೆ ಇಟ್ಟಿದ್ದಾರೆ. ಇವರು ಒಂದೇ ಕುಟುಂಬದವರಾಗಿದ್ದು ಇವರ ಗಾನ ಸುಧೆ ಬೆಳಗಾವಿ ನಗರದ ನಿವಾಸಿಗರನ್ನು ಮಂತ್ರ ಮುಗ್ದರನ್ನಾಗಿಸಿದೆ. ಕೊಲ್ಲಾಪುರ ಜಿಲ್ಲೆಯ ಶಿರೋಲಿ ಗ್ರಾಮದವರಾದ ಇವರು ಜಾತಿಯಿಂದ ಮರಾಠಾರಾಗಿದ್ದರೂ ನಿರ್ಗಳವಾಗಿ ಕವ್ವಾಲಿಗಳಾಗಿದ್ದು, ಮುಸ್ಲೀಂ ಧರ್ಮದ ಗೀತೆಗಳನ್ನು ಹಾಡುತ್ತಾರೆ. ಪ್ರತಿ ಎರಡು ಗಂಟೆಗೊಮ್ಮೆ ಜಾಗ ಬದಲಾಯಿಸುವ ಇವರು ರಸ್ತೆ ಬದಿಯಲ್ಲಿ ಕುಳಿತುಕೊಂಡು ಕವ್ವಾಲಿ ಹಾಡಲು ಆರಂಭಿಸುತ್ತಾರೆ.ಇವರು ಹಾಡುವ …

Read More »

ಬೆಳಗಾವಿ ಸ್ಪೇಷಲ್ ಸೀತಾಫಲ್

ಬೆಳಗಾವಿ: ಬೆಳಗಾವಿ ನಗರದ ಎಪಿಎಂಸಿ ರಸ್ತೆ ಈಗ ಸೀತಾಫಲ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಬೆಳಗಾವಿ ನಗರದ ಸುತ್ತಮುತ್ತಲಿನ ಗ್ರಾಮಗಳ ಜನ ತಮ್ಮ ಗ್ರಾಮಗಳಲ್ಲಿ ಬೆಳೆದ ಸೀತಾಫಲಗಳನ್ನು ಇಲ್ಲಿಯೇ ತಂದು ಮಾರಾಟ ಮಾಡುತ್ತಿದ್ದಾರೆ. ಬೆಳಗಾವಿಯ ಚಿಂದೋಡಿ ಲೀಲಾ ರಂಗ ಮಂದಿರ ದಾಟಿದರೇ ಸಾಕು ಆಜಂ ನಗರದ ರಸ್ತೆಯುದ್ದಕ್ಕೂ ರಸ್ತೆ ಎರಡು ಬದಿಯಲ್ಲಿ ಸೀತಾಫಲ ಮಾರಾಟಗಾರರನ್ನು ಕಾಣಬಹುದು. ಉತ್ತಮ ಗುಣಮಟ್ಟದ ಸೀತಾಫಲಗಳ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಹೀಗಾಗಿ ಗ್ರಾಹಕರು ಸೀತಾಫಲ ಖರೀದಿಸಲು ಬರುವುದು ರೂಡಿಯಾಗಿದೆ. …

Read More »