Breaking News

LOCAL NEWS

ವಾಸ್ಕೋ- ನಿಜಾಮುದ್ದೀನ್ ,ರೈಲಿನಲ್ಲಿ ಚಾಕಲೇಟ್ ಗ್ಯಾಂಗ್ ಅರೆಸ್ಟ್….

ಬೆಳಗಾವಿ- ವಾಸ್ಕೋ ನಿಜಾಮುದ್ದೀನ್ ರೈಲಿನ ಜನರಲ್ ಡಬ್ಬಿಯಲ್ಲಿ ಪ್ರವಾಸ ಮಾಡಿ,ಇತರ ಪ್ರಯಾಣಿಕರೊಂದಿಗೆ,ಫ್ರೆಂಡ್ ಶೀಪ್ ಮಾಡಿ ಅವರಿಗೆ ಮತ್ತಿನ ಚಾಕಲೇಟ್ ನೀಡಿ ಪ್ರಯಾಣಿಕರನ್ನು ಲೂಟಿ ಮಾಡುತ್ತಿದ್ದ ಚಾಕಲೇಟ್ ಗ್ಯಾಂಗ್ ರೇಲ್ವೆ ಪೋಲೀಸರ ಬಲೆಗೆ ಬಿದ್ದಿದೆ. ರೈಲಿನಲ್ಲಿ ಪ್ರಯಾಣಿಕನೊಬ್ಬನಿಗೆ,ಮತ್ತಿನ ಚಾಕಲೇಟ್ ಕೊಟ್ಟು ಆತನಿಗೆ ಸಮೋಸಾ ತಿನ್ನಿಸಿ,ಆತನ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದ,ಬಿಹಾರ ಮೂಲದ ಮೂವರು ದರೋಡೆಕೋರ ರನ್ನು ಬೆಳಗಾವಿ ರೆಲ್ವೆ ಪೋಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಮಹ್ಮದ ಮುಕ್ತಾರ,ಶಾದಾಬ್,ಮತ್ತು ಅನ್ವರ್ …

Read More »

ಡೋಂಟ್ ವರಿ ,ಬಿ ಹ್ಯಾಪಿ,ಬೆಳಗಾವಿಯ ಐದೂ ರಿಪೋರ್ಟಗಳು ನೆಗೆಟಿವ್…ಆದರೂ ಎಚ್ಚರ..ಎಚ್ಚರ..!!

ಬೆಳಗಾವಿ ಜಿಲ್ಲೆ: ಐದೂ ಪ್ರಕರಣಗಳ ವರದಿ ನೆಗೆಟಿವ್- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಮಾ.೨೩(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇದುವರೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲ್ಲ ಐದೂ ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಒಟ್ಟಾರೆ ಐದು ಜನರ ಗಂಟಲು ದ್ರವಗಳ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ ಪ್ರಯೋಗಾಲಯದಿಂದ ಲಭಿಸಿರುವ ವರದಿ ಪ್ರಕಾರ ಎಲ್ಲ ಐದೂ ಮಾದರಿಗಳ ಫಲಿತಾಂಶ …

Read More »

ಕೊರೋನಾ: ಬೆಳಗಾವಿ ಜಿಲ್ಲೆಯ ಐವರು ಶಂಕಿತರಲ್ಲಿ ಇಬ್ಬರ ರಿಪೋರ್ಟ್ ನೆಗೆಟಿವ್….

ಬೆಳಗಾವಿ- ಬೆಳಗಾವಿ ಜಿಲ್ಲೆಯ ಐವರು ಸ ಕೊರೋನಾ ಶಂಕಿತರ ಗಂಟಲು ದ್ರವ ವನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು ಐವರಲ್ಲಿ ಇಬ್ಬರು ಶಂಕಿತರ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಬೈಲಹೊಂಗಲದ ಕೊರೋನಾ ಶಂಕಿತ,ಹಾಗೂ ಇನ್ನೊಬ್ಬ ಶಂಕಿತನ ನೆಗೆಟಿವ್ ರಿಪೋರ್ಟ್ ಬಂದಿದ್ದು ಬೈಲಹೊಂಗದ ಜನ ನಿಟ್ಟಿಸಿರು ಬಿಡುವಂತಾಗಿದೆ ಐವರಲ್ಲಿ ಇಬ್ಬರು ಶಂಕಿತರ ರಿಪೋರ್ಟ್ ಮಾತ್ರ ಬಂದಿದ್ದು ಇನ್ನೂ ಮೂವರ ಶಂಕಿತರ ರಿಪೋರ್ಟ್ ಬರುವಿಕೆಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

Read More »

ಬೆಳಗಾವಿ ಲಾಕ್,ಡೌನ್ ,ಬೆಳಗಾವಿ ಪೋಲೀಸರಿಂದ ಕಾರ್ಯಾಚರಣೆ ಆರಂಭ…..

ಬೆಳಗಾವಿ-ಬೆಳಗಾವಿ ಪೋಲೀಸರು ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಸರ್ಕಾರದ ಲಾಕ್ ಡೌನ್ ಆದೇಶವನ್ನು ಅನುಷ್ಠಾನಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಪಕ್ಕದ ಮಹಾರಾಷ್ಟ್ರ ದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ,ರಾಜ್ಯ ಸರ್ಕಾರ ಹಲವಾರು ನಗರಗಳು ಸೇರಿದಂತೆ ಬೆಳಗಾವಿ ನಗರವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದು ಇಂದು ಬೆಳ್ಳಂ ಬೆಳಿಗ್ಗೆ ಬೆಳಗಾವಿ ಪೋಲೀಸರು ಲಾಕ್ ಡೌನ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಳಗಾವಿಯ ಖಡೇಬಝಾರ್ ನಿಂದ ಕಾರ್ಯಾಚರಣೆ ಆರಂಂಭಿಸಿರುವ ಪೋಲೀಸರು ಕಿರಾಣ,ಡೈರಿ,ಔಷಧಿ,ಹಣ್ಣು,ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ …

Read More »

ನಾಳೆಯಿಂದ ಬೆಳಗಾವಿ ಜಿಲ್ಲೆಯಾದ್ಯಂತ ಬಸ್ ಸಂಚಾರ ಸ್ಥಗಿತ

ಬೆಳಗಾವಿಯಲ್ಲಿ ನಾಳೆಯಿಂದ ಲಾಕ್ ಡೌನ್, ಬೆಳಗಾವಿ- ರಾಜ್ಯ ಸರ್ಕಾರದಿಂದ ಬೆಳಗಾವಿ ಜಿಲ್ಲೆ ಲಾಕ್‌ಡೌನ್‌ಗೆ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ನಾಳೆ ಜಿಲ್ಲೆಯಾದ್ಯಂತ ಸರ್ಕಾರಿ, ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಎಲ್ಲಾ ರೀತಿಯ ಸರ್ಕಾರಿ, ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಳ್ಳಲಿದ್ದು 12 ಪ್ಲಸ್ ಒನ್ ಮತ್ತು ಹೆಚ್ಚಿನ ಸೀಟ್‌ಗಳಿರುವ ಎಲ್ಲಾ ವಾಹನಗಳ‌ ಸಂಚಾರ ಸ್ಥಗಿತಗೊಳ್ಳಲಿದೆ. ಮಾರ್ಚ್ 31ರವರೆಗೆ ಬೆಳಗಾವಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಮುಂದುವರೆಯಲಿದ್ದುಅತ್ಯಾವಶ್ಯಕ ವಸ್ತುಗಳ ವ್ಯಾಪ್ತಿಯಲ್ಲಿ ಬರದ ಎಲ್ಲಾ ಅಂಗಡಿ …

Read More »

ಬಸ್ಸಿನಲ್ಲಿ ಮಿಸ್ ಆಗಿದ್ದ,ಲಕ್ಷ ರೂ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್.,..

  ಬೆಳಗಾವಿ- ಬಸ್ಸಿನಲ್ಲಿ ಪ್ರಯಾಣಿಕನೊಬ್ಬ, ಮಿಸ್ ಮಾಡಿಕೊಂಡಿದ್ದ ಲಕ್ಷ ರೂ ಗಳನ್ನು ಪ್ರಯಾಣಿಕನಿಗೆ ಮರಳಿಸಿ ಬಸ್ ಕಂಡಕ್ಟರ್,ಮತ್ತು ಚಾಲಕ ಮಾನವೀಯತೆ ಮೆರೆದ ಘಟನೆ ಬೆಳಗಾವಿ ಡಿಪೋದಲ್ಲಿ ನಡೆದಿದೆ. ಬೆಂಗಳೂರಿನಿಂದ ಬೆಳಗಾವಿಗೆ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಸುತ್ತದ್ದ ಚಿತ್ರದುರ್ಗ ಮೂಲದ ಪ್ರಯಾಣಿಕ,ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವಾಗ ಬಂಕಾಪೂರ ಟೋಲ್ ನಲ್ಲಿ ,ಟಾಯಲೆಟ್ ಗೆ ತೆರಳಿ ಬಸ್ ಮಿಸ್ ಮಾಡಿಕೊಂಡಿದ್ದ ಆತನ ಬ್ಯಾಗು ಬಸ್ಸಿನಲ್ಲೇ ಉಳಿದುಕೊಂಡಿತ್ತು,ನಂತರ ಬೆಳಗಾವಿಗೆ ಆಗಮಿಸಿದ ಈ ಪ್ರಯಾಣಿಕ ವಿಚಾರಿಸಿದ ಬಳಿಕ ಬಸ್ಸಿನ …

Read More »

ಬೆಳಗಾವಿ ಜಿಲ್ಲೆಯ ಐವರು ಕೊರೋನಾ ಶಂಕಿತರ ಗಂಟಲು ದ್ರವ ಬೆಂಗಳೂರಿಗೆ ರವಾನೆ…

ಬೆಳಗಾವಿ ಜಿಲ್ಲೆಯ ಐವರು ಕೊರೋನಾ ಶಂಕಿತರ ಗಂಟಲು ದ್ರವ ಬೆಂಗಳೂರಿಗೆ ರವಾನೆ… ಬೆಳಗಾವಿ – ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಕರೋನಾ ಶಂಕಿತರ ಸಂಖ್ಯೆ ಹೆಚ್ಚಾಗಿದೆ ಜಿಲ್ಲೆಯ ಒಟ್ಟು ಐವರು ಶಂಕಿತರ ಗಂಟಲು ದ್ರವ ವನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಳೆದ ಮೂರು ದಿನದ ಹಿಂದೆಯೇ ಇಬ್ಬರು ಶಂಕಿತರ ಗಂಟಲು ದ್ರವವನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು ಇಂದು ಮತ್ತೆ ಮೂವರ ಶಂಕಿತರ ಗಂಟಲು ದ್ರವವನ್ನು ಬೆಂಗಳೂರಿನ ಪ್ರಯೀಗಾಲಯಕ್ಕೆ …

Read More »

ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿಕೆ 

  ಬೆಳಗಾವಿ-    ಮಾರ್ಚ 27 ರಿಂದ ನಡೆಯಬೇಕಾಗಿದ್ದ SSLC ಪರೀಕ್ಚೆಯನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಲಾಗುವದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದ್ದಾರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಕಟಿಸಿದ ಬಳಿಕ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಸುರೇಶಕುಮಾರ್ ಅವರು SSLC ಪರೀಕ್ಷೆಯನ್ನು ಮುಂದೂಡುವ ವಿಷಯವನ್ನು ದೃಡಪಡಿಸಿದ್ದಾರೆ

Read More »

ಬೆಳಗಾವಿಯಲ್ಲಿ ಕೊರೋನಾ ವದಂತಿಗಳ ಮೇಲೆ ನಿಗಾ ಇಡಲು ಸೈನಿಕರ ನಿಯೋಜನೆ

ವದಂತಿ ಪರಾಮರ್ಶೆಗೆ ಸಜ್ಜಾದ “ಕರೋನಾ ಸೈನಿಕರು” ಬೆಳಗಾವಿ, ಮಾರ್ಚ್, 21(ಕರ್ನಾಟಕ ವಾರ್ತೆ): ಕರೋನಾ ವೈರಾಣು ಹರಡುವಿಕೆ ಕುರಿತು ವಿವಿಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ಪರಾಮರ್ಶಿಸಿ ನೈಜ ಮಾಹಿತಿ ಕೊಡುವ ಉದ್ಧೇಶದಿಂದ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸಲು ಸಜ್ಜಾಗಿರುವ ಕರೋನಾ ಸೈನಿಕರ(ಸ್ವಯಂಸೇವಕರು) ಸಭೆ ವಾರ್ತಾಭವನದಲ್ಲಿ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಕೊರೊನಾ ವೈರಾಣು ಹರಡುವಿಕೆ ಕುರಿತಾಗಿ …

Read More »

ರಾಜ್ಯದಲ್ಲಿ ಮತ್ತೆರಡು ಕೋವಿಡ್-೧೯ ಪಾಸಿಟಿವ್ ಪ್ರಕರಣ-ಸಚಿವ ಬಿ. ಶ್ರೀರಾಮುಲು

ಬೆಳಗಾವಿ, ಮಾ.೨೧(ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಇಂದು ಮತ್ತೆ ಎರಡು ಕೋವಿಡ್ -೧೯ ಹೊಸ ಪಾಸಿಟಿವ ಪ್ರಕರಣಗಳು ವರದಿಯಾಗಿವೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಗೌರಿಬಿದನೂರ ಪ್ರಕರಣ ಸೇರಿದಂತೆ ಇದುವರೆಗೆ ಒಟ್ಟು ೧೬ ಪ್ರಕರಣಗಳು ಕಂಡುಬಂದಿದ್ದವು. ಹೊಸ ಎರಡು ಪ್ರಕರಣಗಳಿಂದ ಈ ಸಂಖ್ಯೆ ೧೮ ಕ್ಕೆ ಏರಿದೆ ಎಂದು ತಿಳಿಸಿದರು.

Read More »

ಶೀಘ್ರದಲ್ಲಿಯೇ ಬೆಳಗಾವಿಯಲ್ಲಿ ಕೊರೋನಾ ಪ್ರಯೋಗಾಲಯ- ಶ್ರೀರಾಮಲು

ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಮಹಾರಾಷ್ಟ್ರ ಹೊಂದಿಕೊಂಡಿರುವ ಕಾರಣ ಬೆಳಗಾವಿಯಲ್ಲಿ ಶೀಘ್ರದಲ್ಲಿಯೇ ಕೊರೋನಾ ಸೊಂಕಿಗೆ ಸಮಂಧಿಸಿದ ಗಂಟಲು ದ್ರುವ ಪರೀಕ್ಷೆಗಾಗಿ ಪ್ರಯೋಗಾಲಯವನ್ನು ಶೀಘ್ರದಲ್ಲಿಯೇ ಆರಂಭಿಸುತ್ತೇವೆ ಎಂದು,ಆರೋಗ್ಯ ಸಚಿವ ಶ್ರೀರಾಮಲು ಭರವಸೆ ನೀಡಿದ್ದಾರೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕರ್ನಾಟಕದಲ್ಲಿ ಇವತ್ತಿನವರೆಗೆ 16 ಕೊರೋನಾ ಸೊಂಕಿನ ಪ್ರಕರಣಗಳು ಪತ್ತೆಯಾಗಿದ್ದವು,ಅದರಲ್ಲಿ ಐವರು ಜನ ಗುಣಮುಖರಾಗಿದ್ದಾರೆ,ಮೂವರು ಜನ ಡಶ್ಚಾರ್ಜ ಆಗಿದ್ದಾರೆ,ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ ಸರ್ಕಾರ …

Read More »

ಜನತಾ ಕರ್ಫ್ಯೂ ಬೆಂಬಲಿಸಲು ಸಚಿವ ರಮೇಶ್ ಜಾರಕಿಹೊಳಿ ಕರೆ

  ಬೆಳಗಾವಿ, ದೇಶಾದ್ಯಂತ ಕೊರೋನಾ ವೈರಸ್ ನ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ನಾಳೆ, ಮಾರ್ಚ್ 22ರ ಭಾನುವಾರದಂದು ಜನತಾ ಕರ್ಫ್ಯೂ ಆಚರಿಸುವಂತೆ ಕರೆ ನೀಡಿದ್ದು, ಭಾರತದ ಒಬ್ಬ ಜಾಗೃತ ಪ್ರಜೆಯಾಗಿ, ಸಂಕಲ್ಪ ಹಾಗೂ ಸಂಯಯದಿಂದ ಈ ’ಜನತಾ ಕರ್ಫ್ಯೂ’ ಪಾಲಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ. ನಾಳೆ ಸ್ವಯಂ ಪ್ರೇರಣೆಯಿಂದ ನಡೆಯಲಿರುವ ’ಜನತಾ ಕರ್ಫ್ಯೂ’ವನ್ನು ಬೆಂಬಲಿಸೋಣ ಎಂದು ಮಾನ್ಯ ಜಲಸಂಪನ್ಮೂಲ ಸಚಿವರಾದ …

Read More »

ಗೋವಾ-ಮಹಾರಾಷ್ಟ್ರದಿಂದ ವಾಹನಗಳ ಆಗಮನ-ನಿರ್ಗಮನಕ್ಕೆ ತಡೆ

ಮ್ಯಾಕ್ಸಿಕ್ಯಾಬ್, ಬಸ್ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಆದೇಶ ಬೆಳಗಾವಿ, ಜಿಲ್ಲೆಯಲ್ಲಿ ಕೊವಿಡ್-19 ವೈರಾಣು ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ಸಾರ್ವಜನಿಕ ವಾಹನಗಳಾದ ಮ್ಯಾಕ್ಸಿಕ್ಯಾಬ್ ( 12 + 1 ) / ಬಸ್ ಸೇರಿದಂತೆ ಎಲ್ಲಾ ಭಾರಿ ಪ್ರಯಾಣಿಕರ ವಾಹನಗಳಾದ ಕಾಂಟ್ರಾಕ್ಟ್ ಕ್ಯಾರೇಜ್ / ಸ್ಟೇಜ್ ಕ್ಯಾರೇಜ್ / ಅಖಿಲ ಭಾರತ ಪ್ರವಾಸಿ ಬಸ್ …

Read More »

ಜನತಾ ಕರ್ಫ್ಯುಗೆ ಬೆಂಬಲಿಸಿ ಬೆಳಗಾವಿಯ ಹೊಟೇಲ್,ಬಾರ್ ಆ್ಯಂಡ ರೆಸ್ಟೋರೆಂಟ್ ಬಂದ್….

ಜನತಾ ಕರ್ಫ್ಯುಗೆ ಬೆಂಬಲಿಸಿ ಬೆಳಗಾವಿಯ ಹೊಟೇಲ್,ಬಾರ್ ಆ್ಯಂಡ ರೆಸ್ಟೋರೆಂಟ್ ಬಂದ್…. ಬೆಳಗಾವಿ- ಪ್ರದಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದಲ್ಲಿ ಜನತಾ ಕರ್ಫ್ಯು ಘೋಷಿಸಿದ ಹಿನ್ನಲೆಯಲ್ಲಿ ಬೆಳಗಾವಿಯ ಹೊಟೇಲ್ ಮಾಲೀಕರ ಸಂಘ,ಮತ್ತು ಲಿಕ್ಕರ್ ಮಾರ್ಚಂಟ್ ಅಸೋಸೇಶಿಯನ್ನ ನವರು ಬೆಂಬಲ ವ್ಯೆಕ್ತ ಪಡಿಸಿದ್ದಾರೆ ಭಾನುವಾರ ಬೆಳಗಾವಿಯ ಎಲ್ಲ ಹೊಟೇಲ್ ಗಳು,ಬಾರ್ ಆ್ಯಂಡ ರೆಸ್ಟೋರೆಂಟ್ ಗಳು ಬಂದ್ ಆಗಲಿವೆ

Read More »

ಬೆಳಗಾವಿಯ ಇಬ್ಬರು ಕರೋನಾ ಶಂಕಿತರ, ಗಂಟಲು ದ್ರವದ ಮಾದರಿ, ಬೆಂಗಳೂರು ಪ್ರಯೋಗಾಲಯಕ್ಕೆ

ಜಿಲ್ಲೆಯಲ್ಲಿ ೧೧೮ ಜನರ ಮೇಲೆ ನಿಗಾ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ,  ಜಿಲ್ಲೆಗೆ ವಿದೇಶದಿಂದ ಇದುವರೆಗೆ ೧೩೪ ಜನರು ಆಗಮಿಸಿದ್ದು, ಅದರಲ್ಲಿ ಮೂರು ಜನರು ೨೮ ದಿನಗಳ ಕ್ವಾರಂಟೈನ್(ಗೃಹ ನಿಗಾ) ಅವಧಿ ಪೂರ್ಣಗೊಳಿಸಿದ್ದಾರೆ. ಯಾವುದೇ ಪ್ರಕರಣದಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು ೧೧೮ ಜನರನ್ನು ಅವರವರ ಮನೆಯಲ್ಲಿಯೇ ನಿಗಾದಲ್ಲಿರಿಸಲಾಗಿದೆ. ೧೭ ಜನರು ೧೪ ದಿನಗಳ ಕ್ವಾರಂಟೈನ್ ಅವಧಿಯನ್ನು ಈಗಾಗಲೇ …

Read More »