Breaking News

LOCAL NEWS

ಊಟ.‌ವಸತಿ.‌ಗಾಡಿ .ರೆಡಿ ..ಅತಿಥಿಗಳು ಬರುವದಷ್ಟೇ ಬಾಕಿ…ಸೇಶನ್ ಎಂಬ ಫ್ಯಾಶನ್ ಶೋ ಗೆ ಕ್ಷಣಗಣನೆ ಆರಂಭ

ಬೆಳಗಾವಿ- ಬೆಳಗಾವಿ ಅಧಿವೇಶನಕ್ಕೆ ಇನ್ನೆರಡು ದಿನ ಬಾಕಿ ಉಳಿದಿದೆ ಈಗಿನಿಂದಲೇ ಗೂಟದ ಕಾರುಗಳ ಓಡಾಟ ಬೆಳಗಾವಿಯಲ್ಲಿ ಶುರುವಾಗಿದೆ ಅಧಿಕಾರಿಗಳು ಬೆಳಗಾವಿಗೆ ಬರುವ ಅತಿಥಿಗಳಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿದಲು ಅಹೋ ರಾತ್ರಿ ದುಡಿಯುತ್ತಿದ್ದಾರೆ ಬೆಳಗಾವಿಯಲ್ಲಿ ಪ್ರತಿ ವರ್ಷ ಅಧಿವೇಶನ ನಡೆಯುತ್ತದೆ ಈ ಸಂಧರ್ಭದಲ್ಲಿ ಮಂತ್ರಿಗಳ ಓಡಾಟ ಸೈರನ್ ಸದ್ದು ಕೇಳಿ ಬೆಳಗಾವಿಯ ಜನ ಪುಳಕಿತರಾಗುತ್ತಾರೆ ಸರ್ಕಾರವೇ ಗಂಟು ಮೂಟೆ ಕಟ್ಟಿಕೊಂಡು ಬೆಳಗಾವಿಗೆ ಬಂದಿದೆಯಲ್ಲ ಅಂತಾ ಖುಷಿ ಪಡುತ್ತಾರೆ ಆದ್ರೆ ಅಧಿವೇಶನ …

Read More »

ನಾಳೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸ್ಮಾರ್ಟ್ ಸಿಟಿ ಸಭೆ

ಬೆಳಗಾವಿ- ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಮೇಯರ್ ಬಸವರಾಜ ಚಿಕ್ಕಲದಿನ್ನಿ ಅವರು ನಾಳೆ ನಗರ ಸೇವಕರ ಸಭೆ ಕರೆದಿದ್ದಾರೆ ಪಾಲಿಕೆಯಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲ ನಗರ ಸೇವಕರು ಭಾಗವಹಿಸುವಂತೆ ಮೇಯರ್ ಫರ್ಮಾನು ಹೊರಡಿಸಿದ್ದಾರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಸಮೀತಿಯ ಅಧ್ಯಕ್ಷರಾಗಿದ್ದು ಜಿಯಾವುಲ್ಲಾ ಎಂಡಿ ಯಾಗಿದ್ದಾರೆ ಮೇಯರ್ ಮತ್ತು ನಾಲ್ಕು ಜನ ನಗರ ಸೇವಕರು ಸಮೀತಿಯ ಸದಸ್ಯರಾಗಿದ್ದಾರೆ 2016 ರಲ್ಲಿ ಬೆಳಗಾವಿಯಲ್ಲಿ ಸ್ಮಾರ್ಟ್ …

Read More »

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ,ಮುಖ್ಯ ಆರೋಪಿಗೆ ಜೀವಾವಧಿ ಶಿಕ್ಷೆ..

ಬೆಳಗಾವಿ+ ಅಪ್ರಾಪ್ತ ಬಾಲಕಿಯ ಮೆಲೆ ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ ಮೂರನೆಯ ಜಿಲ್ಲಾ ಸತ್ರ ನ್ಯಾಯಾಲಯವು ಶಿಕ್ಷೆ ಪ್ರಕಟ ಗೊಳಿಸಿದೆ. ಬೆಳಗಾವಿ ರೆಲ್ವೆ ಪೋಲಿಸ್ ಠಾಣೆಯಲ್ಲಿ ಗುನ್ನಾ ನಂಬರ 10/2016 ರಲ್ಲಿ ಪ್ರಕರಣ ದಾಕಲಾಗಿತ್ತು, ಕಲಂ 302,201,376, ನ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು 07/03/2016 ರಲ್ಲಿ ಪ್ರಕರಣ ದಾಖಲಾಗಿತ್ತು, ಈ ಪ್ರಕರಣದ ಎ೧ ಆರೋಪಿ ವಿಜಯ ಮುಟ್ಟುಕ್ಕೊಳ್ಳಿಗೆ ಜಿವಾವದಿ ಶಿಕ್ಷೆ ೨೦ ಸಾವಿರ ದಂಡ ವಿದಿಸಿದರೆ, ಇನ್ನುಳಿದ …

Read More »

ಸ್ಮಶಾನದಲ್ಲಿ ಮದುವೆ …..ಮೌಡ್ಯದ ವಿರುದ್ಧ ಸತೀಶ್ ಜಾರಕಿಹೊಳಿ ಸೆಡ್ಡು…!!!!

ಬೆಳಗಾವಿ-ಮೌಢ್ಯವಿರೋಧಿ ದಿನಾಚರಣೆಯ ಪರಿವರ್ತನಾ ದಿನಾಚರಣೆಯ ಅಂಗವಾಗಿ ಬೆಳಗಾವಿಯ ಸ್ಮಶಾನದಲ್ಲಿ ಮದುವೆಯೊಂದು ನೇರವೇರಿತು ಸ್ಮಶಾನದಲ್ಲಿ ಮದುವೆ ಮಾಡುವ ಮೂಲಕ ಸತೀಶ ಜಾರಕಿಹೊಳಿ ಮುಖಂಡತ್ವದ ಮಾನವ ಬಂಧುತ್ವ ವೇದಿಕೆ ಮೌಡ್ಯದ ವಿರುದ್ಧ ಸೆಡ್ಡು ಹೊಡೆದಿದೆ ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಸತೀಶ ಜಾರಕಿಹೊಳಿ ಡಾ,ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಒಂದು ಜೋಡಿಗೆ ಮದುವೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದ್ದೇವೆ. ದಲಿತರ ಮನೆಗಳಲ್ಲಿ ಸಂವಿಧಾನದ ಪುಸ್ತಕ ಸಿಗೋದಿಲ್ಲ. ಲಿಂಗಾಯತರ ಮನೆಯಲ್ಲಿ ಬಸವಣ್ಣನ ವಚನಗಳು …

Read More »

ಪ್ರತ್ಯೇಕ ‌ಬಜೆಟ್ ಗಾಗಿ ಉತ್ತರ ಕರ್ನಾಟಕದ ಶಾಸಕರಿಗೆ ಲವ್ ಲೆಟರ್ ..,!!!!

ಬೆಳಗಾವಿ- ಉತ್ತರ ಕರ್ನಾಟಕದ ಅಭಿವೃದ್ಧಿ ಗಾಗಿ ಪತ್ಯೇಕ ಬಜೆಟ್ ಮಂಡಿಸುವಂತೆ ಒತ್ತಾಯಿಸಲು ಉತ್ತರ ಕರ್ನಾಟಕದ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಧ್ವನಿಗೂಡಿಸುವಂತೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಉತ್ತರ ಕರ್ನಾಟಕದ 95 ಶಾಸಕರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ ಉತ್ತರ ಕರ್ನಾಟಕದ ಎಲ್ಲ ಪಕ್ಷಗಳ 95 ಜನ ಶಾಸಕರಿಗೆ ಪತ್ರ ಬರೆದು ಬೆಳಗಾವಿಯ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿಯಾಗಬೇಕು ಸರ್ಕಾರ ಪ್ತತ್ಯೇಕ ಬಜೆಟ್ ಮಂಡಿಸಿದರೆ ಮಾತ್ರ …

Read More »

ಪ್ರಧಾನಿ ಮೋದಿ ಸುಳ್ಳುಗಾರ ಅಲ್ಲವೇ ? ಕೋನರೆಡ್ಡಿ ಪ್ರಶ್ನೆ

ಬೆಳಗಾವಿ ಸಮ್ಮಿಶ್ರ ಸರಕಾರದ ಸಿಎಂ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯ ಜಗದೀಶ ಶೆಟ್ಟರ, ಕೋಟ‌ ಶ್ರೀನಿವಾಸ ಪೂಜಾರಿ, ಈಶ್ವರಪ್ಪ ಬಿಜೆಪಿಯ ಡುಬ್ಲಿಕೇಟ್ ನಾಯಕರು ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಲೇವಡಿ‌ ಮಾಡಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ.10 ರಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷ ಬಿಜೆಪಿಯವರು ಸೌಧಕ್ಕೆ ಮುತ್ತಿಗೆ ಹಾಕುವ ಮುನ್ನ ಕೇಂದ್ರ ಸರಕಾರದ ಮೇಲೆ ರಾಜ್ಯದ ಸಮಸ್ಯೆಯ ಬೆಳಕು ಚೆಲ್ಲಬೇಕು ಎಂದು ಒತ್ತಾಯಿಸಿದರು. ಪ್ರಧಾನಿ ನರೇಂದ್ರ ಮೋದಿ ಉದ್ಯಮಿ …

Read More »

ಮೈತ್ರಿ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಸೆಡ್ಡು ಹೊಡೆಯಲಿರುವ ಬಿಜೆಪಿ …

ಇಂದು ಸಾಯಂಕಾಲ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾ ಪದಾಧಿಕಾರಿಗಳ ಸಭೆ ಹಾಗೂ ೧೦ ಡಿಸೆಂಬರ್ ೨೦೧೮ ರಂದು ನಡೆಯಲಿರುವ ಬಿಜೆಪಿ ರೈತ ಸಮಾವೇಶ ಕುರಿತು ಚರ್ಚೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತ ಹಾಗೂ ಜನಪರ ವಿರೋಧ ಸರ್ಕಾರ ವಿರುವದರಿಂದ ಸದನದ ಒಳಗೆ ಹಾಗೂ ಹೊರಗೆ ಪ್ರಜಾತಾಂತ್ರಿಕ ಹೋರಾಟಕ್ಕೆ ಕರೆ ನೀಡಿದರು. ಶಾಸಕರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ …

Read More »

ಕಂಟ್ರಿ ಪಿಸ್ತೂಲ್ ತೋರಿಸಿ ಡಕಾಯತಿ ಮಾಡುತ್ತಿದ್ದ ಖದೀಮರ ಬಂಧನ

ಬೆಳಗಾವಿ- ರಾತ್ರಿ ಹೊತ್ತು ಒಂಟಿ ಯಾಗಿ ಹೋಗುತ್ತಿದ್ದ ಸಾರ್ವಜನಿಕರಿಗೆ ಕಂಟ್ರಿ ಪಿಸ್ತೂಲ್ ,ತಲ್ವಾರ್ ಚಾಕು ಚೂರಿ ತೋರಿಸಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿದ್ದ ಗ್ಯಾಂಗ್ ಶಹಾಪೂರ ಪೋಲೀಸರು ಪತ್ತೆ ಮಾಡಿದ್ದಾರೆ ಶಹಾಪೂರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತಲ್ವಾರ್ ಪಿಸ್ತೂಲ್ ತೋರಿಸಿ ಹಣ ಚಿನ್ನಾಭರಣ ಲೂಟಿ ಮಾಡುತ್ತಿದ್ದ ಆರು ಜನ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದು ಒಂದು ಕಂಟ್ರಿ ಪಿಸ್ತೂಲ್ ತಲ್ವಾರ್ ಮತ್ತು ಕ್ರಿಕೇಟ್ ಸ್ಟ್ಯಾಂಪ್ ವಶಪಡಿಸಿಕೊಂಡಿದ್ದಾರೆ

Read More »

ಮೂವರು ವಿಧ್ಯಾರ್ಥಿಗಳು ನಾಪತ್ತೆ ,ಹುಡುಕಾಟದಲ್ಲಿ ಪೋಲೀಸರು

ಮೂವರು ವಿಧ್ಯಾರ್ಥಿಗಳು ನಾಪತ್ತೆ ,ಹುಡುಕಾಟದಲ್ಲಿ ಪೋಲೀಸರು ಬೆಳಗಾವಿ- ಬೆಳಗಾವಿ ನಗರದ ವೈಭವ ನಗರದ ನಿವಾಸಿಗಳು ಶಿವಯೋಗಿ ಶಾಲೆಯ ಮೂವರು ವಿಧ್ಯಾರ್ಥಿಗಳು ಶಾಲೆಗೆ ಹೋಗುವದಾಗಿ ಮನೆ ಬಿಟ್ಟು ಶಾಲೆಗೆ ಹೋಗದೇ ನಾಪತ್ತೆಯಾದ ಘಟನೆ ನಡೆದಿದೆ ವೈಭವ ನಗರದ ಪೂಜಾರಿ ಕುಟುಂಬದ ಓರ್ವ ಸಹೋದರಿ ಮತ್ತು ಇಬ್ಬರು ಸಹೋದರರು ನಾಪತ್ತೆಯಾಗಿದ್ದು ಶಾಲೆ ಬಿಡುವ ಸಮಯ ಸಂಜೆ 4 ಘಂಟೆಗೆ ಅವರು ಮನೆಗೆ ಮರಳಬಹುದು ಎನ್ನುವ ನಿರೀಕ್ಷೆಯಲ್ಲಿ ಪಾಲಕರಿದ್ದು ಪೋಲೀಸರು ಬೆಳಗಾವಿಯ ಎಲ್ಲ ಗಾರ್ಡನ್ …

Read More »

ಬೆಳಗಾವಿ ಅಧಿವೇಶನದಲ್ಲಿ ತೃತೀಯ ಲಿಂಗಕ್ಕೆ ವಿಶೇಷ ಗೌರವ ಮೋನಿಷಾಗೆ ಸರ್ಕಾರಿ ನೌಕರಿ…..!!!!

ಬೆಳಗಾವಿ ಡಿ ಗ್ರೂಪ್ ಖಾಯಂ ನೌಕರರಾಗಿ ತೃತೀಯ ಲಿಂಗದ ಮೋನಿಷಾ ಎಂಬುವರನ್ನು ವಿಧಾನ ಮಂಡಳದ ಚಳಿಗಾಲದ ಅಧಿವೇಶನದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಯಂ ಸರಕಾರಿ ಹುದ್ದೆ ಪಡೆಯಲಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ‌ ಹೇಳಿದರು. ಬುಧವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ೨೦೧೬ ವಿಧಾನ ಸೌಧದಲ್ಲಿ ಖಾಲಿ ಇದ್ದ ಗ್ರೂಪ್ ಡಿಗೆ ಅರ್ಜಿ ಹಾಕಿದ್ದ ತೃತೀಯ ಲಿಂಗದ ಮೋನಿಷಾ ಎಂಬುವರು ಅರ್ಜಿ ಹಾಕಿದ್ದರು. ಆದರೆ ಸರಕಾರದಿಂದ …

Read More »

ಶಿಕ್ಷಣ ಇಲಾಖೆಯನ್ನು ರಿಪೇರಿ ಮಾಡಲು ಎಬಿವಿಪಿ ಆಗ್ರಹ

ಬೆಳಗಾವಿ ನಿರ್ದೇಶಕರು ಹಾಗೂ ಸಚಿವರಿಲ್ಲದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕೆಂದು ಆಗ್ರಹಿಸಿ ಬುಧವಾರ ಎಬಿಪಿ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಎಸ್ಸೆಸ್ಸೆಲ್ಲಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ. ಈ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸುವುದು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯದ್ದು, ಆದರೆ ಸರಕಾರದ ಒಳ ಒಗಳದಿಂದ ತೆರವಾದ ಸಚಿವ ಸ್ಥಾನವನ್ನು ಭರ್ತಿ ಮಾಡದೆ ಸಮ್ಮಿಶ್ರ ಸರಕಾರ ನಿರ್ಲಕ್ಷ್ಯ ಮಾಡಿರುವುದಕ್ಕೆ ಪ್ರತಿಭಟನಾಕಾರರು …

Read More »

ಸಾಮಾಜಿಕ ಜಾಗೃತಿಗಾಗಿ ಮಹಿಳಾ ಪೋಲೀಸರಿಂದ ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್ ಜಾತಾ….

ಬೆಳಗಾವಿ- ಮಹಿಳಾ ಸಬಲೀಕರಣ ಸೇರಿದಂತೆ ಸಾಮಾಜಿಕ ಜಾಗೃತಿಗಾಗಿ ಕೆಎಸ್ ಆರ್ ಪಿ ಆಯೋಜಿಸಿದ ಸೈಕಲ್ ಜಾತಾ ದಲ್ಲಿ ನೂರಕ್ಕೂ ಹೆಚ್ವು ಮಹಿಳಾ ಪೋಲೀಸರು ಭಾಗವಹಿಸಿದ್ದರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಎಡಿಜಿಪಿ ಭಾಸ್ಕರ್ ರಾವ್ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ನಗರ ಪೋಲೀಸ್ ಆಯುಕ್ತ ರಾಜಪ್ಪ ಸೇರಿದಂತೆ ಹಲವಾರು ಜನ ಅಧಿಕಾರಿಗಳು ಭಾಗವಹಿಸಿದ್ದರು ಮಹಿಳಾ ಪೋಲೀಸ್ ಸೈಕಲ್ ಜಾತಾ ದಲ್ಲಿ ಮೂರು ಜನ ಐಪಿಎಸ್ ಮತ್ತು ಐಎಎಸ್ ಮಹಿಳಾ …

Read More »

ಬೆಳಗಾವಿ ರೆಲ್ವೆ ಓವರ್ ಬ್ರಿಡ್ಜ ಉದ್ಘಾಟನೆಗೆ ನಾಳೆ ಮಹೂರ್ತ ಫಿಕ್ಸ….!!!!

ಬೆಳಗಾವಿಯ ರೆಲ್ವೆ ಮೇಲ್ಸೇತುವೆ ಕಾಮಗಾರಿ ಫುಲ್ ಫಾಸ್ಟ….!!! ಬೆಳಗಾವಿ- ಬೆಳಗಾವಿ ರೆಲ್ವೆ ನಿಲ್ದಾಣದ ಬಳಿಯ ರೆಲ್ವೇ ಮೇಲ್ಸೇತುವೆ ಕಾಮಗಾರಿ ಫುಲ್ ಫಾಸ್ಟ ನಡೆಯುತ್ತಿದೆ ಸಂಸದ ಸುರೇಶ ಅಂಗಡಿ ಅವರು ಸೇತುವೆ ಕಾಮಗಾರಿ ಮುಗಿಸಲು ಹಲವಾರು ಬಾರಿ ಡೆಡ್ ಲೈನ್ ಕೊಟ್ಟಿದ್ದರು ಎಲ್ಲ ಡೆಡ್ ಲೈನ್ ಗಳನ್ನು ಮೀರಿರುವ ಈ ಕಾಮಗಾರಿ ಈಗ ಮುಕ್ತಾಯದ ಹಂತ ತಲುಪುವ ಸನೀಹದಲ್ಲಿದೆ ಸೇತುವೆ ಕಾಮಗಾರಿಯಿಂದಾಗಿ ಬೆಳಗಾವಿ ನಗರದ ಸಂಚಾರವೇ ಅಸ್ತವ್ಯೆಸ್ತವಾಗಿತ್ತು ಸೇತುವೆ ಕಾಮಗಾರಿಯಿಂದಾಗಿ ಬೆಳಗಾವಿ …

Read More »

ಸಚಿವ ರಮೇಶ್ ಜಾರಕಿಹೊಳಿ ಅವರನ್ನು ವಜಾ ಮಾಡಲು ಶಂಕರ ಮುನವಳ್ಳಿ ಆಗ್ರಹ

ಜಾರಕಿಹೊಳಿ ಸಹೋದರರ ಶಾಸಕತ್ವ ವಜಾ ಮಾಡಿ: ಮುನವಳ್ಳಿ ಬೆಳಗಾವಿ ಸಮ್ಮಿಶ್ರ ಸರಕಾರದಲ್ಲಿ ನಮ್ಮ ಶಾಸಕರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಬೇದರಿಕೆ ಹಾಕುತ್ತಿರುವ ಕಾಂಗ್ರೆಸ್ ನ ಜಾರಕಿಹೊಳಿ ಸಹೋದರರ ಶಾಸಕತ್ವ ಸ್ಥಾನವನ್ನು ರದ್ದು ಪಡಿಸಬೇಕೆಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾನವ ಬಂಧುತ್ವ ವೇದಿಕೆಯಿಂದ ನಮ್ಮ ಸಮಾಜದವರನ್ನು ಹತ್ತಿಕ್ಕುವ ಒಂದು ಸಂಘ. ಪರಿಶಿಷ್ಟ ಜಾತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಯಾರು ರಾಜಕೀಯವಾಗಿ ಬೆಳೆಯಬಾರದು ಎಂಬ ದುರುದ್ದೇಶದಿಂದ …

Read More »