Breaking News

LOCAL NEWS

ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿಕೆ 

  ಬೆಳಗಾವಿ-    ಮಾರ್ಚ 27 ರಿಂದ ನಡೆಯಬೇಕಾಗಿದ್ದ SSLC ಪರೀಕ್ಚೆಯನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಲಾಗುವದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದ್ದಾರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಕಟಿಸಿದ ಬಳಿಕ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಸುರೇಶಕುಮಾರ್ ಅವರು SSLC ಪರೀಕ್ಷೆಯನ್ನು ಮುಂದೂಡುವ ವಿಷಯವನ್ನು ದೃಡಪಡಿಸಿದ್ದಾರೆ

Read More »

ಬೆಳಗಾವಿಯಲ್ಲಿ ಕೊರೋನಾ ವದಂತಿಗಳ ಮೇಲೆ ನಿಗಾ ಇಡಲು ಸೈನಿಕರ ನಿಯೋಜನೆ

ವದಂತಿ ಪರಾಮರ್ಶೆಗೆ ಸಜ್ಜಾದ “ಕರೋನಾ ಸೈನಿಕರು” ಬೆಳಗಾವಿ, ಮಾರ್ಚ್, 21(ಕರ್ನಾಟಕ ವಾರ್ತೆ): ಕರೋನಾ ವೈರಾಣು ಹರಡುವಿಕೆ ಕುರಿತು ವಿವಿಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ಪರಾಮರ್ಶಿಸಿ ನೈಜ ಮಾಹಿತಿ ಕೊಡುವ ಉದ್ಧೇಶದಿಂದ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸಲು ಸಜ್ಜಾಗಿರುವ ಕರೋನಾ ಸೈನಿಕರ(ಸ್ವಯಂಸೇವಕರು) ಸಭೆ ವಾರ್ತಾಭವನದಲ್ಲಿ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಕೊರೊನಾ ವೈರಾಣು ಹರಡುವಿಕೆ ಕುರಿತಾಗಿ …

Read More »

ರಾಜ್ಯದಲ್ಲಿ ಮತ್ತೆರಡು ಕೋವಿಡ್-೧೯ ಪಾಸಿಟಿವ್ ಪ್ರಕರಣ-ಸಚಿವ ಬಿ. ಶ್ರೀರಾಮುಲು

ಬೆಳಗಾವಿ, ಮಾ.೨೧(ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಇಂದು ಮತ್ತೆ ಎರಡು ಕೋವಿಡ್ -೧೯ ಹೊಸ ಪಾಸಿಟಿವ ಪ್ರಕರಣಗಳು ವರದಿಯಾಗಿವೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಗೌರಿಬಿದನೂರ ಪ್ರಕರಣ ಸೇರಿದಂತೆ ಇದುವರೆಗೆ ಒಟ್ಟು ೧೬ ಪ್ರಕರಣಗಳು ಕಂಡುಬಂದಿದ್ದವು. ಹೊಸ ಎರಡು ಪ್ರಕರಣಗಳಿಂದ ಈ ಸಂಖ್ಯೆ ೧೮ ಕ್ಕೆ ಏರಿದೆ ಎಂದು ತಿಳಿಸಿದರು.

Read More »

ಶೀಘ್ರದಲ್ಲಿಯೇ ಬೆಳಗಾವಿಯಲ್ಲಿ ಕೊರೋನಾ ಪ್ರಯೋಗಾಲಯ- ಶ್ರೀರಾಮಲು

ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಮಹಾರಾಷ್ಟ್ರ ಹೊಂದಿಕೊಂಡಿರುವ ಕಾರಣ ಬೆಳಗಾವಿಯಲ್ಲಿ ಶೀಘ್ರದಲ್ಲಿಯೇ ಕೊರೋನಾ ಸೊಂಕಿಗೆ ಸಮಂಧಿಸಿದ ಗಂಟಲು ದ್ರುವ ಪರೀಕ್ಷೆಗಾಗಿ ಪ್ರಯೋಗಾಲಯವನ್ನು ಶೀಘ್ರದಲ್ಲಿಯೇ ಆರಂಭಿಸುತ್ತೇವೆ ಎಂದು,ಆರೋಗ್ಯ ಸಚಿವ ಶ್ರೀರಾಮಲು ಭರವಸೆ ನೀಡಿದ್ದಾರೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕರ್ನಾಟಕದಲ್ಲಿ ಇವತ್ತಿನವರೆಗೆ 16 ಕೊರೋನಾ ಸೊಂಕಿನ ಪ್ರಕರಣಗಳು ಪತ್ತೆಯಾಗಿದ್ದವು,ಅದರಲ್ಲಿ ಐವರು ಜನ ಗುಣಮುಖರಾಗಿದ್ದಾರೆ,ಮೂವರು ಜನ ಡಶ್ಚಾರ್ಜ ಆಗಿದ್ದಾರೆ,ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ ಸರ್ಕಾರ …

Read More »

ಜನತಾ ಕರ್ಫ್ಯೂ ಬೆಂಬಲಿಸಲು ಸಚಿವ ರಮೇಶ್ ಜಾರಕಿಹೊಳಿ ಕರೆ

  ಬೆಳಗಾವಿ, ದೇಶಾದ್ಯಂತ ಕೊರೋನಾ ವೈರಸ್ ನ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ನಾಳೆ, ಮಾರ್ಚ್ 22ರ ಭಾನುವಾರದಂದು ಜನತಾ ಕರ್ಫ್ಯೂ ಆಚರಿಸುವಂತೆ ಕರೆ ನೀಡಿದ್ದು, ಭಾರತದ ಒಬ್ಬ ಜಾಗೃತ ಪ್ರಜೆಯಾಗಿ, ಸಂಕಲ್ಪ ಹಾಗೂ ಸಂಯಯದಿಂದ ಈ ’ಜನತಾ ಕರ್ಫ್ಯೂ’ ಪಾಲಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ. ನಾಳೆ ಸ್ವಯಂ ಪ್ರೇರಣೆಯಿಂದ ನಡೆಯಲಿರುವ ’ಜನತಾ ಕರ್ಫ್ಯೂ’ವನ್ನು ಬೆಂಬಲಿಸೋಣ ಎಂದು ಮಾನ್ಯ ಜಲಸಂಪನ್ಮೂಲ ಸಚಿವರಾದ …

Read More »

ಗೋವಾ-ಮಹಾರಾಷ್ಟ್ರದಿಂದ ವಾಹನಗಳ ಆಗಮನ-ನಿರ್ಗಮನಕ್ಕೆ ತಡೆ

ಮ್ಯಾಕ್ಸಿಕ್ಯಾಬ್, ಬಸ್ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಆದೇಶ ಬೆಳಗಾವಿ, ಜಿಲ್ಲೆಯಲ್ಲಿ ಕೊವಿಡ್-19 ವೈರಾಣು ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ಸಾರ್ವಜನಿಕ ವಾಹನಗಳಾದ ಮ್ಯಾಕ್ಸಿಕ್ಯಾಬ್ ( 12 + 1 ) / ಬಸ್ ಸೇರಿದಂತೆ ಎಲ್ಲಾ ಭಾರಿ ಪ್ರಯಾಣಿಕರ ವಾಹನಗಳಾದ ಕಾಂಟ್ರಾಕ್ಟ್ ಕ್ಯಾರೇಜ್ / ಸ್ಟೇಜ್ ಕ್ಯಾರೇಜ್ / ಅಖಿಲ ಭಾರತ ಪ್ರವಾಸಿ ಬಸ್ …

Read More »

ಜನತಾ ಕರ್ಫ್ಯುಗೆ ಬೆಂಬಲಿಸಿ ಬೆಳಗಾವಿಯ ಹೊಟೇಲ್,ಬಾರ್ ಆ್ಯಂಡ ರೆಸ್ಟೋರೆಂಟ್ ಬಂದ್….

ಜನತಾ ಕರ್ಫ್ಯುಗೆ ಬೆಂಬಲಿಸಿ ಬೆಳಗಾವಿಯ ಹೊಟೇಲ್,ಬಾರ್ ಆ್ಯಂಡ ರೆಸ್ಟೋರೆಂಟ್ ಬಂದ್…. ಬೆಳಗಾವಿ- ಪ್ರದಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದಲ್ಲಿ ಜನತಾ ಕರ್ಫ್ಯು ಘೋಷಿಸಿದ ಹಿನ್ನಲೆಯಲ್ಲಿ ಬೆಳಗಾವಿಯ ಹೊಟೇಲ್ ಮಾಲೀಕರ ಸಂಘ,ಮತ್ತು ಲಿಕ್ಕರ್ ಮಾರ್ಚಂಟ್ ಅಸೋಸೇಶಿಯನ್ನ ನವರು ಬೆಂಬಲ ವ್ಯೆಕ್ತ ಪಡಿಸಿದ್ದಾರೆ ಭಾನುವಾರ ಬೆಳಗಾವಿಯ ಎಲ್ಲ ಹೊಟೇಲ್ ಗಳು,ಬಾರ್ ಆ್ಯಂಡ ರೆಸ್ಟೋರೆಂಟ್ ಗಳು ಬಂದ್ ಆಗಲಿವೆ

Read More »

ಬೆಳಗಾವಿಯ ಇಬ್ಬರು ಕರೋನಾ ಶಂಕಿತರ, ಗಂಟಲು ದ್ರವದ ಮಾದರಿ, ಬೆಂಗಳೂರು ಪ್ರಯೋಗಾಲಯಕ್ಕೆ

ಜಿಲ್ಲೆಯಲ್ಲಿ ೧೧೮ ಜನರ ಮೇಲೆ ನಿಗಾ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ,  ಜಿಲ್ಲೆಗೆ ವಿದೇಶದಿಂದ ಇದುವರೆಗೆ ೧೩೪ ಜನರು ಆಗಮಿಸಿದ್ದು, ಅದರಲ್ಲಿ ಮೂರು ಜನರು ೨೮ ದಿನಗಳ ಕ್ವಾರಂಟೈನ್(ಗೃಹ ನಿಗಾ) ಅವಧಿ ಪೂರ್ಣಗೊಳಿಸಿದ್ದಾರೆ. ಯಾವುದೇ ಪ್ರಕರಣದಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು ೧೧೮ ಜನರನ್ನು ಅವರವರ ಮನೆಯಲ್ಲಿಯೇ ನಿಗಾದಲ್ಲಿರಿಸಲಾಗಿದೆ. ೧೭ ಜನರು ೧೪ ದಿನಗಳ ಕ್ವಾರಂಟೈನ್ ಅವಧಿಯನ್ನು ಈಗಾಗಲೇ …

Read More »

ಬೆಳಗಾವಿಯಲ್ಲಿ ಕರೋನಾ ವದಂತಿ ಹರಡಿಸಿದ ಯುವಕನ ಅರೆಸ್ಟ್….

ಬೆಳಗಾವಿ- ಎಂ ಈ ಎಸ್ ನಾಯಕ ಸೂರಜ ಕಣಬರಕರ ಅವರಿಗೆ ಕರೋನಾ ವೈರಸ್ ತಗುಲಿದೆ,ಆತನನ್ನು ಕೆ. ಎಲ್ ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ಸುಳ್ಳು ವದಂತಿ ಹರಡಿಸಿದ ಯುವಕನನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ . ಈ ವದಂತಿ ಹರಡಿಸಿದ ಯುವಕ,ಬೇರೆ ಯಾರೂ ಅಲ್ಲ ,ಸೂರಜ ಕಣಬರಕರ ಅವರ ಚಿಕ್ಕಪ್ಪನ ಮಗ,ಮೇಘನ್ ಅಶೋಕ ಕಣಬರಕರ ಎಂಬುದು ವಿಶೇಷ ಈತ ಎಲ್ಲ ವ್ಯಾಟ್ಸಪ್ ಗ್ರೂಪ್ ಗಳಲ್ಲಿ ,ಎಂಈಎಸ್ ನಾಯಕ …

Read More »

ಕರೋನಾ ಕೇರ್… ಡಾಕ್ಟರ್ ಗಳ ಜೊತೆ ಪ್ರಾದೇಶಿಕ ಆಯುಕ್ತರ ಮೀಟೀಂಗ್

ಕೋವಿಡ್ ೧೯ ನಿಯಂತ್ರಣ, ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಪ್ರಾದೇಶಿಕ ಆಯುಕ್ತ ಬಿಸ್ವಾಸ್ ಸೂಚನೆ ಬೆಳಗಾವಿ, ಮಾ.೧೯(ಕರ್ನಾಟಕ ವಾರ್ತೆ): ಸಾಮಾನ್ಯ ಫ್ಲೂ ಲಕ್ಷಣಗಳು ಹಾಗೂ ಕೋವಿಡ್ ೧೯ ರಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದಿರುವುದರಿಂದ ಸೋಂಕಿತರನ್ನು ಗುರುತಿಸುವುದು ಸವಾಲಿನ ಕೆಲಸವಾಗಿದೆ. ಇಂತಹ ಸನ್ನಿವೇಶದಲ್ಲಿ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ವೈದ್ಯರೂ ಸೇರಿದಂತೆ ಎಲ್ಲರೂ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು. ಕೋವಿಡ್ ೧೯ ನಿಯಂತ್ರಣಕ್ಕೆ …

Read More »

ಅಂಬೋಲಿಯ ಕಾರಿನಲ್ಲಿ ಭಸ್ಮವಾದ ಮಹಿಳೆ,ಅವನ ಹೆಂಡಿತಿ ಅಲ್ಲ…….

ಅಂಬೋಲಿಯ ಕಾರಿನಲ್ಲಿ ಭಸ್ಮವಾದ ಮಹಿಳೆ,ಅವನ ಹೆಂಡಿತಿ ಅಲ್ಲ……. ಬೆಳಗಾವಿ – ನಿನ್ನೆ ರಾತ್ರಿ ಅಂಬೋಲಿಯ ಜಲಪಾತದ ಬಳಿ ಸಂಭವಿಸಿದ ಕಾರು ಅಗ್ನಿ ದುರಂತ ಬೆಳಗಾಗುವಷ್ಟರಲ್ಲಿ ಟ್ವಿಸ್ಟ್ ಪಡೆದುಕೊಂಡಿದೆ,ಕಾರಿನಲ್ಲಿ ಸುಟ್ಟು ಭಸ್ಮವಾದ ಮಹಿಳೆ ಆತನ ಹೆಂಡತಿ ಅಲ್ಲ ಎನ್ನುವದು ಗೊತ್ತಾಗಿದೆ. ಅಂಬೋಲಿಯ ಜಲಪಾತದ ಬಳಿ ಕಾರಿನಲ್ಲಿ ಮೃತಪಟ್ಟ ಮಹಿಳೆ ,ಬೆಳಗಾವಿಯ ಕಂಗ್ರಾಳ ಗಲ್ಲಿಯ 41ವರ್ಷದ ರಿಜ್ವಾನಾ ಪಾತರವಾಟ ಎಂದು ಗುರುತಿಸಲಾಗಿದೆ. ಈ ಮಹಿಳೆಯ ಜೊತೆ ಅಂಬೋಲಿಯ ರಿಸಾರ್ಟ್ ಗೆ ಹೋದ ದುಂಡಪ್ಪ …

Read More »

ತೊಗರಿ, ಕಡಲೆ ಖರೀದಿ ಕೇಂದ್ರದಲ್ಲಿ ಅನಧಿಕೃತ ಹಣ ವಸೂಲಿ ಮಾಡಿದರೆ ಕ್ರಿಮಿನಲ್ ಪ್ರಕರಣ: ಜಿಲ್ಲಾಧಿಕಾರಿ ಎಚ್ಚರಿಕೆ

  ಬೆಳಗಾವಿ, ಮಾ.೧೯(ಕರ್ನಾಟಕ ವಾರ್ತೆ): 2019-20ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಬೆಳಗಾವಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರು ಬೆಳೆದ ತೊಗರಿ ಮತ್ತು ಕಡಲೆ ಕಾಳನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಇವರ ಮೂಲಕ ಖರೀದಿಸಲಾಗುತ್ತಿದೆ. ಸದರಿ ಖರೀದಿ ಪ್ರಕ್ರಿಯೆಯಲ್ಲಿ ಕೆಲವು ಸಹಕಾರ ಸಂಘಗಳು ರೈತರಿಂದ ಪ್ರತಿ ಕ್ವಿಂಟಾಲ್‌ಗೆ ರೂ.100 ರಿಂದ 200 ಗಳವರೆಗೂ ಅನಧಿಕೃತ ಹಣ ವಸೂಲಿ ಮಾಡುತ್ತಿರುವುದು ಕೆಲವು ದಿನ ಪತ್ರಿಕೆಗಳಲ್ಲಿ …

Read More »

ಬೆಳಗಾವಿ, ರೈಲು ನಿಲ್ಧಾಣದಲ್ಲಿ ಪ್ಲ್ಯಾಟಫಾರ್ಮ ಟಿಕೆಟ್ ದರ 50 ರೂ….!!!

  ಬೆಳಗಾವಿ- ಕೊರೋನಾ ಸೊಂಕು ಹರಡದಂತೆ ರೈಲ್ವೆ ಇಲಾಖೆಯೂ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ,ರೈಲು ನಿಲ್ಧಾಣಗಳಲ್ಲಿ ಜನಜಂಗುಳಿ ಯನ್ನು ನಿಯಂತ್ರಿಸಲು ಬೆಳಗಾವಿ ರೈಲು ನಿಲ್ಧಾಣದಲ್ಲಿ ಪ್ಲ್ಯಾಟಫಾರ್ಮ ಟಿಕೆಟ್ ದರವನ್ನು ಹೆಚ್ಚಿಸಿದೆ ಬೆಳಗಾವಿ,ಹುಬ್ಬಳ್ಳಿ, ಮತ್ತು ಬಳ್ಳಾರಿ ರೈಲು ನಿಲ್ಧಾಣಗಳಲ್ಲಿ ಪ್ಲ್ಯಾಟಫಾರ್ಮ ಟಿಕೆಟ್ ದರವನ್ನು ಮಾರ್ಚ 31ರವರೆಗೆ 50 ರೂ ಗೆ ಹೆಚ್ಚಿಸಿ ನೈಋತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ರೈಲು ನಿಲ್ಧಾಣಗಳಲ್ಲಿ ಅನವಶ್ಯಕವಾಗಿ ಹೆಚ್ವು ಜನ ಸೇರಬಾರಬಾದು ಎನ್ನುವ ಸದುದ್ದೇಶದಿಂದ …

Read More »

ಬೆಳಗಾವಿಯಲ್ಲಿ ಐಟಿ ಪಾರ್ಕ,ಸದನದಲ್ಲಿ ಇಂದು ಖಾಸಗಿ ವಿದೇಯಕ ಮಂಡನೆ…

ಬೆಳಗಾವಿಯಲ್ಲಿ ಐಟಿ ಪಾರ್ಕ,ಸದನದಲ್ಲಿ ಇಂದು ಖಾಸಗಿ ನಿರ್ಣಯ….. ಬೆಳಗಾವಿ-ಉತ್ತರ ಕರ್ನಾಟಕದಲ್ಲಿ ಲಕ್ಷಾಂತರ ಜನ ಸುಶಿಕ್ಷಿತ,ನಿರುದ್ಯೋಗಿಗಳಿದ್ದು,ಅವರಿಗೆ ಉದ್ಯೋಗ ಕಲ್ಪಿಸಲು ಬೆಳಗಾವಿಯಲ್ಲಿ ಬೃಹತ್ತ್ ಐಟಿ ಪಾರ್ಕ್ ನಿರ್ಮಿಸುವದು,ಯುವಕರಲ್ಲಿ ರಾಷ್ಟ್ರಾಭಿಮಾನ ಹೆಚ್ಚಿಸಲು,ಮಹಾಪುರುಷರ, ಸ್ಮಾರಕಗಳ ಪ್ರತಿರೂಪತೆಯ ಪಳುವಳಿಕಗಳನ್ನು ಒಂದೇ ಸ್ಥಳದಲ್ಲಿ ನಿರ್ಮಿಸುವಂತೆ . ಸರ್ಕಾರವನ್ನು ಒತ್ತಾಯಿಸಿ ಶಾಸಕ ಅಭಯ ಪಾಟೀಲ ಇಂದು ಸದನದಲ್ಲಿ ಎರಡು ಖಾಸಗಿ ನಿರ್ಣಯಗಳನ್ನು ಮಂಡಿಸಲಿದ್ದಾರೆ. ಶಾಸಕ ಅಭಯ ಪಾಟೀಲ ಅವರು ಎರಡು ಖಾಸಗಿ ನಿರ್ಣಯಗಳನ್ನು ಮಂಡಿಸುವ ವಿಷಯ ಸದನದ ಕಾರ್ಯಕಲಾಪಗಳ ಅಜೇಂಡಾದಲ್ಲಿದ್ದು …

Read More »

ಅಂಬೋಲಿ ಜಲಪಾತದ ಬಳಿ ಕಾರಿಗೆ ಬೆಂಕಿ ಸುಟ್ಟು ಭಸ್ಮವಾದ ಬೆಳಗಾವಿಯ ಮಹಿಳೆ ….

  ಸಳಗಾವಿ- ಅಂಬೋಲಿ ಜಲಪಾತದದ ಬಳಿ ಕಾರು ಹೊತ್ತ ಉರಿದು ಕಾರಿನಲ್ಲಿದ್ದ ಮಹಿಳೆ ಸುಟ್ಟು ಭಸ್ಮವಾಗಿದ್ದು ಕಾರಿನ ಚಾಲಕ ಪಾರಾದ ಘಟನೆ ರಾತ್ರಿ 9 ಘಂಟೆ ನಡೆದಿದೆ ಪೀರನವಾಡಿ ಗ್ರಾಮದ ದುಂಡಪ್ಪಾ ಪದ್ಮನ್ನವರ ಮತ್ತು ಅವರ ಪತ್ನಿ ಸಾವಂತವಾಡಿಯಿಂದ ಬೆಳಗಾವಿಗೆ ಬರುತ್ತಿರುವಾಗ ಈ ದುರಂತ ಸಂಭವಿಸಿದೆ ಅಂಬೋಲಿ ಜಲಪಾತದದ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಕಾರು ಚಲಾತಿಸುತ್ತಿದ್ದ ದುಂಡಪ್ಪ ಕಾರಿನಿಂದ ಜಿಗಿದಿದ್ದಾನೆ ಕಾರಿನಲ್ಲಿದ್ದ ದುಂಡಪ್ಪನ ಪತ್ನಿ ಸೀಟ್ ಬೆಲ್ಟ್ ಧರಿಸಿದ್ದರಿಂದ …

Read More »