LOCAL NEWS

ಗೆಲ್ಲುವ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ವು- ಆರ್ ಅಶೋಕ

ಬೆಳಗಾವಿ-ಬೆಳಗಾವಿಯಲ್ಲಿ ಶಿವಸೇನೆ ನಿಷೇಧ ಮಾಡಲು ಕಾನೂನಿನಲ್ಲಿ ಇದೆಯೋ ಇಲ್ಲವೋ ಎನ್ನುವುದು ಸರಕಾರ ಚಿಂತನೆ ಮಾಡಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು. ಶನಿವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.  ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುವ ಶಿವಸೇನೆ ಒಂದು ರಾಜಕೀಯ ಪಕ್ಷವಾಗಿರುವುದರಿಂದ ಅದನ್ನು ನಿಷೇಧ ಮಾಡಲು ಅಧಿಕಾರ ಇರುವುದಿಲ್ಲ. ಅದನ್ನು ನಿಷೇಧ ಮಾಡಲು ಅವಕಾಶ ಇದೆಯೋ ಇಲ್ಲ ಎನ್ನುವುದು ಚರ್ಚೆ ಮಾಡುತ್ತೇವೆ ಎಂದರು. ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆಗೆ …

Read More »

ದೈವ ಭಕ್ತರಾದ ಸತೀಶ ಜಾರಕಿಹೊಳಿ‌….!!!!!

ಬೆಳಗಾವಿ- ಯಾರೇ ಕೂಗಾಡಲಿ,ಯಾರೇ ಚೀರಾಡಲಿ,ನಾನೇ ಬೇರೆ ನನ್ನ ಸ್ಟೈಲೇ ಬೇರೆ,ಎನ್ನುವಂತೆ,ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇವತ್ತು ಫುಲ್ ರಿಲ್ಯಾಕ್ಸ ಮೂಡ್ ನಲ್ಲಿದ್ದರು. ರಾಮದುರ್ಗ ಮಾಜಿ ಶಾಸಕ ಅಶೋಕ ಪಟ್ಟಣ ಅವರು ಇವತ್ತು  ರಾಮದುರ್ಗಿನಲ್ಲಿ ,ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಸಮ್ಮಾನ ಕಾರ್ಯಕ್ರಮ ಆಯೋಜಿಸಿದ್ದರು,ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಳಗಾವಿಗೆ ಮರಳುತ್ತಿರುವಾಗ ಗೊಡಚಿ,ವೀರಭದ್ರೇಶ್ವರ ದರ್ಶನ ಪಡೆದು ಪುಣೀತರಾದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇನ್ನಿತರ ನಾಯಕರು ಸತೀಶ್ ಜಾರಕಿಹೊಳಿ ಅವರ …

Read More »

ಸಂಡೇ ಬೆಳಗಾವಿ ಸಿಟಿಯಲ್ಲಿ ಕರೇಂಟ್ ಕಟ್….!!!!

ಬೆಳಗಾವಿ-ಭಾನುವಾರ ದಿನಾಂಕ 21 ರಂದು ಬೆಳಗಾವಿ ನಗರಾದ್ಯಂತ. ಕರೆಂಟ್ ಇರೋದಿಲ್ಲ ಅಂತಾ ಹೆಸ್ಕಾಂ ಪ್ರಕಟಣೆ ಹೊರಡಿಸಿದೆ ದುರಸ್ಥಿ ಕಾರ್ಯದ ನಿಮಿತ್ಯ ಬಹುತೇಕ ಇಡೀ ನಗರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5. ಗಂಟೆಯವರೆಗೆ ಕರೆಂಟ್ ಇರೋದಿಲ್ಲ. ಅದಕ್ಕಾಗಿ ಎಲ್ಲರೂ ತಮ್ಮ ತಮ್ಮ ಮೋಬೈಲ್ ಗಳನ್ನು ಪಾವರ್ ಬ್ಯಾಂಕ್ ಗಳನ್ನು ಅಡವಾನ್ಸ್ ರಿಚಾರ್ಜ್ ಮಾಡಿಕೊಂಡು ಇಡೋದು ಸೂಕ್ತ

Read More »

ಬೆಳಗಾವಿ ಸ್ಮಾರ್ಟ್ ಸಿಟಿ,ಅಧಿಕಾರಿಯ ಮನೆಯಲ್ಲಿ ಪತ್ತೆಯಾದ ನೋಟಿನ ರಾಶಿ….!!!

ಪಿರ್ಯಾದಿ ಶ್ರೀ ಸಂಜೀವ ಕುಮಾರ ನವಲಗುಂದ ತಂದೆ: ಶಿವಲಿಂಗಪ್ಪಾ,  ಸಾ: ಗಣೇಶ್ ನಗರ ಬೆಳಗಾವಿ  ತಾ:ಜಿ: ಬೆಳಗಾವಿ ರವರು ಪ್ರೋಜಕ್ಟ್ ಮ್ಯಾನೇಜರ್, ಅಪೂರ್ವಾ ಕನ್ಸಟ್ರಕ್ಷನ ಕಂ. ವತಿಯಿಂದ ಬೆಳಗಾವಿ ಸ್ಮಾರ್ಟ ಸಿಟಿ ಲಿ.ಯೋಜನೆಯಡಿ ನಿರ್ವಹಿಸಿದ ಬೆಳಗಾವಿ ಸಿಟಿ ಬಸ್ ನಿಲ್ದಾಣದ ಕಾಮಗಾರಿಯ ಆರ್.ಎ-13 ಬಿಲ್ ಮಂಜೂರಿಸಲು   ಮಾಡಲು, ಆಪಾದಿತ ನೌಕರ ಶ್ರೀ ಸಿದ್ದನಾಯ್ಕ ದೂಡಬಸಪ್ಪ ನಾಯ್ಕರ್, ಜನರಲ್ ಮ್ಯನೆಜರ್ ಟೆಕ್ನಿಕಲ್ ತಾಂತ್ರಿಕ, ಬೆಳಗಾವಿ ಸ್ಮಾರ್ಟ್ ಸಿಟಿ ಲಿ. ಕಚೇರಿ, ಬೆಳಗಾವಿ …

Read More »

ಬೆಳಗಾವಿಗೆ ಹುಲಿ ಬಂತು ಹುಲಿ….!!!

ಬೆಳಗಾವಿ- ಸಮೀಪದ ಭೂತರಾಮನಹಟ್ಟಿ ರಾಣಿ ಚೆನ್ನಮ್ಮ ನಿಸರ್ಗದಾಮದಲ್ಲಿ ಸಿಂಹ ಘರ್ಜನೆ ಕೇಳಿಸಿದ ಬೆನ್ನಲ್ಲಿಯೇ ಇಂದಿನಿಂದ ಇದೇ ನಿಸರ್ಗದಾಮದಲ್ಲಿ ಹುಲಿ ಘರ್ಜನೆ ಶುರುವಾಗಿದೆ. ಇವತ್ತು ಮೈಸೂರು ಝೂ ನಿಂದ ಎರಡು ಹುಲಿಗಳು ಬೆಳಗಾವಿಗೆ ಬಂದಿವೆ,ಈ ಎರಡೂ ಹುಲಿಗಳು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೆ,ಈ ಎರಡು ಹುಲಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕನಿಷ್ಕ ಮತ್ತು ಶೌರ್ಯ ಹೆಸರಿನ ಎರಡು ಹುಲಿಗಳು ಇಂದಿನಿಂದ ರಾಣಿ ಚೆನ್ನಮ್ಮ ನಿಸರ್ಗದಾಮದ ಸದಸ್ಯರಾಗಿದ್ದಾರೆ.ಇವತ್ತು ಸಿಡಿ ಲೇಡಿ ಬೆಳಗಾವಿಗೆ ಬರ್ತಾಳೆ,ಎಪಿಎಂಸಿ ಠಾಣೆಗೆ ಬಂದು …

Read More »

ಕನ್ನಡದ ಶಾಲು ಹಾಕಿಕೊಂಡು ಮಹಾರಾಷ್ಟ್ರದ ಗಡಿಯಲ್ಲಿ ನುಗ್ಗುತ್ತೇವೆ….

ಬೆಳಗಾವಿ-ಎಂಇಎಸ್ ಶಿವಸೇನೆ ವಿರುದ್ಧ ಚೆನ್ನಮ್ಮ ವೃತ್ತದಲ್ಲಿ ಕರವೇ ಪ್ರವೀಣ ಶೆಟ್ಟಿ ಬಣ  ಪ್ರತಿಭಟನೆ ನಡೆಸಿತು. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ಕರವೇ ಕಾರ್ಯಕರ್ತರು ಶಿವಸೇನೆ ಮತ್ತು ಎಂಈಎಸ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯೆಕ್ತಪಡಿಸಿದರು. ಪ್ರವೀಣ್ ಶೆಟ್ಟಿ ಬಣದ ಕರವೇ ರಾಜ್ಯಾಧ್ಯಕ್ಷ  ಪ್ರವೀಣ್ ಶೆಟ್ಟಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಪ್ರವೀಣ ಶೆಟ್ಟಿ,ಬೆಳಗಾವಿ ಗಡಿಯಲ್ಲಿ ಶಿವಸೇನೆ ಎಂಇಎಸ್ ಶಾಂತಿ ಕದಡುವ …

Read More »

ಬಿಜೆಪಿ ಅಭ್ಯರ್ಥಿ ಆಯ್ಕೆ,ನಾಳೆ ಶುಕ್ರವಾರ ದೆಹಲಿಯಲ್ಲಿ ಮಹತ್ವದ ಸಭೆ….!!

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಮಿನಿ ಸಮರಕ್ಕೆ ಮಹೂರ್ಥ ಫಿಕ್ಸ್ ಆಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಎಲ್ಲಿಲ್ಲದ ಬಿರುಸಿನ ಲಾಭಿ ಶುರುವಾಗಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ದೆ ಮಾಡಲು ಬರೊಬ್ಬರಿ 70 ಜನ ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಹಾಕಿದ್ದಾರೆ,ಈ ವಿಚಾರದಲ್ಲಿ ಕ್ಷಣಕ್ಕೊಂದು ಹೆಸರು ಪ್ರಸ್ತಾಪ ಆಗುತ್ತಲೇ ಇದೆ.ಹೀಗಾಗಿ ಬಿಜೆಪಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಸಹಜವಾಗಿ ಆಕಾಂಕ್ಷಿಗಳ ಓಡಾಟವೂ ಚುರುಕುಗೊಂಡಿದ್ದು,ಕೆಲವು ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿ ಢವಳಗಿರಿಯಲ್ಲಿ ಅಪ್ಪಾಜಿಗೆ …

Read More »

ಇಂದಿನಿಂದ ಜಾರಕಿಹೊಳಿ ಕ್ಷೇತ್ರದಲ್ಲಿ ಸಿಂಹ ಘರ್ಜನೆ.!!!

ಬೆಳಗಾವಿ- ಸಿಂಹ ಜಿಂಕೆ ಕರಡಿ,ಹುಲಿ ನೋಡಬೇಕಾದ್ರೆ ಇನ್ಮುಂದೆ ಮೈಸೂರಿನ ಝೂ ಅಥವಾ ಬನ್ನೇರುಘಟ್ಟ ಕ್ಕೆ ಹೋಗಬೇಕಾದ ಅಗತ್ಯವಿಲ್ಲ ಯಾಕಂದ್ರೆ ಇವತ್ತಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಸಿಂಹ ಘರ್ಜನೆ ಶುರುವಾಗಿದ್ದು ಬಹುತೇಕ ಎಲ್ಲ ಕಾಡು ಮೃಗಗಳನ್ನು ಬೆಳಗಾವಿ ಜಿಲ್ಲೆಯಲ್ಲೇ ನೋಡುವ ಭಾಗ್ಯ ಒದಗಿ ಬಂದಿದೆ. ಯಮಕನಮರಡಿ ಕ್ಷೇತ್ರದ ಶಾಸಕ ಮಾಜಿ ಸಚಿವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದಾಗಿ,ಯಮಕನಮರಡಿ ಕ್ಷೇತ್ರದಲ್ಲಿರುವ ಭೂತರಾಮನಹಟ್ಟಿಯಲ್ಲಿರುವ ರಾಣಿ ಚೆನ್ನಮ್ಮ ನಿಸರ್ಗದಾಮದಲ್ಲಿ ಈಗಾಗಲೇ ಮೂರು ಸಿಂಹಗಳು …

Read More »

ಕಾಕತಿ ಠಾಣೆಯಲ್ಲೂ ಯುವತಿ ನಾಪತ್ತೆ ಕೇಸ್ ದಾಖಲು….!!

ಬೆಳಗಾವಿ- ಸಮೀಪದ ಕಾಕತಿ ಪೋಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆಯಾದ ಕುರಿತು ಪ್ರಕರಣ ದಾಖಲಾಗಿದೆ. ಬೆಲ್ಲದ ಬಾಗೇವಾಡಿ ಗ್ರಾಮದ 27 ವರ್ಷದ ಪ್ರೀತಿ ಗೌತಮ ಪದಪ್ಪಗೋಳ ಯುವತಿ   ನಾಪತ್ತೆಯಾಗಿದ್ದಾಳೆ ಎಂದು ಯುವತಿಯ ಪಾಲಕರು ಕಾಕತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರೀತಿ ಗೌತಮ ಪದಪ್ಪಗೋಳ ಭೂತರಾಮನಹಟ್ಟಿ ಗ್ರಾಮದಲ್ಲಿರುವ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು,ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವದಾಗಿ ಪಾಲಕರಿಗೆ ಹೇಳಿ ಬಂದಿದ್ದ ಯುವತಿ,ಸಂಜೆ ಪಾಲಕರಿಗೆ ಫೋನ್ ಮಾಡಿ ನಾನು …

Read More »

ಬೆಳಗಾವಿಯಲ್ಲಿ ಈ ಹಿಂದೆ ಯಾವಾಗ ಲೋಕಸಭೆ ಉಪ ಚುನಾವಣೆ ನಡೆದಿತ್ತು ಗೊತ್ತಾ…..???

ಬೆಳಗಾವಿ-ಎಪ್ರೀಲ್ 17 ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು ಈ ಹಿಂದೆಯೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು ಈಗ ನಡೆಯಲಿರುವ ಉಪ ಚುನಾವಣೆ ಎರಡನೇಯ ಉಪ ಚುನಾವಣೆಯಾಗಿದೆ. 1962 ರಲ್ಲಿ ಬಿ.ಎನ್ ದಾತಾರ್ ಅವರು ಕೇಂದ್ರದ ಸಚಿವ ಸಂಪುಟದಲ್ಲಿ ಹೋಮ್ ಅಫೇಯರ್ಸ್ ಡೆಪ್ಯೂಟಿ ಮಿನಿಸ್ಟರ್ ಆಗಿದ್ದರು.1962 ರಲ್ಲಿ ಅವರ ಅಕಾಲಿಕ ನಿಧನದಿಂದಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 1963 ರಲ್ಲಿ ಉಪ ನಡೆದಿತ್ತು. ಬಿ.ಎನ್ ದಾತಾರ …

Read More »

ಕಿಡ್ನ್ಯಾಪ್ ಕೇಸ್ ದಾಖಲಾಗಿದೆ,ತನಿಖೆಗೆ ತಂಡ ರಚಿಸಲಾಗಿದೆ

ಬೆಳಗಾವಿ-   ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿದ್ದ ಯುವತಿ ತಂದೆ ತನ್ನ ಮಗಳನ್ನು ಬೆಂಗಳೂರಿನಲ್ಲಿ ಯಾರೋ ಅಪರಿಚಿತರು ಅಪಹರಣ ಮಾಡಿ, ಕಿರುಕುಳ ನೀಡುತ್ತಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ.ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಡಿಸಿಪಿ ವಿಕ್ರಂ ಅಮಟೆ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಯುವತಿ ತಂದೆ ನಿನ್ನೆ ಎಂಪಿಎಂಸಿ ಠಾಣೆಗೆ ಬಂದು, ತಮ್ಮ ಮಗಳನ್ನು …

Read More »

ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸಿದ ಚುನಮರಿ…!!!

ಗೋಕಾಕ: ನಿಂಬೆಹಣ್ಣು ಎಂದರೆ, ಹೆಚ್.ಡಿ.ರೇವಣ್ಣ, ರೇವಣ್ಣ ಎಂದರೆ ನಿಂಬೆಹಣ್ಣು ಎನ್ನುವ ಮಾತು ರಾಜ್ಯದಲ್ಲಿ ಜನಜನಿತವಾಗಿದೆ.  ರೇವಣ್ಣ ತಮ್ಮ ಕೈಯಲ್ಲಿ, ಜೇಬಿನಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಓಡಾಡುವುದು ಸಹಜ. ಆದರೆ ಇಲ್ಲೊಬ್ಬ ನಗರಸಭೆ ಉಪಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ನಿಂಬೆಹಣ್ಣು ಕೈಯಲ್ಲಿ ಹಿಡಿದು ನಾಮಪತ್ರ ಸಲ್ಲಿಸಿ, ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮಾಜಿ ನಗರಸಭೆ ಸದಸ್ಯ ಗಿರೀಶ ಖೋತ ಅವರ ಅಕಾಲಿಕ ನಿಧನದಿಂದ ತೆರವಾದ ನಗರಸಭೆ ವಾರ್ಡ ನಂ13 ರ ಉಪಚುನಾವಣೆಗೆ ಸ್ಪರ್ಧಿಸಲು ನಾಮಪತ್ರ …

Read More »

ಬೆಳಗಾವಿ, ಉಪಚುನಾವಣೆ ಘೋಷಣೆ. ಆಕಾಂಕ್ಷಿಗಳಲ್ಲಿ ಹೆಚ್ವಿದ ಎನರ್ಜಿ…..!!!

ಬೆಳಗಾವಿ- ಅಂತು ಇಂತೂ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು ಬಿಜೆಪಿ,ಮತ್ತು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ಗೂಡು ಬಿಟ್ಟು ಹೊರಬಂದಿದ್ದು,ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಶುರುವಾಗಿವೆ. ಬಿಜೆಪಿ ಪಕ್ಷದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ,ಡಾ. ರವಿ ಪಾಟೀಲ,ಕಿರಣ ಜಾಧವ,ಮಹಾಂತೇಶ ಕವಟಗಿಮಠ,ಡಾ.ಸೋನವಾಲ್ಕರ್, ಎಂ.ಬಿ ಝಿರಲಿ,ಉಜ್ವಲಾ ಬಡವನ್ನಾಚೆ,ಬೈಲಹೊಂಗಲ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಸೇರಿದಂತೆ ಅಗಣಿತ ಆಕಾಂಕ್ಷಿಗಳು ಇದ್ದಾರೆ. ಬಿಜೆಪಿಯ ಯುವ ಕಾರ್ಯಕರ್ತರ ವಲಯದಲ್ಲಿ,ರಾಜೀವ ಟೀಪಣ್ಣವರ,ವಿರೇಶ ಕಿವಡಸಣ್ಣವರ,ರುದ್ರಣ್ಣಾ ಚಂದರಗಿ …

Read More »

ಲೋಕಸಭಾ ಉಪ ಚುನಾವಣೆ ಘೋಷಣೆ: ನೀತಿಸಂಹಿತೆ ಜಾರಿ

ಬೆಳಗಾವಿ,- ಲೋಕಸಭಾ ಉಪ‌ಚುನಾವಣೆ ಮಂಗಳವಾರ(ಮಾ.16) ಘೋಷಣೆಯಾಗಿರುವುದರಿಂದ ನೀತಿಸಂಹಿತೆ ತಕ್ಷಣವೇ ಜಾರಿಗೆ ಬಂದಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಂಗಳವಾರ (ಮಾ.16) ಸಂಜೆ ನಡೆದ ತುರ್ತು ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರೀತಿಯ ತಂಡಗಳನ್ನು ರಚಿಸಲಾಗಿದ್ದು, ತರಬೇತಿ ಕೂಡ ನೀಡಲಾಗಿರುತ್ತದೆ. ಇದೀಗ ಉಪ ಚುನಾವಣೆ …

Read More »

ಮಕ್ಕಳ ದತ್ತು ಕೇಂದ್ರಕ್ಕೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ…

ಬೆಳಗಾವಿ, : ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಮಕ್ಕಳ ದತ್ತು ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಂಗಳವಾರ (ಮಾ.16) ಭೇಡಿ ನೀಡಿದರು. ಸಂಸ್ಥೆಯಲ್ಲಿರುವ ನಿರ್ಗತಿಕ ಮಕ್ಕಳ ಕುಟೀರ(ಹೆಣ್ಣು ಮತ್ತು ಗಂಡು),ಅನಾಥಾಶ್ರಮ, ಸ್ವದೇಶಿ ಮತು ವಿದೇಶಿ ದತ್ತು ಕೇಂದ್ರ ಹೀಗೆ ನಾಲ್ಕು ಮಕ್ಕಳ ಪಾಲನಾ ಸಂಸ್ಥೆಗಳನ್ನು ನಡೆಸುತ್ತಿದ್ದು, ಸದರಿ ಸಂಸ್ಥೆಗೆ ಜಿಲ್ಲಾಧಿಕಾರಿಗಳು ಭೇಡಿ ನೀಡಿ ಸಂಸ್ಥೆಯಲ್ಲಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿ ಸಂಸ್ಥೆಯು ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಒಂದು ಸಮಾಜಮುಖಿಯಾಗಿ …

Read More »