LOCAL NEWS

ಕಾಲುವೆ ಒತ್ತುವರಿ ದಾಖಲೆಗಳನ್ನು ನೀಡುವಂತೆ ಸಚಿವ ರೋಷನ್ ಬೇಗ್ ಸೂಚನೆ

ಬೆಳಗಾವಿ- ಬೆಳಗಾವಿಯ ಹನುಮಾನ ನಗರದಲ್ಲಿರು ಸರ್ಕಾರಿ ನಾಲೆಯ ಒತ್ತುವರಿ ಕುರಿತು ಕೂಡಲೇ ದಾಖಲೆಗಳನ್ನು ಒದಗಿಸುವಂತೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಪಾಲಿಕೆ ಹಾಗು ಬುಡಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ನಗರದ ಪ್ರವಾಸಿ ಮಂದಿರದಲ್ಲಿ ಪಾಲಿಕೆ ಬುಡಾ.ಹಾಗು ಒಳಚರಂಡಿ ಇಲಾಖೆಗಳ ಪ್ರಗತಿ ಪರಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು ಮುಖ್ಯಮಂತ್ರಿಯ ಸ್ಪಷ್ಠ ನಿರ್ಧೇಶನವಿದ್ದು ಯಾವದೇ ರೀತಿಯ ಪ್ರಭಾವ ಇದ್ದರೂ ಎಲ್ಲ ಬಗೆಯ ಅಕ್ರಮ ಅತಿಕ್ರಮಣಗಳನ್ನು ಮುಲಾಜಿಲ್ಲದೇ ತೆರವುಗೊಳಿಸುವುದಾಗಿ ಸಚಿವ ರೋಷನ್ …

Read More »

ಕನ್ನಡದ ಧ್ವಜ ಚಿಂದಿಯಾದರೂ..ನೋಡದ ಕನ್ನಡ ಮಂದಿ

ಬೆಳಗಾವಿ-ಬೆಳಗಾವಿ ಕನ್ನಡದ ಕ್ರಾಂತಿಯ ನೆಲ ಗಡಿನಾಡ ಗುಡಿ ಬೆಳಗಾವಿಯಲ್ಲಿ ಕನ್ನಡ ಸಂಘಟಣೆಳಿಗೆ ಕೊರತೆ ಇಲ್ಲವೇ ಇಲ್ಲ ಇಲ್ಲಿ ಎಲ್ಲಿ ನೋಡಿದಲ್ಲಿ ಕನ್ನಡದ ಅಭಿಮಾನಿಗಳಿದ್ದಾರೆ ಅನೇಕ ಕನ್ನಡ ಸಂಘಟಣೆಗಳ ಸಂಘರ್ಷದ ಫಲವಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಕನ್ನಡದ ಬಾವುಟ ಹಾರಾಡಿತು ಹಲವಾರು ವರ್ಷಗಳಿಂದ ಹಾರಾಡುತ್ತಿರುವ ಕನ್ನಡಿಗರ ಅಭಿಮಾನದ ಈ ದ್ವಜದ ಸ್ವರೂಪವೇ ಈಗ ಬದಲಾಗಿದೆ,ಕಾಲ ಕಾಲಕ್ಕೆ ದ್ವಜ ಬದಲಾಯಿಸಿ ಹೊಸ ದ್ವಜ ಹಾರಿಸುವವರು ಯಾರೂ ಇಲ್ಲದಂತಾಗಿದೆ ದ್ವಜ ಹರಿದು …

Read More »

18 ರಂದು ಸಚಿವ ರೋಷನ್ ಬೇಗ್ ಬೆಳಗಾವಿಗೆ

ಬೆಳಗಾವಿ: ಆಗಸ್ಟ : ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಹಾಗೂ ಹಜ್ ಸಚಿವರಾದ ಶ್ರೀ ರೋಶನ್ ಬೇಗ್, ಅವರು ಆಗಸ್ಟ 18 ರಂದು ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ಆಗಮಿಸುವರು. ನಂತರ ಬೆಳಿಗ್ಗೆ 10-30 ಗಂಟೆಗೆ ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕೆ.ಯು.ಐ.ಡಿ.ಎಫ್.ಸಿ, ಕ.ನ.ನೀ.ಸ ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುವರು. ಅಂದು ಮಧ್ಯಾಹ್ನ 12 ಗಂಟೆಗೆ ಮಹಾನಗರ ಪಾಲಿಕೆ ಸದಸ್ಯರೊಂದಿಗೆ …

Read More »

ಸಚಿವರ ಸಭೆಗೆ ಗೈರು ಅಧಿಕಾರಿಗಳಿಗೆ ನೋಟಿಸ್…!

ಬೆಳಗಾವಿ: ಆಗಸ್ಟ ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದರಿಂದ ಪ್ರತಿಯೊಂದು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸೆಗಳ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಚಿಕ್ಕೋಡಿ ಉಪ ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿಯನ್ನು ಜನರಿಗೆ ಕಾಣುವಂತೆ …

Read More »

ಭಾರತದ ಯುವ ಶಕ್ತಿ ಸಂಘಟಿತವಾಗಲಿ-ವಿಶ್ವನಾಥ ಪಾಟೀಲ

ಬೆಳಗಾವಿ-ಭಾರತದ ಯುವ ಶಕ್ತಿಯೇ ನವ ಭಾರತ ನಿರ್ಮಾಣದ ಬುನಾದಿಯಾಗಿದ್ದು ಯುವಕರು ದೇಶಾಭಿಮಾನದೊಂದಿಗೆ ಭಾರತೀಯ ಸಂಸ್ಕøತಿಯ ರಕ್ಷಣೆ ಮಾಡಬೇಕೆಂದು ಬೈಲಹೊಂಗಲ ಶಾಸಕ ವಿಶ್ವನಾಥ ಪಾಟೀಲ ಕರೆ ನೀಡಿದರು ಬೆಳಗಾವಿ ನಗರದ ಜೀರಗೆ ಸಭಾಭವನದಲ್ಲಿ ಬಸವ ಸೈನ್ಯ ಸ್ವಾತಂತ್ರ್ಯೋತ್ವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯೋತ್ವದ ಸಂಧರ್ಭದಲ್ಲಿ ನಾವೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು ಅವರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ ಎಂದರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ …

Read More »

ಸರ್ವ ಸಮಾಜಗಳ ಸ್ಮಶಾನಕ್ಕೆ ಭೂಮಿ ಕೊಡಿ-ಹೆಬ್ಬಾಳಕರ

ಬೆಳಗಾವಿ-ಬೆಳಗಾವಿ ತಾಲೂಕಿನ ಬಳಿಯ ಮುತ್ನಾಳ ಗ್ರಾಮದ ಗ್ರಾಮಸ್ಥರಿಗೆ ಸ್ಮಶಾನ ಭೂಮಿ ಇಲ್ಲದ್ದರಿಂದ ಬಹಳ ತೊಂದರೆಯಾಗಿದೆ. ಜಿಲ್ಲಾಡಳಿತ ಸ್ಮಶಾನಕ್ಕಾಗಿ ಕನಿಷ್ಠ ಒಂದು ಎಕರೆ ಜಮೀನು ಗ್ರಾಮದಲ್ಲಿ ಸ್ಮಶಾನಕ್ಕಾಗಿ ಕೊಡಿಸಬೇಕೆಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಗ್ರಾಮಸ್ಥರೊಂದಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು. ಡಾ. ಇಟ್ನಾಳ ಪ್ರತಿಕ್ರಯಿಸಿ ಸದರಿ ಉದ್ದೇಶಕ್ಕೆ ಭೂಮಿ ಖರೀದಿ ಮಾಡಿ ವಿತರಿಸಲು ಜಿಲ್ಲಾಧಿಕಾರಿ ಎನ್. ಜಯರಾಮ ಅವರೊಂದಿಗೆ ಚರ್ಚಿಸಿ …

Read More »

ಜೈಲು ಆತ್ಮಶೋಧನೆಯ ಕೇಂದ್ರ-ಎಸ್ಪಿ ರವಿಕಾಂತೇಗೌಡ

ಜೈಲು ಆತ್ಮಶೋಧನೆಯ ಕೇಂದ್ರ-ಎಸ್ಪಿ ರವಿಕಾಂತೇಗೌಡ ಬೆಳಗಾವಿ, ಆಗಸ್ಟ್ 15(ಕರ್ನಾಟಕ ವಾರ್ತೆ): ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿದ್ದ 35 ಬಂದಿ ನಿವಾಸಿ(ಕೈದಿ)ಗಳಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸನ್ನಡತೆಯ ಆಧಾರದ ಮೇಲೆ ಇಂದು ಸ್ವತಂತ್ರಗೊಳಿಸಲಾಯಿತು. ಕಾರಾಗೃಹದ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೈದಿಗಳಿಗೆ ಬಿಡುಗಡೆ ಪ್ರಮಾಣಪತ್ರವನ್ನು ವಿತರಿಸಿ, ಬೀಳ್ಕೊಡಲಾಯಿತು. ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶರಾದ ಅಶೋಕ ನಿಜಗಣ್ಣವರ ಅವರು, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು, “ಭಾರತೀಯ ನ್ಯಾಯವ್ಯವಸ್ಥೆಯಲ್ಲಿ …

Read More »

ಗೋಕಾಕ ಮಿಲ್ ಕಾರ್ಮಿಕನ ಮೇಲೆ ಹಲ್ಲೆ

ಗೋಕಾಕ ಅ, 15 ;- ಇಲ್ಲಿಗೆ ಸಮೀಪದ ಗೋಕಾಕ ಟೆಕ್ಸ್‍ಟೈಲ್ ಮಿಲ್ಲಿನ ಕಾರ್ಮಿಕರ ದಿನದಿನಕ್ಕೆ ಜಟೀಲಗೊಳ್ಳುತ್ತ ನಡೆದಿದ್ದು, ಸೋಮವಾರದಂದು ಸಂಜೆಯಷ್ಟೇ ಮಿಲ್‍ನ ಕಾರ್ಮಿಕನನ್ನು 8 ರಿಂದ 10 ಜನರ ಗುಂಪೊಂದು ಹಲ್ಲೆ ನಡೆಸಿ ತೀವೃ ಗಾಯಗೊಳಿಸಿದ ಘಟನೆ ಗೋಕಾಕ ಫಾಲ್ಸ್‍ನಲ್ಲಿ ನಡೆದಿದೆ. ಫಾಲ್ಸ್‍ನ 8 ನೇ ಓಣಿಯ ರಹವಾಸಿ ಮಿಲ್ಲಿನ ಕಾರ್ಮಿಕನಾದ ಇಬ್ರಾಹಿಮ್ ಪಾಶ್ಚಾಪೂರ ಎಂಬಾತನ ಮೇಲೆ 8 ರಿಂದ 10 ಜನರ ಗುಂಪೊಂದು ಹಠಾತ್ತನೇ ಹಲ್ಲೆ ನಡೆಸುತ್ತಿದ್ದಾಗ ಈತನ …

Read More »

ಕಳಪೆ ಕಾಮಗಾರಿ ನಡೆಸದ ಗತ್ತಿಗೆದಾರ ಕಪ್ಪು ಪಟ್ಟಿಗೆ-ಜಾರಕಿಹೊಳಿ

ಬೆಳಗಾವಿ -ಬೆಳಗಾವಿ ನಗರದಲ್ಲಿ 300ಕ್ಕೂ ಹೆಚ್ಚು ಅಭವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಇದೇ ವಾರದಲ್ಲಿ ನಗರ ಪ್ರದಕ್ಷಣೆ ಮಾಡಿ ಕಾಮಗಾರಿಗಳ ಪರಶೀಲನೆ ನಡೆಸುತ್ತೇನೆ ಕಳಪೆ ಕಾಮಗಾರಿಗಳು ನಡೆದಿದ್ದರೆ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ ಬೆಳಗಾವಿಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು ಮಂತ್ರಿಯಾಗಿ ಎರಡು ತಿಂಗಳಾಗಿದೆ ಮುಖ್ಯಮಂತ್ರಿಗಳನ್ನು ಬೇಟಿಯಾಗಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ …

Read More »

ರಾಕಸಕೊಪ್ಪ ಭರ್ತಿ ಪಾಲಿಕೆಯಿಂದ ಬಾಗಿನ ಅರ್ಪಣೆ

ಬೆಳಗಾವಿ- ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು ಮಂಗಳವಾರ ಮಹಾಪೌರ ಸರೀತಾ ಪಾಟೀಲ ಜಲಾಶಯದಲ್ಲಿ ಬಾಗಿ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿದರು ಉಪ ಮಹಾಪೌರ ಸಂಜಯ ಶಿಂದೆ ಕಿರಣ ಸೈನಾಯಿಕ ಜಯಶ್ರಿ ಮಾಳಗಿ ಆಯುಕ್ತ ಜಿ ಪ್ರಭು ಮೊದಲಾದವರು ಉಪಸ್ಥಿತರಿದ್ದರು ಈ ಸಂಧರ್ಭದಲ್ಲಿ ಮಾತನಾಡಿದ ಮೇಯರ್ ಸರೀತಾ ಪಾಟೀಲ ಬೆಳಗಾವಿ ಪರಿಸರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿದೆ ಬೆಳಗಾವಿ ನಗರದ ಜಲದ ಮೂಲಗಳಾಗಿರುವ ರಾಕಸಕೊಪ್ಪ ಜಲಾಶಯ ಹಾಗು …

Read More »

ದಾಸೋಹದ ಹಣ ಗುಳುಂ ಮಾಡಿದ ಆಧಿಕಾರಿಯ ವಿರುದ್ಧ ದೂರು

ಬೆಳಗಾವಿ-ಸರ್ಕಾರಿ- ಶಾಲೆ ಅಡುಗೆ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಗೌರವಧನ ಪಾವತಿಸು ಎಂದರೆ, ಆತ ತನ್ನ ಖಾತೆಗೇ ಹಣ ಜಮಾ ಮಾಡಿಕೊಂಡು ಅಕಾರಿಗಳ ತಲೆ ಕೆಡಿಸಿದ ಅಕ್ಷರ ದಾಸೋಹ ವಿಭಾಗದ ಪ್ರಥಮ ದರ್ಜೆ ಸಹಾಯಕನ (ಎಸ್‍ಡಿಎ) ವಿರುದ್ಧ ಚಿಕ್ಕೋಡಿ ಪೆÇಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ. ಎಸ್‍ಡಿಎ ಆರ್.ಡಿ. ಇಂಗಳೆ ವಿರುದ್ಧ ಚಿಕ್ಕೊಡಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕಿ ಎನ್.ಎಂ. ಪಿಂಜಾರ್ ಅವರು ದೂರು ನೀಡಿದ್ದಾರೆ. ಇಲಾಖಾ …

Read More »

ಸ್ವಾತಂತ್ರ್ಯೋತ್ಸವ -ಬೆಳಗಾವಿಯಲ್ಲಿ ಹೈ-ಅಲರ್ಟ

ಬೆಳಗಾವಿ-ಮೈಸೂರಿನ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ವಾತಂತ್ರ್ಯೋತ್ಸವ ದಿನದಂದು ಬೆಳಗಾವಿ ಮಹಾನಗರ ಹಾಗೂ ಜಿಲ್ಲೆಯಾದ್ಯಂತ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ ಅವರು ತಿಳಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಸರ್ಕಾರ ಸೂಚನೆ ನೀಡಿರುವುದರಿಂದ ಶನಿವಾರ(ಆ.13) ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು ಎಲ್ಲ ತಾಲ್ಲೂಕುಗಳ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಖನ್ ಸ್ಪರ್ದೆ ಇಲ್ಲ-ಸಹೋದರರ ಸ್ಪಷ್ಠನೆ

ಬೆಳಗಾವಿ: ಮುಂಬರುವ 2018 ರ ವಿಧಾನ ಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಟಿಕೇಟ್ ಖಚಿತ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು. ಬೆಳಗಾವಿ ತಾಲೂಕಿನ ಹಿರೇಭಾಗೇವಾಡಿ ಗ್ರಾಮದ ಫಡಿ ಬಸವೇಶ್ವರ ದೇವಸ್ಥಾನದ ಕಲ್ಯಾಣಮಂಟಪದಲ್ಲಿ ಶನಿವಾರ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಘಟಕದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು, ವಿಧಾನಪರಿಷತ್ ಸದಸ್ಯರು, …

Read More »

ಬೆಳಗಾವಿಯಲ್ಲಿ ರಸ್ತೆ ಅಗಲೀಕರಣ ಮತ್ತೆ ಆರಂಭ

ಪಾಲಿಕೆ ಅಧಿಕಾರಿಗಳಿಂದ ಇಂದು ನಗರದ ದರಬಾರ್ ಗಲ್ಲಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಆರಂಭ. ಮರಾಠಾ ಮಂಡಳ ಕಾಲೇಜಿನಿಂದ, ಚವಾಟ ಗಲ್ಲಿ, ದರಬಾರ ಗಲ್ಲಿ, ಬೆಂಡು ಬಜಾರ್, ಆಜಾದ್ ಗಲ್ಲಿ ಮೂಲಕ ಕರ್ನಾಟಕ ಚೌಕ್ ವರೆಗೆ ಮುಂದುವರೆಯಲಿದೆ. ಶನಿವಾರ ಬೆಳಿಗ್ಗೆ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ಅಗಲೀಕರಣ ಕಾಮಗಾರಿ ಆರಂಭಿಸಲಾಯಿತು. ಈ ಹಿಂದೆ ಪಾಲಿಕೆ ಅಧಿಕಾರಿಗಳು ಅಗಲೀಕರಣಕ್ಕೆ ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ಶಾಸಕ ಫಿರೋಜ್ ಸೇಠ್ ವ್ಯಾಪಾರಿಗಳ ಸಭೆಯಲ್ಲಿ ಕರೆದು ಅಭಿವೃದ್ಧಿಗೆ ಸಹಕರಿಸುವಂತೆ …

Read More »

ಶನಿವಾರ ಹಿರೇಬಾಗೇವಾಡಿಯಲ್ಲಿ ಜಿಲ್ಲಾ ಮಂತ್ರಿಗಳ ಸತ್ಕಾರ

ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಘಟಕದ ವತಿಯಿಂದ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಆ.13 ರಂದು ಬೆಳಗ್ಗೆ 11 ಗಂಟೆಗೆ ತಾಲೂಕಿನ ಹಿರೇಬಾಗೇವಾಡಿಯ ಶ್ರೀ ಫಡಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಬಡೇಕೊಳ್ಳಮಠದ ನಾಗೇಂದ್ರ ಸ್ವಾಮೀಜಿಗಳು, ಮುತ್ನಾಳ ಕೇದಾರ ಶಾಖಾಪೀಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು, ಹಿರೇಬಾಗೇವಾಡಿಯ ದರ್ಗಾ ಅಜ್ಜನವರು ಮತ್ತು ಹಿರೇಬಾಗೇವಾಡಿಯ ಕಲ್ಲಯ್ಯಾ ಸ್ವಾಮೀಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಹಿರೇಬಾಗೇವಾಡಿ ಬ್ಲಾಕ್ ಅಧ್ಯಕ್ಷ ಸಿ.ಸಿ.ಪಾಟೀ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ …

Read More »