Breaking News

LOCAL NEWS

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ತಯಾರಿ…..!!!

ಪಳಗಾವಿ ಬರುವ ಮಹಾ ನಗರ ಪಾಲಿಕೆಯ ಚುನಾವಣಾ ಪೂರ್ವಭಾವಿ ಸಭೆಯನ್ನು ನಿನ್ನೆ ಭಾನುವಾರ ಶಾಸಕರ ಕಾರ್ಯಾಲಯದಲ್ಲಿ ನಡೆಸಲಾಯಿತು. ಪಕ್ಷದ ಟಿಕೆಟ್ ಬಯಸುವ ಅಭ್ಯರ್ಥಿಗಳು ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ ಗಳ ಕೆಲಸ ಕಾರ್ಯಗಳ ಬಗ್ಗೆ ಶಾಸಕರ ಗಮನ ಸೆಳೆದರು , ಚುನಾವಣಾ ರೂಪರೇಷೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಿತು. ಪ್ರಥಮ ಬಾರಿಗೆ ಪಕ್ಷದ ಚಿಹ್ನೆ ಯ ಮೇಲೆ ಚುನಾವಣೆ ನಡೆಸುವುದರಿಂದ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಪಕ್ಷದ ” …

Read More »

ಬೆಳಗಾವಿಯ ಡಿ ಮಾರ್ಟ್,ಬಿಗ್ ಬಝಾರ್,ರಿಲಾಯಿನ್ಸ ,ಇತರ ಶಾಪಿಂಗ್ ಮಾಲ್ ಮುಚ್ಚಲು ಪಾಲಿಕೆ ಆದೇಶ

ಬೆಳಗಾವಿ- ಕರೋನಾ ಸೊಂಕು ಹರಡದಂತೆ ಪಾಲಿಕೆ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಬೆಳಗಾವಿಯ ,ಬಿಗ್ ಬಝಾರ್,ರಿಲಾಯಿನ್ಸ್ ಡಿ ಮಾರ್ಟ್ ಸೇರಿದಂತೆ ಇನ್ನಿತರ ಬೃಹತ್ತ್ ಮಳಿಗೆಗಳನ್ನು ಮುಚ್ಚಲು ಪಾಲಿಕೆ ಆದೇಶಿಸಿದ್ದು ಮದ್ಯಾಹ್ನ ಕಾರ್ಯಾಚರಣೆ ಆರಂಭವಾಗಲಿದೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು (SI) ತಂಡ ರಚಿಸಲಾಗಿದ್ದು ಈ ತಂಡ ಮದ್ಯಾಹ್ನ ದಿಂದ ಬೆಳಗಾವಿಯ ,ಡಿ ಮಾರ್ಟ್ ಮಳಿಗಳನ್ನು ,ರಿಲಾಯಿನ್ಸ ಮಳಿಗೆ,ಬಿಗ್ ಬಝಾರ್ ,ಸೇರಿದಂತೆ ಜನ ಹೆಚ್ವಿನ ಸಂಖ್ಯೆಯಲ್ಲಿ ಸೇರುವ ನಗರದ ದೊಡ್ಡ ದೊಡ್ಡ …

Read More »

ಕೋರೋನಾ ಭೀತಿ,ಬೆಳಗಾವಿಯಲ್ಲಿ ಕುಕಟೋದ್ಯಮಕ್ಕೆ ಭಾರೀ ಹೊಡೆತ…!!

ಬೆಳಗಾವಿ- ಕರೋಣಾ ವದಂತಿಗಳ ಕಾಟಕ್ಕೆ ಈಡೀ ಜಗತ್ತೇ ತಲ್ಲಣಗೊಂಡಿದೆ ಆದರೆ ಇದರ ಭೀತಿಯ ಕಾಟಕ್ಕೆ ಕೋಳಿ ಕೂಗಿದ್ದೇ ಹೆಚ್ವು ಅದು ಹೇಗಂತೀರಾ ? ಹಾಗಾದರೆ ಡಿಟೇಲ್ಸ್ ಇಲ್ಲಿದೆ ನೋಡಿ ಬೆಳಗಾವಿ ನಗರದಲ್ಲಿ ದಿನನಿತ್ಯ ಟನ್ ಗಟ್ಟಲೇ ಚಿಕನ್ ಮಟನ್ ಮಾರಾಟವಾಗುತ್ತದೆ ,ಜೊತೆಗೆ ಮೂರ್ನಾಲ್ಕು ಲಾರಿ ಫಿಶ್ ದಿನನಿತ್ಯ ಬೆಳಗಾವಿಗೆ ಬರುತ್ತದೆ .ಕೋರೋನಾ ವೈರಸ್ ಸುದ್ಧಿಗಳು,ವಿವಿಧ ಪೋಸ್ಟ್ ಗಳು, ಟಿಕ್ ಟಾಕ್ ಟಿಂಗಲ್ ಗಳು ಹರಿದಾಡಿದ ನಂತರ,ಬೆಳಗಾವಿಯ ಮಾಂಸಾಹಾರಿ ಉದ್ಯಮ ಹಳ್ಳ …

Read More »

ಪೌರ ಕಾರ್ಮಿಕರ ಕುರಿತು ಶಾಸಕ ಅನೀಲ ಬೆನಕೆ ಕಳಕಳಿ

ಪೌರ ಕಾರ್ಮಿಕರ ಕುರಿತು ಶಾಸಕ ಅನೀಲ ಬೆನಕೆ ಕಳಕಳಿ ಬೆಳಗಾವಿ- ಕರೋನಾ ವೈರಸ್ ಹರಡದಂತೆ ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡಿರುವ ಮುಂಜಾಗೃತಾ ಕ್ರಮಗಳ ಕುರಿತು ಶಾಸಕ ಅನೀಲ ಬೆನಕೆ ಪ್ರಗತಿ ಪರಶೀಲನೆ ನಡೆಸಿದರು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ,ಬೆಳಗಾವಿ ಮಹಾನಗರದಲ್ಲಿ ನೂರಾರು ಪೌರ ಕಾರ್ಮಿಕರು ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವದು ಪಾಲಿಕೆಯ ಜವಾಬ್ದಾರಿ ,ನಗರವನ್ನು ಸ್ವಚ್ಛ …

Read More »

ತಾವೇ ಕೊಲೆ ಮಾಡಿ ಕರಡಿಗೆ ಟೋಪಿ ಹಾಕಿದ, ಖದೀಮರ ರಹಸ್ಯ ಭೇದಿಸಿದ ಪೋಲೀಸರು

ಖಾನಾಪೂರದಲ್ಲಿ ನಡೆದಿದ್ದು ಕರಡಿ ದಾಳಿ ಅಲ್ಲ ಅದೊಂದು ಕೊಲೆ…!!! ಬೆಳಗಾವಿ- ಖಾನಾಪೂರದ ಜಂಗಲ್ ನಲ್ಲಿ ಇತ್ತೀಚಿಗೆ ಕರಡಿ ದಾಳಿಗೆ ಓರ್ವನ ಬಲಿ ಎಂದು ಬಿಂಬಿತವಾಗಿತ್ತು ಖಾನಾಪೂರ ಪೋಲೀಸರ ತನಿಖೆಯಿಂದಾಗಿ ಅಪಾದಿತರ ಗುಟ್ಟು ರಟ್ಟಾಗಿ,ಇದು ಕರಡಿ ದಾಳಿ ಅಲ್ಲ ಇದೊಂದು ಕೊಲೆ ಎನ್ನುವದನ್ನು ಪೋಲೀಸರು ಸಾಬೀತು ಮಾಡಿದ್ದಾರೆ. ಖಾನಾಪೂರ ತಾಲ್ಲೂಕಿನ ಅಮಟೆ ಗ್ರಾಮದಲ್ಲಿ,ತಾನಾಜಿ ಟೋಪಾ ನಾಯಕ 35 ,ಎಂಬ ವ್ಯೆಕ್ತಿಯ ಶವ ಹಳ್ಳದ ಪಕ್ಕ ದೊರೆತ ಬಳಿಕ ಈ ಕುರಿತು ಆತನ …

Read More »

ಬೆಳಗಾವಿಯಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ 9 ಜನ ಬಂಧನ..

ಬೆಳಗಾವಿ- ಬೆಳಗಾವಿ ನಗರದ ಖಾನಾಪೂರ ರಸ್ತೆಯಲ್ಲಿ ಬಿಗ್ ಬಝಾರ್ ಹತ್ತಿರದ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿರುವ ಪೋಲೀಸರು 9 ಜನರನ್ನು ಬಂಧಿಸಿದ್ದಾರೆ. ಟಿಳಕವಾಡಿಯ ಬಿಗ್ ಬಝಾರ್ ಹತ್ತಿರ ಅಪಾರ್ಟ್ಮೆಂಟ್ ವೊಂದರಲ್ಲಿ ಜೂಜಾಟ ಆಡ್ಡೆಯ ಮೇಲೆ ಟೀಳಕವಾಡಿ ಠಾಣೆಯ ಪೋಲೀಸರು ದಾಳಿ ಮಾಡಿ ಇಸ್ಪೀಟ್ ಆಡುತ್ತಿದ್ದ  9ಜನರನ್ನು ಬಂಧಿಸಿ 8550 ರೂಗಳನ್ನು ವಶಪಡಿಸಿಕೊಂಡಿದ್ದಾರೆ ಬಂಧಿತ ಆರೋಪಿಗಳು ಬೈಲಹೊಂಗಲ ತಾಲ್ಲೂಕಿನ ಒಂದೇ ಗ್ರಾಮದವರೆಂದು ತಿಳಿದು ಬಂದಿದೆ.

Read More »

ಬೈಕ್ ಗೆ ಟಿಪ್ಪರ್ ಡಿಕ್ಕಿ ಸ್ಥಳದಲ್ಲೇ ಪತ್ನಿಯ ಸಾವು ಪತಿಗೆ ಗಂಭೀರ ಗಾಯ…

ಟಳಗಾವಿ – ಬೆಳಗಾವಿ ತಾಲ್ಲೂಕಿನ ಕಾವಳೆವಾಡಿ ಗ್ರಾಮದ ಚವಾಟಾ ,ದೇವರ ಜಾತ್ರೆ ಮುಗಿಸಿ ಬೈಕ್ ಮೇಲೆ ಮರಳಿ ಬರುವಾಗ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು ಪತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬಿಜಗರಣಿ ಗ್ರಾಮದ ಇಂದಿರಾ ನಗರದ ಪ್ರಾಥಮಿಕ ಶಾಲೆಯ ಬಳಿ ಇಂದು ಮದ್ಯಾಹ್ನ ಈ ಅಪಘಾತ ಸಂಭವಿಸಿದೆ ಮಂಡೊಳ್ಳಿ ಗ್ರಾಮದ ಮಂದಾ ಭಾರತ ಪಾಟೀಲ ಮತ್ತು ಭಾರತ ಭರಮಾ ಪಾಟೀಲ ಎಂಬ …

Read More »

ಮದುವೆಗೆ ನಾಯಕರ ದಂಡು, ಯಾರು ಏನು ಹೇಳಿದ್ರು ಗೊತ್ತಾ….!!!

ಮುಖ್ಯಮಂತ್ರಿ- ಬಿ-ಎಸ್ ಯಡಿಯೂರಪ್ಪ ಬೆಳಗಾವಿ-ವಿಧಾನ ಪರಿಷತ್ತು ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಮಗಳ ಮದುವೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ, ಹಿರಿಯ ಸಚಿವರುಗಳಾದ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಿ.ಟಿ. ರವಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಆಶೀರ್ವದಿಸಿದರು. ಮದುವೆಗೆ ಆಗಮಿಸಿದ ಮುಖ್ಯಮಂತ್ರಿಯವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕೋರೋಣ ಬಗ್ಗೆ ಎಲ್ಲ …

Read More »

ಪಾದಯಾತ್ರಿಗಳು ವಾಪಸು ಬರುವಂತೆ ಶ್ರೀಶೈಲ ಸ್ವಾಮೀಜಿ ಮನವಿ

  ಬೆಳಗಾವಿ-ದೇಶದಲ್ಲಿ ಭೀಕರವಾದ ಮಾರಕ‌ ರೋಗ ಕೊರೋನಾ ವೈರಸ್ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಶ್ರೀಶೈಲದ ಯುಗಾದಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ತಮ್ಮಯಾತ್ರೆಯನ್ನು ಕೈಗೊಂಡಿರುವುದನ್ನು ಸ್ಥಗೀತಗೊಳಿಸಬೇಕೆಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಹೇಳಿದರು. ಭಾನುವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕರೋನಾ ಸೊಂಕು ಒಂದು ಮಾರಣಾಂತಿಕ ರೋಗಾಣು ಆಗಿದ್ದು, ಸೋಂಕು ತಗುಲಿದ ಒಬ್ಬ ವ್ಯಕ್ತಿಯು ಸಾವಿರ ಜನರನ್ನು ಒಂದೆಡೆ ಸೇರಿದಾಗ ಅವರ ಮಧ್ಯದಲ್ಲಿ ಬಂದು …

Read More »

ಶಾಸಕ ಅನೀಲ ಬೆನಕೆ ನಿರ್ಧಾರ ದಿಟ್ಟ….ದೇವರಾಜ ಅರಸ ಕಾಲೋನಿಗೆ ಪಾಲಿಕೆ ಪಟ್ಟ..,.!!!!

ಶಾಸಕ ಅನೀಲ ಬೆನಕೆ ನಿರ್ಧಾರ ದಿಟ್ಟ….ದೇವರಾಜ ಅರಸ ಕಾಲೋನಿಗೆ ಪಾಲಿಕೆ ಪಟ್ಟ..,.!!!! ಬೆಳಗಾವಿ- ರಾಜ್ಯದ ಗೃಹ ಮಂಡಳಿಯ ಆಧೀನದಲ್ಲಿದ್ದ ,ಬೆಳಗಾವಿಯ ದೇವರಾಜ ಅರಸು ಕಾಲೋನಿಯನ್ನು ಇಂದು ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಯಿತು ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ,ಇಂದು ರಾಜ್ಯ ಗೃಹಮಂಡಳಿಯ ಅಧಿಕಾರಿಗಳ ಸಮ್ಮುಖದಲ್ಲಿ ಪಾಲಿಕೆ ಆಯುಕ್ತ ರಿಗೆ ಹಸ್ತಾಂತರ ಪತ್ರವನ್ನು ಹಸ್ತಾಂತರ ಮಾಡಿದರು . ದೇವರಾಜ ಅರಸು ಕಾಲೋನಿಯ ಅಭಿವೃದ್ಧಿಗೆ ಸರ್ಕಾರದಿಂದ 6 ಕೋಟಿ ರೂ ಮಂಜೂರು …

Read More »

ಬೆಳಗಾವಿಯ ಕ್ಲಬ್ ಗಳಿಗೂ ವಾರದ ರಜೆ

ಬೆಳಗಾವಿಯ ಕ್ಲಬ್ ಗಳಿಗೂ ವಾರದ ರಜೆ ಬೆಳಗಾವಿ- ಕರೋನಾ ವೈರಸ್ ಹರಡದಂತೆ ರಾಜ್ಯ ಸರ್ಕಾರ ಹಲವಾರು ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಇಂದಿನಿಂದ ಮಾರ್ಚ 21 ರ ಮದ್ಯರಾತ್ರಿಯವರೆಗೆ ಕ್ಲಬ್ ಮತ್ತು ಪಬ್ ಗಳನ್ನು ಮುಚ್ವುವಂತೆ ಆದೇಶಿಸಿದೆ ರಾಜ್ಯ ಸರ್ಕಾರದ ತೀರ್ಮಾಣ,ಮತ್ತು ಅಭಕಾರಿ ಇಲಾಖೆಯ ಆದೇಶದಂತೆ ಬೆಳಗಾವಿ ನಗರದ ಎಲ್ಲ ಕ್ಲಬ್ ಗಳು ಒಂದು ವಾರದ ಕಾಲ ಬಾಗಿಲು ಮುಚ್ಚಲಿವೆ ಸೋಶಿಯಲ್ ಕ್ಲಬ್,ಟಿಳಕವಾಡಿ ಕ್ಲಬ್ ,ಬೆಲಗಾಮ್ ಕ್ಲಬ್ ಸೇರಿದಂತೆ ಬೆಳಗಾವಿ …

Read More »

ಕೊರೊನಾ ಕರಿ ನೆರಳು, ಬೆಳಗಾವಿಯಲ್ಲಿ ಗದ್ದಲಕ್ಕೆ ಬ್ರೇಕ್, ಮಾಲ್ ಥೇಟರ್,ಪಾರ್ಕಗಳಿಗೆ ಲಾಕ್….!!!!

ಕೊರೊನಾ ಕರಿ ನೆರಳು, ಬೆಳಗಾವಿಯ ವಹಿವಾಟು ಇಳಿಮುಖ ಬೆಳಗಾವಿ-ಕೋರೋನಾ ಸೊಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಮುಂಜಾಗೃತಾ ಕ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಸದಾಕಾಲ ಜನದಟ್ಟನೆಯಿಂದ,ರಾರಾರಾಜಿಸುತ್ತಿದ್ದ ಕುಂದಾನಗರಿ ಬೆಳಗಾವಿ ಸಂಪೂರ್ಣವಾಗಿ ಶಾಂತವಾಗಿದೆ ಇಂದು ಶನಿವಾರ ಬೆಳಗಾವಿಯಲ್ಲಿ ವಾರದ ಸಂತೆಯ ದಿನವಾದರೂ ರವಿವಾರ ಪೇಠೆಯಲ್ಲಿ ಗ್ರಾಹಕರ ಸಂಖ್ಯೆ ಅತ್ಯಂತ ಕಡಿಮೆಯಾಗಿತ್ತು ,ನಗರದ ಯಾವ ಭಾಗದಲ್ಲೂ ಟ್ರಾಫಿಕ್ ಸಮಸ್ಯೆ ಕಾಣಲಿಲ್ಲ ,ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀಧಿ ಮಾಡುವವರು ಬಾರದ ಕಾರಣ ಮಾರುಕಟ್ಟೆಯಲ್ಲಿ ರಾಶಿ,ರಾಶಿ ತರಕಾರಿ …

Read More »

ಪರೀಕ್ಷೆ ಕ್ಯಾನ್ಸಲ್…1ರಿಂದ 6 ತರಗತಿಗಳಿಗೆ ನಾಳೆಯಿಂದಲೇ ರಜೆ

ಪರೀಕ್ಷೆ ಕ್ಯಾನ್ಸಲ್…1ರಿಂದ 6 ತರಗತಿಗಳಿಗೆ ನಾಳೆಯಿಂದಲೇ ರಜೆ ಬೆಳಗಾವಿ- ಕರೋನಾ ವೈರಸ್ ಹರಡದಂತೆ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು ಪರೀಕ್ಷೆಗಳು ನಡೆಯುತ್ತಿದ್ದರೂ ಅದನ್ನು ರದ್ದುಗೊಳಿಸಿ 1ನೇಯ ತರಗತಿಯಿಂದ 6ನೇಯ ತರಗತಿಗಳಿಗೆ ನಾಳೆಯಿಂದಲೇ ಬೇಸಿಗೆ ರಜೆ ನೀಡಲಾಗಿದೆ 1ರಿಂದ 6ನೇಯ ತರಗತಿಗಳ ಪರೀಕ್ಷೆ ನಡೆಯುತ್ತಿದ್ದರೂ ಪರೀಕ್ಷೆ ರದ್ದು ಪಡಿಸಿ ನಾಳೆಯಿಂದಲೇ ಬೇಸಿಗೆ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ 7 ಮತ್ತು 10 ತರಗತಿಯ ಪರೀಕ್ಷೆಗಳು ನಿಗದಿತ ಅವಧಿಯಲ್ಲಿ …

Read More »

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ* – ಸಚಿವ ರಮೇಶ್ ಜಾರಕಿಹೊಳಿ‌.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಯಾವುದೇ ಪ್ರದೇಶಕ್ಕೂ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಜಲಸಂಪನ್ಮೂಲ ಸಚಿವ *ರಮೇಶ್ ಜಾರಕಿಹೊಳಿ* ತಿಳಿಸಿದರು.  ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಜಲಸಂಪನ್ಮೂಲ ಇಲಾಖೆಯ ಸಿವಿಲ್ ಇಂಜಿನಿಯರಿಂಗ್ ಸಂಘದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿದೆ. ಎಲ್ಲ ಜಲಾಶಯಗಳಲ್ಲೂ ಸಾಕಷ್ಟು ನೀರಿದೆ. ಆ ನೀರನ್ನು ಕಾಪಾಡಿಕೊಂಡು ಸರಿಯಾಗಿ ನಿರ್ವಹಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ …

Read More »

ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ- ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ- ಸತೀಶ್ ಜಾರಕಿಹೊಳಿ ಬೆಳಗಾವಿ- ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿ, ಸಿದ್ದರಾಮಯ್ಯ ಬಣ ಇರುವುದು ಸತ್ಯ ಆದ್ರೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹೇಳಿದರು ಕೆಪಿಸಿಸಿ ಕಾರ್ಯಾದ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಬೆಳಗಾವಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿ ಡಿ.ಕೆ.ಶಿವಕುಮಾರ ಕಾಂಗ್ರೆಸ್ ಅಧ್ಯಕ್ಷರು. ಸಿದ್ದರಾಮಯ್ಯನವರು ಪ್ರಭಾವಿ ನಾಯಕರು. ಪಕ್ಷದಲ್ಲಿ ಈಗ ಮೂವರು ಕಾರ್ಯಾದ್ಯಕ್ಷರು ಇದ್ದಾರೆ ದಲಿತ …

Read More »