Breaking News

LOCAL NEWS

ಶಾಸಕಿ ಅಂಜಲಿ…ಕ್ಷೇತ್ರದಲ್ಲಿ ಜನಪರ ಕಾಳಜಿಯ ಗೀತಾಂಜಲಿ…..!!!!

ಬೆಳಗಾವಿ-ಕಾಂಗ್ರೆಸ್ ಪಕ್ಷದ ವಕ್ತಾರರು,ಜನ ಮೆಚ್ಚಿದ ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ಹೊರ ಹೊಮ್ಮುತ್ತಿರುವ ಖಾನಾಪೂರ ಕ್ಷೇತ್ರದ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ,ರಾಜ್ಯದ ಗಮನ ಸೆಳೆದಿದ್ದಾರೆ… ಇವರು ತಮ್ಮ ಕ್ಷೇತ್ರದಲ್ಲಿ ಪೋಟೋ ಪೋಜ್ ಕೊಟ್ಟು,ಭಾಷಣ ಮಾಡಿ,ಮಹಿಳಾ ದಿನಾಚರಣೆ ಮಾಡದೇ,ಕ್ಷೇತ್ರದಲ್ಲಿ,ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ,ಬಿಪಿ,ಶುಗರ್,ಟಿ‌ಬಿ,ಕೊರೋನಾ,ತಪಾಸಣೆ ಮಾಡುವದರ ಜೊತೆಗೆ ಉಚಿತ ಕಣ್ಣಿನ ತಪಾಸಣೆ ಮಾಡಿಸಿ ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಿಳಾ ದಿನಾಚರಣೆಯ ನಿಮಿತ್ಯ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ,ಸುಮಾರು …

Read More »

ಜಾಂಬೋಟಿ ರಸ್ತೆಯಲ್ಲಿ ಲೂಟಿ ಮಾಡುತ್ತಿದ್ದ ಐವರ ಅರೆಸ್ಟ್…

ಬೆಳಗಾವಿ- ಬೆಳಗಾವಿ ಜಾಂಬೋಟಿ ರಸ್ತೆಯಲ್ಲಿ ಅಷ್ಟೊಂದು ವಾಹನ ದಟ್ಟನೆ ಇರೋದಿಲ್ಲ, ರಸ್ತೆಯ ಇಕ್ಕೆಲುಗಳಲ್ಲಿ ಅರಣ್ಯಪ್ರದೇಶ ಇರೋದ್ರಿಂದ ಈ ಪ್ರದೇಶ ಬಹುತೇಕ ನಿರ್ಜನವಾಗಿದೆ,ಈ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ಚಾಕು ಚೂರಿ ತೋರಿಸಿ ಬೆದರಿಸುತ್ತಿದ್ದ ಐವರ ದರೋಡೆಕೋರರ ಗ್ಯಾಂಗ್ ಈಗ ಬೆಳಗಾವಿ ಗ್ರಾಮೀಣ ಪೋಲೀಸರ ಬಲೆಗೆ ಬಿದ್ದಿದೆ. ಜಾಂಬೋಟಿ ರಸ್ತೆಯಲ್ಲಿ ಬೈಕ್ ಸಣೆರಿದಂತೆ ಇನ್ನಿತರ ವಾಹನಗಳನ್ನು ತಡೆದು ಮಾರಕಾಸ್ತ್ರಗಳನ್ನು ತೋರಿಸಿ,ಬೆದರಿಸಿ ಹಣ,ಆಭರಣಗಳನ್ನು ಲೂಟಿ ಮಾಡುತ್ತಿದ್ದ ಗ್ಯಾಂಗ್ ಪತ್ತೆ ಹಚ್ವುವಲ್ಲಿ ಬೆಳಗಾವಿ ಪೋಲೀಸರು …

Read More »

ಲಸಿಕೆ ಅತ್ಯಂತ ಸುರಕ್ಷಿತ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ,: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಸಿಇಓ ದರ್ಶನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಬಿಮ್ಸ್ ಆಸ್ಪತ್ರೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡರು. ಸೋಮವಾರ (ಮಾ.15) ಮಧ್ಯಾಹ್ನ ನಗರದ ಬಿಮ್ಸ್ ಆಸ್ಪತ್ರೆಗೆ ಆಗಮಿಸಿದ ಮೂವರು ಹಿರಿಯ ಅಧಿಕಾರಿಗಳು ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, “ಲಸಿಕೆಗಳು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಲಸಿಕೆಯನ್ನು ಪಡೆದುಕೊಂಡು ಕೋವಿಡ್-೧೯ …

Read More »

ಬೆಳಗಾವಿಯಲ್ಲಿ ಶಿವಸೇನೆ ಕಚೇರಿ ಬಂದ್ ಮಾಡಲು ಆಗ್ರಹ…

ಬೆಳಗಾವಿ-ಬೆಳಗಾವಿಯಲ್ಲಿ ಶಿವಸೇನೆ ಕಚೇರಿ ಬಂದ್ ಮಾಡುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಗೃಹ BBB ಸಚಿವರಿಗೆ ಮನವಿ ಅರ್ಪಿಸಿದೆ.ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮನವಿ ಅರ್ಪಿಸಿದರು ಶಿವಸೇನೆ ಬೋರ್ಡ್ ಹೊಂದಿರೋ ವಾಹನ ಜಪ್ತಿ ಮಾಡಲು ಆಗ್ರಹಿಸಿದ್ದುಬೆಳಗಾವಿಯಲ್ಲಿ ಶಿವಸೇನೆ ಕಚೇರಿಯನ್ನು ಕೂಡಲೇ ಬಂದ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡ ನಾಮಫಲಕ ಹಾಕಲು,ಕನ್ನಡ ಸಂಘಟನೆಗಳು ಕಾರ್ಯನಿರ್ವಹಿಸಲು ಅವಕಾಶ ಕೊಡದೇ ಇರುವಾಗ,ನಿರಂತರವಾಗಿ ನಾಡವಿರೋಧಿ ಚಟುವಟಿಕೆ …

Read More »

ವೈಜ್ಞಾನಿಕ ಮೈನಿಂಗ್ ಮಾದರಿ ಅಳವಡಿಕೆಗೆ ಶೀಘ್ರದಲ್ಲಿ ಚಾಲನೆ: ಸಚಿವ ನಿರಾಣಿ

ಬೆಳಗಾವಿ,: ಖನಿಜ ಸಂಪತ್ತು ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚಾಗಿದೆ. ವಿವಿಧ ರಾಜ್ಯಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಹೊಸ ರೀತಿಯ ಮೈನಿಂಗ್ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ಮುರುಗೇಶ ನಿರಾಣಿ  ತಿಳಿಸಿದರು. ಬೆಳಗಾವಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೂತನ ಕಛೇರಿ ಮತ್ತು ಜಿಲ್ಲಾ ಖನಿಜ ಭವನ ರವಿವಾರ (ಮಾ.15)  ಬಾಕ್ಸೈಟ್ ರಸ್ತೆಯ ಕುಮಾರಸ್ವಾಮಿ ಬಡಾವಣೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. …

Read More »

ವರ್ಚಸ್ಸಿಗೆ ಧಕ್ಕೆ ಆಗೋದಿಲ್ಲ,ನಮ್ಮವರು ನಮ್ಮ ಜೊತೆಗಿದ್ದಾರೆ.

ಬೆಳಗಾವಿ-ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ,ಎಸ್‌ಐಟಿ ಪ್ರಕರಣಕ್ಕೆ ತನಿಖೆ ಕೊಟ್ಟಿದ್ದು ಸದ್ಯದ ಮಟ್ಟಿಗೆ ಸ್ವಾಗತ ಮಾಡ್ತೇನೆ,ಎಂದು,ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಯಾವ ಹಂತಕ್ಕೆ ತನಿಖೆ ಮಾಡ್ತಾರೆ ಏನ್ ಮಾಡ್ತಾರೆ ಕಾದು ನೋಡಬೇಕು, ನಾವು ಸದ್ಯಕ್ಕೆ ಎಸ್‌ಐಟಿ ತನಿಖೆ ಕೊಟ್ಟಿದ್ದು ಸ್ವಾಗತ ಮಾಡುತ್ತೇವೆ, ಹೇಗೆ ಇನ್ವೆಸ್ಟಿಗೇಷನ್ ಮಾಡ್ತಾರೆ ಅದರ ಮೇಲೆ ಅವಲಂಬಿತವಾಗಿದೆ. ಕೇಸ್ ದಾಖಲಾಗಿಲ್ಲ, ವಿಚಾರಣೆ ಮಾಡುವ ಅಧಿಕಾರ ಮಾತ್ರ ಕೊಟ್ಟಿದ್ದಾರೆ, ನಿನ್ನೆ …

Read More »

ಬೆಳಗಾವಿಯಲ್ಲಿ ಸೇವೆ ಮಾಡಿದ ಇಬ್ಬರು ಅಧಿಕಾರಿಗಳು ಎಸ್ ಐ,ಟಿ ತಂಡದಲ್ಲಿ…

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗಾಗಿ ಸರ್ಕಾರ ರಚಿಸಿದ ಎಸ್ ಐಟಿ ತಂಡದಲ್ಲಿ ಬೆಳಗಾವಿಯಲ್ಲಿ ಕರ್ತವ್ಯ ನಿಭಾಯಿಸಿದ ಇಬ್ಬರು ಅಧಿಕಾರಿಗಳು ಇರುವದು ವಿಶೇಷವಾಗಿದೆ. ಬೆಳಗಾವಿ ನಗರ ಪೋಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಸೌಮೇಂದ್ರ ಮುಖರ್ಜಿಎಸ್ ಐ ಟಿ ತಂಡದ ನೇತ್ರತ್ವ ವಹಿಸಿದ್ದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಮಾಡಿದ ಸಂದೀಪ ಪಾಟೀಲ ಅವರೂ ಈ ತಂಡದಲ್ಲಿದ್ದಾರೆ. ಎಸ್ ಐ,ಟಿ ತನಿಖಾ ತಂಡ ರಚನೆಯಾದ ಕೆಲವೇ ಕ್ಷಣಗಳಲ್ಲಿಯೇ …

Read More »

ಶಿವಸೇನೆ ವಾಹನದ ಮೇಲೆ ಕರವೇ ದಾಳಿ.,ಜಟಾಪಟಿ

ಬೆಳಗಾವಿ- ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ನಾಮಫಲಕಗಳಿಗೆ ಕಪ್ಪು ಮಸಿ ಹಚ್ಚಿರುವದಕ್ಕೆ ಪ್ರತೀಕಾರವಾಗಿ ಕರವೇ ಕಾರ್ಯಕರ್ತರು ಬೆಳಗಾವಿಯ ಶಿವಸೇನೆ ವಾಹನದ ಮೇಲೆ ದಾಳಿ ಮಾಡಿ ವಾಹನದ ಮೇಲಿನ ಶಿವಸೇನೆಯ ಫಲಕ್ಕಕ್ಕೆ ಕಪ್ಪು ಮಸಿ ಬಳಿದು ಫಲಕವನ್ನು ಧ್ವಂಸ ಮಾಡಿದ್ದಾರೆ.. ಕರವೇ ಕಾರ್ಯಕರ್ತರು ರಾಮಲಿಂಗ ಖಿಂಡ ಗಲ್ಲಿಯ ಎಂಈಎಸ್ ಕಚೇರಿಯ ಮೇಲೆ ದಾಳಿ ಮಾಡಿ ಕಚೇರಿಗೆ ನುಗ್ಗಲು ಯತ್ನಿಸಿದಾ ಪೋಲೀಸರು ತಡೆದಿದ್ದಾರೆ. ಇದೇ ಸಂಧರ್ಭದಲ್ಲಿ ಶಿವಸೇನೆ ಮಾಜಿ ಜಿಲ್ಲಾಧ್ಯಕ್ಷ ಪ್ರಕಾಶ …

Read More »

ಕಿತ್ತೂರಿನ ಕ್ರಾಂತಿ, ಚನ್ನಮ್ಮನನ್ನು ಸ್ಮರಿಸಿದ ಪ್ರಧಾನಮಂತ್ರಿಗಳು

ಬೆಳಗಾ): ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಬೆಳಗಾವಿಯ ಚನ್ನಮ್ಮನ ಕಿತ್ತೂರು, ಮಂಡ್ಯದ ಶಿವಪುರ ಹಾಗೂ ಚಿಕ್ಕಬಳ್ಳಾಪುರ್ ವಿಧುರಾಶ್ವತ್ಥ ಸೇರಿದಂತೆ ದೇಶದ 75 ಸ್ಥಳಗಳಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ವರ್ಚುವಲ್ ವೇದಿಕೆಯ ಮೂಲಕ ಅವರು ಚಾಲನೆ ನೀಡಿದರು. ಗುಜರಾತ್ ರಾಜ್ಯದ ಅಹ್ಮದಾಬಾದ್ ನಲ್ಲಿರುವ ಸಾಬರಮತಿ ಆಶ್ರಮಕ್ಕೆ ಆಗಮಿಸಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಹಾಗೂ ಚರಕಕ್ಕೆ ಮಾಲಾರ್ಪಣೆ ಮಾಡಿದರು. ನಂತರ …

Read More »

ಬೆಳಗಾವಿಯಿಂದ ಬಸನಗೌಡ ಯತ್ನಾಳರನ್ನು ನಿಲ್ಲಿಸಲು,ಮಾಸ್ಟರ್ ಪ್ಲ್ಯಾನ್….!!!!!!

ಬೆಳಗಾವಿ-ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬಹುದು ಎನ್ನುವದು,ತರ್ಕಕ್ಕೆ ನಿಲಕದ್ದು,ಇದನ್ನು ಊಹೆ ಮಾಡಲು ಕೂಡಾ ಸಾಧ್ಯವಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಎನ್ನುವ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇದೆ,ಈ ಚರ್ಚೆಯಲ್ಲಿ ದಿನಕ್ಕೊಂದು ಹೆಸರು ತೇಲಿ ಬರುತ್ತಲೇ ಇದೆ,ಆದ್ರೆ ಇತ್ತೀಚಿಗೆ ಈ ಪಟ್ಟಿಯಲ್ಲಿ ಮೊತ್ತೊಂದು ಹೆಸರು ಸೇರ್ಪಡೆಯಾಗಿದೆ. ಸದನದ ಒಳಗೆ ,ಹೊರಗೆ,ಸಿಎಂ ವಿರುದ್ಧ ದಿನಕ್ಕೊಂದು ಬಾಂಬ್ ಸಿಡಿಸಿ ರಾಜ್ಯದ ಗಮನ …

Read More »

ಕ್ರಾಂತಿಯ ನೆಲದಲ್ಲಿ ರಾರಾಜಿಸುತಿದೆ ತ್ರಿವರ್ಣ

ಬೆಳಗಾವಿ ): ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಶುಕ್ರವಾರ(ಮಾ.12) ನಡೆಯಲಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದ ವೇದಿಕೆ ಸಜ್ಜಾಗಿದೆ. ದೇಶದ ಆಯ್ದ 75 ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ಅಮೃತ ಮಹೋತ್ಸವವನ್ನು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಲಿದ್ದಾರೆ. ಕಾರ್ಯಮದ ಹಿನ್ನೆಲೆಯಲ್ಲಿ ಶಾಸಕ ಮಹಾಂತೇಶ್ ದೊಡ್ಡಗೌಡ್ರ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಗುರುವಾರ ಸಂಜೆ ಕಿತ್ತೂರಿಗೆ ಭೇಟಿ ನೀಡಿ …

Read More »

ಪೋಲೀಸ್ ವೇರಿಪಿಕೇಶನ್ ಬೆಳಗಾವಿಯಲ್ಲಿ ರಿಕಾರ್ಡ್….!!!

ಬೆಳಗಾವಿ-ಮಟಕಾ,ಗಾಂಜಾ,ಜೂಜಾಟದಿಂದ ಬೆಳಗಾವಿ ನಗರವನ್ನು ಮುಕ್ತ ಮಾಡುವತ್ತ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಸದೃಡ ಸಮಾಜ ನಿರ್ಮಾಣ ಮಾಡುತ್ತಿರುವ ಬೆಳಗಾವಿ ನಗರ ಪೋಲೀಸರು ಈಗ ಸದ್ದಲ್ಲದೇ ಮತ್ತೊಂದು ಜನಸ್ನೇಹಿ ಕಾರ್ಯವನ್ನು ಮಾಡುತ್ತಿದ್ದಾರೆ. ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕಿದ್ರೆ ಮೊದಲು ಪಾಸ್ ಪೋರ್ಟ್ ನಲ್ಲಿ ಡಾಕ್ಯುಮೆಂಟ್ ವೇರಿಪಿಕೇಶನ್ ಆದ ಬಳಿಕ,ದಾಖಲೆಗಳು ಪೋಲೀಸ್ ಇನ್ ಕ್ವಾರಿಗೆ ಬರುತ್ತವೆ. ಪಾಸ್ ಪೋರ್ಟ್ ಪೋಲೀಸ್ ಇನ್ ಕ್ವಾರಿಗೆ ಬಂದರೆ ಅರ್ಜಿ ಹಾಕಿದವರು ತಿಂಗಳು ಗಟ್ಟಲೆ ಪೋಲೀಸ್ ಠಾಣೆಗೆ …

Read More »

ಬೆಳಗಾವಿಯಲ್ಲಿ 75 ಕಿ.ಮೀ. ಸೈಕಲ್ ರ್ಯಾಲಿ

ಬೆಳಗಾವಿ,): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಶುಕ್ರವಾರ(ಮಾ.12) ಬೆಳಿಗ್ಗೆ 6.45 ಗಂಟೆಗೆ ಚನ್ನಮ್ಮನ ಕಿತ್ತೂರಿನಿಂದ ಸೈಕಲ್ ರ್ಯಾಲಿ ನಡೆಯಲಿದೆ. ಈ ರ್ಯಾಲಿಯು ಬೆಳಿಗ್ಗೆ 8.15 ಗಂಟೆಗೆ ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ. ಕಿತ್ತೂರು ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಸ್ಮಾರಕದವರೆಗೆ ರ್ಯಾಲಿ ನಡೆಯಲಿದೆ. ಕಿತ್ತೂರಿನಿಂದ ನಂದಗಡವರೆಗಿನ 75 ಕಿ.ಮೀ. ಸೈಕಲ್ …

Read More »

ಶಿವಸ್ಮರಣೆ, ಶಿವಭಜನೆ,ಇಂದು ಶಿವರಾತ್ರಿ ಜಾಗರಣೆ…

ಬೆಳಗಾವಿ-ಇಂದು ಮಹಾ ಶಿವರಾತ್ರಿ,ಶಿಸ್ಮರಣೆಯಯ ಜೊತೆಗೆ ಕುಂದಾನಗರಿ ಬೆಳಗಾವಿ ಇವತ್ತು ಸಂಪೂರ್ಣವಾಗಿ ಶಿವಮಯವಾಗಿದೆ. ಬೆಳಗಾವಿ ನಗರದ ಶಿವಾಲಯಗಳಿಗೆ ಶಿಭಕ್ತರ ದಂಡೇ ಹರಿದು ಬರುತ್ತಿದೆ.ಇಂದು ಬೆಳಿಗ್ಗೆಯಿಂದಲೇ ಭಕ್ತರು ಶಿವಾಲಯಗಳ ಎದುರು ದರ್ಶನಕ್ಕಾಗಿ ಸರದಿಯಲ್ಲಿ ನಿಂತಿರುವ ದೃಶ್ಯ ಬೆಳಗಾವಿಯಲ್ಲಿ ಸಾಮಾನ್ಯವಾಗಿತ್ತು. ಮಹಾ ಶಿವರಾತ್ರಿಯ ಈ ದಿನ ಭಕ್ತರು ಶಿವನ ಧ್ಯಾನದಲ್ಲಿ ಇರುವ ಜೊತೆಗೆ ಉಪವಾಸ ಆಚರಿಸಿ ಮಹಾ ಶಿವರಾತ್ರಿಯನ್ಮು ಅರ್ಥಪೂರ್ಣಗೊಳಿಸಿದರು. ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಇಂದು ಬೆಳಿಗ್ಗೆಯಿಂದಲೇ …

Read More »

ಸಾಂಬ್ರಾ ಏರ್ ಪೋರ್ಟ್ ನಲ್ಲಿ ನಾ..ಒಲ್ಲೇ…ನೀ ಒಲ್ಲೇ…!!!

ಬೆಳಗಾವಿ- ಬಜೆಟ್ ಅಧಿವೇಶನ ಮುಗಿಸಿಕೊಂಡು ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಇವತ್ತು ನಾಯಕರ ದಂಡು ಆಗಮಿಸಿತು,ಏನಾದ್ರು ಬಿಸಿಬಿಸಿ ಸುದ್ಧಿ ಸಿಗಬಹುದು ಎಂದು ಮಾದ್ಯಮ ಪ್ರತಿನಿಧಿಗಳು ಮೈಕ್ ಹಿಡಿದು ನಿಂತರೆ ಅಲ್ಲಿ ನಡೆದಿದ್ದು ನಾ…ಒಲ್ಲೇ….ನೀ..ಒಲ್ಲೆ… ಮಾದ್ಯಮಗಳ ಲೋಗೋ ನೋಡಿದ್ರೆ ಸಾಕು ರಾಜಕಾರಣಿ ಗಳು ಮಾತನಾಡಲು ನಾ.ಮುಂದೆ ನೀ ಮುಂದೆ ಅಂತಾರೆ ಆದ್ರೆ ಇವತ್ತು ಸಾಂಬ್ರಾ ಏರ್ ಪೋರ್ಟ್ ನಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಸಂಗ ಎದುರಾಯಿತು.ಶ್ರೀಮಂತ ಪಾಟೀಲ ಅವರನ್ನು ಹೊರತು ಪಡಿಸಿದರೆ …

Read More »