Breaking News

LOCAL NEWS

ಆಸ್ಟ್ರೇಲಿಯಾದಿಂದ ಮರಳಿ ಬಂದಿದ್ದ ಮಹಿಳೆಯ ಶವ ಪತ್ತೆ.

ಬೆಳಗಾವಿ: ನವೀಲತೀರ್ಥ ಜಲಾಶಯದ ಹಿನ್ನೀರಿನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಈ ಮಹಿಳೆ ಧಾರವಾಡ ಮೂಲದ ಮಹಿಳೆ ಎಂದು ಗೊತ್ತಾಗಿದೆ. ಎರಡು ದಿನದ ಹಿಂದೆಯಷ್ಟೇ ಆಸ್ಟ್ರೇಲಿಯಾದಿಂದ ವಾಪಸ್ ಆಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಸವದತ್ತಿ ತಾಲೂಕಿನ ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ರವಿವಾರ ಶವ . ಧಾರವಾಡ ನಗರದ ಸಪ್ತಾರಬಾವಿ ನಿವಾಸಿ ಪ್ರಿಯದರ್ಶಿನಿ ಲಿಂಗರಾಜ ಪಾಟೀಲ(40) ಮೃತ ಮಹಿಳೆ. ಸವದತ್ತಿ ತಾಲೂಕಿನ ಗೊರವನಕೊಳ್ಳದ ಹಿನ್ನೀರಿನಲ್ಲಿ ಶವ ಪತ್ತೆಯಾಗಿದೆ. ಪ್ರೀಯದರ್ಶಿನಿ ಪತಿ ಲಿಂಗರಾಜ …

Read More »

ಬಾವಿಗೆ ಬಿದ್ದ ನಾಯಿ ರಕ್ಷಿಸಿ ಮಾನವೀಯತೆ ಮೆರೆದ ಫೈಯರ್ ಬ್ರಗೇಡ್.

  ಬೆಳಗಾವಿ – ಬೆಳಗಾವಿ ಮಹಾನಗರದ ಕ್ಯಾಂಪ್ ಪ್ರದೇಶದ ಬಾವಿಗೆ ಬಿದ್ದು ನರಳಾಡುತ್ತಿದ್ದ ನಾಯಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ನಾಯಿಯನ್ನು ರಕ್ಷಣೆ ಮಾಡಿದ್ದಾರೆ. ಬೆಳಗಾವಿಯ ಅಂತೋನಿ ಎಂಬಾತರ ಮನೆಯ ಹಿತ್ತಲಲ್ಲಿ ಸಾಕು ನಾಯಿ ನಿನ್ನೆ ಶನಿವಾರ ಸಂಜೆಯೇ ಬಿದ್ದು ನರಳಾಡುತ್ತಿತ್ತು.ಮನೆಯ ಮಾಲೀಕರು ನಾಯಿಯನ್ನು ಬಾವಿಯಿಂದ ಹೊರತೆಗೆಯಲು ಹರಸಹಾಸ ಪಟ್ಟಿದ್ದಾರೆ. ನಂತರ ಇವತ್ತು ಸಂಜೆ ಬೆಳಗಾವಿಯ ಅಗ್ನಿ ಶಾಮಕ ದಳಕ್ಕೆ ಕರೆ …

Read More »

ಒಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ-ಕೋಡಿಮಠದ ಶ್ರೀಗಳ ಭವಿಷ್ಯ

ಬೆಳಗಾವಿ-ಒಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿ,ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು,ಎಂದುಬೆಳಗಾವಿಯಲ್ಲಿ ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ.ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸುತ್ತೆ.ವಿಷಾನೀಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ.ವಿಪರೀತ ಮಳೆಯಿಂದ ಎರಡು ದೇಶಗಳು ನಾಶ ಆಗುತ್ತೆ.ಭಾರತದಲ್ಲಿ ಜಲಪ್ರಳಯ …

Read More »

ಬೆಳಗಾವಿಯ, ಗೃಹಲಕ್ಷ್ಮೀ ಕಾರ್ಯಕ್ರಮ ಮೈಸೂರಿಗೆ ಶಿಪ್ಟ್ ಆಗಿದ್ಯಾಕೆ…???

ಬೆಳಗಾವಿ – ಬೆಳಗಾವಿ ಜಿಲ್ಲೆಯ ರಾಜಕಾರಣ ಯಾರಿಗೂ ಅರ್ಥವಾಗಲು ಸಾಧ್ಯವೇ ಇಲ್ಲ,ಇಲ್ಲಿ ನಡೆಯೋದು ಹೊಂದಾಣಿಕೆ ರಾಜಕಾರಣ ಹೀಗಾಗಿ ಯಾರು ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ,ಯಾರ ಕಾಲ ಎಳೆಯುತ್ತಾರೆ ಎನ್ನುವದನ್ನು ಕಲ್ಪನೆ ಮಾಡಿಕೊಳ್ಳಲೂ ಸಹ ಸಾಧ್ಯವಿಲ್ಲ.ಯಾಕಂದ್ರೆ ಇಲ್ಲಿ ಉಹೆಗೂ ನಿಲುಕದ ಡರ್ಟಿ ಪಾಲಿಟೀಕ್ಸ್ ನಡೆಯುತ್ತದೆ. ಇದು ಸತ್ಯ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಯಾವಾಗಲೂ ಒಂದು ಮಾತು ಹೇಳ್ತಾರೆ, ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ನನಗೆ ಬೆಳಗಾವಿ ರಾಜಕಾರಣ …

Read More »

ಬೈಕ್ ಕಳ್ಳನ ಬಂಧನ 7 ಬೈಕ್ ವಶ…

ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ನಡೆದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದದಂತೆ ಘಟಪ್ರಭಾ ಪೋಲಿಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಆತನಿಂದ ವಿವಿಧ ಪ್ರಕರಣಗಳಲ್ಲಿ ಕಳ್ಳತನ ಮಾಡಿದ 07 ಮೋಟಾರ್ ಸೈಕಲಗಳನ್ನು ವಶಪಡಿಸಿಕೊಂಡಿದ್ದಾರೆ.

Read More »

ಬೆಳಗಾವಿಯಿಂದ ಮೈಸೂರಿಗೆ ಗೃಹಲಕ್ಷ್ಮೀ ಹೈಜಾಕ್….!!

ಬೆಳಗಾವಿಯಲ್ಲಿ ನಿಗದಿಯಾಗಿದ್ದ ಗೃಹಲಕ್ಷ್ಮೀ ಯೋಜನೆಯ ಮುಖ್ಯ ಕಾರ್ಯಕ್ರಮ ಏಕಾಏಕಿ ಬೆಳಗಾವಿಯಿಂದ ಮೈಸೂರಿಗೆ ಹೈಜಾಕ್ ಆಗಿದೆ.ಈ ಯೋಜನೆಯ ಅನುಷ್ಠಾನದ ವಿಚಾರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಶ್ರಮಿಸುವ ಮೂಲಕ ಪಾಪ್ಯುಲರ್ ಆಗಿದ್ರು,ಬೆಳಗಾವಿಯಲ್ಲಿ ಈ ಕಾರ್ಯಕ್ರಮ ನಡೆದ್ರೆ ಲಕ್ಷ್ಮೀ ಹೆಬ್ಬಾಳಕರ್ ಮತ್ತಷ್ಟು ಪಾಪ್ಯುಲರ್ ಆಗಬಹುದು ಎನ್ನುವ ಕಾರಣಕ್ಕಾಗಿಯೇ ಈ ಕಾರ್ಯಕ್ರಮ ಮೈಸೂರಿಗೆ ಶಿಪ್ಟ್ ಆಗಿದೆ ಎನ್ನಲಾಗಿದೆ. ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದು…. ಬೆಂಗಳೂರು: ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಜುಲೈ …

Read More »

ಬೆಳಗಾವಿಯಲ್ಲಿ ಸರ್ಜರಿ ಸಕ್ಸೆಸ್ ವಾರದಲ್ಲೇ ಪೇಶಂಟ್ ಡಿಸ್ಚಾರ್ಜ್….

ಬೆಳಗಾವಿ-ಹೃದ್ರೋಗದಿಂದ ಬಳಲುತ್ತಿದ್ದ ಸುಮಾರು 87 ವರ್ಷ ವಯಸ್ಸಿನ ಹಿರಿಯ ನಾಗರೀಕರಿಗೆ ತೆರೆದ ಹೃದಯ ಶಸ್ತçಚಿಕಿತೆ (ಕರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ)ಯನ್ನು ನೆರವೇರಿಸುವಲ್ಲಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತçಚಿಕಿತ್ಸೆ ವಿಭಾಗದ ತಜ್ಞವೈದ್ಯರು ಯಶಸ್ವಿಯಾಗಿದ್ದು, ಕೇವಲ 7 ದಿನಗಳಲ್ಲಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಬೆಳಗಾವಿಯ ಭಾಗ್ಯನಗರದ ನಿವಾಸಿ ರಾಜಶೇಖರ್ ಅವರು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಹಿರಿಯ ವ್ಯಕ್ತಿಯಾಗಿದ್ದಾರೆ. ಈ …

Read More »

ಬೆಳಗಾವಿಗೂ ಐ ಲವ್ ಯೂ ಎಂದ ಪಾಲಿಕೆ…!!

ಬೆಳಗಾವಿ- ಕುಂದಾನಗರಿ,ಗಡಿನಾಡು ಗುಡಿ,ಕ್ರಾಂತಿಯ ನೆಲ,ಐತಿಹಾಸಿಕ ಬೆಳಗಾವಿ ನಗರ ಈಗ ಎಲ್ಲರ ಪ್ರೀತಿಗೆ ಪಾತ್ರವಾಗುತ್ತಿದೆ. ಇಲ್ಲಿಯ ಕುಂದಾ ತಿಂದವರು,ಐ ಲವ್ ಬೆಳಗಾವಿ ಎಂದು ಹೇಳ್ತಾ ಇದ್ರು ಕರದಂಟ್ ತಿಂದವರು ಗ್ರೇಟ್ ಬೆಳಗಾವಿ ಅಂದ್ರು,ಇಲ್ಲಿಯ ಕಮಲ ಬಸದಿ ನೋಡಿವರು.ವಂಡರ್ ಬೆಳಗಾವಿ ಅಂದ್ರು ಇಲ್ಲಿಯ ವಾತಾವರಣ ಅನುಭವಿಸಿದ ಅಧಿಕಾರಿಗಳು ಬೆಳಗಾವಿಯಲ್ಲೇ ಮನೆ ಕಟ್ಟಿಕೊಂಡು ಖಾಯಂ ನಿವಾಸಿಗಳಾಗಿ ಐ ಮ್ಯಾರಿ ವಿತ್ ಬೆಳಗಾವಿ ಅಂದ್ರು… ಇಲ್ಲಿಯ ಮರಾಠಾ ರೆಜಿಮೆಂಟ್,ಇಲ್ಲಿಯ ಏರ್ಫೋರ್ಸ್ ನೋಡಿದ ಪ್ರವಾಸಿಗರು ಐ ಸಲ್ಯುಟ್ …

Read More »

ಮರ್ಡರ್ ಆಗಿದ್ದು, ಹಣಕ್ಕೊ ಮೊಬೈಲ್ ನಲ್ಲಿದ್ದ ವಿಡಿಯೋಕ್ಕೋ?? 

ಬೆಳಗಾವಿ- ಇಬ್ಬರೂ ಗೆಳೆಯರೂ ಹೌದು,ಇಬ್ಬರೂ ಕೂಡಿ ಎಮ್ಮೆ ಕಳ್ಳತನ ಮಾಡಿದ್ದು ಹೌದು ಆದ್ರೆ ಇಬ್ಬರ ನಡುವೆ ಲೇವಾದೇವಿಯಲ್ಲಿ ಲಪಡಾ ಆಗಿದ್ದು ಹೌದು. ಆದ್ರೆ ಆತ ಗೆಳೆಯನ ಮರ್ಡರ್ ಮಾಡಲು ಆ ಖಾಸಗಿ ವಿಡಿಯೋ ಕಾರಣವೇ ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. ಅವರಿಬ್ಬರೂ ಪ್ರಾಣ ಸ್ನೇಹಿತರು ಒಳ್ಳೆದು ಮಾಡ್ಲಿ ಕೆಟ್ಟದ್ದು ಮಾಡ್ಲಿ ಇಬ್ಬರೂ ಸೇರಿಯೇ ಮಾಡ್ತಿದ್ರು ಆದ್ರೆ ಇತ್ತಿಚಿಗೆ ಅವರಿಬ್ಬರ ಮಧ್ಯೆ ಹಣದ ವ್ಯವಹಾರಕ್ಕೆ ವೈಷಮ್ಯ ಬೆಳೆದು ನೀನೊಂದು ತೀರ …

Read More »

ವಿಷ ಹಾಕಿದ ಉಪ್ಪೀಟ ನುಂಗಿದದರೂ ಬದುಕಿದ ನಿಂಗಪ್ಪ…!!

ಬೆಳಗಾವಿ-ಉಪ್ಪೀಟದಲ್ಲಿ ವಿಷ ಹಾಕಿ ಗಂಡನಿಗೆ ತಿನಿಸಿ ಗಂಡನನ್ನೇ ಖತಂ ಮಾಡಲು ಖತರ್ನಾಕ್ ಹೆಂಡತಿ ಮಾಡಿದ ಮರ್ಡರ್ ಪ್ಲ್ಯಾನ್ ಫೇಲ್ ಆಗಿದ್ದು ವಿಷಪೂರಿತ ಉಪ್ಪೀಟು ತಿಂದ ಮನೆಯ ಸಾಕು ನಾಯಿ ಮತ್ತು ಬೆಕ್ಕು ಎರಡೂ ಖಲ್ಲಾಸ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಸವದತ್ತಿ ತಾಲ್ಲೂಕಿನ ಗೋರಬಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಂಡನ ಹೆಸರಿನಲ್ಲಿದ್ದ ಎರಡು ಎಕರೆ ಜಮೀನು ಗುಳುಂ ಮಾಡಲು ಹೆಂಡತಿ ತನ್ನ ತಮ್ಮನ ಮಾತು ಕೇಳಿ ಉಪ್ಪೀಟದಲ್ಲಿ …

Read More »

ಅವರು ಹೇಳಿದ್ದನ್ನು ಇವರು ಅಚ್ಚುಕಟ್ಟಾಗಿ ಮಾಡಿದ್ರು…!!

ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಕಚೇರಿ ಗ್ರಂಥಾಲಯ…!! ಬೆಳಗಾವಿ- ಸರ್ಕಾರಿ ಕಚೇರಿಗಳಿಗೆ ಹೋಗಿ ಸಾಹೇಬ್ರು ಯಾವಾಗ ಬರ್ತಾರೆ ಎಂದು ಕಾಯುವದು ಕಷ್ಟದ ಕೆಲಸ, ಯಾಕಂದ್ರೆ ಸಾಹೇಬ್ರು ಚೇಂಬರ್ ಗೆ ಬರೋವರೆಗೆ ಟೈಂ ಪಾಸ್ ಆಗಲ್ಲ.ಹತ್ತು ಸಲ ಗಡಿಯಾರ ನೋಡುವದೇ ಕೆಲಸ.ಈ ರಿತಿಯ ದೃಶ್ಯಗಳು ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ. ಬೆಳಗಾವಿ ಜಿಲ್ಲಾಧಿಕಾರಿಗಳು ಇದಕ್ಕೊಂದು ಅರ್ಥಪೂರ್ಣವಾದ ಉಪಾಯ ಹುಡುಕಿದ್ದು ಈ ಉಪಾಯವನ್ನು ತಮ್ಮ ಕಚೇರಿಯಲ್ಲೇ ಅನುಷ್ಠಾನ ಮಾಡುವದರ ಜೊತೆಗೆ ಬೆಳಗಾವಿ ಜಿಲ್ಲಾ ಪಂಚಾಯತಿ …

Read More »

ಬೆಳಗಾವಿಯಿಂದ ಬಾಲಚಂದ್ರ ಸಾಹುಕಾರ್ ನಿಲ್ಲೋದು ಗ್ಯಾರಂಟಿ…!!

ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾರು ? ಎನ್ನುವ ಚರ್ಚೆ ಜೋರಾಗಿ ನಡೆದಿದ್ದು ರಮೇಶ್ ಜಾರಕಿಹೊಳಿ ಅಥವಾ ಬಾಲಚಂದ್ರ ಜಾರಕಿಹೊಳಿ ಎನ್ನುವ ಮಾತೇ ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡೋದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ ಬೆನ್ನಲ್ಲಿಯೇ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಿಲ್ಲುವಂತೆ ಬಿಗ್ ಆಫರ್ ಕೊಟ್ಟಿದೆ ಎನ್ನುವ …

Read More »

ಇಂದು ಬೆಳಗಾವಿಗೆ ಹೋಮ್ ಮಿನಿಸ್ಟರ್ ಬರ್ತಾರೆ.

ಬೆಳಗಾವಿ- ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಇಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಇಂದು ಶುಕ್ರವಾರ ಬೆಳಗ್ಗೆ 11-00 ಗಂಟೆಗೆ ಬೆಳಗಾವಿಯ ಸಾಂಬ್ರಾ ಏರಪೋರ್ಟ್ ಗೆ ಆಗಮಿಸುವ ಅವರು ರಸ್ತೆಯ ಮೂಲಕ ಧಾರವಾಡ ನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

Read More »

ಬೆಳಗಾವಿ :ವೈಂಡಿಂಗ್ ವಾಯರ್ ಕಳ್ಳರ ಬಂಧನ..

ಬೆಳಗಾವಿ- ಮುರಗೋಡ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವೈಂಡಿಂಗ್ ವಾಯರ್ ಕಳ್ಳತನ ಮಾಡುತ್ತಿದ್ದ ಜಾಲವನ್ನು ಪೋಲೀಸರು ಪತ್ತೆ ಮಾಡಿ ಕಳ್ಳರನ್ನು ಬಂಧಿಸಿದ್ದಾರೆ. ಮುರಗೋಡ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಡೆ ಇಲೆಕ್ಟ್ರಿಕಲ್ ಅಂಗಡಿಗಳು ಕಳುವಾದ ಬಗ್ಗೆ ವರದಿಯಾಗಿತ್ತು, ಪ್ರಕರಣ ದಾಖಲಿಸಿಕೊಂಡ ಪೋಲೀಸರು ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಕಳುವಾದ ವೈಂಡಿಂಗ್ ವಾಯರ್ ಬಂಡಲ್ ಸೇರಿದಂತೆ ಒಟ್ಟು ಮೂರು ಲಕ್ಷ 85 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಢು ಶಕೀಲ ಹುಸೇನಸಾಬ್ ಸಯ್ಯದ್ 24 ಎಂಬಾತನನ್ನು ಬಂಧಿಸಿದ್ದಾರೆ.

Read More »

ಬೆಳಗಾವಿಯಲ್ಲಿ ಕಸ ರಸ್ತೆಗೆ ಚೆಲ್ಲಿದ್ರೆ ದಂಡ ಹಾಕ್ತಾರೆ ಹುಷಾರ್..!!

ಕಸ ವಿಲೇವಾರಿಗೆ ಸಹಕರಿಸಲು ಸಾರ್ವಜನಿಕರಿಗೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಮನವಿ ಬೆಳಗಾವಿ, -ಸಾರ್ವಜನಿಕರು ತಮ್ಮಲ್ಲಿ ಉತ್ಪತ್ತಿಯಾಗುವ ದೈನಂದಿನ ತ್ಯಾಜ್ಯವನ್ನು ಹಸಿ ಕಸ, ಒಣ ಕಸ & ಅಪಾಯಕಾರಿ ತ್ಯಾಜ್ಯವೆಂದು ಬೇರ್ಪಡಿಸಿ ಕಸ ಸಂಗ್ರಹಣಕಾರರಿಗೆ ನೀಡುವುದರೊಂದಿಗೆ ಬೆಳಗಾವಿ ನಗರವನ್ನು ಸ್ವಚ್ಛ ನಗರವನ್ನಾಗಿಸುವಲ್ಲಿ ಹಾಗೂ ಘನತ್ಯಾಜ್ಯ ವಸ್ತು ವಿಲೇವಾರಿ ನಿಯಮ 2016 ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಅವರು ತಿಳಿಸಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ …

Read More »