Breaking News

LOCAL NEWS

ಬೆಳಗಾವಿ ಲಾಡ್ಜ್ ಮೇಲೆ ಪೋಲೀಸರ ದಾಳಿ ನಾಲ್ವರ ಬಂಧನ…

ಬೆಳಗಾವಿ-ಹಿಂಡಲಗಾ- ಸುಳಗಾ ರಸ್ತೆಯಲ್ಲಿರುವ ಅಂಬಿಕಾ ಲಾಡ್ಜ್ ಆ್ಯಂಡ್ ಬೋರ್ಡಿಂಗ್ ಮೇಲೆ ದಾಳಿ ಮಾಡಿರುವ ಮಹಿಳಾ ಠಾಣೆಯ ಪೋಲೀಸರು,ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಮಹಿಳಾ ಠಾಣೆಯ ಪಿಐ ಶ್ರೀದೇವಿ ಪಾಟೀಲ ನೇತ್ರತ್ವದ ಪೋಲೀಸರ ತಂಡ ಕಾರ್ಯಾಚರಣೆ ನಡೆಸಿ ಅಂಬಿಕಾ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿ,ಹಲವಾರು ಜನ ನೊಂದ, ಯುವತಿಯರ,ಮಹಿಳೆಯರ ರಕ್ಷಣೆ ಮಾಡಿದ್ದಾರೆ. ದಾಳಿ ಮಾಡಿರುವ ಪೋಲೀಸರು,1) ಸೋಮನಾಥ ಗವಳಿ ಸಾ.ಬೆಳಗಾವಿಯ ಗವಳಿಗಲ್ಲಿ 2) ರಾಹುಲ್ ಪಾಟೀಲ ಶಿವಾಜಿಗಲ್ಲಿ ಕಂಗ್ರಾಳಿ …

Read More »

ಘಟಪ್ರಭಾದಲ್ಲಿ ಮೀನುಗಾರ ನಾಪತ್ತೆ, ಯಡೂರಿನಲ್ಲಿ ಚಿರತೆ ದಾಳಿ..

ಪ್ರವಾಹದಲ್ಲಿ ಕೊಚ್ಚಿ ಹೋದ ಮೀನುಗಾರ… ಬೆಳಗಾವಿ- ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರನೊಬ್ಬ ಪ್ರವಾಹದಲ್ಲಿ ಕೊಚ್ವಿ ಹೋಗಿರುವ ಘಟನೆ ಶಿಂಗಳಾಪೂರದಲ್ಲಿ ನಡೆದಿದೆ. ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಗೋಕಾಕಿನ 40 ವರ್ಷದ ಪರಶುರಾಮ ರಾಜು ಜಾಲಗಾರ ನಾಪತ್ತೆಯಾಗಿದ್ದಾನೆ‌‌. ಪೋಲೀಸರು ಸ್ಥಳಕ್ಕೆ ದೌಡಾಯಿಸಿ ನಾಪತ್ತೆಯಾಗಿರುವ ಮೀನುಗಾರನ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಚಿಕ್ಕೋಡಿಯ ಯಡೂರನಲ್ಲಿ ಚಿರತೆ ದಾಳಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಯಡೂರನಲ್ಲಿ ಚಿರತೆ ಕಾಣಿಸಿಕೊಂಡಿದ್ದು,ಈ ಚಿರತೆ ಕುರಿ ಮತ್ತು …

Read More »

ನಮ್ಮ ಸವದಿ ಸಾಹುಕಾರ್ ಸಿಎಂ ಆಗ್ತಾರಂತೆ ಹಿಗೊಂದು ಅಡಿಯೋ ವೈರಲ್…!!

ಬೆಳಗಾವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಡಿಸಿಎಂ ಹುದ್ದೆಗೇರಿ ಅಚ್ಛರಿ ಮೂಡಿಸಿದವರು‌ ಲಕ್ಷ್ಮಣ್ ಸವದಿ. ಇದೀಗ ಲಕ್ಷ್ಮಣ್ ಸವದಿ ಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆ ಎಂಬ ಗುಸು ಗುಸು ರಾಜಕಾರಣದಲ್ಲಿ ‌ಸದ್ದು ನಡೆದೆ. ಲಕ್ಷ್ಮಣ ಸವದಿ ಬೆಂಬಲಿಗರೂ ಕೂಡ ಸವದಿ ಸವ್ಕಾರ್ ಮುಂದಿನ ಸಿಎಂ ಎಂದು ಮಾತನಾಡಿದ ಆಡಿಯೋ ಸಾಮಾಜಿಕ ‌ಜಾಲತಾಣಗಳಲ್ಲಿ ವೈರಲ್ ಆಗ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೇರಿ ಒಂದು ವರ್ಷವಾಗಿದೆ. ಇದಕ್ಕಾಗಿ ಬಿಜೆಪಿ ‌ನಾಳೆ ಜನೋತ್ಸವ ಕಾರ್ಯಕ್ರಮ …

Read More »

ಬೊಮ್ಮಾಯಿ ಹೇಳಿದ ಹಾಗೆ,ಚಂದರಗಿ ಮಾಡಿದ್ರು…!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಖ್ಯಾತ ಸಾಹಿತಿಗಳ,ಸಂಗೀತಗಾರರ,ರಂಗ ಕಲಾವಿದರ ಹೆಸರುಗಳಲ್ಲಿ ಪ್ರತಿಷ್ಠಾನಗಳನ್ನು ಸ್ಥಾಪಿಸಿ ಸರಕಾರದ ಅನುದಾನ ಪಡೆಯಲು ರಾಜ್ಯ ಸರಕಾರದ ಮೇಲೆ ಒತ್ತಡ ತರಲು ಇಂದು ಮಂಗಳವಾರ ಮುಂಜಾನೆ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಾಹಿತಿಗಳ,ಚಿಂತಕರ ಸಭೆಯಲ್ಲಿ ನಿರ್ಧರಿಸಲಾಯಿತು. ಖ್ಯಾತ ರಂಗಭೂಮಿ ಕಲಾವಿದ ದಿ.ಏಣಗಿ ಬಾಳಪ್ಪ,ಖ್ಯಾತ ಹಿಂದೂಸ್ತಾನಿ ಗಾಯಕ ದಿ.ಕುಮಾರ ಗಂಧರ್ವ,ಖ್ಯಾತ ಕಾದಂಬರಿಕಾರ ದಿ.ಕೃಷ್ಣಮೂರ್ತಿ ಪುರಾಣಿಕ,ಖ್ಯಾತ ಕವಿ ದಿ.ಡಿ.ಎಸ್. ಕರ್ಕಿ ಮತ್ತು ಖ್ಯಾತ ಸಾಹಿತಿ ದಿ.ಎಸ್.ಡಿ. ಇಂಚಲ ಅವರ ಹೆಸರುಗಳಲ್ಲಿ ಪ್ರತಿಷ್ಠಾನಗಳನ್ನು …

Read More »

ಬೆಳಗಾವಿ ಪೋಲೀಸರಿಂದ ಭರ್ಜರಿ ಬೇಟೆ,ಬೆಚ್ಚಿ ಬಿತ್ತು ಆಕ್ರಮ ಅಕ್ಕಿ ಪೇಟೆ…!!

ಬೆಳಗಾವಿ-ಬಡವರ ಅನ್ನಭಾಗ್ಯದ ಅಕ್ಕಿಯನ್ನು ಆಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಹಚ್ಚಿದ್ದು,ಬರೊಬ್ಬರಿ 31 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸರಿಂದ ಸುಮಾರು 7 ಲಕ್ಷ ಮೌಲ್ಯದ 31 ಟನ, 320 ಕ್ವಿಂಟಲ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದಿರುವ ಪೋಲೀಸರು ತನಿಖೆ ಶುರು ಮಾಡಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಬೆಳಗಾವಿ ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ 1) ವಾಸಿಮ ಮುಜಾವರ ಸಾ. ಹುಂಚ್ಯಾನಟ್ಟಿ …

Read More »

ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಶುರುವಾಯ್ತು…!!

ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಯಮಕನಮರಡಿ: ಯಮಕನಮರಡಿ ವಿಧಾನ ಸಭಾ ಕ್ಷೇತ್ರದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕೆ ಸೇರ್ಪಡೆಗೊಂಡರು ಕೋಚರಿ ಗ್ರಾಮದ ಪಿಂಟುಗೌಡ ಪಾಟೀಲ ಈರಣ್ಣ ನಾಯಿಕ ಅಮೀತ ನಾಯಿಕ ಮಂಜುನಾಥ ಮಗದುಮ್ಮ ಮಹಾಂತೇಶ ಘೋಡಗೇರಿ ಅರುಣ ಹಿಪ್ಪರಗಿ ರಾಹುಲ ಲೋಳಸೋರಿ ಕಿರಣ ಪಾಟೀಲ ಹಾಗೂ ಯುವಕರು ಸೇರ್ಪಡೆಯಾದರು, ಕೆಪಿಸಿಸಿ ಕಾರ್ಯದರ್ಶಿ ಸತೀಶ …

Read More »

ಲಿಫ್ಟ್ ಕೊಡಲು ಹೋಗಿ, ಜೈಲಿಗೆ ಶಿಪ್ಟ್ ಆದ ಖದೀಮ…!!!

ಬೆಳಗಾವಿ-ದರೋಡೆ ಮಾಡುವವರು ಈಗ ಹೈಟೆಕೆ ಆಗಿದ್ದಾರೆ, ಜನರನ್ನು ನಂಬಿಸುವ ಟೆಕ್ನಿಕ್ ಬದಲಾಯಿಸಿದ್ದಾರೆ,ಮಹಿಳೆಯೊಬ್ಬಳಿಗೆ ಲೀಫ್ಟ್ ಕೊಡುವದಾಗಿ ಹೇಳಿ ಚಿನ್ನಾಭರಣ ದೋಚಿದ ಖದೀಮ ಪೋಲೀಸರ ಬಲೆಗೆ ಬಿದ್ದಿದ್ದಾನೆ. ಸದಲಗಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲಿಪ್ಟ್ ಬಕೊಡುವ ನೆಪದಲ್ಲಿ ಮಹಿಳೆಯೊಬ್ಬರನ್ನು ದ್ವೀಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ ಅವರಲ್ಲಿದ್ದ 12.5 ಗ್ರಾಂ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿದ್ದ ಪ್ರಕರಣ ಭೇದಿಸಿರುವ ಸದಲಗಾ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ದೋಚಲಾಗಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Read More »

ಆಸ್ಪತ್ರೆ ಊಟ ಬೇಡ್ವಂತೆ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕಂತೆ…!!

ಬೆಳಗಾವಿ-ರಾಜಕುಮಾರ್ ಟಾಕಳೆ ವಿರುದ್ಧ,ಅತ್ಯಾಚಾರ,ಕಿಡ್ನಾಪ್,ಭ್ರೂಣ ಹತ್ಯೆ ಸೇರಿದಂತೆ ಆರೋಪಗಳ ಸುರಿಮಳೆ ಮಾಡಿರುವ ನವ್ಯಶ್ರೀ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿರುವ ಹಿನ್ನಲೆಯಲ್ಲಿ, ನವ್ಯಶ್ರೀ ನಿನ್ನೆಯಿಂದ ವಿಚಾರಣೆಗೆ ಹಾಜರಾಗಿದ್ದು ವೈದ್ಯಕೀಯ ಪರೀಕ್ಷೆಗಾಗಿ ನವ್ಯಶ್ರೀ ಈಗ ಬೆಳಗಾವಿಯ ಭೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ನವ್ಯಶ್ರೀಗೆ ಆಸ್ಪತ್ರೆ ಊಟ ಬೇಡ್ವಂತೆ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು ಅಂತಾ ತಗಾದೆ ತೆಗೆದಿದ್ದಾರೆ. ನವ್ಯಶ್ರೀ, ರಾಜಕುಮಾರ್ ಟಾಕಳೆ ದೂರು ಪ್ರತಿದೂರು ಪ್ರಕರಣದ ವಿಚಾರಣೆ …

Read More »

ಶಾಸಕ ಅನೀಲ ಬೆನಕೆ ಅವರಿಗೆ ಪಿತೃವಿಯೋಗ

ಬೆಳಗಾವಿ- ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನೀಲ ಬೆನಕೆ ಅವರ ತಂದೆ ಶಟುಪ್ಪಾ ಬಾಬುರಾವ ಬೆನಕೆ (92) ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಶಟುಪ್ಪಾ ಬಾಬುರಾವ್ ಬೆನಕೆ, ಅವರು ಪತ್ನಿ, ಮಕ್ಕಳು,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ಹೊಂದಿದ್ದು,ಮೃತರ ಅಂತ್ಯ ಕ್ರಿಯೆ ಇಂದು ಮಧ್ಯಾಹ್ನ 2-00 ಗಂಟೆಗೆ ಸದಾಶಿವ ನಗರದ ಸ್ಮಶಾನದಲ್ಲಿ ನೆರವೇರಲಿದೆ.

Read More »

ಕೋಟಿ,ಕೋಟಿ ಲೂಟಿ ಮಾಡಲು ಯತ್ನಿಸಿದ ಖತರ್ನಾಕ್ ಗ್ಯಾಂಗ್ ಸಿಬಿಐ ಬಲೆಗೆ…

ನವದೆಹಲಿ- 100 ಕೋಟಿ ಕೊಟ್ಟರೆ ಗವರ್ನರ್ ಮಾಡ್ತೀವಿ,ರಾಜ್ಯಸಭೆಯ ಮೆಂಬರ್ ಮಾಡ್ತೀವಿ ಅಂತಾ ಹಲವಾರು ಜನ ವಿಐಪಿಗಳಿಗೆ ನಂಬಿಸಿ ಕೋಟಿ,ಕೋಟಿ ಲೂಟಿ ಮಾಡಲು ಯತ್ನಿಸಿದ ಖತರ್ನಾಕ್ ಗ್ಯಾಂಗ್ ಸಿಬಿಐ ಬಲೆಗೆ ಬಿದ್ದಿದೆ. ವಂಚಕರನ್ನು ಅರೆಸ್ಟ್ ಮಾಡಲು ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಓರ್ವ ಆರೋಪಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದು,ಬೆಳಗಾವಿಯ ರವೀಂದ್ರ ನಾಯಕ್ ಸೇರಿದಂತೆ ಒಟ್ಟು ನಾಲ್ಕು ಜನ ವಂಚಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಕರ್ನಾಟಕ ಬೆಳಗಾವಿಯ ರವೀಂದ್ರ …

Read More »

ಬೆಳಗಾವಿ ಜಿಲ್ಲೆಯಲ್ಲಿ, ಬಿಸಿಯೂಟದ ನಂತರ ಮಾತ್ರೆ ಸೇವಿಸಿದ 50 ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ..

ಬೆಳಗಾವಿ  (ಸವದತ್ತಿ)    :  ( (ಪಾಲಿಕ್‌ ಆಸಿಡ್‌)ವುಳ್ಳ ಮಾತ್ರೆಗಳನ್ನು ಸೇವಿಸಿದ ಬಳಿಕ 55ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲ್ಲೂಕಿನ ಬಸಿಡೋಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು ಎಲ್ಲ ವಿದ್ಯಾರ್ಥಿಗಳನ್ನೂ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಿಡೋಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು ಶಾಲೆಯಲ್ಲಿ ಇಂದು ‌ಮಧ್ಯಾಹ್ನ 239ಮಕ್ಕಳು ಬಿಸಿಯೂಟ ಮಾಡಿದರು. ಊಟದ ಬಳಿಕ ಪ್ರತಿ ಸೋಮವಾರ ಕಬ್ಬಿಣಾಂಶದ ಮಾತ್ರೆ …

Read More »

ನಿಗಮ ಮಂಡಳಿಗಳಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರಿಗೆ ಲಾಟರಿ…!!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟಿಸಲು ಹಲವಾರು ದಶಕಗಳಿಂದ ಶ್ರಮಿಸುತ್ತಿರುವ ಮಲ್ಲಿಕಾರ್ಜುನ್ ತುಬಾಕಿ,ಮತ್ತು ಮಾರುತಿ ಅಷ್ಟಗಿ ಅವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಲಭಿಸಿದೆ. ಇಂದು ಸಂಜೆ ಮುಖ್ಯಮಂತ್ರಿಗಳ ಸಚಿವಾಲಯದಿಂದ ನಿಗಮ ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷರ ಪಟ್ಟಿ ಬಿಡುಗಡೆಯಾಗಿದ್ದು, ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ,ಭೌಗೋಳಿಕವಾಗಿ,ರಾಜಕೀಯವಾಗಿ ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯಿಂದ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಸಿಕ್ಕಿದೆ. ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಯಮಕನಮರಡಿ ಕ್ಷೇತ್ರದ ಮಾರುತಿ ಅಷ್ಟಗಿ,ಅವರನ್ನು …

Read More »

ಅವರು ಬೆಳಗಾವಿಗೆ ಬರುವ ಚಾನ್ಸ್ ಇತ್ತು,..ಆದ್ರೆ ಬರಲಿಲ್ಲ….!!

.ಬೆಳಗಾವಿ- ಪಕ್ಕದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಇವತ್ತು ಸಂಜೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರ್ತಾರಂತ ಎಲ್ಲ,ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು ಆದ್ರೆ ಅವರು ಬೆಳಗಾವಿಗೆ ಬರಲಿಲ್ಲ. ಮಹಾರಾಷ್ಟ್ರ ಸಿಎಂ ಇಂದು ಸಂಜೆ ಕೊಲ್ಹಾಪೂರಕ್ಕೆ ಬರುವ ಕಾರ್ಯಕ್ರಮ ನಿಗದಿಯಾಗಿತ್ತು,ಕೊಲ್ಹಾಪೂರ ದಲ್ಲಿ ಹವಾಮಾನ ವೈಪರೀತ್ಯದಿಂದ ಅವರ ವಿಮಾನ ಅಲ್ಲಿ ಲ್ಯಾಂಡೀಂಗ್ ಮಾಡಲು ಸಾಧ್ಯವಾಗದೇ ಇದ್ರೆ,ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ದಲ್ಲಿ ಲ್ಯಾಂಡಿಂಗ್ ಮಾಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.ಪ್ರೋಟೋಕಾಲ್ ಪ್ರಕಾರ ಎಲ್ಲ ಭದ್ರತಾ …

Read More »

ಬೆಳಗಾವಿ ಗಣೇಶೋತ್ಸವದಲ್ಲಿ ಡಿಜೆ,ಹಾಗೂ ಪಿ.ಓ.ಪಿ ಮೂರ್ತಿಗಳಿಗೆ ಅವಕಾಶ ಇಲ್ಲ.

ಬೆಳಗಾವಿ, – ಸರ್ವೋಚ್ಛ ನ್ಯಾಯಾಲಯ ಹಾಗೂ ಸರಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳ ಪ್ರಕಾರವೇ ಗಣೇಶೋತ್ಸವ ಮತ್ತಿತರ ಹಬ್ಬದಾಚರಣೆಗೆ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜು.25) ನಡೆದ ಗಣೇಶೋತ್ಸವ ಮಂಡಳಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ಆಗಸ್ಟ್ 31 ರಿಂದ ಸೆಪ್ಟೆಂಬರ್ 9 ರವರೆಗೆ ಗಣೇಶೋತ್ಸವ ನಡೆಯಲಿದೆ. ಈ …

Read More »

ಕ್ರಾಂತಿಯ ನೆಲ,ಬೆಳಗಾವಿಯಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಅದ್ದೂರಿ ಜೊತೆಗೆ ಭರ್ಜರಿ…

ಬೆಳಗಾವಿ, -ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸರಳ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ ಮೊದಲಿನಂತೆ ಸಡಗರ-ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜು.25) ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಗಿತ್ತು. ಆದರೆ ಈ‌ ಬಾರಿ ಅದ್ಧೂರಿಯಾಗಿ ಆಚರಿಸಲು ಅನೇಕರು …

Read More »