Breaking News

LOCAL NEWS

ಮಟಕಾ ಅಡ್ಡೆ ಮೇಲೆ ದಾಳಿ 13 ಜನ ಪೋಲೀಸರ ವಶಕ್ಕೆ

ಬೆಳಗಾವಿ- ಬೆಳಗಾವಿ ನಗರದಲ್ಲಿ ಮಟಕಾ,ಜೂಜಾಟವನ್ನು ಸಂಪೂರ್ಣವಾಗಿ ಸಮಾಧಿ ಮಾಡಲು ಸಂಕಲ್ಪ ಮಾಡಿರುವ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರು ಬೆಳಗಾವಿ ನಗರದಲ್ಲಿ ತಡರಾತ್ರಿ ಮೊತ್ತೊಂದು ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಕಮಿಷನರೇಟಿನ ವ್ಯಾಪ್ತಿಯಲ್ಲಿ ತಡರಾತ್ರಿ ಬೆಳಗಾವಿಯ ಹಳೆ ಬಾಜಿ ಮಾರ್ಕೆಟ್ ಬಳಿಯ ಮಟಕಾ ಅಡ್ಡೆಯ ಮೇಲೆ ದಾಳಿ ನಡೆಸಿ,ಒಟ್ಟು 13 ಜನ ಆರೋಪಿಗಳ ದಸ್ತಗೀರ್;ರೂ.17,020 /- ಹಣ,15 ಮೊಬೈಲ್ ಹಾಗೂ 6 ಬೈಕ್ ಜಪ್ತಿ ಮಾಡಿದ್ದಾರೆ. ಮಟಕಾ ಆಡುತ್ತಿದ್ದ  …

Read More »

ಬೆಳಗಾವಿ ಬೈ ಇಲೆಕ್ಷನ್ ಪಂಚಮಸಾಲಿ ಕನೆಕ್ಷನ್…!!!

ಬೆಳಗಾವಿ:ಕೇಂದ್ರ ರೈಲ್ವೆ ಇಲಾಖೆ ಸಚಿವರಾಗಿದ್ದ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆಗೆ ಉಪ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಆದರೆ ಬಿಜೆಪಿ ಪಾಳೆಯದಲ್ಲಿ ದಿನಕ್ಕೊಂದು ಹೆಸರು ಕೇಳಿ ಬರುತ್ತಿವೆ. ಇದೀಗ ಬೆಳಗಾವಿ ಬಿಜೆಪಿ ಟಿಕೆಟ್ ನಗರದ ಖ್ಯಾತ ವೈದ್ಯ ಹಾಗೂ ವಿಜಯಾ ಆರ್ಥೋ ಆಸ್ಪತ್ರೆ ಮುಖ್ಯಸ್ಥ ಡಾ. ರವಿ ಪಾಟೀಲ ಅವರಿಗೆ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ‌. ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಕಾವು …

Read More »

ಮಗ್ಗಕ್ಕೆ ನೇಣು ಬಿಗಿದುಕೊಂಡು ನೇಕಾರನ ಆತ್ಮಹತ್ಯೆ..

ಬೆಳಗಾವಿ-ಕೊರೋನಾ ಮಹಾಮಾರಿ ಪ್ರಕೋಪದಿಂದ ಅದೆಷ್ಟು ಬದುಕುಗಳು ಬೀದಿಗೆ ಬಂದಿವೆ ಅನ್ನೋದು ಲೆಕ್ಕವೇ ಇಲ್ಲ ,ಬೆಳಗಾವಿಯ ನೇಕಾರನೊಬ್ಬ ಲಾಕ್ ಡೌನ್ ನಿಂದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಿದ್ದಲಿಂಗೇಶ್ವರ ಗಂಗಪ್ಪ ಹೊರಕೇರಿ ವಯಸ್ಸು: 47 ವರ್ಷ ಸಾ: ತಗ್ಗಿನಗಲ್ಲ ವಡಗಾವಿ ಬೆಳಗಾವಿ ಈತನು ಮಗ್ಗದ ಹಿಂದಿನ ಸಲಾಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗ್ಗದ ಕೆಲಸದ ಸಲುವಾಗಿ ಮತ್ತು ಮನೆಯ ಕೆಲಸದ ಸಲುವಾಗಿ ಬೆಳಗಾವಿ ಬಿಎಸ್‌ಎಸ್ ಮೈಕ್ರೋ ಪೈನಾನ್ಸ್ …

Read More »

ಉಪಚುನಾವಣೆ ಯಾವಾಗ ಘೋಷಣೆ ಆಗುತ್ತೆ ಅಂತಾ ನಾವು ಹೇಳಕ್ಕಾಗಲ್ಲ…

ಬೆಳಗಾವಿ-ಉಪಚುನಾವಣೆ ಯಾವಾಗ ಘೋಷಣೆ ಆಗುತ್ತೆ ಅಂತಾ ನಾವು ಹೇಳಕ್ಕಾಗಲ್ಲ ಎಂದು ಬೆಳಗಾವಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ.ಸಂಜೀವಕುಮಾರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 38,57,982 ಮತದಾರರು ಇದ್ದಾರೆ, 19,52,160 ಪುರುಷ, 19,00,822 ಮಹಿಳಾ ಮತದಾರರು ಇದ್ದಾರೆ, 19,836 ಸೇವಾ ಮತದಾರರು ಇದರಲ್ಲಿ 354 ಮಹಿಳಾ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡ ಅವರು,ಮತದಾರರ ಪಟ್ಟಿಯಲ್ಲಿ …

Read More »

ಹಲಗಾ- ಮಚ್ಛೆ, ಬೈಪಾಸ್ ಕಾಮಗಾರಿ,ಅಡ್ಡ ಮಲಗಿದ ರೈತರು

ಬೆಳಗಾವಿ-ಬೆಳಗಾವಿ ನಗರದಲ್ಲಿ ವಾಹನ ದಟ್ಟನೆ ನಿಯಂತ್ರಿಸಲು,ಬೆಳಗಾವಿಯಿಂದ ಗೋವಾಕ್ಕೆ ಹೋಗಲು ಅನಕೂಲವಾಗಲೆಂದು,ಬೆಳಗಾವಿ ನಗರದ ಟ್ರಾಫಿಕ್ ಡೈವೋರ್ಟ್ ಮಾಡುವ ಉದ್ದೇಶಕ್ಕಾಗಿ ಹಲಗಾ-ಮಚ್ಛೆ ಬೈ ಪಾಸ್ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಗೆ ರೈತರು ತೀವ್ರ ವಿರೋಧ ವ್ಯೆಕ್ತ ಪಡಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಬಂದ ಜೆಸಿಬಿ ಎದುರು ರೈತರು ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ.ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ಬಳಿ ಪ್ರತಿಭಟನೆ ನಡೆಯುತ್ತಿದೆ. ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಇದ್ದರೂ ಕಾಮಗಾರಿ ನಡೆಸುತ್ತಿದ್ದೀರಿ ಎಂದು ರೈತರಯ ಆಕ್ರೋಶ ವ್ಯೆಕ್ತಪಡಿಸಿದ್ದು,ಸ್ಥಳದಲ್ಲಿ …

Read More »

ಬೆಳಗಾವಿಯಲ್ಲಿ ನಟಿ ಕಂಗನಾ ವಿರುದ್ಧ ಕಂಪ್ಲೇಂಟ್….

ಬೆಳಗಾವಿ-ರೈತರನ್ನು ಉಗ್ರವಾದಿಗಳು ಎಂದು ನಟಿ ಕಂಗನಾ ರಣಾವತ್. ಹೇಳಿಕೆ ನೀಡಿದ್ದು, ಬೆಳಗಾವಿಯ ವಕೀಲರೊಬ್ಬರು,ಬಾಲಿವುಡ್ ನಟಿ ಕಂಗನಾ ರಣಾವತ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ. ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ನಟಿ ಕಂಗನಾ ವಿರುದ್ಧ,ವಕೀಲ ಹರ್ಷವರ್ಧನ ಪಾಟೀಲ್ ಪೋಲೀಸರಿಗೆ ದೂರು ನೀಡಿದ್ದಾರೆ.ಸದ್ಯ ಟಿಳಕವಾಡಿ ಪೊಲೀಸರು ದೂರು ಸ್ವೀಕರಿಸಿದ್ದು ನಟಿ ಕಂಗನಾ ವಿರುದ್ಧ ತಕ್ಷಣ FIR ದಾಖಲಿಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಸೆಕ್ಷನ್ 153, 154A, 503, 504, 505(1), 505(B), 505(C), …

Read More »

ಮರಾಠಿ ವಿದ್ಯಾರ್ಥಿಗಳ ಜೊತೆ, ನಾಡಗೀತೆ ಹಾಡಿದ ಮಿನಿಸ್ಟರ್….!!

ಬೆಳಗಾವಿ- ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಬೆಳಗಾವಿಯ ಗಡಿಯಲ್ಲಿರುವ,ಮರಾಠಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ರು ಮೂರು ಸರ್ಕಾರಿ ಮರಾಠಿ ಶಾಲೆಗಳಿಗೆ ಭೇಟಿ ನೀಡಿದ ಮಿನಿಸ್ಟರ್ ಸುರೇಶ್ ಕುಮಾರ್ ,ಇದೇ ಮೊದಲ ಬಾರಿಗೆ ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.,ಜಾಂಬೋಟಿ, ನಂದಗಡ, …

Read More »

ಇಸ್ಪೀಟ್ ಆಡುವಾಗ ಪೋಲೀಸ್ರು ಬಂದ್ರು ಅಂತಾ ನದಿಗೆ ಜಂಪ್ ಮಾಡಿದ ಇಬ್ಬರು ನಾಪತ್ತೆ…

ಬೆಳಗಾವಿ-ಪೊಲೀಸರಿಗೆ ಹೆದರಿ ನದಿ ಹಾರಿದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಹೊರ ವಲಯದ ಮಲಪ್ರಭಾ ನದಿಯಲ್ಲಿ ನಡೆದಿದೆ. ನಿನ್ನೆ ಸಂಜೆ ನದಿ ತಟದಲ್ಲಿ ಕೆಲವರು ಇಸ್ಪೀಟ್ ಆಡುತ್ತಿದ್ದರು, ಆಗ ಯಾರೋ ಪೊಲೀಸರ ಬಂದ್ರು ಅಂತಾ ಕೂಗಿದ್ದಾರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಆರು ಜನರು ನದಿಗೆ ಹಾರಿದ್ದಾರೆ ಈ ಆರು ಜನರಲ್ಲಿ ನಾಲ್ವರು ದಡ ಸೇರಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ. ಆರು ಜನರಲ್ಲಿ ಮಂಜು ಬಂಡಿವಡ್ಡರ 30 ವಯಸ್ಸು, ಸಮೀರ …

Read More »

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ……!!!

  ಬೆಳಗಾವಿ- ಶಿಕ್ಷಣ ಇಲಾಖೆಯ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಸೋಮವಾರ(ಫೆ.8) ಖಾನಾಪುರದಲ್ಲಿ ಶಾಲೆಗಳಿಗೆ ಭೇಟಿ ನೀಡಿ ಗಡಿಭಾಗದ ಶಾಲೆಗಳ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಲಿದ್ದಾರೆ. ಬಳಿಕ 12.30 ಗಂಟೆಗೆ ಬಿಇಓ ಕಚೇರಿಯಲ್ಲಿ ಗಡಿಭಾಗದ ಶಾಲೆಗಳ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆ ನಡೆಸಲಿದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗಡಿಭಾಗದ ಶಾಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಸಂತಸದ ಸಂಗತಿಯಾಗಿದೆ. ಗಡಿಭಾಗದ ಶಾಲೆಗಳ ಸುಧಾರಣೆ ಆಗಬೇಕು ಈ ಶಾಲೆಗಳಿಗೆ …

Read More »

ಮೂರು ವರ್ಷದ ಹಿಂದಿನ ಲವ್….ಮ್ಯಾರೇಜ್… ಇವತ್ತು ಡ್ಯಾಮೇಜ್…!!!

ಬೆಳಗಾವಿ- ಮೂರು ವರ್ಷದ ಹಿಂದೆ ಲವ್ ಮಾಡಿ,ಮಂದಿರದಲ್ಲಿ ಮಾಂಗಲ್ಯ ಕಟ್ಟಿ ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಪ್ರಿಯಕರ ಈಶ್ವರ ಇಂದು ಜೈಲು ಪಾಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಈಶ್ವರ ಪಂಚನ್ನವರ ಎಂಬಾತ ಮೂರು ವರ್ಷದ ಹಿಂದೆ 14 ವರ್ಷದ ಅಪ್ರಾಪ್ತ ಬಾಲಕಿಯ ಜೊತೆಗೆ ಲವ್ ಮಾಡಿ ಕಾಕತಿಯ ಸಿದ್ದೇಶ್ವರ ಮಂದಿರದಲ್ಲಿ ಮದುವೆ ಮಾಡಿಕೊಂಡಿದ್ದ ಅಂದು ಮದುವೆಯಾಗಿದ್ದ ಕಳೆದ ಮೂರು ವರ್ಷಗಳಿಂದ ಅಪ್ರಾಪ್ತ ಬಾಲಕಿಯ ಜೊತೆಗೆ ದಾಂಪತ್ಯ ಜೀವನ ನಡೆಸುತ್ತಿದ್ದ ಈಶ್ವರನ …

Read More »

ಬೆಳಗಾವಿ ಈಗ ಮಿನಿ ಗೋವಾ….ದೋಸ್ತೀ..ಮಸ್ತೀ…ಕುಸ್ತೀ.,.!!

ಬೆಳಗಾವಿ-ಫೇಸ್ ಬುಕ್ ,ವ್ಯಾಟ್ಸಪ್, ಮತ್ತು ಇನ್ಸಟಾಗ್ರಾಮಗಳಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಈ ಅಕೌಂಟ್ ನಲ್ಲಿ ಯುವತಿಯರ ಪೋಟೋ ಹಾಕಿ ಯುವಕರ ಜೊತೆ ಚಾರ್ಟಿಂಗ್ ಮಾಡಿ ವ್ಯೆವಸ್ಥಿತವಾಗಿ ಸೆಕ್ಸ್ ದಂಧೆ ಮಾಡುತ್ತಿದ್ದ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಮಾಡಿದ್ದಾರೆ. ನಿನ್ನೆ ಶನಿವಾರ ಬೆಳಗಾವಿಯ ಸೈಬರ್ ಕ್ರೈಂ ಬ್ರ್ಯಾಂಚಿನ ಇನೆಸ್ಪೆಕ್ಟರ್ ಗಡ್ಡೇಕರ ಅವರು ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿನ ಮಸ್ಸ್ಯಾಜ್ ಸೆಂಟರ್ ಮೇಲೆ ದಾಳಿ ಮಾಡಿ,ಮೂವರು ಯುವತಿಯರನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದರು. ಶನಿವಾರ …

Read More »

ಮೊದಲ ಬಾರಿಗೆ ಬೆಳಗಾವಿಗೆ ಬಂತು,ಏರ್ ಬಸ್….

ಬೆಳಗಾವಿ- ಬೆಳಗಾವಿ ಸಾಂಬ್ರಾ ವಿಮಾನ ನಿಲ್ಧಾಣದ ರನ್ ವೇ ಅಗಲೀಕರಣವಾದ ಬಳಿಕ ಮೊದಲ ಬಾರಿಗೆ ಬೆಳಗಾವಿಯಲ್ಲಿ ಇಂಡಿಗೋ ಏರ್ ಬಸ್ ಆಗುವ ಮೂಲಕ ಹೊಸ ಇತಿಹಾಸ ಸೃಷ್ಠಿ ಮಾಡಿದೆ. ಯಾಕಂದ್ರೆ ಮಲೇಶಿಯಾದ ಕಾಲಲಾಂಪೂರದಿಂದ 132 ವಿದ್ಯಾರ್ಥಿಗಳನ್ನು ಇಂಡಿಗೋ ಏರ್ ಬಸ್ ವಿಮಾನ ಬೆಳಗಾವಿ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ತಲುಪಿಸಿದ್ದು ಬೆಳಗಾವಿ ಇರಿಹಾಸದಲ್ಲೇ ಮೊದಲ ಬಾರಿಗೆ ಏರ್ ಬಸ್ ಲ್ಯಾಂಡ್ ಆಗಿರು ದು ಸಂತಸದ ಸಂಗತಿಯಾಗಿದ್ದು, ಏರ್ ಬಸ್ ಬೆಳಗಾವಿಯ ರನ್ …

Read More »

ಪಂಜಾಬ್ ಅಕ್ಕಿ ಕ್ಯಾನ್ಸರ್ ಗುಳಿಗೆ ಇದ್ದಂತೆ- ಉಮೇಶ್ ಕತ್ತಿ

ಬೆಳಗಾವಿ,-ನಾವೆಲ್ಲಾ ಪಂಜಾಬ್ ಅಕ್ಕಿ ತಿನ್ನುತ್ತಿದ್ದೇವೆ,ಆದ್ರೆಪಂಜಾಬ್ ಅಕ್ಕಿ ಅಂದ್ರೆ ಕ್ಯಾನ್ಸರ್ ಗುಳಗಿ ಇದ್ದಂತೆ ನಮ್ಮ ರಾಜ್ಯದಲ್ಲಿ ಬೆಳೆಯುವ ಅಕ್ಕಿ ನಾವೇ ಖರೀಧಿಸಿ ನಮ್ಮ ಅಕ್ಕಿ ನಾವೇ ಸೇವಿಸುವದು ಒಳಿತು ಎನ್ನುವ ಮಾತು ಹೇಳಿದ್ದು ಬೇರೆ ಯಾರೂ ಅಲ್ಲ,ನಮ್ಮ ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ. ಬೆಳಗಾವಿಯಲ್ಲಿ ಇಲಾಖೆಯ ಪ್ರಗತಿ ಪರಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಎರಡ್ಮೂರು ಬಾರಿ ಪಂಜಾಬ್ ಅಕ್ಕಿ ಕಾನ್ಸರ್ ಗುಳಿಗೆ ಇದ್ದಂತೆ ಅಂತಾ ಹೇಳಿದ್ರು …

Read More »

ಬೆಳಗಾವಿಯ ಮಸ್ಯಾಜ್ ಸೆಂಟರ್ ಮೇಲೆ ಪೋಲೀಸರ ದಾಳಿ ಇಬ್ಬರ ಬಂಧನ

ಬೆಳಗಾವಿ- ಮಸ್ಯಾಜ್ ಸೆಂಟರ್ ಮೇಲೆ ದಾಳಿ ಮಾಡಿರುವ ಸೈಬರ್ ಪೋಲೀಸರು,ಸ್ಪಾನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಇಬ್ಬರ ಬಂಧಸಿ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಮೂವರು ಜನ ಯುವತಿಯರನ್ನು ರಕ್ಷಣೆ ಮಾಡಿದ ಬೆಳಗಾವಿ ಸಿ ಇ ಎನ್ ಪೊಲೀಸರು, ಇಬ್ಬರನ್ನು ಬಂಧಿಸಿ ಅನೈತಿಕ ಚಟುವಟಿಕೆ ನಡೆಸಲು ಬಳಿಸುತ್ತಿದ್ದ ಕಾಂಡೋಮ್ ಸೇರಿದಂತೆ ಇತರ ಸಾಮುಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ. ಸೈಬರ್ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.ಬೆಳಗಾವಿಯ ಟಿಳಕವಾಡಿಯ ಬಳಿ ಅಕ್ರಮವಾಗಿ …

Read More »

ಪೋಲೀಸ್ ಇನೆಸ್ಪೆಕ್ಟರ್ ವಿಷಾಧ….ವಕೀಲರ ರಸ್ತೆ ತಡೆ ಅಂತ್ಯ…..

ಬೆಳಗಾವಿ-ಪೊಲೀಸ್ ಠಾಣೆಗೆ ಹೋದ ವಕೀಲನಿಗೆ ಮಾಳಮಾರುತಿ ಠಾಣೆಯ ಸಿಪಿಐ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ಆರೋಪಿಸಿ ವಕೀಲರು ಇಂದು ಸುಮಾರು 3 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇಂದು ದಿಢೀರ್ ರಸ್ತೆಗಳಿದ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಪ್ರತಿಙಟಿಸಿದರು.ಬೆಳಗಾವಿಯ ಮಾಳಮಾರುತಿ ಠಾಣೆ ಸಿಪಿಐ ವಿರುದ್ಧ ವಕೀಲರ ಪ್ರತಿಭಟನೆ ನಡೆಸಿ,ಬೆಳಗಾವಿ ಜಿಲ್ಲಾ ನ್ಯಾಯಾಲಯದ ಎದುರು ರಸ್ತೆ ತಡೆದು ವಕೀಲರ ಧರಣಿ ಶುರು ಮಾಡಿದ್ರು. ಮಾಳಮಾರುತಿ ಸಿಪಿಐ ಸುನಿಲ್ …

Read More »