Breaking News
Home / LOCAL NEWS (page 37)

LOCAL NEWS

ಏಷ್ಯಾದಲ್ಲಿ “ಟೀಂ ಭಾರತ, “ಎಂಟನೇಯ ಬಾರಿಗೆ ಚಾಂಪಿಯನ್….

ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಲಂಕಾ ತಂಡವನ್ನು ಮಣಿಸಿ ಭಾರತ 8ನೇ ಬಾರಿಗೆ ಏಷ್ಯಾಕಪ್ ಮುಡಿಗೇರಿಸಿಕೊಂಡಿದ್ದಾರೆ. ಈ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದ ಬಾಲರ್ ಮಹ್ಮದ್ ಸಿರಾಜ್ ಪ್ರಶಸ್ತಿಯ ಮೊತ್ತವನ್ನು ಸ್ಟೇಡಿಯಂ ಸಿಬ್ಬಂದಿಗೆ ನೀಡಿ ವಿಶ್ವದ ಗಮನ ಸೆಳೆದಿದ್ದಾರೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾಗೆ ಭಾರತೀಯ ಬೌಲರ್ ಗಳು ಮಾರಕವಾಗಿ ಕಾಡಿದರು. ಹೀಗಾಗಿ ಲಂಕಾ 50 ರನ್ ಗಳಿಗೆ ಆಲೌಟ್ …

Read More »

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸೈಬರ್ ಕ್ರೈಂ ಪೋಲೀಸರ ದಾಳಿ…

ಬೆಳಗಾವಿ- ಹೊರರಾಜ್ಯಗಳಿಂದ ಯುವತಿಯರನ್ನು ಕರೆತಂದು ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಬೆಳಗಾವಿ ಜಿಲ್ಲಾ ಸೈಬರ್ ಕ್ರೈಮ್ ಪೋಲೀಸರು ಪತ್ತೆ ಮಾಡಿದ್ದಾರೆ. ಸಿಪಿಐ ಗಡ್ಡೇಕರ ನೇತ್ರತ್ವದಲ್ಲಿ ಇಂದು ಧಿಡೀರ್ ದಾಳಿ ಮಾಡಿರುವ ಸಿ ಎನ್ ಬಿ ಪೋಲೀಸರ ತಂಡ.ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣದಲ್ಲಿರುವ ಶಿವಶಕ್ತಿ ಲಾಡ್ಜ್ ನಲ್ಲಿ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಓರ್ವನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

Read More »

ಬೆಳಗಾವಿಯ ಸುವರ್ಣಸೌಧದ ಬಳಿ ಬಸ್ ಪಲ್ಟಿ …

ಬೆಳಗಾವಿಯ – ಬೆಳಗಾವಿಯ ಸುವರ್ಣಸೌಧದ ಬಳಿ ಕೆ.ಕೆ ಕೊಪ್ಪ ಸಿಬಿಟಿ ಬಸ್ ಪಲ್ಟಿಯಾಗಿದ್ದು ಈ ಬಸ್ ನಲ್ಲಿ 40 ಕ್ಕೂ ಹೆಚ್ವು ಜನ ಪ್ರಯಾಣಿಸುತ್ತಿದ್ದರು.ಬಸ್ ನಿರ್ವಾಹಕಿ ಸೇರಿದಂತೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಪ್ರತ್ಯಕ್ಷ ದರ್ಶಿಗಳ ಪ್ರಕಾರ ಬಸ್ ಬೆಳಗಾವಿಯ ಸುವರ್ಣಸೌಧದ ಪಕ್ಕದ ಕಾಲುವೆಯಲ್ಲಿ ಪಲ್ಟಿಯಾಗಿದೆ. ಬಸ್ ನಲ್ಲಿ 40 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದು ಬಸ್ ಕಂಡೆಕ್ಟರ್ ಸೇರಿದಂತೆ ಇಬ್ಬರ ಸ್ಥಿತಿ ಚಿಂತಾಜನಕ ವಾಗಿದ್ದು ಇಬ್ಬರನ್ನೂ ಅಂಬ್ಯುಲೆನ್ಸ್ ಮೂಲಕ ಜಿಲ್ಲಾ …

Read More »

ಊಹಾಪೋಹಗಳಿಗೆ ಪುಲ್ ಸ್ಟಾಪ್ ಇಟ್ಟ ಸಂಸದೆ ಮಂಗಲಾ ಅಂಗಡಿ

ಮೌನ ಮುರಿದು,ಖಡಕ್ ಸ್ಟೇಟ್ ಮೆಂಟ್ ಕೊಟ್ಟ ಮಂಗಲಾ ಅಂಗಡಿ…. ಬೆಳಗಾವಿ- ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರು ಮೌನ ಮುರಿದು ತಮ್ಮ ನಿರ್ಧಾರವನ್ನು ಮಾದ್ಯಮಗಳ ಎದುರು ಮಂಡಿಸಿದ್ದಾರೆ. ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್ ಕೊಟ್ಟಿದ್ದಾರೆ. ಇತ್ತೀಚಿಗೆ ಬೆಳಗಾವಿ ನಗರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿ ಊಹಾಪೋಹಗಳಿಗೆ ಪುಲ್ ಸ್ಟಾಪ್ ಇಟ್ಟ ಸಂಸದೆ ಮಂಗಲಾ ಅಂಗಡಿ ಹಲವಾರು ವಿಚಾರಗಳನ್ನು ಮಾದ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.ಲೋಕಸಭಾ ಚುನಾವಣೆ ಸಪೀಪಿಸುತ್ತಿದ್ದಂತೆ,ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಹಲವಾರು …

Read More »

ಬೆಳಗಾವಿಯಲ್ಲಿ ಮೋಡ ಬಿತ್ತನೆಗೆ ಸರ್ಕಾರದ ಅನುಮತಿ…

ಬೆಳಗಾವಿ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸ್ವಂತ ವೆಚ್ಚದಲ್ಲಿ ಮೋಡ ಬಿತ್ತನೆ ಮಾಡಲು ಕ್ಯಾತಿ ಕ್ಲೈಮೇಟ್‌ ಮೋಡಿಫಿಕೇಶನ್ ಕನ್ಸಲ್ಟನ್ಸ್ ನವರು ಬೆಳಗಾವಿ ಸುಗರ್ಸ್ ಪ್ರೈವೆಟ್ ಲಿಮಿಟೆಡ್ ಜೊತೆಗೂಡಿ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಸಜ್ಜಾಗಿವೆ. ಈ ನಿಟ್ಟಿನಲ್ಲಿ ಎರಡು ಸಂಸ್ಥೆಗಳು ಮೋಡಬಿತ್ತನೆಗೆ ಅವಕಾಶ ನೀಡುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಇದನ್ನು ಪರಿಗಣಿಸಿದ ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಮೋಡ ಬಿತ್ತನೆಗೆ ಅವಕಾಶ ನೀಡಿದೆ. …

Read More »

ಪೋಷಕರೇ ಎಚ್ಚರ…ಚಿಕ್ಕ ಮಕ್ಕಳು ಬೈಕ್ ರೈಡ್ ಮಾಡಿದ್ರೆ 25 ಸಾವಿರ ದಂಡ….!!

ಬೆಳಗಾವಿ-18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ಡ್ರೈವಿಂಗ್ ಮಾಡಲು ಕೊಡುವುದಕ್ಕಿಂತ ಮೊದಲು ಎಚ್ಚರ ವಹಿಸುವುದು ಒಳಿತು ಯಾಕಂದ್ರೆ,ಮಾನ್ಯ ನ್ಯಾಯಾಲಯವು ಈ ಬಗ್ಗೆ ಪ್ರಕರಣದಲ್ಲಿ ರೂ. 25,000/- ದಂಡವನ್ನು ವಿಧಿಸಿದೆ. ಚಿಕ್ಕ ವಯಸ್ಸಿನ ಮಕ್ಕಳು, ಬೈಕ್ ಚಲಾಯಿಸುವ ಸಂಧರ್ಭದಲ್ಲಿ ಟ್ರಾಫಿಕ್ ಪೋಲೀಸರ ಕೈಗೆ ಸಿಕ್ಕಿಬಿದ್ದರೆ, 25 ಸಾವಿರ ದಂಡ ಕಟ್ಟಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಈ ಬಗ್ಗೆ ಹೆಚ್ಚಿನ ಕಾರ್ಯಚರಣೆ ಮುಂದುವರೆಯಲಿದೆ ಎಂದು ನಗರ ಪೋಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Read More »

ಭೀಕರ ಅಪಘಾತ ಬೆಳಗಾವಿಯ ಐದು ಮಂದಿ ಸಾವು

ಬೆಳಗಾವಿ-ಭೀಕರ ರಸ್ತೆ ಅಪಘಾತ ಒಂದೇ ಕುಟುಂಬ 5 ಜನರ ಸಾವು, 11 ಮಂದಿಗೆ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ತಿರುಪತಿ ದರ್ಶನ ಪಡೆದು ವಾಪಸ್ ಬರುತ್ತಿದ್ದಾಗ ಬೆಳಗಿನ ಜಾವ ಈ ಘಟನೆ ನಡೆದಿದೆ.ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಡಚಿ ಗ್ರಾಮದ ಐವರು ಮೃತಪಟ್ಟಿದ್ದಾರೆ. ಕ್ರೂಸರ್ ವಾಹನ ಹಾಗೂ ಲಾರಿ ನಡುವೆ ನಡೆದಿರುವ ಭೀಕರ ಅಪಘಾತ ಐವರನ್ನು ಬಲಿ ಪಡೆದಿದೆ.ತೆಲಂಗಾಣದ ಸೂರ್ಯಪೇಠ ಜಿಲ್ಲೆಯ ಮಠಮಪಲ್ಲಿಯಲ್ಲಿ ಈ ಅಪಘಾತ ಸಂಭವಿಸಿದೆ.ಇಂದು ಬೆಳಗಿನ ಜಾವ 3:30 …

Read More »

ಬೆಳಗಾವಿ ಜಿಲ್ಲೆಯಲ್ಲಿ ಭಯಾನಕ ಮಾಟ ಮಂತ್ರ…!!

ಬೆಳಗಾವಿ- ಅಮವಾಸ್ಯೆ ಬಂದ್ರೆ ಸಾಕು ರಸ್ತೆಗಳಲ್ಲಿ ನಿಂಬೆ ಹಣ್ಣು ಮೆಣಸಿನಕಾಯಿ,ಅರಷಿನ,ಕುಂಕುಮ,ಕುಂಬಳಕಾಯಿ ಕಾಣಿಸಿಕೊಳ್ಳುವದು ಸಾಮಾನ್ಯ ಆದ್ರೆ ಈ ಅಮವಾಸ್ಯೆಯ ಬೆಳಗಿನ ಜಾವ ಮನೆ ಅಂಗಳದಲ್ಲಿ ತಲೆ ಬುರುಡೆ ಎಸೆದು ಅದರ ಮೇಲೆ ಕುಂಕುಮ ಅರಷಿನ ಹಾಕಿ ಭಯನಾಕವಾಗಿ ಮಾಟ ಮಂತ್ರ ಮಾಡಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಅಮವಾಸ್ಯೆ ಹಿನ್ನೆಲೆಯಲ್ಲಿ ಭಯಾನಕ ಮಾಟಮಂತ್ರ ಮಾಡಲಾಗಿದೆ.ಮನೆಯ ಮುಂದೆ ತಲೆ ಬುರುಡೆ, ನಿಂಬೆಹಣ್ಣು ಇಟ್ಟು ಮಾಟಮಂತ್ರ ಮಾಡಲಾಗಿದ್ದು ಈ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ …

Read More »

ಕಾಮಗಾರಿ ವಿಳಂಬ L&T ಕಂಪನಿಗೆ 21 ಕೋಟಿ ದಂಡ…..!!

ಬೆಳಗಾವಿ- ಸ್ಮಾರ್ಟ್ ಸಿಟಿ ಬೆಳಗಾವಿ ನಗರದಲ್ಲಿ ಕೋಟಿ,ಕೋಟಿ ಸುರಿದು, ಸಿಮೆಂಟ್ ರಸ್ತೆಗಳನ್ನು ಮಾಡಲಾಗಿದೆ. ಆದ್ರೆ ಕೋಟಿ,ಕೋಟಿ ಗಳಿಸಲು L&T ಕಂಪನಿ ಬೆಳಗಾವಿ ನಗರದ ರಸ್ತೆಗಳ‌್ನು ಕಂಡು ಕಂಡಲ್ಲಿ ಹಡ್ಡುತ್ತ,ರಸ್ತೆಗಳನ್ನು ಮೂರಾಬಟ್ಟೆ ಮಾಡಿದೆ. ಬೆಳಗಾವಿ ಮಹಾನಗರದ ಎಲ್ಲ ವಾರ್ಡುಗಳಲ್ಲಿ ನಿರಂತರ ,24*7 ನೀರು ಪೂರೈಸುವ ಯೋಜನೆಯ ಗುತ್ತಿಗೆಯನ್ನು L&T ಕಂಪನಿ ಪಡೆದಿದೆ. ಈ ಯೋಜನೆ ಪೈಪಲೈನ್ ಹಾಕಲು ನಗರದ ರಸ್ತೆಗಳನ್ನು ಹಡ್ಡಿ ಪೈಪ್ ಗಳನ್ನು ಹಾಕಲಾಗುತ್ತಿದೆ.ಪೈಪ್ ಹಾಕಿದ ಬಳಿಕ ರಸ್ತೆಗಳು ಹೇಗಿದ್ದವೋ …

Read More »

ಸಚಿವರ ಪ್ರಯಾಣ ಭತ್ಯೆಗೆ ಕೋಟಿ ಕೋಟಿ ಖರ್ಚು..

ಬೆಳಗಾವಿ:ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಗಾದೆ ಮಾತಿನಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ಹಣ ದುಂದು ವೆಚ್ಚವಾಗಿದ್ದು ಬೆಳಕಿದೆ ಬಂದಿದೆ. ಸರ್ಕಾರದ ಅವಧಿಯಲ್ಲಿ ಸಚಿವರ ಸಚಿವರುಗಳ ಪ್ರಯಾಣ ಭತ್ಯಗೆ ಕೋಟಿ ಕೋಟಿ ಖರ್ಚಾಗಿದ್ದು ಎಲ್ಲರು ಹುಬ್ಬೆರಿಸುವಂತೆ ಮಾಡಿದೆ. ಹಾಗಿದ್ರೆ ಸಚಿವರುಗಳು ಖರ್ಚು ಮಾಡಿದ ಪ್ರಯಾಣದ ಭತ್ಯೆ ಮಾಹಿತಿ ಹಕ್ಕಿನಡಿ ದಾಖಲೆ ಬೆಳಕಿಗೆ ಬಂದಿದೆ. ಬಿಜೆಪಿ ಸರಕಾರ ಅವಧಿಯಲ್ಲಿ ಅಂದ್ರೆ 2019 -20 ನೆ ಸಾಲಿನಿಂದ 2022-23ರ ರವರೆಗೆ ಸಚಿವರ …

Read More »