Breaking News

LOCAL NEWS

ಬೆಳಗಾವಿ ಪಾಲಿಕೆ ಆಯುಕ್ತರಾಗಿ ಇಬ್ರಾಹೀಂ ಮೈಗೂರ

ಬೆಳಗಾವಿ- ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯದ ಹಿರಿಯ ಶ್ರೇಣಿಯ ಕೆ ಎ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರ ತೆರುವಾದ ಸ್ಥಾನಕ್ಕೆ ಇಬ್ರಾಹಿಂ ಮೈಗೂರ ಅವರನ್ನು ವರ್ಗಾಯಿಸಲಾಗಿದೆ ಧಾರವಾಡ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿದ್ದ ಇಬ್ರಾಹೀಂ ಮೈಗೂರ ಅವರು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ ಚುನಾವಣಾ ಆಯೋಗದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ

Read More »

ವೀರಯೋಧರ ಹೆಸರಿನಲ್ಲಿ ಸಸಿ ನೆಟ್ಟು ಯೋಧರ ಬಲಿದಾನ ಸ್ಮರಿಸಿದ ಮಹಾಂತೇಶ ನಗರದ ಹುಡುಗರು

ಬೆಳಗಾವಿ-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ವೀರಮರಣ ಹೊಂದಿದ ವೀರಯೋಧರ ಹೆಸರಿನಲ್ಲಿ ಸಸಿನೆಟ್ಟು ಮಹಾಂತೇಶ ನಗರದ ಹುಡುಗರು ವಿನೂತನ ರೀತಿಯಲ್ಲಿ ಶೃದ್ಧಾಂಜಲಿ ಅರ್ಪಿಸಿದರು ಮಹಾಂತೇಶ ನಗರದ ಪ್ರಗತಿ ಗಾರ್ಡನ್ ದಲ್ಲಿ ವೀರಯೋಧರ ಹೆಸರಿನಲ್ಲಿ ಸಸಿ ನೆಟ್ಟು ಗಾರ್ಡನ್ ದಲ್ಲಿಯೇ ಮೌನ ಆಚರಿಸಿ ಶೃದ್ಧಾಂಜಲಿ ಅರ್ಪಿಸಿದರು ವ್ಯುಹ ಪೌಂಡೇಶನ್ ಕರವೇ ಹುಡುಗರು ಕೂಡಿಕೊಂಡು ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದರು ಮಹಾಂತೇಶ್ ನಗರದ ನಿವಾಸಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ವೀರ ಯೋಧರಿಗೆ ಶೃದ್ಧಾಂಜಲಿ ಅರ್ಪಿಸಿದ ಬಳಿಕ …

Read More »

ಸ್ಯಾಂಡಲ್ ವುಡ್ ಹಿರೋ ಯಶ್ ಪುತ್ರಿಗೆ ಚನ್ನಮ್ಮನ ಕಿತ್ತೂರಿನ ತೊಟ್ಟಿಲು

ಬೆಳಗಾವಿ- ವೀರರಾಣಿ ಚನ್ನಮ್ಮಾಜಿಯ ಕಿತ್ತೂರಿನಿಂದ ಸ್ಯಾಂಡಲ್ ವುಡ್ ಹಿರೋ ಯಶ್ ಪುತ್ರಿಗೆ ತೊಟ್ಟಿಲು ರವಾನೆಯಾಗಿದೆ ಕಿತ್ತೂರು ಸಂಸ್ಥಾನಮಠದ ಶ್ರೀಗಳ ಸಾನಿದ್ಯದಲ್ಲಿ ಕಿತ್ತೂರಿನ ಯಶ್ ಅಭಿಮಾನಿಯೊಬ್ಬ ತೊಟ್ಟಿಲು ಸಿದ್ಧಪಡಿಸಿ ಯಶ್ ಪುತ್ರಿಗೆ ಈ ತೊಟ್ಟಿಲನ್ನು ರವಾನಿಸಿ ಈ ಅಭಿಮಾನಿ ಈಗ ನಟ ಅಂಬರೀಶ್ ಅವರ ಆಶಯವನ್ನು ಪೂರ್ಣಗೊಳಿಸಿದ್ದಾನೆ ಜೊತೆಗೆ ರಾಜ್ಯದ ಗಮನ ಸೆಳೆದಿದ್ದಾನೆ ಚನ್ನಮ್ಮನ ಕಿತ್ತೂರು: ಇಲ್ಲಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ಹಾಗೂ ಉದ್ಯಮಿ ನಾರಾಯಣ …

Read More »

ಇಂದು ಸಂಜೆ ಬೆಳಗಾವಿಯ ಎಲ್ಲ ಮುಸ್ಲಿಂ ಜಮಾತ್ ಗಳಿಂದ ಬೃಹತ್ ಕ್ಯಾಂಡಲ್ ಮಾರ್ಚ್

ಬೆಳಗಾವಿ- ಇತ್ತೀಚಿಗೆ ಕಾಶ್ಮೀರದಲ್ಲಿ ಉಗ್ರರ ದಾಳಿಗ ವೀರಮರಣ ಹೊಂದಿದ ವೀರ ಜವಾನರಿಗೆ ಶೃದ್ಧಾಂಜಲಿ ಅರ್ಪಿಸಲು ಬೆಳಗಾವಿ ನಗರದ ಎಲ್ಲ ಮುಸ್ಲೀಂ ಜಮಾತ್ ಗಳ ವತಿಯದ ಬೃಹತ್ ಕ್ಯಾಂಡಲ್ ಮಾರ್ಚ್ ನಡೆಯಲಿದೆ ಇಂದು ಶನಿವಾರ ಸಂಜೆ 6 ಘಂಟೆಗೆ ಬೆಳಗಾವಿ ನಗರದ ಎಲ್ಲ ಜಮಾತ್ ಗಳ ಪದಾಧಿಕಾರಿಗಳು ವಿವಿಧ ಮುಸ್ಲಿಂ ಸಂಘಟನೆಗಳ ನಾಯಕರು ಹಾಗು ಸಾವಿರಾರು ಸಂಖ್ಯೆಯಲ್ಲಿ ಮುಸ್ಲೀಂ ಸಮುದಾಯದವರು ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡು ಚನ್ನಮ್ಮ ವೃತ್ತದಿಂದ ಅಶೋಕ ವೃತ್ತದ ವರೆಗೆ …

Read More »

ವಿಟಿಯು ವಿಭಜನೆ ವಿರುದ್ಧ ಬೆಳಗಾವಿಗರ ಶಕ್ತಿ ಪ್ರದರ್ಶನ- ಯುವಕರಿಂದ ಆಂದೋಲನ

ಬೆಳಗಾವಿ: ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ವಿರೋಧಿಸಿ ಮಠಾಧೀಶರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಶನಿವಾರ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ, ಶಕ್ತಿ ಪ್ರದರ್ಶನ ನಡೆಸಿದರು. ನಗರದ ಬೋಗಾರವೇಸ್‌ದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ, ಕಾಲೇಜು ರಸ್ತೆ, ಚನ್ನಮ್ಮ ವೃತ್ತದ ಮೂಲಕ ಹಾಯ್ದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ವಿಟಿಯುವ ವಿಭಜನೆ ಮಾಡದಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಯಾವುದೇ ಕಾರಣಕ್ಕೂ ವಿಟಿಯು ವಿಭಜನೆ ಮಾಡಬಾರದು ಎಂದು ಪ್ರತಿಭಟನಾಕಾರರು …

Read More »

ಅಭ್ಯರ್ಥಿ ಯಾರೇ ಆಗಲಿ ಪಕ್ಷದ ಗೆಲುವಿಗೆ ಹಗಲಿರಳು ಶ್ರಮಿಸುವೆ – ಲಕ್ಷ್ಮೀ ಹೆಬ್ಬಾಳಕರ

ಲೋಕಸಭೆ ಚುನಾವಣೆ ಘೋಷಣೆಯಾಗದಿದ್ದರೂ ಕಾಂಗ್ರೆಸ್ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಸಿದ್ಧತೆ ಆರಂಭಿಸಿದೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೂತ್ ಮಟ್ಟದ ಕಾರ್ಯಕರ್ತರಿಗೆ ಚುನಾವಣೆಯ ತರಬೇತಿ ಶಿಬಿರ ಏರ್ಪಡಿಸಿ 2019 ರ ರಣರಂಗಕ್ಕೆ ರಣಕಹಳೆ ಊದಿದ್ದಾರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ತರಬೇತಿ ಶಿಬಿರ ಮತ್ತು ಲೋಕಸಭಾ ಚುನಾವಣೆಯ ಸಿದ್ಧತಾ ಶಿಭಿರ ಇಂದು ಬೆಳಗಾವಿಯ ಕೆಪಿಟಿಸಿಎಲ್ ಹಾಲ್ ನಲ್ಲಿ ಜರುಗಿತು ಶಿಭಿರವನ್ನು ಹಿರಿಯ ಕಾಂಗ್ರೆಸ್ …

Read More »

ಬೆಳಗಾವಿ ಉತ್ತರ ,ದಕ್ಷಿಣದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರ್ವ ಆರಂಭ

ಬೆಳಗಾವಿ – ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರ್ವ ಆರಂಭವಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇಂದು ಸಿಬಿಟಿ ಬಸ್ ನಿಲ್ಧಾಣದ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಬೆಳಗಾವಿಯ ನಗರ ಬಸ್ ನಿಲ್ಧಾಣಕ್ಕೆ 32 ಕೋಟಿ ಬೆಳಗಾವಿ ಉತ್ತರ ,ದಕ್ಷಿಣ ಮತಕ್ಷೇತ್ರಗಳಲ್ಲಿ ಸ್ಮಾರ್ಟ್ ರಸ್ತೆ,ಗಳ ನಿರ್ಮಾಣ ಸೈಕಲ್ ಟ್ರ್ಯಾಕ್ ನಿರ್ಮಾಣ ಸೇರಿದಂತೆ ಒಟ್ಟು 264 ಕೋಟಿ ರೂವೆಚ್ಚದ ಕಾಮಗಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ …

Read More »

ಉಗ್ರರ ದಾಳಿ ಖಂಡಿಸಿ ಹುಕ್ಕೇರಿ ಬಂದ್ …ಪ್ರತಿಭಟನೆ

ಬೆಳಗಾವಿ : ಜಮ್ಮು ಕಾಶ್ಮೀರದ ಪುಲಾಮದಲ್ಲಿ ಸಿ.ಆರ್.ಪಿ.ಎಫ್ ಯೋದರ ಮೇಲಿನ ಹಲ್ಲೆ ಖಂಡಿಸಿ ಶನಿವಾರ ಹುಕ್ಕೇರಿ ಪಟ್ಟಣದಲ್ಲಿ ಪ್ರತಿಭಟನೆ. ಬಂದಗೆ ಬೆಂಬಲಿಸಿ ಶನಿವಾರ ಮುಂಜಾನೆಯಿಂದಲೆ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿದ ವ್ಯಾಪಾರಸ್ಥರು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಶಿಕ್ಷಣ ಸಂಸ್ಥೆಗಳು. ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ವಾಹನಗಳು. ಹುಕ್ಕೇರಿಯ ಅಡವಿಸಿದ್ದೇಶ್ವರ ಮಠದಿಂದ ಬಸವ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲ್ಲಿದೆ. ಅಲ್ಲದೆ ಉಗ್ರರ ದಾಳಿ ಖಂಡಿಸಿ ಇಂದು …

Read More »

ದಾಳಿಗೆ ಪ್ರತಿದಾಳಿ ಮಾಡಿ ಪಾಕಿಸ್ತಾನವನ್ನು ದಮನ ಮಾಡಿ

ಬೆಳಗಾವಿ ಭಾರತೀಯ ಸೈನಿಕರ ಮೇಲೆ ಪಾಕಿಸ್ತಾನದ ಉಗ್ರರ ಹಲ್ಲೆಯನ್ನು ಖಂಡಿಸಿ ಶುಕ್ರವಾರ ವಿಶ್ವ ಹಿಂದು‌ ಪರಿಷದ್, ಬಜರಂಗ ದಳದ ಕಾರ್ಯಕರ್ತರು ಚನ್ನಮ್ಮ‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಮ್ಮು ಕಾಶ್ಮೀರದ ಪುಲ್ಮಾದಲ್ಲಿ ಗುರುವಾರ ಮಧ್ಯಾಹ್ನ ಕರ್ತವ್ಯಕ್ಕೆ ಹೊದ ಭಾರತೀಯ ಸೇವೆಯ ವಾಹನದ ಮೇಲೆ ಪಾಕ್ ಬೆಂಬಲಿತ ಉಗ್ರರ ವಾಹನಕ್ಕೆ ಡಿಕ್ಕಿ ಹೊಡೆಸಿ ಭಾರತದ ಶೂರ, ವೀರರ ಸೇನಾನಿಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಇದು ಪಾಕಿಸ್ತಾನ ಭಾರತದ ಮೇಲೆ ಹಲ್ಲೆ …

Read More »

ಕಾಂಗ್ರೆಸ್ ಟಿಕೆಟ್ ಗಾಗಿ ರಮೇಶ್ ಗೆ ರಮೇಶ್ ದುಂಬಾಲು…..!!

ಬೆಳಗಾವಿ- ಲೋಕಸಭೆ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿ ಆಕಾಂಕ್ಷಿಗಳ ಲಾಭಿ ಜೋರಾಗಿಯೇ ನಡೆದಿದೆ ಬೆಳಗಾವಿಯಿಂದ ಎರಡು ಬಾರಿ ಶಾಸಕರಾಗಿದ್ದ ರಮೇಶ್ ಕುಡಚಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸಲು ನಿರ್ಧರಿಸಿದ್ದಾರೆ ಬೆಳಗಾವಿ ಉತ್ತರ ದಕ್ಷಿಣ ಎಂದು ಕ್ಷೇತ್ರ ವಿಂಗಡನೆಯ ಬಳಿಕ ಕಾಂಗ್ರೆಸ್ ಟಿಕೆಟ್ ನಿಂದ ವಂಚಿತರಾಗಿದ್ದ ರಮೇಶ್ ಕುಡಚಿ ದಶಕದ ಅಜ್ಞಾತವಾಸದ ಬಳಿಕ ಈಗ ಮತ್ತೆ ರಂಗಪ್ರವೇಶ ಮಾಡಿದ್ದಾರೆ ಈ ಬಾರಿ ಲೋಕಸಭೆಗೆ ಸ್ಪರ್ದಿಸಲು ತಮಗೆ ಕಾಂಗ್ರೆಸ್ ಟಿಕೆಟ್ ದೊರಕಿಸಿ ಕೊಡುವಂತೆ ರಮೇಶ್ ಕುಡಚಿ …

Read More »

ಬೆಳಗಾವಿಯ ಹುಕ್ಕೇರಿ ಹಿರೇಮಠಕ್ಕೆ ಕಾಶಿ ಜಗದ್ಗುರುಗಳ ಭೇಟಿ

ಬೆಳಗಾವಿ ಎರಡು ಸಾವಿರದ ಮಕ್ಕಳು ವೇಧವನ್ನು ಕಲಿಯುವುದರೊಂದಿಗೆ ಐದನೂರು ಜನ ಹೆಣ್ಣು ಮಕ್ಕಳು ವೇಧವನ್ನು ಕಲಿಯುವದರ ಮೂಲಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಗುರುಕುಲ ಕ್ರಾಂತಿಯನ್ನೆ ಮಾಡಿದೆ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಬಗವತ್ಪಾದರು ಹೇಳಿದರು. ಅವರು ಗುರುವಾರ ನಗರದ ಲಕ್ಷ್ಮೀಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಇಷ್ಟ ಲಿಂಗ ಪೂಜೆ ಸಾಮೂಹಿಕ ರುದ್ರಪಠಣ ಮಹಿಳೆಯರಿಂದ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಗಡಿ …

Read More »

ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಪಿ ಜಿ ಆರ್ ಸಿಂಧ್ಯಾ ಕಣ್ಣು…!!!!

ಬೆಳಗಾವಿ- ಅತೀ ಹೆಚ್ಚು ಮರಾಠಾ ಸಮುದಾಯದ ಮತದಾರರನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಜಿಡಿಎಸ್ ಮುಖಂಡ ಪಿ ಜಿ ಆರ್ ಸಿಂದ್ಯಾ ಅವರ ಕಣ್ಣು ಬಿದ್ದಿದೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಪಿ ಜಿ ಆರ್ ಸಿಂಧ್ಯಾ ಅವರಿಗಾಗಿ ಜೆ ಡಿ ಎಸ್ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಪಟ್ಟು ಹಿಡಿಯಲಿದೆ ಎನ್ನುವ ಸುದ್ಧಿ ಈಗ ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ ಬೆಳಗಾವಿ …

Read More »

ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಜನೆ ಇಲ್ಲ- ಸಿಎಂ ಭರವಸೆ

ಬೆಳಗಾವಿ- ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ವಿಭಜಿಸುವದಿಲ್ಲ ಹಾಸನದಲ್ಲಿ ವಿಶ್ವ ವಿದ್ಯಾಲಯದ ಪ್ರಾದೇಶಿಕ ಕಚೇರಿಯನ್ನು ಮಾತ್ರ ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಶಾಸಕ ಅಭಯ ಪಾಟೀಲರಿಗೆ ಭರವಸೆ ನೀಡಿದ್ದಾರೆ ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವನ್ನು ವಿಭಜನೆ ಮಾಡುವ ನಿರ್ಧಾರವನ್ನು ಕೈಬಿಡುವಂತೆ ಉತ್ತರ ಕರ್ನಾಟಕ ಭಾಗದ 50 ಜನ ಶಾಸಕರು ಸಹಿ ಮಾಡಿದ ಮನವಿ ಅರ್ಪಿಸಲು ಸಿ ಎಂ ಬಳಿ ಶಾಸಕ ಅಭಯ ಪಾಟೀಲ ಮತ್ತು …

Read More »

ಪ್ರೇಮಿಗಳ ದಿನವೇ ಎರಡನೇಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿ

ಬೆಳಗಾವಿ- ಪ್ರೇಮಿಗಳ ದಿನವೇ ಯುವಕನೊಬ್ಬ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎರಡನೇಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಿಗ್ಗೆ 11-30 ಕ್ಕೆ ನಡೆದಿದೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಪ್ಪಾಣಿಯ 18 ವರ್ಷದ. ಶಿವಪ್ರಸಾದ ಪವಾರ ಆತ್ಮಹತ್ಯೆ ಮಾಡುಕೊಂಡ ದುರ್ದೈವಿಯಾಗಿದ್ದಾನೆ ನಿಪ್ಪಾಣಿ ಮೂಲದ ಈ ಯುವಕ ಅನಾಥ ಅರ್ದ ದಿನ ವ್ಯಾಸಂಗ ಮಾಡಿ ಅರ್ದ ದಿನ ಧಾಭಾದಲ್ಲಿ ಕೆಲಸ ಮಾಡಿ ವ್ಯಾಸಂಗ ಮುಂದುವರೆಸಿದ್ದ ಇಂದು ಬೆಳಿಗ್ಗೆ …

Read More »

ನಾಳೆ ಹುಟ್ಟು ಹಬ್ಬ ಇಲ್ಲ, ಮತದಾನದ ದಿನವೇ ಲಕ್ಷ್ಮೀ ಹೆಬ್ಬಾಳಕರ ಜನ್ಮ ದಿನ

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜನ್ಮ ದಿನ ನಾಳೆ ಫೆಬ್ರುವರಿ 14 ಆದರೆ ಲಕ್ಷ್ಮೀ ಹೆಬ್ನಾಳಕರ ನಾಳೆ ಜನ್ಮ ದಿನ ಆಚರಿಸಿಕೊಳ್ಳುತ್ತಿಲ್ಲ ವಿಧಾಸಭೆ ಚುನಾವಣೆಯ ಮತದಾನದ ದಿನ ಮೇ 12 ರಂದು ಜನ್ಮ ದಿನ ಆಚರಿಸುವಂತೆ ಅಭಿಮಾನಿಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿಕೊಂಡಿದ್ದಾರೆ ಲಕ್ಷ್ಮೀ ಹೆಬ್ಬಾಳಕರ ವಿಧಾಸಭೆ ಚುನಾವಣೆಯಲ್ಲಿ ಗೆದ್ದು ಶಾಸಕಿಯಾದ ತಕ್ಷಣ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ಇಂದು ನನಗೆ ರಾಜಕೀಯವಾಗಿ ಮರುಜನ್ಮ ನೀಡಿದ್ದಾರೆ …

Read More »