Breaking News

LOCAL NEWS

ರೇಷನ್ ವಿತರಣೆಯಲ್ಲಿ ಕಳ್ಳಕತ್ರಿ…..ಲೈಸನ್ಸ್ ಅಮಾನತು

ಬೆಳಗಾವಿ, – ನಗರ ಪ್ರದೇಶದ ನ್ಯಾಯಬೆಲೆ ಅಂಗಡಿ ಸಂಖ್ಯೆ 237 ವಿಲೇಜ ಕಮೀಟಿ ಅಲಾರವಾಡ ಇವರು ಎಪ್ರೀಲ್-2020ನೇ ತಿಂಗಳಲ್ಲಿ ಪಡಿತರ ಆಹಾರದಾನ ನಿಗದಿ ಪಡಿಸಿದ ಪ್ರಮಾಣದಂತ ವಿತರಣೆ ಮಾಡದೇ ಇರುವುದರಿಂದ ಮತ್ತು ಕಾರ್ಡುದಾರರೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳದೇ ಇರುವದು ನಿಗದಿಪಡಿಸಿದ ವೇಳೆಯಂತೆ ನ್ಯಾಯಬೆಲೆ ಅಂಗಡಿ ತೆರೆಯದೇ ಇರುವ ಬಗ್ಗೆ ಸದರ ನ್ಯಾಯಬೆಲೆ ಅಂಗಡಿ ಪಡಿತರ ಚೀಟಿದಾರರ ದೂರಿನ ಮರೆಗೆ ಸಹಾಯಕ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ …

Read More »

ಹೊರಗೆ ಬಂದ್ರೆ ದ್ರೋಣ…. ರಸ್ತೆಗೆ ಬಂದ್ರೆ ಕೊರೋನಾ…. ಅದಕ್ಕೆಮನ್ಯಾಗ ಇರೋಣ…!!

ಹೊರಗೆ ಬಂದ್ರೆ ದ್ರೋಣ…. ರಸ್ತೆಗೆ ಬಂದ್ರೆ ಕೊರೋನಾ…. ಅದಕ್ಕೆಮನ್ಯಾಗ ಇರೋಣ…!! ಬೆಳಗಾವಿ- ಬೆಳಗಾವಿ ನಗರ ಪೋಲೀಸ್ ಮನೆಯಿಂದ ಆಚೆಗೆ ಬಂದು ಗಲ್ಲಿಗಳಲ್ಲಿ ಹರಟೆ ಹೊಡೆಯುವವರ ಮೇಲೆ ನಿಗಾ ಇಡಲು ದ್ರೋಣ ಕ್ಯಾಮರಾಗಳನ್ನು ಉಪಯೋಗಿಸುತ್ತಿದೆ. ಮಾಳ ಮಾರುತಿ ಠಾಣೆಯ ಪೋಲೀಸರು ದ್ರೋಣ ಕ್ಯಾಮರಾ ಗಳನ್ನು ಹಾರಿ ಬಿಟ್ಟು,ಗಾಂದೀ ನಗರ,ಉಜ್ವಲ ನಗರ,ಮಹಾಂತೇಶ ನಗರ ಸೇರಿದಂತೆ ಠಾಣಾ ವ್ಯಾಪ್ತಿಯ ಗಲ್ಲಿ,ಗಲ್ಲಿ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ‌. ದ್ರೋಣ ಕ್ಯಾಮರಾದ ದೃಶ್ಯಗಳನ್ನು ಆಧರಿಸಿ ಕಿಡಗೇಡಿಗಳ ಬೆನ್ನಟ್ಟಿ …

Read More »

ಬೆಳಗಾವಿಯ ಯುವತಿಯ ಮನವಿಗೆ ತಕ್ಷಣವೇ ಸ್ಪಂದಿಸಿದ ಸಿಎಂ- ಮನೆಬಾಗಿಲಿಗೆ ಔಷಧಿ, ಮಾತ್ರೆ ತಲುಪಿಸಿದ ಬೆಳಗಾವಿ ಜಿಲ್ಲಾಧಿಕಾರಿ!

ಬೆಳಗಾವಿ, ಏ.೧೦(ಕರ್ನಾಟಕ ವಾರ್ತೆ): ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಯುವತಿಯೊಬ್ಬರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಚೇರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ನಮ್ಮ ತಾಯಿಗೆ ಮೂತ್ರಕೋಶದ (ಕಸಿ)ಮರುಜೋಡಣೆ ಶಸ್ತ್ರಚಿಕಿತ್ಸೆಯಾಗಿದ್ದು, ಮಾತ್ರೆಗಳು ಖಾಲಿಯಾಗಿವೆ. ಅವರು ನಿತ್ಯವೂ ಸೇವಿಸಬೇಕಾದ ಮಾತ್ರೆಗಳು ಮುಗಿದು ಹೋಗಿರುವುದರಿಂದ ದಯವಿಟ್ಟು ಮಾತ್ರೆಗಳನ್ನು ಪೂರೈಸಿರಿ ಎಂದು ಸೇಕವ್ವ ಅರಭಾವಿ ಅವರು ಮುಖ್ಯಮಂತ್ರಿ ಸಹಾಯವಾಣಿಗೆ ಕರೆ ಮಾಡಿ ಕಣ್ಣೀರಿಟ್ಟಿದ್ದಾರೆ. ಈ ಕರೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸ್ವತಃ ಬೆಳಗಾವಿ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ, …

Read More »

ಕಂಟೈನ್ಮೆಂಟ್ ಝೋನ್ ನಲ್ಲಿ ಮನೆ ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ –

ಬೆಳಗಾವಿ, : ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿ ಸದ್ಯಕ್ಕೆ ಕ್ವಾರಂಟೈನ್ ನಲ್ಲಿ ಇರುವ ಯಾವುದೇ ವ್ಯಕ್ತಿಯನ್ನು ಎಂತಹದೇ ಸಂದರ್ಭದಲ್ಲೂ ಯಾವುದೇ ಕಾರಣಕ್ಕೂ ಇನ್ನೊಬ್ಬರ ಜತೆ ಬೆರೆಯದಂತೆ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳ ಜತೆ ಶುಕ್ರವಾರ(ಏ.೧೦) ನಡೆದ ವಿಡಿಯೋ ಸಂವಾದದಲ್ಲಿ ಅವರು …

Read More »

ಶಾಸಕರು ಹತ್ತಿರ…ಹತ್ತಿರ….ಕಾಯಿಲೆ ದೂರ…ದೂರ….!!!

” ಲಾಕ್ ಡೌನ್ ” ನಿಂದ ಆರೋಗ್ಯ ಸಂಬಂಧಿ ಪರ್ಯಾಯವಾಗಿ “ಪ್ಹೂ- ಕ್ಲಿನಿಕ್ ಭರ್ಜರಿ ಜನಸ್ಪಂದನೆ ಬೆಳಗಾವಿ- ಕಳೆದ ಹತ್ತಾರು ದಿನಗಳಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು, ಬಹಳಷ್ಟು ಖಾಸಗಿ ಆಸ್ಪತ್ರೆಗಳು ಕಳೆದ 15 ದಿನಗಳಿಂದ OPD ಸಂಪೂರ್ಣ ಬಂದಾಗಿರುವುದರಿಂದ ತುರ್ತು ಚಿಕಿತ್ಸೆ ಸಿಗದೇ ತೊಂದರೆ ಅನುಭವಿಸುತ್ತಿರುವರಿಗೆ ಪರ್ಯಾಯವಾಗಿ ಪ್ಹೂ- ಕ್ಲಿನಿಕ್ ನಿಜಕ್ಕೂ ತುಂಬಾ ಸಹಾಯವಾಗುತ್ತಿದೆ. ಸಾಮಾನ್ಯ ಸಣ್ಣ ಸಣ್ಣ ಕಾಯಿಲೆಗಳಾದ ಕೆಮ್ಮು, ನೆಗಡಿ, ಮೈ ಕೈ ನೋವು, …

Read More »

ಮನೆಯಲ್ಲಿ ಇರ್ತಿರಾ…ಅಥವಾ ಜೈಲಿಲ್ಲಿ ಇರ್ತೀರಾ ಡಿಸೈಡ್ ಮಾಡಿ- ಸೀಮಾ ಲಾಟ್ಕರ್ ವಾರ್ನಿಂಗ್

ಮನೆಯಲ್ಲಿ ಇರ್ತಿರಾ…ಅಥವಾ ಜೈಲಿಲ್ಲಿ ಇರ್ತೀರಾ ಡಿಸೈಡ್ ಮಾಡಿ- ಸೀಮಾ ಲಾಟ್ಕರ್ ಬೆಳಗಾವಿ- ಬೆಳಗಾವಿಯಲ್ಲಿ 10 ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಲಾಕಡೌನ ಮತ್ತಷ್ಟು ಬೀಗಿ ಗೊಳಿಸಲಾಗಿದೆ,ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವದನ್ನು ನಿಲ್ಲಿಸಲು ಬೆಳಗಾವಿ ಪೋಲೀಸರು ಕಟ್ಟು ನಿಟ್ಟಿನ ಕ್ರಮ ಜರುಗಿಸಲು ನಿರ್ಧರಿಸಿದ್ದಾರೆ. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಡಿಸಿಪಿ ಸೀಮಾ ಲಾಟ್ಕರ್ ಮನೆಯಲ್ಲಿ ಇರ್ತಿರಾ ಜೈಲಲ್ಲಿ ಇರ್ತಿರಾ ನೀವೇ ನಿರ್ಧರಿಸಿ.ಎಂದು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ. ಬೆಳಗಾವಿ ಡಿಸಿಪಿ ಸೀಮಾ ಲಾಟಕರ …

Read More »

ಸೊಂಕಿತ ಪ್ರದೇಶಗಳು ಸೀಲ್ ಡೌನ್ ,ಸರ್ಕಾರ ಆದೇಶ ಮಾಡಿದ್ರೆ ಇಡೀ ಜಿಲ್ಲೆ ಸೀಲ್ ಡೌನ್ ಮಾಡಲು ತಯಾರಿ…!!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಸೊಂಕಿತ ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದ್ದು,ಸರ್ಕಾರ ಆದೇಶಿಸಿದರೆ ಸಂಪೂರ್ಣ ಜಿಲ್ಲೆಯನ್ನು ಸೀಲ್ ಡೌನ್ ಮಾಡಲು ಬೆಳಗಾವಿ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕುವ ಕೆಲಸ ಭರದಿಂದ ಸಾಗಿದೆ.ಅನವಶ್ಯಕವಾಗಿ ಸುತ್ತಾಡುತ್ತಿರುವವರ ಮೇಲೆ ಪೋಲೀಸರು ಮತ್ತೆ ಲಾಠಿ ಬೀಸಲು ಆರಂಭಿಸಿದ್ದಾರೆ. ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವದರಿಂದ ಬೆಳಗಾವಿ ಜಿಲ್ಲಾಡಳಿ ಸೊಂಕಿತ ಪ್ರದೇಶಗಳಾದ ,ಹಿರೇಬಾಗೇವಾಡಿ,ರಾಯಬಾಗ ಕುಡಚಿ,ಬೆಳಗುಂದಿ ಮತ್ತು ಬೆಳಗಾವಿ …

Read More »

ಎಲ್ಲೆಡೆ ಅದಲ್…ಬದಲ್…ಬೆಳಗಾವಿಯಲ್ಲಿ ಕೈಂಚಿ ಕದಲ್….!!!

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆದ ಜಗದೀಶ್ ಶೆಟ್ಟರ್… ಬೆಳಗಾವಿ- ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಉಸ್ತುವಾರಿ ಸಚಿವರನ್ನು ಅದಲು ಬದಲು ಮಾಡಿ, ಹೊಸ ಪಟ್ಟಿ ಬಿಡುಗಡೆ ಮಾಡಿದ್ದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಗದೀಶ್ ಶೆಟ್ಟರ್ ಅವರೇ ಮುಂದುವರೆದಿದ್ದಾರೆ. ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವ ಜೊತೆಗೆ,ಧಾರವಾಡ ಜಿಲ್ಲೆಯ ಅಧಿಕ ಪ್ರಭಾರ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಇಂದು ಬೆಳಿಗ್ಗೆಯಿಂದ ಜಲಸಂಪನ್ಮೂಲ …

Read More »

199 ಸ್ಯಾಂಪಲ್ ಗಳಲ್ಲಿ 144 ನೆಗೆಟೀವ್,ಹತ್ತು ಪಾಸಿಟೀವ್ 47 ಜನರ ರಿಪೋರ್ಟ್ ನಿರೀಕ್ಷೆಯಲ್ಲಿ

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1461ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದ್ದು ಜಿಲ್ಲೆಯ ಹತ್ತು ಜನರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ.144 ಜನರ ರಿಪೋರ್ಟ ನೆಗೆಟೀವ್ ಬಂದಿದೆ. ಇಂದು ಗುರುವಾರ ಒಂದೇ ದಿನ ಮೂರು ಜನರ ರಿಪೋರ್ಟ್ ಪಾಸಿಟೀವ್ ಬಂದಿದ್ದು ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 10 ಕ್ಕೇರಿದೆ ಬೆಳಗಾವಿ ಜಿಲ್ಲೆಯ ಒಟ್ಟು 47 ಕೊರೋನಾ ಶಂಕಿತರ ರಿಪೋರ್ಟ್ ಬರಬೇಕಾಗಿದೆ. ಹಿರೇಬಾಗೇವಾಡಿಯಲ್ಲಿ ನಾಲ್ಕು ಜನ,ಬೆಳಗುಂದಿ ಒಂದು,ಬೆಳಗಾವಿ …

Read More »

ಸಿಎಂ ಜಂಟಿ ಕಾರ್ಯದರ್ಶಿಯಾಗಿ ಬೆಳಗಾವಿ ಜಿಲ್ಲೆಯ ಗಿರೀಶ್ ಹೊಸೂರ

ಮುಖ್ಯಮಂತ್ರಿಯವರ ಕಾರ್ಯದರ್ಶಿ ಯಾಗಿ ಹೆಚ್ ಆರ್ ಡಿಯ ಜಂಟಿ ಕಾರ್ಯದರ್ಶಿ ಡಾ. ಗಿರಿಶ್ ಹೊಸೂರ್ ಅಧಿಕಾರ ಸ್ವೀಕಾರ ಬೆಂಗಳೂರು. ಏ.9: ಮುಖ್ಯ ಮಂತ್ರಿಯವರ ಕಾರ್ಯದರ್ಶಿ ಯಾಗಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ ಡಾ. ಗಿರೀಶ್ ಸಿ ಹೊಸೂರ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರದ ‌ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಕೇಂದ್ರಸರ್ಕಾರವು ಮುಖ್ಯಮಂತ್ರಿಯವರ ಕಾರ್ಯದರ್ಶಿ ಯಾಗಿ ನೇಮಕವಾಗಲು …

Read More »

ಮತ್ತೆ ಇಬ್ಬರಿಗೆ ಸೊಂಕು ,ಬೆಳಗಾವಿಯಲ್ಲಿ 10 ಕ್ಕೇರಿದ ಕೊರೋನಾ ಸೊಂಕಿತರ ಸಂಖ್ಯೆ

ಬೆಳಗಾವಿಯಲ್ಲಿ 10 ಕ್ಕೇರಿದ ಕೊರೋನಾ ಸೊಂಕಿತರ ಸಂಖ್ಯೆ ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಮತ್ತಿಬ್ಬರ ಶಂಕಿತರ ರಿಪೋರ್ಟ್ ಪಾಸಿಟೀವ್ ಬಂದಿದ್ದು ಸೊಂಕಿತರ ಸಂಖ್ಯೆ 10ಕ್ಕೇರಿದೆ ಬೆಳಿಗ್ಗ ಬಿಡುಗಡೆಯಾದ ರಿಪೋರ್ಟ್ ನಲ್ಲಿ ಪುತ್ರನಿಂದ ತಂದೆ ಸೊಂಕು ಹರಡಿ ಸಂಖ್ಯೆ 8 ಕ್ಕೇರಿತು ಈಗ ಸಂಜೆ ಬಿಡುಗಡೆಯಾದ ಬುಲಿಟೀನ್ ನಲ್ಲಿ ಮತ್ತಿಬ್ಬರಿಗೆ ಸೊಂಕು ಹರಡಿದ್ದು ದೃಡವಾಗಿದ್ದು ಸೊಂಕು ಈಗ ಸೊಂಕಿತನ ತಾಯಿ ಮತ್ತು ಸಹೋದರನಿಗೆ ಹರಡಿದೆ ಎಂದು ತಿಳಿದು ಬಂದಿದೆ.

Read More »

ಗುಟಕಾ ತಿಂದು ರಸ್ತೆಯಲ್ಲಿ ಉಗುಳಿದವನಿಗೆ ಶಿಕ್ಷೆ ಆಗಿದ್ದೇನು ಗೊತ್ತಾ….??

ಬೆಳಗಾವಿ- ನಿಪ್ಪಾಣಿ ನಗರ ಪಾಲಿಕೆಯ ಆಯುಕ್ತರು ನಗರದ ಸ್ವಚ್ಛತಾ ಕಾಮಗಾರಿಯನ್ನು ಪರಶೀಲನೆ ಮಾಡುವ ಸಂಧರ್ಭದಲ್ಲಿ ,ಗುಟಕಾ ತಿಂದು ರಸ್ತೆಯ ಮೇಲೆ ಉಗುಳಿದ ಯುವಕನಿಗೆ ಶಿಕ್ಷೆ ನೀಡಿದ ವಿಡಿಯೋ ಈಗ ಫುಲ್ ವೈರಲ್ ಆಗಿದೆ . ರಸ್ತೆಯ ಮೇಲೆ ಗುಟಕಾ ತಿಂದು ಉಗುಳಿದ ಯುವಕನ ಬೆವರು ಇಳಿಸಿದ ನಿಪ್ಪಾಣಿ ನಗರ ಪಾಲಿಕೆ ಆಯುಕ್ತ ಮಹಾವೀರ ಬೋರಣ್ಣವರ ಗುಟಕಾ ತಿಂದವನ ಶರ್ಟ್ ಕಳಚಿ ಅದೇ ಶರ್ಟ್ ನಿಂದ ರಸ್ತೆಯನ್ನು ಸ್ವಚ್ಛ ಮಾಡಿಸಿದ್ದಾರೆ. ನಗರ …

Read More »

ಶಾಸಕ ಅಭಯ ಪಾಟೀಲರ ಹೊಸ ಟೆಕನಿಕ್ ಬೆಳಗಾವಿಯಲ್ಲಿ ಫ್ಹೋ ಕ್ಲಿನಿಕ್….!!!

ಬೆಳಗಾವಿ- ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸಲು ಶಾಸಕ ಅಭಯ ಪಾಟೀಲ ವಿನೂತನ ವ್ಯೆವಸ್ಥೆ ಮಾಡಲು ನಿರ್ಧರಿಸಿದ್ದಾರೆ.ಖಾಸಗಿ ವೈದ್ಯರ ಸಹಾಯದಿಂದ. ಕ್ಷೇತ್ರದ ವಿವಿದೆಡೆ ಪ್ಹೋ ಕ್ಲಿನಿಕ್ ಗಳನ್ನು ತೆರದು ತಮ್ಮ ಸ್ವಂತ ಖರ್ಚಿನಲ್ಲಿಯೇ ಔಷದಿ ನೀಡಲು ನಿರ್ಧರಿಸಿದ್ದಾರೆ. ಇಂದು ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಅದಕ್ಕೆ ಸ್ಪಂದಿಸಲು ಹಲೋ ಶಾಸಕರೇ ಎಂಬ …

Read More »

ಬೆಳಗಾವಿ ಪಾಲಿಗೆ ಮತ್ತೊಂದು ಸ್ಯಾಡ್ ನ್ಯುಸ್ ಮತ್ತೋರ್ವನ ರಿಪೋರ್ಟ್ ಪಾಸಿಟೀವ್ ,ಸೊಂಕಿತರ ಸಂಖ್ಯೆ 8 ಕ್ಕೆ ಏರಿಕೆ

ಬೆಳಗಾವಿ ಪಾಲಿಗೆ ಮತ್ತೊಂದು ಸ್ಯಾಡ್ ನ್ಯಸ್ ಮತ್ತೋರ್ವನ ರಿಪೋರ್ಟ್ ಪಾಸಿಟೀವ್ ,ಸೊಂಕಿತರ ಸಂಖ್ಯೆ 8 ಕ್ಕೆ ಏರಿಕೆ ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಟ್ ಆಗಿರುವ ಮತ್ತೊಬ್ಬ ವ್ಯೆಕ್ತಿಯ ರಿಪೋರ್ಟ್ ಪಾಸಿಟೀವ್ ಬಂದಿದ್ದು ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 8ಕ್ಕೆ ಏರಿದೆ ಬೆಳಗಾವಿ ಜಿಲ್ಲೆಯಲ್ಲಿ ಈ ಮೊದಲು 7 ಜನರ ರಿಪೋರ್ಟ್ ಪಾಸಿಟೀವ್ ಬಂದಿತ್ತು ಈಗ ಮತ್ತೊಬ್ಬನ ರಿಪೋರ್ಟ್ ಪಾಸಿಟೀವ್ ಬಂದಿದ್ದು ಈತ ಈ ಹಿಂದೆ ಪಾಸಿಟೀವ್ ರಿಪೋರ್ಟ್ ಬಂದಿದ್ದ …

Read More »
Sahifa Theme License is not validated, Go to the theme options page to validate the license, You need a single license for each domain name.