Breaking News

LOCAL NEWS

ಬೆಳಗಾವಿಗೆ ಮಹಾರಾಷ್ಟ್ರ ನಂಟು ಬೆಳಗಾವಿಯಲ್ಲಿ ಮತ್ತೆ ಇಬ್ಬರಲ್ಲಿ ಸೊಂಕು ಪತ್ತೆ

ಬೆಳಗಾವಿ -ಸೋಮವಾರದ ಹೆಲ್ತ್ ಬುಲಿಟೀನ್ ಬೆಳಗಾವಿಗೆ ಮತ್ತೆ ಶಾಕ್ ನೀಡಿದೆ ,ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರಲ್ಲಿ ಮತ್ತೆ ಸೊಂಕು ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಜಿಲ್ಲಾಡಳಿತದ ವರದಿಯ ಪ್ರಕಾರ 118ಕ್ಕೆ ತಲುಪಿದೆ. ಇಂದು ಸೊಂಕು ಪತ್ತೆಯಾದ ಇಬ್ಬರು ಮುಂಬೈಯಿಂದ ಬೆಳಗಾವಿಗೆ ಬಂದಿದ್ದರು ನಿಪ್ಪಾಣಿ ಬಳಿ ಇವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಓರ್ವ ಮಹಿಳೆಗೆ ಮಹಾರಾಷ್ಟ್ರದ ನಂಟಿನಿಂದ ಸೊಂಕು ತಗಲಿದ್ದು ,ಇನ್ನೋರ್ವರಿಗೆ ತಬ್ಲಿಗ್ ನಂಟಿನಿಂದ ಸೊಂಕು ತಗಲಿದೆ.  

Read More »

ಮಹಾದಾಯಿ ಸಮಸ್ಯೆ ಇತ್ಯರ್ಥಕ್ಕೆ ರಸ್ತೆಯ ಮೂಲಕವೇ ದೆಹಲಿಗೆ ಹೋಗುವೆ

ಬೆಳಗಾವಿ- ಕಳಸಾ, ಬಂಡೂರಿ ಹಾಗೂ ಮಹಾದಾಯಿ ಕಾಮಗಾರಿ ಆರಂಭ ವಿಚಾರ ಕುರಿತು ದೆಹಲಿಗೆ ಹೋಗಲು ವಿಮಾನ ಸೌಲಭ್ಯ ಇಲ್ಲ, ಹೀಗಾಗಿ ಹೋಗಲಾಗಿಲ್ಲ ಶೀಘ್ರದಲ್ಲೇ ರಸ್ತೆಯ ಮೂಲಕವೇ ಅಧಿಕಾರಿಗಳ ಜೊತೆಗೆ ದೆಹಲಿಗೆ ಹೋಗಿ ಕೇಂದ್ರ ಜತೆ ಚರ್ಚೆ ಮಾಡುವದಾಗಿ ಜಲಸಂಪನ್ನೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಜಲಸಂಪನ್ಮೂಲ ಇಲಾಖೆತ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವನಾದ ಬಳಿಕ ರಾಜ್ಯದ ಎಲ್ಲಾ ಜಲಾಶಯಕ್ಕೆ ಭೇಟಿ ನೀಡಿದ್ದೇನೆ. …

Read More »

ಬೆಳಗಾವಿ ಜಿಲ್ಲೆಯಲ್ಲಿ 146 ಜನ ಶಂಕಿತರ ರಿಪೋರ್ಟ್ ಬರೋದು ಬಾಕಿ

ಬೆಳಗಾವಿ- ನಾಳೆ‌ 146 ಕೊರೊನಾ ಶಂಕಿತರ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತವಿದ್ದು ಬೆಳಗಾವಿ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ರಿಲೀಸ್ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ 50 ಆಕ್ಟಿವ್ ಕೊರೊನಾ ಪಾಸಿಟಿವ್ ಕೇಸ್ ಗಳಿವೆ, ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 8281 ಜನರ ಮೇಲೆ‌ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಒಟ್ಟು 78 ಜನರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಒಟ್ಟು 50 ಜನರಿಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗಿದೆ. …

Read More »

:ಬೆಳಗಾವಿಯಲ್ಲಿ 9 ಜನರು ಗುಣಮುಖ,ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ,-ಕೋವಿಡ್-೧೯ ಸೋಂಕು ತಗುಲಿದ್ದ 9 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಪಿ-298 ಪಿ-418 ಪಿ- 448 ಪಿ-484 ಪಿ-495 ಪಿ-496 ಪಿ-541 ಪಿ-542 ಪಿ-551 ***

Read More »

ಬೆಳಗಾವಿಯ ಅಟೋಮೋಬೈಲ ಕಂಪನಿ ಲಾಕ್ ಡೌನ್ ಕಾರ್ಮಿಕರ ಕಂಗಾಲು….!!

ಬೆಳಗಾವಿ-ಮಹಾ ಮಾರಿ ಕೊರೋನಾ ಜನರ ಬದುಕನ್ನೇ ನುಂಗುತ್ತಿದೆ.ಲಾಕ್ ಡೌನ್ ನಿಂದಾಗಿ ಕಂಪನಿಗಳು ಶೆಟರ್ ಡೌನ್ ಮಾಡುತ್ತಿದ್ದರೆ ಅಲ್ಲಿ ದುಡಿದು ಬದುಕುವ ಕಾರ್ಮಿಕರು ಕಂಗಾಲಾಗುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟಿದೆ ಎಂದು ಬೆಳಗಾವಿಯ ಆಟೋಮೊಬೈಲ್ ಕಂಪನಿಯಿಂದು ಬಂದ್ ಮಾಡಿದ ಹಿನ್ನಲೆಯಲ್ಲಿ ಅಲ್ಲಿಯ ಕಾರ್ಮಿಕರು ಕೆಲಸ ಕಳೆದುಕೊಂಡು,ಎರಡು ತಿಂಗಳ ವೇತನವೂ ಸಿಗದೇ ಕಂಪನಿಯ ಬಾಗಿಲು ಕಾಯುವ ಪರಿಸ್ಥಿತಿ ಎದುರಾಗಿದೆ. *ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುವ 140ಕ್ಕೂ ಹೆಚ್ಚು ಕಾರ್ಮಿಕರು ಅತಂತ್ರವಾಗಿದ್ದಾರೆ. ಬೆಳಗಾವಿಯ ಬಾಲು ಇಂಡಿಯಾ ಕಂಪನಿ …

Read More »

ಬೆಳಗಾವಿ ನಗರದ ಮೂರು ಶೀಲ್ ಡೌನ್ ಪ್ರದೇಶಗಳು ಈಗ ಖುಲ್ಲಾ…..!!

ಬೆಳಗಾವಿಯ ಅಮನ್ ನಗರ,ಕ್ಯಾಂಪ್,ಸಂಗಮೇಶ್ವರ ನಗರ ಶೀಲ್ ಡೌನ್ ನಿಂದ ಮುಕ್ತ ಬೆಳಗಾವಿ- ಬೆಳಗಾವಿ ನಗರದ ಕ್ಯಾಂಪ್ ಕಸಾಯಿಗಲ್ಲಿ,ಬಾಕ್ಸೈಟ್ ರಸ್ತೆಯ ಸಂಗಮೇಶ್ವರ ನಗರ,ಹಾಗೂ ಅಮನ್ ನಗರದಲ್ಲಿ ಕೊರೋನಾ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಈ ಪ್ರದೇಶಗಳನ್ನು ಶೀಲ್ ಡೌನ್ ಮಾಡಲಾಗಿತ್ತು ,ಈಗ ಈ ಪ್ರದೇಶಗಳ ಸೊಂಕಿತರು ಗುಮುಖರಾಗಿದ್ದು ಈ ಮೂರು ಪ್ರದೇಶಗಳನ್ನು ಶೀಲ್ ಡೌನ್ ನಿಂದ ಮುಕ್ತಗೊಳಿಸಲಾಗಿದೆ . ಜಿಲ್ಲಾಧಿಕಾರಿಗಳು ಈ ಮೂರು ಪ್ರದೇಶಗಳನ್ನು ಕಂಟೈನ್ಮೆಂಟದ ಝೋನ್ ನಿಂದ ಮುಕ್ತಗೊಳಿಸಿ ಶೀಲ್ ಡೌನ್ …

Read More »

ಬೆಳಗಾವಿ ಪಾಲಿಗೆ ಶುಭ ಶುಕ್ರವಾರ,ಇಂದು ಪಾಸಿಟೀವ್ ಕೇಸ್ ಇಲ್ಲ.

ಬೆಳಗಾವಿ- ಬೆಳಗಾವಿ ಪಾಲಿಗೆ ಇಂದು ಶುಭ ಶುಕ್ರವಾರ ಯಾಕಂದ್ರೆ ಇಂದು ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಪಾಸಿಟೀವ್ ಕೇಸ್ ಇಲ್ಲ. ಇಂದಿನ ಹೆಲ್ತ್ ಬುಲಿಟೀನ್  ಬೆಳಗಾವಿಗೆ ಸಮಾಧಾನ ತಂದಿದೆ

Read More »

ಗರ್ಭಿಣಿಯ ಕೋವಿಡ್ ಟೆಸ್ಟ್ ಹೇಗಾಯ್ತು…. ಇಲ್ಲಿದೆ ಟ್ವಿಸ್ಟ್ ….!!!

ಬೆಳಗಾವಿ-ಬೆಳಗಾವಿಗೆ ಕಂಟಕವಾಗುತ್ತಾ ಮುಂಬೈನ ಧಾರಾವಿ ಸ್ಲಂ‌ ನಂಟು ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. ಮುಂಬೈನ ಧಾರಾವಿ ಪ್ರದೇಶದಿಂದ ಬೆಳಗಾವಿಯ ಸದಾಶಿವ ನಗರಕ್ಕೆ ಮರಳಿದ್ದ ಗರ್ಭಿಣಿಗೆ ಕೊರೀನಾ ಸೊಂಕು ಇರುವದು ದೃಡವಾದ ಬಳಿಕ ಪೋಲೀಸರು ಟ್ರಾವಲ್ ಹಿಸ್ಟರಿಯನ್ನು ಕಲೆಹಾಕುತ್ತಿದ್ದಾರೆ. ಈ ಗರ್ಭಿಣಿಯ ಟ್ರಾವಲ್ ಹಿಸ್ಟರಿ ಬೆಚ್ಚಿಬೀಳಿಸುತ್ತಿದೆ. ಬೆಳಗಾವಿಯ ಸೋಂಕಿತ ಗರ್ಭಿಣಿ P-974 ಟ್ರಾವೆಲ್ ಹಿಸ್ಟರಿ ಆಧರಿಸಿ ಕ್ವಾರಂಟೈನ್ ಮಾಡುವ ಕಾರ್ಯಾಚರಣೆಯೂ ನಡೆದಿದೆ. ಗರ್ಭಿಣಿ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 45 …

Read More »

ಯಳ್ಳೂರ ಡಿ ನೋಟಿಫೈ…ಹಾಯ್ ಫಾಯ್ ಸದಾಶಿವನಗರ ನೋಟಿಫೈ…..!!!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಕಣ್ಣು ಮುಚ್ಚಾಲೆ ಆಟದೊಂದಿಗೆ ಖೋ..ಖೋ ಆಟವನ್ನೂ ಆಡುತ್ತಿದೆ ದಿನಕಳೆದಂತೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹರಡುತ್ತಲೇ ಇದೆ . ಬೆಳಗಾವಿ ನಗರದ ಪಕ್ಕದಲ್ಲಿರುವ ಯಳ್ಳೂರ ಗ್ರಾಮದ ಕೊರೋನಾ ಸೊಂಕಿತ ಗುಣಮುಖನಾಗಿ ನಿಗದಿತ ಅವಧಿ ಮುಕ್ತಾಯವಾಗಿರುವದರಿಂದ ಈ ಗ್ರಾಮ ಈಗ ಶೀಲ್ ಡೌನ್ ನಿಂದ ಮುಕ್ತಿ ಪಡೆದಿದೆ. ಜಿಲ್ಲಾಧಿಕಾರಿಗಳು ಕಂಟೈನ್ಮೆಂಟ್ ಝೋನ್ ಆಗಿದ್ದ ಯಳ್ಳೂರ ಗ್ರಾಮವನ್ನು ಡಿ ನೋಟಿಫೈ ಮಾಡಿ ಅಂದ್ರೆ ಯಳ್ಳೂರ ಗ್ರಾಮವನ್ನು …

Read More »

ಬೆಳಗಾವಿಯಲ್ಲಿ ಇಂದು13 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ,-ಕೋವಿಡ್-೧೯ ಸೋಂಕು ತಗುಲಿದ್ದ 13 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಪಿ-357 ಪಿ-524 ಪಿ- 539 ಪಿ-540 ಪಿ-543 ಪಿ-544 ಪಿ-547 ಪಿ-548 ಪಿ-549 ಪಿ-550 ಪಿ-546 ಪಿ-552 ಪಿ-463 ***

Read More »

ಪಾಸ್ ಇಲ್ಲದೇ ಬೆಳಗಾವಿ ಗಡಿ ಪ್ರವೇಶ ಮಾಡಿದ ಮೂವರ ವಿರುದ್ಧ ಕೇಸ್ ದಾಖಲು

ಬೆಳಗಾವಿ, ಮೇ 1: ಲಾಕ್ ಡೌನ್ ಮಾರ್ಗಸೂಚಿ ಪ್ರಕಾರ ಸೇವಾಸಿಂಧು ಮೂಲಕ ಇ-ಪಾಸ್ ಪಡೆಯದೇ ನಿಯಮ ಉಲ್ಲಂಘಿಸಿ ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆಯನ್ನು ಪ್ರವೇಶಿಸಿದ ಮೂವರ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ. ಬೆಳಗಾವಿ ನಗರದಲ್ಲಿ ಗುರುವಾರ (ಮೇ 14) ಪತ್ತೆಯಾಗಿರುವ 27 ವರ್ಷದ ಸೋಂಕಿತ ಮಹಿಳೆ(ಪಿ-974)ಯ ಪತಿ, ಸಹೋದರ ಮತ್ತು ವಾಹನ ಚಾಲಕನ ಮೇಲೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಸದರಿ ಮಹಿಳೆಯನ್ನು …

Read More »

ತಬ್ಲೀಗ್ ಅಜ್ಮೇರ್ ನಂಟಿನ ಬಳಿಕ, ಈಗ ಕುಂದಾನಗರಿಗೆ ಮುಂಬೈ ಲಿಂಕು

ಬೆಳಗಾವಿ- ಮುಂಬೈನಿಂದ ಬೆಳಗಾವಿಗೆ ಮರಳಿದ ಗರ್ಭಿಣಿಗೆ ಕೊರೊನಾ ಸೋಂಕು ತಗಲಿರುವದು ಇಂದು ಗುರುವಾರ ಬೆಳಗಿನ ಹೆಲ್ತ್ ಬುಲಿಟೀನ್ ನಲ್ಲಿ ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 114ಕ್ಕೇರಿಕೆಯಾಗಿದೆಮೇ 3ರಂದು ಮುಂಬೈದಿಂದ ಮರಳಿದ್ದ 7 ತಿಂಗಳ ಗರ್ಭಿಣಿಗೆ ಕೊರೊನಾ ಸೊಂಕು ತಗುಲಿದೆ ಗರ್ಭಿಣಿ ಎಂಬ ಕಾರಣಕ್ಕೆ ಮಹಿಳೆಗೆ ಹೋಮ್ ಕ್ವಾರಂಟೈನ್‌ಗೆ ಅವಕಾಶ ನೀಡಿಲಾಗಿತ್ತು ಆರೋಗ್ಯ ಇಲಾಖೆ ಹೋಮ್ ಕ್ವಾರಂಟೈನ್ ಗೆ ಅವಕಾಶ ನೀಡಿತ್ತು ಎಂದು ತಿಳಿದು ಬಂದಿದೆ. ಬೆಳಗಾವಿ ಸದಾಶಿವ …

Read More »

ಬೆಳಗಾವಿಯಲ್ಲಿ ಮತ್ತೆ ಕೊರೋನಾ ಅಟ್ಯಾಕ್….ಜಿಲ್ಲೆಯ ತುಂಬು ಗರ್ಭಿಣಿಗೆ ಸೊಂಕ

ಬೆಳಗಾವಿಯ ಸದಾಶಿವ ನಗರದ ತುಂಬು ಗರ್ಭಿಣಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ ಹೀಗಾಗಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 114 ಕ್ಕೆ ತಲುಪಿದಂತಾಗಿದೆ ಕೆಲ ದಿನಗಳ ಹಿಂದೆ ಈ ಮಹಿಳೆ ಮುಂಬೈಯಿಂದ ಬೆಳಗಾವಿಗೆ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ ಎಂದು ಗೊತ್ತಾಗಿದೆ.

Read More »

ಅನಾರೋಗ್ಯದ ನಡುವೆಯೇ.. ಪ್ರಧಾನಿ ಕೇರ್ ಗೆ 1ಲಕ್ಷ ರೂ. ದೇಣಿಗೆ ನೀಡಿದ ಬೆಳಗಾವಿಯ ಅಜ್ಜಿ

ಬೆಳಗಾವಿ- ಅನಾರೋಗ್ಯವಿದೆ. ಮೇಲೆದ್ದು ನಡೆದಾಡಲು ಆಗದ ಸ್ಥಿತಿ ಅವಳದ್ದು, ಇದರ ಮದ್ಯದಲ್ಲಿಯೇ 85ರ ವಯಸ್ಸಿನ ಅಜ್ಜಿಗೆ ಈಗ ದೇಶದ ಜನರ ಆರೋಗ್ಯದ ಚಿಂತೆ.ಇದೇ ಕಾರಣಕ್ಕಾಗಿ ಜನರ ಆರೋಗ್ಯಕ್ಕಾಗಿ ತಾನು ಕೂಡಿಟ್ಟ 1ಲಕ್ಷ ರೂ. ಹಣವನ್ನ ಪ್ರಧಾನಮಂತ್ರಿ ಕೇರ್ ಗೆ ದೇಣಿಗೆ ನೀಡುವ ಮೂಲಕ ಎಲ್ಲ ಗಮನ ಸೆಳೆದಿದ್ದಾಳೆ. ಇಷ್ಟಕ್ಕೂ ಈ ಮಹಾಉಪಕಾರಿ ಅಜ್ಜಿಯ ಹೆಸರು ನಳನಿ ಕೆಂಭಾವಿ. ಬೆಳಗಾವಿ ನಗರದ ಟಿಳಕವಾಡಿ ಬಡಾವಣೆ ನಿವಾಸಿ.ಇಳಿ ವಯಸ್ಸಿನಲ್ಲೂ ಅಜ್ಜಿಯ ದೇಶ ಪ್ರೇಮ …

Read More »

ಲಾರಿಯಲ್ಲಿ ಕದ್ದು ಮುಚ್ವಿ ರಾಜಸ್ತಾನಕ್ಕೆ ಹೊರಟಿದ್ದ ಒಟ್ಟು 112 ಕಾರ್ಮಿಕರು ವಶಕ್ಕ

ಬೆಳಗಾವಿ- ಲಾರಿಯಲ್ಲಿ ಬೆಂಗಳೂರಿನಿಂದ, ಕದ್ದು ಮುಚ್ಚಿ ರಾಜಸ್ತಾನಕ್ಕೆ ಹೊರಟಿದ್ದ 99 ಕಾರ್ಮಿಕರನ್ನು ಪೋಲೀಸರು ಹಿರೇಬಾಗೇವಾಡಿ ಟೀಲ್ ಬಳಿ ವಶಕ್ಕೆ ಪಡೆದುಕೊಂಡು ಅವರ ಆರೋಗ್ಯ ತಪಾಸಣೆ ಮಾಡಿ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ರಾಜಸ್ತಾನ ಮೂಲದ 99 ಕಾರ್ಮಿಕರನ್ನು ವಶಕ್ಕೆ ಪಡೆದು ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಅವರ ಆರೋಗ್ಯ ತಪಾಸಣೆ ಮಾಡಿ ನಂತರ ಎಲ್ಲ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯ ಚಿಕ್ಕೋಡಿಯಲ್ಲಿ ಬೆಂಗಳೂರಿನಿಂದ ಉತ್ತರ …

Read More »