Breaking News

LOCAL NEWS

ಬೆಳಗಾವಿ ಬಿಜೆಪಿ ಕಚೇರಿಗೂ 30 ಗುಂಟೆ ಜಾಗೆ

ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಜಿಲ್ಲಾ ಕಚೇರಿ ನಿರ್ಮಾಣಕ್ಕಾಗಿ 30 ಗುಂಟೆ ಜಾಗವನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲು ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಲಸಂಪನ್ಮೂಲ ಇಲಾಖೆಯ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರ ಸತತ ಪ್ರಯತ್ನದ ಫಲವಾಗಿ ನಗರಾಭಿವೃದ್ಧಿ ಇಲಾಖೆಯ ಪ್ರಸ್ತಾಪವನ್ನು ಸಚಿವ ಸಂಪುಟ ಒಪ್ಪಿ ಅನುಮೋದನೆ ನೀಡಿದೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿಯ ಸ್ವಂತ ಕಟ್ಟಡ …

Read More »

ಬಸವೇಶ್ವರ ಮೂರ್ತಿ ಭಗ್ನ ಬಯಲಾಯ್ತು ಸತ್ಯ…..

ಬೆಳಗಾವಿ- ರಾಮದುರ್ಗ ತಾಲ್ಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರ ಮೂರ್ತಿ ಪ್ರಕರಣ ಹೊಸ ಟ್ವೀಸ್ಟ ಪಡೆದುಕೊಂಡಿದ್ದು ಸತ್ಯಾಂಶ ಬಯಲಾಗಿದೆ. ದುಷ್ಕರ್ಮಿಗಳು ಮೂರ್ತಿ ಭಗ್ನಮಾಡಿದ್ದಾರೆ ಎಂದು ಕಟಕೋಳ ಠಾಣೆಯಲ್ಲಿ ದೂರು ನೀಡಿದ್ದ ಗ್ರಾಮದ ಹಿರಿಯರು ದೂರನ್ನು ವಾಪಸ್ ಪಡೆದುಕೊಂಡು ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ. ಯಾಕಂದ್ರೆ ಈ ಮೂರ್ತಿಯನ್ನು ಯಾರೋ ದುಷ್ಕರ್ಮಿಗಳು ಭಗ್ನಗೊಳಿಸಿರಲಿಲ್ಲ.ಗ್ರಾಮದ ಕೆಲವು ರೈತರು ಮದ್ಯರಾತ್ರಿ ಹೊಲಕ್ಕೆ ನೀರು ಹಾಯಿಸಲು ಹೋಗುತ್ತಿರುವಾಗ,ಜಗಜ್ಯೋತಿ ಬಸವೇಶ್ವರ ಮೂರ್ತಿಯ ಮೇಲಿದ್ದ ಶಾಲು ಕೆಳಗೆ ಬಿದ್ದಿದ್ದನ್ನು …

Read More »

ಬೆಳಗಾವಿಯ ಅಂಡರ್ ಪಾಸ್ ಹೊಂಡಕ್ಕೆ ಎರಡನೇಯ ವಾರ್ಷಿಕೋತ್ಸವ….!!

ಬೆಳಗಾವಿ-ಬೆಳಗಾವಿ ಬಸ್ ನಿಲ್ಧಾಣದ ಎದುರಿನ ರಸ್ತೆ ಬಂದ್ ಆಗಿ ಬರೊಬ್ಬರಿ ಎರಡು ವರ್ಷಾಯ್ತು ನೋಡಿ,ಅಂಡರ್ ಪಾಸ್ ನಿರ್ಮಿಸಲು ಸಿಬಿಟಿ ಬಸ್ ನಿಲ್ಧಾಣದ ಎದುರು ಅಗೆದಿರುವ ಈ ತೆಗ್ಗು ಎರಡನೇಯ ವಾರ್ಷಿಕೋತ್ಸವದ ಸಂಬ್ರಮದಲ್ಲಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ಧಾಣ,ಮತ್ತು ಸಿಟಿ ಬಸ್ ನಿಲ್ಧಾಣವನ್ನು ಜೋಡಿಸುವದಕ್ಕಾಗಿ ಅಂಡರ್ ಪಾಸ್ ನಿರ್ಮಿಸಲು, ಮುಖ್ಯ ರಸ್ತೆಯನ್ನೇ ಅಗೆದು ಎರಡು ವರ್ಷ ಕಳೆದರೂ,ಅಧಿಕಾರಿಗಳು ಅದನ್ನು ಮರೆತು ಬಿಟ್ಟಿದ್ದಾರೆ,ಶಾಸಕ ಅನೀಲ ಬೆನಕೆ ಈ ಕಾಮಗಾರಿ ಬೇಗ ಮುಗಿಸಿ ರಸ್ತೆ …

Read More »

ಬೆಳಗಾವಿ ಎಂಪಿ ಟಿಕೇಟ್ ಯಾರಿಗೆ? ಇವರೇ ಡಿಸೈಡ್ ಮಾಡ್ತಾರೆ…

ಬೆಳಗಾವಿ: ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿಯವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಯ ಆಯ್ಕೆಗಾಗಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವುಕುಮಾರ್ ಅವರು ಸಮಿತಿ ರಚನೆ ಮಾಡಿದ್ದಾರೆ. ಸಮಿತಿ ಅಧ್ಯಕ್ಷರಾಗಿ ಶಾಸಕ ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಸಂಯೋಜಕರಾಗಿ ಹಾಗೂ ಸದಸ್ಯರಾದ ಎಲ್.ಹನುಮಂತಯ್ಯ, ಹೆಚ್.ಎಂ.ರೇವಣ್ಣ, ವೀರಕುಮಾರ್ ಎ ಪಾಟೀಲ್, ಅಜಯ್ ಕುಮಾರ್ ಸರ್ ನಾಯಕ್, ಅನಿಲ್ ಲಾಡ್, ಜಿ.ಎಸ್.ಪಾಟೀಲ್, ಬಸವರಾಜ್ ಶಿವಣ್ಣನವರ್, ಶ್ರೀನಿವಾಸ್ ವಿ.ಮಾನೆ, …

Read More »

ಮಹಿಳೆಗೆ ಎಳೆದಾಡಿದ ಘಟನೆ,ಕೆಟ್ಟ ಸಂಪ್ರದಾಯ…

ಗೋಕಾಕ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಮಹಾಲಿಂಗಪುರ ಪುರಸಭೆಗೆ ಸಂಬಂಧಿಸಿದಂತೆ ನಡೆದ ಘಟನೆಯು ಒಂದು ಕೆಟ್ಟ ಸಂಪ್ರದಾಯವಾಗಿದೆ. ಅಧ್ಯಕ್ಷೆ ಆಕಾಂಕ್ಷಿಯಾಗಿರುವ ಮಹಿಳೆಯನ್ನು ಎಳೆದಾಡಿ ಬಿಜೆಪಿ ಶಾಸಕ ಸಿದ್ದು ಸವದಿ ಸೇರಿದಂತೆ ಇತರರು ಅಸಭ್ಯ ವರ್ತನೆ ತೋರಿರುವುದು ಒಂದು ಕೆಟ್ಟ ಸಂಪ್ರದಾಯಾವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಿಕಿಹೊಳಿ ಹೇಳಿದ್ದಾರೆ. ನಗರದ ಅವರ ಹೀಲ್ ಗಾರ್ಡನ್ ಕಛೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಹಿಳೆಯರ ಜೊತೆ …

Read More »

ನಂದಿನಿ ಕುಂದಾ ಫುಲ್ TASTY ಐತ್ರೀ….!

ಬೆಳಗಾವಿ- ಇಪ್ಪತ್ತು ವರ್ಷದ ಹಿಂದೆ ನನ್ನ ಹಿರಿಯ ಮಗ ಜಬೀವುಲ್ಲಾ ಹುಟ್ಟಿದ ಖುಷಿಯಲ್ಲಿ ಸಮಂಧಿಕರಿಗೆ,ಗೆಳೆಯರಿಗೆ ನಂದಿನಿ ಪೇಡಾ ಹಂಚಿದ್ದೆ,ಆವಾಗಿನಿಂದ ಇವತ್ತಿನವರೆಗೂ ನಂದಿನಿ ಪೇಡಾ ಅಂದ್ರೆ ನನಗೆ ತುಂಬಾ ಇಷ್ಟವಾದ ಸ್ವೀಟು ಇದಾಗಿತ್ತು… ಎರಡು ದಿನದ ಹಿಂದೆ ನಂದಿನಿ ಮಿಲ್ಕ್ ಪಾರ್ಲರ್ ಗೆ ನಂದಿನಿ ಪೇಡಾ ತರಲು ಹೋಗಿದ್ದೆ,ಆಗ ಅಂಗಡಿಯಲ್ಲಿದ್ದ ಹುಡುಗ,ಸರ್ ಕುಂದಾ ಇವತ್ತೇ ಬಂದಿದೆ,ಫ್ರೆಶ್ ಇದೆ ಕೊಡಲಾ ಅಂತಾ ಕೇಳಿದಾಗ,ಸ್ವಲ್ಪ ಯೋಚಿಸಿ ಪೇಡೆ ಕೊಟ್ಟಿದಿಯಲ್ಲಪ್ಪ ಮತ್ತೇ ಕುಂದಾ ಯಾಕೆ ? …

Read More »

ಬೆಳಗಾವಿ ಜಿಲ್ಲೆಗೂ ಸೇವೆ ವಿಸ್ತರಿಸಿದ ಶಾಯೀನ್ ವಿದ್ಯಾಸಂಸ್ಥೆ

ಬೆಳಗಾವಿ- ಸಾವಿರಾರು ಬಡ,ಪ್ರತಿಭಾವಂತ ವಿಧ್ಯಾರ್ಥಿಗಳ ಬಾಳಲ್ಲಿ ಭರವಸೆಯ ಬೆಳಕು ಮೂಡಿಸಿರುವ ಬೀದರ್ ಜಿಲ್ಲೆಯ ಶಾಯೀನ್ ವಿದ್ಯಾ ಸಂಸ್ಥೆ ತನ್ನ ಸೇವೆಯನ್ನು ಬೆಳಗಾವಿ ಜಿಲ್ಲೆಗೂ ವಿಸ್ತರಿಸಿದೆ,ಬೆಳಗಾವಿ ಜಿಲ್ಲೆಯ ವಿಧ್ಯಾರ್ಥಿ ಗಳಿಗೂ ಎಲ್ಲ ರೀತಿಯ ಸಹಾಯ ಸವಲತ್ತುಗಳನ್ನು ನೀಡಲು ಈ ಸಂಸ್ಥೆ ನಿರ್ಧರಿಸಿದ್ದು,ಬೆಳಗಾವಿಯಲ್ಲಿ lkg ಯಿಂದ ಹತ್ತನೇಯ ತರಗತಿಯವರೆಗೆ ಇಂಗ್ಲೀಷ್ ಮಾದ್ಯಮ ಶಾಲೆಯನ್ನು ಆರಂಭಿಸುವ ಚಿಂತನೆ ನಡೆಸಿದೆ. ಇಂದು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಯೀನ್ ವಿದ್ಯಾ ಸಂಸ್ಥೆಯ ಅದ್ಯಕ್ಷರು ನೀಟ್ ಪರೀಕ್ಷೆ ತೇರ್ಗಗಡೆಯಲ್ಲಿ …

Read More »

ಗೇಮ್ ಆಡಬೇಡ ಎಂದು ಹೆಂಡತಿ ಹೇಳಿದ್ದಕ್ಕೆ ಆತ್ಮತ್ಯೆ ಮಾಡಿಕೊಂಡ…

ಬೆಳಗಾವಿ- ದಿನವಿಡೀ ಮೋಬೈಲ್ ನಲ್ಲಿ ವಿಡಿಯೋ ಗೇಮ್ ಆಡಬೇಡ ಎಂದು ಹೆಂಡತಿ ಬುದ್ದಿವಾದ ಹೇಳಿದ್ದಕ್ಕೆ ಗಂಡನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ಶಬಾಜ್ ಸಿ.ಎಂ.(36) ಎಂಬಾತ,ಚಿಕ್ಕಮಂಗಳೂರಿನಿಂದ ಬೆಳಗಾವಿಗೆ ಬಂದು,ಬೆಳಗಾವಿಯ ಖಡೇಬಝಾರ್ ನಲ್ಲಿರುವ ಸೂರ್ಯಾ ಲಾಜ್ ನಲ್ಲಿ ಸೀಲೀಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ಯರಾತ್ರಿಯೇ ನಡೆದಿದ್ದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮಾರ್ಕೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೆಳಗಾವಿ ಜಿಲ್ಲೆಗೆ ಮತ್ತೊಂದು ಪವರ್ ಫುಲ್ ಹುದ್ದೆ…..!

ಬೆಳಗಾವಿ- ಈ ಹಿಂದೆ ಅಂದಾಜು ಸಮೀತಿಯ ಸದಸ್ಯರಾಗಿ ಬಳ್ಳಾರಿ ಡ್ಯಾಂ ಕಾಮಗಾರಿಯ ಗೋಲ್ ಮಾಲ್ ಪತ್ತೆ ಮಾಡಿ ಹಲವಾರು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ರಾಜ್ಯದ ಗಮನ ಸೆಳೆದಿದ್ದ ಶಾಸಕ ಅಭಯ ಪಾಟೀಲ್ ಅವರು ಈಗ ಅಂದಾಜು ಸಮೀತಿಯ ಅದ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ಇವರನ್ನು ವಿಧಾನಸಭೆಯ ಅಂದಾಜುಗಳ ಸಮಿತಿ ಅಧ್ಯಕ್ಷರನ್ನಾಗಿ ನೇಮಕಾ ಮಾಡಲಾಗಿದ್ದು ,ವಿಧಾನಸಭೆಯ ಪವರ್ ಫುಲ್ ಸಮೀತಿ ಅಂದ್ರೆ ಎಕ್ಸಟೀಮೇಟ್, ಕಮೀಟಿ …

Read More »

ಯಮಕನಮರಡಿ ಕ್ಷೇತ್ರದಲ್ಲಿ ಈಗ ಎಜ್ಯುಕೇಶನ್ ಸೀಝನ್….!

ಯಮಕನಮರಡಿ ಕ್ಷೇತ್ರದಲ್ಲಿ ಶಾಸಕ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಕುರಿತು ವಿಶೇಷ ಗಮನಹರಿಸಿದ್ದು ಶಾಲೆಗಳ ಅಭಿವೃದ್ಧಿಗೆ ಕೋಟ್ಯಾಂತರ ರೂ ಅನುದಾನ ನೀಡಿದ್ದಾರೆ ಬೆಳಗಾವಿ : ಶಾಸಕರ ಅನುದಾನದಲ್ಲಿ ಬಿಡುಗಡೆ ಗೊಂಡ 1 ಕೋಟಿ 11 ಲಕ್ಷ ರೂಪಾಯಿ ವೆಚ್ಚದ ಶಾಲಾ ಅಭಿವೃದ್ಧಿ ಕಾಮಗಾರಿಗೆ ಜಿಪಂ.ಸದಸ್ಯ ಸಿದ್ದು ಸುಣಗಾರ ಮಂಗಳವಾರ ಚಾಲನೆ ನೀಡಿದರು. ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸೂನಟ್ಟಿ ಗ್ರಾಮದ …

Read More »

ಚಿನ್ನ ಕಳವು ಮಾಡಿದವನೂ, ಅದನ್ನು ಖರೀದಿವನೂ, ಅರೆಸ್ಟ್….

ಬೆಳಗಾವಿ- ಖಾನಾಪೂರ ಪೋಲೀಸರು ವಿಶೇಷ ಕಾರ್ಯಾಚರಣೆಯ ಮೂಲಕ ಚಿನ್ನ ಕಳ್ಳತನ ಮಾಡಿದವನನ್ನು,ಜೊತೆಗೆ ಕಳವು ಮಾಡಿದ ಚಿನ್ನವನ್ನು ಖರೀಧಿ ಮಾಡಿದ ಜ್ಯುವಲರಿ ವ್ಯಾಪಾರಿ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಚಿನ್ನದ ಆಭರಣ ಕದ್ದು ಅದನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ ಅವನ ಬಳಿಯಿದ್ದ 26,5300 ಮೌಲ್ಯದ ಚಿನ್ನಾಭರಣಗಳು ವಶಪಡಿಸಿಕೊಂಡಿದ್ದಾರೆ ಕಳ್ಳತನ ಆರೋಪಿಗೆ ಸಹಾಯ ಮಾಡಿದ್ದ ಕಳುವಾದ ಚಿನ್ನವನ್ನು ಖರೀಧಿ ಮಾಡಿದ್ದ ಜ್ಯುವೆಲರಿ ಶಾಪ್ ಮಾಲೀಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಳಗಾವಿಯ ವಡಗಾಂವ ಗಲ್ಲಿಯ …

Read More »

ಮತ್ತೆ ಹಿಂಡಲಗಾ ಜೈಲಿಗೆ ವಿನಯ ಶಿಪ್ಟ್….

ಬೆಳಗಾವಿ- ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿದ್ದ ಮಾಜಿ ಮಂತ್ರಿ ವಿನಯ ಕುಲಕರ್ಣಿಗೆ 14ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇಂದು ನಾಲ್ಕು ಗಂಟೆಗೆ ಸಿಬಿಐ ಅಧಿಕಾರಿಗಳು ಹಿಂಡಲಗಾ ಕಾರಾಗೃಹ ಕ್ಕೆ ಕರೆತಂದರು ಮೂರು ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಸಿಬಿಐ ವಶದಲ್ಲಿದ್ದ ವಿನಯ ಕುಲಕರ್ಣಿ,ಇಂದು ಮತ್ತೆ ಹಿಂಡಲಗಾ ಜೈಲಿಗೆ ಶಿಪ್ಟ್  ಮಾಡಲಾಯಿತು.

Read More »

ಬೆಳಗಾವಿಯಲ್ಲಿ ಇಂದು ಪ್ರತಿಭಟನೆಗಳ ಸೀಝನ್…

ಪ್ರತಿಮೆ ಭಗ್ನಗೊಳಿಸಿದ,ಕಿಡಗೇಡಿಗಳ ವಿರುದ್ಧ ಕ್ರಮ ಜರುಗಿಸಿ…. ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಪ್ರತಿಮೆಯನ್ನು ಭಗ್ನಗೊಳಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಬೆಳಗಾವಿ ಲಿಂಗಾಯತ ಸಂಘಟನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು. ಮಹಾ ಮಾನವತಾವಾದಿ ಬಸವೇಶ್ವರರ ಮೂರ್ತಿಯನ್ನು ಸಮಾಜಘಾತುಕ ವ್ಯಕ್ತಿಗಳು ಭಗ್ನ ಮಾಡಿದ್ದಾರೆ. ಇವ ನಮ್ಮವ. ಇವ ನಮ್ಮವ ಎಂದು ಜಗದ ಜನರೆಲ್ಲರನ್ನು ಅಪ್ಪಿಕೊಂಡು ಜಾತಿ, ವರ್ಗ, ಲಿಂಗ, ವರ್ಣ ಭೇದಗಳನ್ನು …

Read More »

ಬೆಳಗಾವಿಯ, ಜನಕಲ್ಯಾಣ ಟ್ರಸ್ಟ್ ಸೇವೆಗೆ ಸಮ್ಮಾನ…..

ಜನ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿಂದ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಸೇವಾ ಕೋವಿಡ್ -19 ಕೇಂದ್ರದ ಸಮಾರೋಪ ಸಮಾರಂಭ ರವಿವಾರ ಸಂಜೆ 4. ಗಂಟೆಗೆ ಅನಗೋಳದ ಸಂತಮೀರಾ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಜರುಗಿತು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು ಪ್ರಮುಖ ವಕ್ತಾರರಾಗಿ ಆರ್‍ಎಸ್‍ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶಜಿ ಭೇಂಡೆ ಉಪಸ್ಥಿತರಿದ್ದರು. ಸಮಾರೋಪ ಸಭೆಯಲ್ಲಿ …

Read More »

ನವ್ಹೆಂಬರ್ 14 ರಂದು ಡಿಸಿಸಿ ಬ್ಯಾಂಕ್ ಅದ್ಯಕ್ಚ ಉಪಾದ್ಯಕ್ಷರ ಚುನಾವಣೆ….

ಬೆಳಗಾವಿ – ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ ಚುನಾವಣೆ ಮುಗಿದಿದ್ದು,ನವ್ಹೆಂಬರ್ 14 ರಂದು ಅದ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ನವ್ಹೆಂಬರ್ 14 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು ಮದ್ಯಾಹ್ನ 3-00 ಗಂಟೆಗೆ ನಿರ್ದೇಶಕ ಮಂಡಳಿಯ ಸಭೆ ಆರಂಭವಾಗಲಿದ್ದು,ನಾಮ ಪತ್ರ ವಾಪಸ್ ಪಡೆಯಲು 30 ನಿಮಿಷ ಕಾಲಾವಕಾಶ ನೀಡಿದ ಬಳಿಕ ಚುನಾವಣೆ ನಡೆಯಲಿದೆ. ಹಾಲಿ ಅದ್ಯಕ್ಷ ರಮೇಶ್ ಕತ್ತಿ …

Read More »