Breaking News

LOCAL NEWS

ರಮೇಶ ಜಾರಕಿಹೊಳಿ ನಮ್ಮ ಪಕ್ಷದವನಾ ?: ಶಾಸಕ ರಾಜು ಕಾಗೆ ಕಿಡಿ ….!!

ಚಿಕ್ಕೋಡಿ: ಅವನೇನು ನಮ್ಮ ಪಕ್ಷದವನಾ? ಅವನು ಬಿಜೆಪಿಯವನು.ಏನ್ ಬೇಕಾದರೂ ಹೇಳ್ತಾನೆ ?ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲೇ ‘ಕೈ’ ಶಾಸಕ ರಾಜು ಕಾಗೆ ವಾಗ್ದಾಳಿ ನಡೆಸಿದರು. ಗುರುವಾರ ಕಾಗವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್‌ನ 30 ಶಾಸಕರು ಶಾಂಗ್ರಿಲಾ ಹೋಟೆಲ್‌ನಲ್ಲಿ ಸೇರೋರಿದ್ರು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆಂಡಾಮಂಡಲರಾದರು. ಅವನಿಗೆ ಕೆಲಸ ಇಲ್ಲ ಹೀಗಾಗಿ ಹೇಳುತ್ತಿರುತ್ತಾನೆ, ನಮಗೆ ಮಾಡಲು ಬಹಳಷ್ಟು ಕೆಲಸಗಳಿವೆ. ಸರ್ಕಾರದಲ್ಲಿ ಇದೀವಿ, ಅತೃಪ್ತಿ ಏನೂ ಇಲ್ಲ, ಆಪರೇಷನ್ …

Read More »

ಕುಲಗೋಡಕ್ಕೆ ನಾಡ ಕಛೇರಿ : ಬಾಲಚಂದ್ರ ಜಾರಕಿಹೊಳಿ ಭರವಸೆ

ಮೂಡಲಗಿ : ಕುಲಗೋಡ ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿರುವ ನಾಡ ಕಛೇರಿಯನ್ನು ಕುಲಗೋಡದಲ್ಲಿ ಆರಂಭಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು. ಕುಲಗೋಡ ಗ್ರಾಮದ ಬಲಭೀಮ ದೇವಸ್ಥಾನದಲ್ಲಿ ಗ್ರಾಮಸ್ಥರ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕುಲಗೋಡ ಗ್ರಾಮವು ಈಗಾಗಲೇ ಅರಭಾವಿ ನಾಡ ಕಛೇರಿಗೆ ಒಳಪಟ್ಟಿದ್ದರಿಂದ ಇಲ್ಲಿನ ಸಾರ್ವಜನಿಕರಿಗೆ ಅರಭಾವಿ ದೂರವಾಗುತ್ತಿರುವುದರಿಂದ ಕುಲಗೋಡದಲ್ಲಿಯೇ ಈ ಕಛೇರಿಯನ್ನು ಆರಂಭಿಸಲಿಕ್ಕೆ ಕಂದಾಯ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೇಸ್ …

Read More »

ಲಕ್ಷ್ಮೀ ಹೆಬ್ಬಾಳಕರ್ ಜನತಾ ದರ್ಶನದಲ್ಲಿ ಜನಜಾತ್ರೆ…!!

ಬೆಳಗಾವಿ- ಲಕ್ಷ್ಮೀ ಹೆಬ್ಬಾಳಕರ್ ಅವರು ಕುವೆಂಪು ನಗರದ ಗೃಹ ಕಚೇರಿಯಲ್ಲಿ ನಡೆಸುತ್ತಿರುವ ಜನತಾ ದರ್ಶನದಲ್ಲಿ ಜನಜಾತ್ರೆಯೇ ಸೇರುತ್ತಿದೆ. ಗ್ರಾಮೀಣ ಕ್ಷೇತ್ರದ ಜನರ ಪಾಲಿಗೆ ಹೆಬ್ಬಾಳಕರ್ ಗೃಹ ಕಚೇರಿ ಅಕ್ಷಯ ಪಾತ್ರೆಯಾಗಿದ್ದು ಸತ್ಯ. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ, ಗೃಹಲಕ್ಷ್ಮೀ ಯೋಜನೆಯ ಅಡ್ಡಿ ಆತಂಕಗಳನ್ನು ತಾಂತ್ರಿಕ ತೊಂದರೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ, ಮೈಸೂರು ಮಹಾರಾಜರ ಅಂಗಳದಲ್ಲಿ ಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮವನ್ನು ನಿಭಾಯಿಸಿ ರಾಜ್ಯದ ಜನರ ಗಮನ ಸೆಳೆದಿರುವ ಮಿನಿಸ್ಟರ್ …

Read More »

ಬೆಳಗಾವಿ ಎಸ್ಪಿ ಸಂಜೀವ ಪಾಟೀಲ ವರ್ಗಾವಣೆ….!!

ಬೆಳಗಾವಿ- ಭೌಗೋಳಿಕವಾಗಿ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿಗಳಾಗಿ,ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಮಾಡಿ ಅಪಾರ ಜನಮೆಚ್ಚುಗೆ ಗಳಿಸಿದ್ದ ಸಂಜೀವ ಪಾಟೀಲ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ನಿನ್ನೆ ರಾತ್ರಿ ಆದೇಶ ಹೊರಡಿಸಿದೆ. ಇವರ ವರ್ಗಾವಣೆ ಯಿಂದ ತೆರವಾದ ಸ್ಥಾನಕ್ಕೆ ಭೀಮಾಶಂಕರ ಗುಳೇದ ಅವರನ್ನು ನೇಮಿಸಲಾಗಿದ್ದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಬೆಳಗಾವಿ ಜಿಲ್ಲೆ,ಕರ್ನಾಟಕ, ಮಹಾರಾಷ್ಟ್ರ, ಮತ್ತು ಗೋವಾ ರಾಜ್ಯಗಳ …

Read More »

ತುಮಕೂರು ಬಳಿ ಭೀಕರ ಅಪಘಾತ ಬೆಳಗಾವಿ ಮೂಲದ ನಾಲ್ವರ ಸಾವು..

ಬೆಳಗಾವಿ- ತುಮಕೂರು ಬಳಿ,ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೆಳಗಾವಿ ನಗರದ ವಡಗಾವಿ ಮೂಲದ ಒಂದೇ ಕುಟುಂಬದ ನಾಲ್ವರು ಮೃತ ಪಟ್ಟಿದ್ದು ಮೂರು ಜನ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ತುಮಕೂರು ಬಳಿ ಇಂದು ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೆಳಗಾವಿ ನಗರದ ವಡಗಾವಿ ಪ್ರದೇಶದ ನಿಜಾಮ ಮೋಹಲ್ಲಾ ನಿವಾಸಿಯಾದ,ಸಮಶೋ ಶೇಖ 55 ತಂದೆ,ತಬ್ರೇಜ್ 12 ವರ್ಷ ಮಗ, ಖಲೀಲ್ ಶರೀಪ್ ಹಾಗು ಮಲೀದಾ …

Read More »

ನನ್ನ ರುಂಡ ಸಹ ಕಾಂಗ್ರೆಸ್ಸಿಗೆ ಹೋಗಲ್ಲ -ರಮೇಶ್ ಜಾರಕಿಹೊಳಿ

ಬೆಳಗಾವಿ-ಮತ್ತೆ ಡಿಸಿಎಂ ಡಿಕೆಶಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಗೋಕಾಕ್ ಸಾಹುಕಾರ್ ನನ್ನ ರುಂಡ ಸಹ ಅಲ್ಲಿಗೆ ಹೋಗೋಲ್ಲ,ಅದು ಇಲ್ಲೇ,ಬಿಜೆಪಿಯಲ್ಲೇ ಉಳಿಯುತ್ತದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಥಣಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಆಪರೇಷನ್ ಹಸ್ತದ ಮೂಲ ಉದ್ದೇಶ ಏಕೆ ಶುರುವಾಯ್ತು ಕೇಳಿ ಎಂದ ರಮೇಶ್ ಜಾರಕಿಹೊಳಿ,ಕಾಂಗ್ರೆಸ್ ಪಕ್ಷದ 25 ರಿಂದ 30 ಹಿರಿಯ ಶಾಸಕರು ಮುಂದಿನ ನಿರ್ಣಯಕ್ಕೆ ಸೇರೋರಿದ್ರು ಕಾಂಗ್ರೆಸ್ ವಿರುದ್ಧ ಬಂಡಾಯ ಸಾರುವ ಹೆದರಿಕೆಯಿಂದ …

Read More »

ಆಪರೇಷನ್ ಹಸ್ತ, ಅಖಾಡಕ್ಕಿಳಿದ ಮಾಜಿ ಸಿಎಂ ಜಗದೀಶ ಶೆಟ್ಟರ್!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಆಪರೇಷನ್ ಹಸ್ತದ ಬ್ರೇಕ್ ಫಾಸ್ಟ್ ಶುರುವಾಗಿದೆ.ಬೆಳಗಾವಿ ಅಖಾಡಕ್ಕಿಳಿದ ಮಾಜಿ ಸಿಎಂ ಜಗದೀಶ ಶೆಟ್ಟರ್,ಬೆಳಗಾವಿಯ ಅತೃಪ್ತ ಬಿಜೆಪಿ ನಾಯಕರ ಸೆಳೆಯಲು‌ ಶೆಟ್ಟರ್ ಮುಂದಾಗಿದ್ದಾರೆ. ಲಿಂಗಾಯತ ಹಾಗೂ ಮರಾಠಾ ಸಮುದಾಯದ ನಾಯಕರನ್ನೇ ಕಾಂಗ್ರೆಸ್ ‌ಟಾರ್ಗೆಟ್ ಮಾಡಿದೆ.ರಾಮದುರ್ಗ ‌ಮಾಜಿ ಶಾಸಕ ಮಹಾದೇವಪ್ಪ ಯಾರವಾಡ‌ಗೆ ಕಾಂಗ್ರೆಸ್ ಗಾಳ ಹಾಕಿದೆ.ಯಾದವಾಡರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಪರೇಷನ್ ಹಸ್ತ ಆರಂಭಿಸಿದ್ದಾರೆ. ರಾಮದುರ್ಗ ಕಾಂಗ್ರೆಸ್ ಶಾಸಕ ಅಶೋಕ ‌ಪಟ್ಟಣ್ ಸಮ್ಮುಖದಲ್ಲಿ ಯಾದವಾಡ …

Read More »

ಬೆಳಗಾವಿಯಲ್ಲಿ ನರಿ ದಾಳಿ ಇಬ್ಬರಿಗೆ ಗಾಯ….!!

ಬೆಳಗಾವಿ- ಇತ್ತೀಚಿಗೆ ಬೆಳಗಾವಿಯ ಶಾಸ್ತ್ರೀ ನಗರದಲ್ಲಿ ನರಿ ಪ್ರತ್ಯಕ್ಷವಾದ ಬೆನ್ನಲ್ಲಿಯೇ ಬೆಳಗಾವಿಯ ವೀರಭದ್ರ ನಗರದಲ್ಲಿ ನರಿ ದಾಳಿ ಮಾಡಿದ್ದು ಇಬ್ಬರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಇಬ್ಬರು ಬೈಕ್ ಸವಾರರ ಮೇಲೆ ನರಿಯೊಂದು ದಾಳಿ ಮಾಡಿದ್ದು ಕಾಲಿಗೆ ಕಚ್ಚಿ ಪರಾರಿಯಾಗಿದೆ.ನರಿ ದಾಳಿಯಿಂದ ಅಲ್ಪ ಗಾಯಗೊಂಡ ಇಬ್ಬರು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ರಾತ್ರಿ ಹೊತ್ತು ವೀರಭದ್ರ ನಗರದಲ್ಲಿ ಇಬ್ಬರು ಬೈಕ್ ಮೇಲೆ ಹೋಗುತ್ತಿರುವಾಗ ನರಿ ಏಕಾ …

Read More »

ಕ್ಷಮೆ ಕೇಳಲು ಬಂದವ,ಕೊಲೆಗಾರನಾದ…!!

ಚಿಕ್ಕೋಡಿ-ಅನುಮಾನ ಎನ್ನುವ ರೋಗಕ್ಕೆ ಯಾವುದೇ ಔಷಧೀಯೇ ಇಲ್ಲ.ಅನುಮಾನದ ಭೂತಕ್ಕೆ ಭಾವನ ಕತ್ತು ಸೀಳಿ ಬಾಮೈದ ಕೊಲೆ ಮಾಡಿರವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕಳೆದ ರಾತ್ರಿ ನಡೆದಿದೆ ಪಟ್ಟಣದ ವಿದ್ಯಾನಗರ ನಿವಾಸಿ ಮಾಜಿ ಯೋಧ ಈರಗೌಡ ಟೋಪಗೋಳ(45) ಕೊಲೆಯಾದ ದುರ್ದೈವಿ ನಿನ್ನೆ ಸಂಜೆ ಚಿಕ್ಕೋಡಿಯ ವಿಧ್ಯಾ ನಗರದಲ್ಲಿ ಕತ್ತು ಸೀಳಿ ಮಾಜಿ ಯೋಧನ ಬರ್ಬರ ಹತ್ಯೆ ಮಾಡಲಾಗಿದೆ. ಮಾಜಿ ಯೋಧ ರನ್ನು ಸ್ವಂತ ಬಾಮೈದ ಸಂಜಯ್ ಬಾಕರೆ ಕತ್ತು …

Read More »

2.75 ಕೋಟಿ ರೂ ಕಾಮಗಾರಿಗೆ ಇಂದು ಗುದ್ದಲಿ ಪೂಜೆ,ಮೂರು ತಿಂಗಳಲ್ಲಿ ಪೂರ್ಣ..

*ಮೂಡಲಗಿ*: ನಾಗನೂರು ಪಟ್ಟಣದ ಜನರ ಪ್ರಮುಖ ಬೇಡಿಕೆಯಾಗಿದ್ದ ಬ್ರೀಡ್ಜ್—ಕಂ-ಬ್ಯಾರೇಜ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 2.75 ಕೋಟಿ ರೂಪಾಯಿ ಅನುದಾನ ಬಂದಿದ್ದು, ಇದೇ ನವೆಂಬರ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ರವಿವಾರದಂದು ತಾಲೂಕಿನ ನಾಗನೂರ ಪಟ್ಟಣದ ಲಕ್ಷ್ಮೀದೇವಿ ದೇವಸ್ಥಾನ ಹತ್ತಿರ ಸಣ್ಣ ನೀರಾವರಿ ಇಲಾಖೆಯಿಂದ ಹಳ್ಳಕ್ಕೆ ಅಡ್ಡಲಾಗಿ ಬ್ರೀಡ್ಜ್—ಕಂ-ಬ್ಯಾರೇಜ್ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಬ್ಯಾರೇಜ್ ನಿರ್ಮಾಣದಿಂದ ರೈತರು …

Read More »

ತೇಲಗಿ ಕಹಾನಿ ಈಗ ವೆಬ್ ಸೀರೀಸ್ ಸೋನಿ ಆ್ಯಪ್ ನಲ್ಲಿ ರಿಲೀಸ್…!!

ಕರೀಂ ಲಾಲಾ ತೇಲಗಿ ಕಹಾನಿ ಈಗ ವೆಬ್ ಸಿರೀಸ್…. ಬೆಳಗಾವಿ- ಸೋನಿ ಟಿವ್ಹಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡ್ರೆ Scam 2023 ಎಂಬ ವೆಬ್ ಸೀರೀಸ್ ಪೋಸ್ಟರ್ ಪ್ರತ್ಯಕ್ಷ ಆಗುತ್ತದೆ.ಇದನ್ನು ನೋಡುತ್ತ ಹೋದ್ರೆ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿ ನಡೆದ ನಕಲಿ ಛಾಪಾ ಕಾಗದ ಹಗರಣದ ಸಂಪೂರ್ಣ ಕಹಾನಿ ನಮ್ಮ ಕಣ್ಣೆದುರಿಗೆ ಬರುವದರಲ್ಲಿ ಸಂದೇಹವೇ ಇಲ್ಲ. ನಾವೂ ತೀರಾ ಹತ್ತಿರದಿಂದ ನೋಡಿದ ವ್ಯಕ್ತಿ ಕುರಿತಾದ ಬಹುಕೋಟಿ ಹಗರಣದ ವೆಬ್ ಸೀರಿಜ್ ಈಗ …

Read More »

ಮಲ್ಲಿಕಾರ್ಜುನ್ ಜಗಜಂಪಿ ಅವರೂ MP ಇಲೆಕ್ಷನ್ ಗೆ ನಿಲ್ತಾರಂತೆ….!!

ಬೆಳಗಾವಿ-ಬಜಾಜ್ ಕಂಪನಿಯ ಬೈಕ್ ಗಳನ್ನು ಬೆಳಗಾವಿ ಜಿಲ್ಲೆಯ ಹಳ್ಳಿ,ಹಳ್ಳಿಗಳಲ್ಲಿ ಮಾರಾಟ ಮಾಡಿ ದಾಖಲೆ ಮಾಡುವ ಮೂಲಕ ಬೆಳಗಾವಿಯ ಯಶಸ್ವಿ ಉದ್ಯಮಿಯಾಗಿರುವ ಮಲ್ಲಿಕಾರ್ಜುನ್ ಜಗಜಂಪಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ವ್ಯಾಟ್ಸಪ್ ಸಂದೇಶ ಕಳುಹಿಸಿರುವ ಅವರು,ನಾನು ಬಿಜೆಪಿಯ ಸದಸ್ಯನೂ ಅಲ್ಲ,ನಾನು ಕಾಂಗ್ರೆಸ್ಸಿನ ಸದಸ್ಯನೂ ಅಲ್ಲ.ನಾನು ಬೆಳಗಾವಿ ಜಿಲ್ಲೆಯ ಜನಸಾಮಾನ್ಯರ …

Read More »

ಬೆಳಗಾವಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ..

ಬೆಳಗಾವಿ- ಬೆಳಗಾವಿಯ ರಾಮತೀರ್ಥ ನಗರದಲ್ಲಿ ನವಜಾತ ಶಿಶುವನ್ನು ರಸ್ತೆಯಲ್ಲಿ ಎಸೆದು ಹೋದ ಘಟನೆ ಬೆಳಗಾವಿಯ ರಾಮತೀರ್ಥ ನಗರದಲ್ಲಿ ನಡೆದಿದೆ. ಇಂದು ಬೆಳಗ್ಗೆ ಒಂದು ದಿನದ ಈ ಶಿಶುವನ್ನು ರಾಮತೀರ್ಥ ನಗರದ ರಸ್ತೆಯ ಪಕ್ಕದಲ್ಲೇ ಇರುವ ಗಿಗಂಟೆಗಳಲ್ಲಿ ಎಸೆದು ಹೋಗಿದ್ದು ಈ ಶಿಶು ಶವವಾಗಿ ಪತ್ತೆಯಾಗಿದೆ.ಬಹುಶ ಈ ಶಿಶು ಇಲ್ಲೇ ಉಸಿರು ನಿಲ್ಲಿಸಿದೆ ಎಂದು ಶಂಕಿಸಲಾಗಿದೆ. ಬೆಳಗಾವಿಯ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು.ಈ ಶಿಶು ಯಾರದ್ದು ? ಇದನ್ನು …

Read More »

ಚಾಕುವಿನಿಂದ ಕತ್ತು ಸೀಳಿ ಬಾವನ ಹತ್ಯೆಗೈದ ಬಾಮೈದ…

ಚಿಕ್ಕೋಡಿ-ಚಾಕುವಿನಿಂದ ಬಾವನ ಕತ್ತು ಸೀಳಿ ಬಾಮೈದನೇ ಕೊಲೆ ಮಾಡಿದ ಘಟನೆ,ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ವಿದ್ಯಾನಗರದಲ್ಲಿ ನಡೆದಿದೆ. ಕತ್ತು ಸೀಳಿ ನಿವೃತ್ತ ಯೋಧ ಈರಗೌಡ ಟೋಪಗೋಳ(45) ಹತ್ಯೆ ಮಾಡಲಾಗಿದೆ.ಕೊಲೆಯಾದ ಈರಗೌಡ ಪತ್ನಿಯ ಸಹೋದರ ಸಂಜಯ್ ಭಾಕರೆಯಿಂದ ಕೃತ್ಯ ನಡೆದಿದೆ.ಸೇನೆಯಿಂದ ವಾಪಸ್ ಆದ ಬಳಿಕ ಸ್ಟೋನ್‌ ಕ್ರಷರ್ ಘಟಕ ನಡೆಸುತ್ತಿದ್ದ ಈರಗೌಡ,ಮೂಲತಃ ಜೈನಾಪುರ ಗ್ರಾಮದ ನಿವಾಸಿಯಾಗಿದ್ದ. ಇಂದು ಸಂಜೆ ಬಾವ ಈರಗೌಡ ಭೇಟಿಗೆ ಆಗಮಿಸಿದ್ದ ಸಂಜಯ್,ಈ ವೇಳೆ ಪತ್ನಿ ಮನೆಯೊಳಗೆ ಇದ್ದಾಗ ಚಾಕುವಿನಿಂದ …

Read More »

ಬೆಳಗಾವಿ ಯುವಕನ ಕೊಲೆ ಮಾಡಿದ ಆರೋಪಿಗಳು ಅರೆಸ್ಟ್ …

ಕೊಲೆಯಾದ  ಬೆಳಗಾವಿಯ ನಾಗರಾಜ್ ಗಾಡಿವಡ್ಡರ್… ಬೆಳಗಾವಿ- ಇತ್ತೀಚಿಗೆ ಬೆಳಗಾವಿ ಶಿವಬಸವ ನಗರದಲ್ಲಿ ಬೆಳಗಾವಿಯ ಯುವಕ ನಾಗರಾಜ್ ಗಾಡಿವಡ್ಡರ್ ಕೊಲೆ ಪ್ರಕರಣವನ್ನು ಬೆಳಗಾವಿಯ ಮಾಳಮಾರುತಿ ಠಾಣೆಯ ಪೋಲೀಸರು 48 ಗಂಟೆಯೊಳಗಾಗಿ ಭೇದಿಸಿದ್ದು,ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂರು ಜನ ಹಂತಕರ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ‌.ಈತನ ಬಂಧನಕ್ಕೆ ಬೆಳಗಾವಿ ಪೋಲೀಸರು ಜಾಲ ಬೀಸಿದ್ದು ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿದ್ದಾರೆ. ನಾಗರಾಜ್ ಗಾಡಿವಡ್ಡರ್ ಕೊಲೆಗೆ ಲವ್ ಮ್ಯಾಟರ್ ಕಾರಣ …

Read More »