Breaking News

LOCAL NEWS

ಬೆಳಗಾವಿಯಲ್ಲಿ ಸಿಂಪಲ್ ಆದರೂ ಪವರ್ ಫುಲ್ ಗಣೇಶ ಹಬ್ಬ

ಬೆಳಗಾವಿ- ಜಿಟಿ,ಜಿಟಿ ಮಳೆಯಲ್ಲೂ ಭಕ್ತರ ಉತ್ಸಾಹ ಕುಗ್ಗಲಿಲ್ಲ,ಗಣೇಶ ಗಣೇಶ ಮೋರೆಯಾ,ಗಣಪತಿ ಬಪ್ಪಾ ಮೋರೆಯಾ ಎನ್ನುವ ಜೈಘೋಷಗಳೊಂದಿಗೆ ಬೆಳಗಾವಿಯಲ್ಲಿ ವಿಘ್ನೇಶ್ವರನಿಗೆ ಅದ್ದೂರಿಯಾಗಿ ಬರಮಾಡಿಕೊಂಡರು ಬೆಳಗಾವಿಯಲ್ಲಿ ಬೆಳಗಿನ ಜಾವ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇತ್ತು ಮಳೆಯನ್ನು ಲೆಕ್ಕಿಸದೇ ಭಕ್ತರು ಗಣೇಶನನ್ನು ಉತ್ಸಾಹದಿಂದಲೇ ಬರಮಾಡಿಕೊಂಡ ದೃಶ್ಯ ಬೆಳಗಾವಿಯಲ್ಲಿ ಸಾಮಾನ್ಯವಾಗಿತ್ತು. ಕೋವೀಡ್ ಹಿನ್ನಲೆಯಲ್ಲಿ ಈ ಬಾರಿ ಪಟಾಕಿ ಸದ್ದು ಅಷ್ಟೊಂದು ಜೋರಾಗಿ ಕೇಳಿಸಲಿಲ್ಲ,ವಾದ್ಯಮೇಳ ಗಳು ಕಾಣಿಸಲಿಲ್ಲ ಆದರೂ ಭಕ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಶ್ರೀ …

Read More »

ಸೋಮವಾರ ಡಿಕೆ ಶಿವಕುಮಾರ್ ಬೆಳಗಾವಿಗೆ

ಬೆಳಗಾವಿ- ಸೋಮವಾರ 24/08/2020 ರಂದು ಶ್ರೀ ಡಿ ಕೆ ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ಪ್ರಪ್ರಥಮ ಬಾರಿಗೆ ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಿದ್ದು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅದ್ಯಕ್ಷ ರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡುತ್ತಿರುವದು ವಿಶೇಷವಾಗಿದೆ. ಅಂದು ಅವರು ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಕೇಳಲಿದ್ದಾರೆ.

Read More »

ಮಂಗಳವಾರ ರಾಜಾಹುಲಿ ಬೆಳಗಾವಿಗೆ…..!!!!

ಬೆಳಗಾವಿ- ಬರುವ ಮಂಗಳವಾರ ದಿನಾಂಕ. 25 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬೆಳಗಾವಿಗೆ ಭೇಟಿ ನೀಡಲಿದ್ದಾರೆಂದು ಬೆಂಗಳೂರಿನ ವಿಧಾನಸಭೆಯ ಮೂಲಗಳು ತಿಳಿಸಿವೆ ಮಂಗಳವಾರ ಬೆಳಗಾವಿ ನಗರಕ್ಕೆ ಭೇಟಿ ನೀಡಲಿರುವ ಸಿಎಂ ಯಡಿಯೂರಪ್ಪನವರು,ಬೆಳಗಾವಿಯ ಸುವರ್ಣ ವಿಧಾನಸೌಧದ ಸೆಂಟ್ರೆಲ್ ಹಾಲ್ ನಲ್ಲಿ ಬೆಳಗಾವಿ,ಹಾಗೂ ಧಾರವಾಡ ಜಿಲ್ಲೆಗಳ,ಪ್ರವಾಹ ಪರಿಹಾರ,ಮತ್ತು ಕೋವಿಡ್ ನಿಯಂತ್ರಣದ ಕುರಿತು ಪ್ರಗತಿ ಪರಶೀಲನೆ ನಡೆಸಲಿದ್ದಾರೆಂದು ತಿಳಿದು ಬಂದಿದೆ. ಧಾರವಾಡ- ಮತ್ತು ಬೆಳಗಾವಿ ಎರಡೂ ಜಿಲ್ಲೆಗಳ ಪ್ರಗತಿ ಪರಶೀಲನಾ ಸಭೆ ಬೆಳಗಾವಿಯ ಸುವರ್ಣ …

Read More »

ಒಂದೇ ದಿನ,ಒಂದೇ ಗ್ರಾಮದಲ್ಲಿ ಎರಡು ಮಂದಿರಗಳ ಕಳ್ಳತನ

ಬೆಳಗಾವಿ- ಬೆಳಗಾವಿ ಸಮೀಪದ ಮೋದಗಾ ಗ್ರಾಮದಲ್ಲಿ ಒಂದೇ ದಿನ ಎರಡು ಮಂದಿರಗಳಲ್ಲಿ ಕಳ್ಳತನ ನಡೆದಿದ್ದು ಒಂದು ಮಂದಿರದಲ್ಲಿ 55 ಗ್ರಾಂ ಚಿನ್ನಾಭರಣ ಇನ್ನೊಂದು ಮಂದಿರದ ದೇಣಿಗೆ ಪೆಟ್ಟಿಗೆಯನ್ನು ದೋಚಲಾಗಿದೆ. ಮೋದಗಾ ಗ್ರಾಮದ ಲಕ್ಷ್ಮೀ ಮಂದಿರದಲ್ಲಿ ದೇವಿಯ ಕೊರಳಲ್ಲಿ ಹಾಕಿದ ಮಂಗಳಸೂತ್ರ,ಸೇರಿದಂತೆ ಒಟ್ಟು 55 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿದ್ದು ಇದೇ ಗ್ರಾಮದ ಸಿದ್ದೇಶ್ವರ ಮಂದಿರದ ದೇಣಿಗೆ ಪೆಟ್ಟಿಗೆಯನ್ನು ದೋಚಿದ್ದಾರೆ ಮೋದಗಾ ಗ್ರಾಮದಲ್ಲಿ ಒಂದೇ ದಿನ ಎರಡು ಮಂದಿರಗಳಲ್ಲಿ ಕಳ್ಳತನ ನಡೆದಿದ್ದು ಎರಡೂ …

Read More »

ಬೆಳಗಾವಿ ಮಾರ್ಕೆಟ್ ನಲ್ಲಿ ಗರ್ದಿ ಗಮ್ಮತ್ತ್….ಹೂವು ಹಣ್ಣಿಗೆ ಫುಲ್ ಕಿಮ್ಮತ್ತ…!

ಬೆಳಗಾವಿ- ನಾಳೆ ಗೌರಿ ಗಣೇಶ ಹಬ್ಬ,ವಿಘ್ನ ವಿನಾಯಕನ ಸ್ವಾಗತಕ್ಕೆ ಬೆಳಗಾವಿಯಲ್ಲಿ ಭರದ ಸಿದ್ಧತೆ ನಡೆದಿದೆ.ಬೆಳಗಾವಿ ಮಾರ್ಕೆಟ್ ನಲ್ಲಿ ಫುಲ್ ರಶ್ ಎಲ್ಲಿ ನೋಡಿದಲ್ಲಿ ಜನವೋ ಜನ ಜಿಟಿ ಜಿಟಿ ಮಳೆಯ ನಡುವೆಯೂ ಜನ ಹಬ್ಬಕೆ ಜನ ಹೂವು, ಹಣ್ಣು,ಖರೀಧಿ ಮಾಡುತ್ತಿದ್ದಾರೆ,ಬೆಳಗಾವಿಯ ರವಿವಾರ ಪೇಟೆ,ಗಣಪತಿ ಬೀದಿ ,ಪಾಂಗುಳ ಗಲ್ಲಿ,ಕಂಬಳಿಕೂಟ,ಮಾರುತಿ ಗಲ್ಲಿ ಖಡೇಝಾರ್ ನಲ್ಲಿ ಜನ ಹಬ್ಬದ ಸಾಮುಗ್ರಿಗಳ ಖರೀಧಿಗಾಗಿ ಮುಗಿಬಿದ್ದಿದ್ದಾರೆ. ಕೊರೋನಾ ಸಂಕಷ್ಟ,ಜಿಟಿ ಜಿಟಿ ಮಳೆಯ ನಡುವೆಯೂ ಜನರ ಉತ್ಸಾಹ ಕುಗ್ಗಿಲ್ಲ,ಲಂಭೋಧರ …

Read More »

ಕಂದಾಯ ಸಚಿವರು ಬೆಂಗಳೂರು ಬಿಟ್ಟು ಹೊರಗೆ ಬರಲಿ- ಸತೀಶ್ ಜಾರಕಿಹೊಳಿ

ಬೆಳಗಾವಿ- ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದಿದೆ, ಕಂದಾಯ ಸಚಿವರು ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿ ಬೆಂಗಳೂರು ಬಿಟ್ಟು ಹೊರಗೆ ಬರಲಿಲ್ಲ.ಕಂದಾಯ ಸಚಿವರು ಬೆಂಗಳೂರು ಬಿಟ್ಟು ಹೊರಗೆ ಬರಬೇಕು ಜನ ಯಾವ ರೀತಿಯ ಕಷ್ಟ ಅನುಭವಿಸುತ್ತಿದ್ದಾರೆ ಎನ್ನುವದನ್ನು ನೋಡಬೇಕು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹೇಳಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಕಂದಾಯ ಸಚಿವರು ಓಡಾಟಬೇಕು. ಜಿಲ್ಲೆಯಲ್ಲಿ ನಾಲ್ಕು …

Read More »

ಕಲಿತ ಶಾಲೆಯ ಅಭಿವೃದ್ಧಿಗೂ ಸೈ…..ಶತಮಾನೋತ್ಸದ ಸಂಬ್ರಮ ಹೆಚ್ಚಿಸಲೂ ಜೈ…..!

ಕಲಿತ ಶಾಲೆಗೆ ಶಾಸಕನ ಕೊಡುಗೆ,ಶತಮಾನೋತ್ಸವಕ್ಕೂ ವಿಶೇಷ ದೇಣಿಗೆ….! ಬೆಳಗಾವಿ- ಕಲಿತ ಶಾಲೆ,ಕಲಿಸಿದ ಗುರುಗಳನ್ನು ಸ್ಮರಿಸಿಸುವವರು ಸಿಗೋದು ಬಹಳ ವಿರಳ,ಆದರೆ ಶಾಸಕ ಅಭಯ ಪಾಟೀಲ ಕೆಲ ವರ್ಷಗಳ ಹಿಂದೆ ಕಲಿತ ಶಾಲೆಯಲ್ಲಿ ಗುರುವಂದನೆ ಕಾರ್ಯಕ್ರಮ ನಡೆಸಿ ರಾಜ್ಯದ ಗಮನ ಸೆಳೆದಿದ್ದರು ಈಗ ಅವರು ಕಲಿತ ಶಾಲೆ ಈ ವರ್ಷ ಶತಮಾನೋತ್ಸವದ ಸಂಬ್ರಮದಲ್ಲಿದ್ದು ಇದಕ್ಕೂ ಶಾಸಕ ಅಭಯ ಪಾಟೀಲ ವಿಶೇಷ ಕೊಡುಗೆ ನೀಡಲು ಮುಂದಾಗಿದ್ದಾರೆ. ಬೆಳಗಾವಿಯ ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ಚಿಂತಾಮಣರಾವ …

Read More »

ಚಂದರಗಿ ಅವರ ಕನ್ನಡದ ಕಾಯಕ, ಅವರೇ ಖರೇ,ಖರೇ ಕನ್ನಡದ ನಾಯಕ….!

ಬೆಳಗಾವಿ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮಾಡದ ಕೆಲಸವನ್ನು ಬೆಳಗಾವಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರು ಮಾಡಿದ್ದಾರೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬೆಳಗಾವಿ ಜಿಲ್ಲೆ ಯಾವತ್ತೂ ಬಂದಿಲ್ಲ,ಮುಂದೆ ಬರುವ ಲಜ್ಷಣಗಳೂ ಕಾಣಿಸುತ್ತಿಲ್ಲ ಅದರೆ ಚಂದರಗಿಯವರು ಬೆಳಗಾವಿಯಲ್ಲಿ ಮಾಡಿರುವ ಕನಡದ ಕಾಯಕ ನಿಜವಾಗಿಯೂ ಸ್ಪೂರ್ತಿದಾಯಕ,ಪ್ರೇರಣಾದಾಯಕವೂ ಹೌದು,ಕನ್ನಡದ ಕೀರ್ತಿ ಬೆಳಗಿದ ಕನ್ನಡದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿರುವದು ಪ್ರಶಂಸಾರ್ಹ ಸಂಗತಿಯಾಗಿದೆ. ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡಕ್ಕೆ 125/125 ಅಂಕಗಳು! ಬೆಳಗಾವಿ ಇಬ್ಬರು ವಿದ್ಯಾರ್ಥಿನಿಯರಿಗೆ ಬೆಳಗಾವಿ ಜಿಲ್ಲಾ …

Read More »

ಬೆಳಗಾವಿ ನಿರಾಶ್ರಿತರ ಕೇಂದ್ರದಲ್ಲಿ,ದೂರು: ದುಖ; ದುಮ್ಮಾನ……!

ಬೆಳಗಾವಿ- ಕಳೆದ ವರ್ಷ ಪ್ರವಾಹದಲ್ಲಿ ಮನೆ ನೀರಿನಲ್ಲಿ ಮುಳತು,ಮಂದಿರದ ಕಟ್ಟೆಯ ಮೇಲೆ ಬದುಕು ಸಾಗಿಸಿದ ಆ ಅಜ್ಜಿಗೆ ಮಳೆರಾಯ ಅಲ್ಲಿಯೂ ಬದುಕಲು ಬಿಡಲಿಲ್ಲ,ಮಂದಿರದ ಕಟ್ಟೆಯ ಮೇಲಿಂದ ನಿರಾಶ್ರಿತರ ಕೇಂದ್ರಕ್ಕೆ ಶಿಪ್ಟ್ ಆಗಿದ್ದ ಆ ಅಜ್ಜಿ ಇಂದು ನಿರಾಶ್ರಿತರ ಕೇಂದ್ರದಲ್ಲಿ,70 ವರ್ಷದ ತನ್ನ ಮಗಳ ಮಡಿಲಲ್ಲಿ ಜೀವ ಬಿಟ್ಟ ಘಟನೆ ರಾಮದುರ್ಗ ತಾಲ್ಲೂಕಿನ ಸುರೇಬಾನ್ ನಿರಾಶ್ರಿತರ ಕೇಂದ್ರದಲ್ಲಿ ನಡೆದಿದೆ. ರಾಮದುರ್ಗ ತಾಲ್ಲೂಕಿನ ಹಿರೇಹಂಪಿಹೊಳಿ ಗ್ರಾಮದ ಈ ಅಜ್ಜಿಯ ಮನೆ ಕಳೆದ ವರ್ಷವೇ …

Read More »

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರ್ಪಗಳ ಕಾಟ….!

ಬೆಳಗಾವಿ- ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮವಾಗಿ ರಾಮದುರ್ಗ ತಾಲೂಕಿನ ಹಲವಾರು ಹಳ್ಳಿಗಳಿಗೆ ನೀರು ನುಗ್ಗಿದೆ. ಒಂದೆಡೆ ವರುಣನ‌ ಕಾಟ ಇನ್ನೊಂದೆಡೆ ಕೊರೋನಾ ‌ಕಾಟ ಇವುಗಳ ಮಧ್ಯೆ ಪ್ರವಾಹ ಸಂತ್ರಸ್ತರಿಗೆ ಹಾವುಗಳ‌ ಕಾಟ ಶುರುವಾಗಿದೆ. ರಾಮದುರ್ಗ ನಗರದ ವೇನನ ಪೇಟೆ ಸಂತ್ರಸ್ತರಿಗೆ ಹಾವುಗಳು ಬೆಂಬಿಡದೆ ಕಾಡುತ್ತಿವೆ. ಹಾವುಗಳು ಸಂತ್ರಸ್ತರಿಗೆ ಭಾಧಿಸದಂತೆ ಹಗಲು ರಾತ್ರಿಯ ಪಾಳೆಯದಂತೆ ಇಬ್ಬರು ಪಹರೆ ನಡೆಸುತ್ತಿದ್ದಾರೆ.

Read More »

ಬೆಳಗಾವಿ ಡಿಸಿ ಕಚೇರಿ ಎದುರು ಲೈಟ್ ಆ್ಯಂಡ್ ಸೌಂಡ್….,!

ಬೆಳಗಾವಿ-ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ ಪರಿಷ್ಕೃತ ಆದೇಶ ಹೊರಡಿಸುತ್ತಿದ್ದಂತೆಯೇ ಲೈಟ್ ಆ್ಯಂಡ್ ಸೌಂಡ್ ಸಿಸ್ಟಮ್ ಅಸೋಸಿಯೇಷನ್ ನವರು ನಮಗೂ ಅನುಮತಿ ಕೊಡಿ ಎಂದು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ . ಸರ್ಕಾರ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ಕೊಟ್ಟಿದೆ,ನಮಗೂ ಗಣೇಶ ಉತ್ಸವದಲ್ಲಿ ಲೈಟ್ ಆ್ಯಂಡ ಸೌಂಡ್ ಸಿಸ್ಟಮ್ ಅಳವಡಿಸಲು ಅನುಮತಿ ಕೊಡಬೇಕು ಎಂದು ಬೆಳಗಾವಿ ನಗರದ ಸೌಂಡ್ ಆ್ಯಂಡ್ ಸಿಸ್ಟಮ್ ಮಾಲೀಕರು ಇಂದು …

Read More »

ಪೋಲೀಸ್ ಅಧಿಕಾರಿಗಳ ಸಂಧಾನ ವಿಫಲ,ಪೀರನವಾಡಿ ಸರ್ಕಲ್ ನಲ್ಲಿಯೇ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅಭಿಮಾನಿಗಳ ಪಟ್ಟು…!

ಬೆಳಗಾವಿ- ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡೇ ಇರುವ ಪೀರನವಾಡಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ವಿವಾದ ಈಗ ರಾಜ್ಯಮಟ್ಟದ ಗಮನ ಸೆಳೆದಿದ್ದು,ನಿನ್ನೆ ಪೋಲೀಸ್ ಅಧಿಕಾರಿಗಳು ನಡೆಸಿದ ಸಂಧಾನ ವಿಫಲವಾಗಿದೆ. ಬೆಳಗಾವಿ ನಗರದ ಕೆಲವು ಪೋಲೀಸ್ ಅಧಿಕಾರಿಗಳು ನಿನ್ನೆ ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ರಾಯಣ್ಣನ ಅಭಿಮಾನಿಗಳ ಸಭೆ ಕರೆದು ನಿಮಗೆ ಪೀರನವಾಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಐದು ಗುಂಟೆ ಜಾಗ ಕೊಡುತ್ತೇವೆ,ಈ ಜಾಗದಲ್ಲಿ ತಾವು ಮೂರ್ತಿ ಪ್ರತಿಷ್ಠಾಪನೆ ಮಾಡಿ,ಸುತ್ತಲು …

Read More »

ಕೆರೆ ತುಂಬಿಸುವ ಕಾಮಗಾರಿಯ ಆರಂಭಿಸಿದ ದಿನವೇ ಕೆರೆ ಕಟ್ಟೆ ಒಡೆದರು.

ಬೆಳಗಾವಿ-ಮಲಪ್ರಭಾ ನದಿಯಿಂದ ಗೆದ್ದಿಕೆರೆ ತುಂಬಿಸುವ ಯೋಜನೆ,ನಿನ್ನೆ ಮೊನ್ನೆ ಹುಟ್ಟಿಕೊಂಡ ಯೋಜನೆ ಅಲ್ಲ.ಈ ಯೋಜನೆ ಕಿತ್ತೂರು ಕ್ಷೇತ್ರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು,ನಾಲ್ಕು ದಶಕಗಳ ಹಿಂದೆಯೇ ರೂಪಿಸಿದ ಯೋಜನೆ ಇದಾಗಿದೆ ಎಂ.ಕೆ ಹುಬ್ಬಳ್ಳಿ ಗ್ರಾಮದ ಗೆದ್ದಿಕೆರೆ ಮಲಪ್ರಭಾ ನದಿಯಿಂದ ಕೇವಲ 2.5 ಅಂದ್ರೆ ಎರಡುವರೆ ಕಿ.ಮೀ ಅಂತರದಲ್ಲಿ ಇದೆ. ನದಿಯಿಂದ ಇಷ್ಟೊಂದು ಸಮೀಪವಾಗಿರುವ ಕೆರೆಯನ್ನು ತುಂಬಿಸುವ ಕಾಮಗಾರಿ ಆರಂಭಿಸಲು ನಾಲ್ಕು ದಶಕಗಳೇ ಬೇಕಾದವು. ಇಂದು ಕೆನರಾ ಸಂಸದ ಅನಂತಕುಮಾರ್ ಹೆಗಡೆ ಮತ್ತು ಕಿತ್ತೂರ ಶಾಸಕ …

Read More »

ಕೋಯ್ನಾ ಜಲಾಶಯದ ಪರಿಸ್ಥಿತಿ ಪರಶೀಲಿಸಿದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ

ಮಹಾರಾಷ್ಟ್ರದ ಜಲಸಂಪನ್ಮೂಲ ಖಾತೆ ಸಚಿವ ಶ್ರೀ ಜಯಂತ ಪಾಟೀಲ ಹಾಗೂ ಗೃಹ ಸಚಿವ ಶ್ರೀ ಶಂಭುರಾಜ ಪಾಟೀಲ ಅವರು ಮಂಗಳವಾರ ಸಂಜೆ 5 ಗಂಟೆಗೆ ಸಾತಾರಾ ಜಿಲ್ಲೆಯ ಕೊಯ್ನಾ ಡ್ಯಾಂ ಪ್ರದೇಶಕ್ಕೆ ಭೆಟ್ಟಿ ನೀಡಿ ನೀರಿನ ಸಂಗ್ರಹ,ಬಿಡುಗಡೆಯ ಬಗ್ಗೆ ಪರಿಶೀಲನೆ ನಡೆಸಿದರು .105 ಟಿ ಎಮ್ ಸಿ ಸಾಮರ್ಥ್ಯದ ಡ್ಯಾಮ್ ತುಂಬಲು ಇನ್ನು ಕೇವಲ 12 ಟಿ ಎಮ್ ಸಿ ಬಾಕಿಯಿದೆ.ಕೃಷ್ಣಾ ನದಿಗೆ 55 ಸಾವಿರ ಕ್ಯೂಸೆಕ್ಸದಷ್ಟು ನೀರು ಬಿಡುಗಡೆಯಾಗುತ್ತಿದೆ.ಕಳೆದ …

Read More »

ಸಂಸದ ಅನಂತಕುಮಾರ ಹೆಗಡೆ ಕಾರು ಅಡ್ಡಗಟ್ಟಿದ ರೈತರು

ಕಿತ್ತೂರು ಕ್ಷೇತ್ರದಲ್ಲಿ ಸಂಸದ ಅನಂತಕುಮಾರ್ ಹೆಗಡೆಗೆ ತಟ್ಟಿದ ಪ್ರತಿಭಟನೆಯ ಬಿಸಿ.. ಬ ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕ ಮಹಾಂತೇಶ ದೊಡಗೌಡರ ಇರುವ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ರೈತ ಸಂಘಟನೆ ಕಾರ್ಯಕರ್ತರು ಬೆಳಗಾವಿ- ರೈತರ ಸಮಸ್ಯೆಗಳನ್ನು ಆಲಿಸದೆ ಅಲ್ಲಿಂದ ತೆರಳಲು ಮುಂದಾದ ಸಂಸದ ಅನಂತಕುಮಾರ ಹೆಗಡೆ ಅವರ ವಾಹನಕ್ಕೆ ರೈತರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆದಿದೆ. ಕಿತ್ತೂರು ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ …

Read More »