Breaking News

LOCAL NEWS

ಸಮಸ್ಯೆಗಳ ಪರಿಹಾರಕ್ಕಾಗಿ ಸಂವಾದ…..ವ್ಯಾಪಾರಿಗಳಿಗೆ ಶಾಸಕರ ಆಶಿರ್ವಾದ….!!!!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳಿಗೆ ಪರಿಹಾರ ದೊರಕಿಸಿಕೊಡಲು ಶಾಸಕ ಅಭಯ ಆಟೀಲ ಮುಂದಾಗಿದ್ದು ಇಂದು ಸಂಜೆ ಬೆಳಗಾವಿಯಲ್ಲಿ ವ್ಯಾಪಾರಿಗಳ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಂಜೆ 4- 30 ಘಂಟೆಗೆ ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿರುವ ಅಂಭಾಬಾಯಿ ದೇವಸ್ಥಾನದಲ್ಲಿ ಶಾಸಕ ಅಭಯ ಪಾಟೀಲ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು ,ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂವಾದದ ಮೂಲಕ ಆಲಿಸಿ,ದಕ್ಷಿಣ ಮತಕ್ಷೇತ್ರದ ವ್ಯಾಪಾರ ವೃದ್ಧಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲು …

Read More »

ಶಿಕ್ಷಕನ ಸೆಕ್ಸ ಸ್ಕ್ಯಾಂಡಲ್….ಸೋಸಿಯಲ್ ಮಿಡಿಯಾದಲ್ಲಿ ವೈರಲ್…!!!

  ನಂಜನಗೂಡು- ಸರ್ಕಾರಿ ಶಾಲೆಯ ಮಾಸ್ತರನೊಬ್ಬ ಮಾಡಬಾರದ ಹಲ್ಕಟ್ ಕೆಲಸ ಮಾಡಿದ್ದಾನೆ ತನ್ನ ಹಳೇ ವಿದ್ಯಾರ್ಥಿನಿಯೊಂದಿಗೆ ರಾಸಲೀಲೆ ನಡೆಸಿದ್ದು, ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಶಿಕ್ಷಕ ಈಗ ಊರು ಬಿಟ್ಟು ಪರಾರಿಯಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕನ ರಾಸಲೀಲೆಯ ಪೋಟೋಗಳು ವೈರಲ್ ಆಗಿ ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಈ ಶಿಕ್ಷಕ ಜಾಗ ಖಾಲಿ ಮಾಡಿದ್ದಾನೆ. 58 ವರ್ಷದ ಶಿಕ್ಷಕ ಸಿದ್ದರಾಜು ಎಂಬಾತ ತನ್ನ ಮಗಳ ವಯಸ್ಸಿನ 20 …

Read More »

ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ, ಮಾರ್ಚ್ ೧೦ರಿಂದ ೧೮ರ ವರೆಗೆ

ಬೆಳಗಾವಿ: ಐದು ವರ್ಷಕ್ಕೊಮ್ಮೆ ನಡೆಯುವ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟçದಲ್ಲಿ ಹೆಸರುವಾಸಿಯಾಗಿದ್ದು, ಮಾರ್ಚ್ ೧೦ರಿಂದ ೧೮ರ ವರೆಗೆ ಜಾತ್ರೆ ವಿಜೃಂಭಣೆಯಿಂದ ನೆರವೇರಲಿದೆ ಎಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಚೇರಮನ್ ದೇವಣ್ಣ ಬಂಗೇನ್ನವರ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿಶೇಷ ಹಾಗೂ ಮಾದರಿ ಜಾತ್ರೆ ಎನಿಸಿರುವ ಇಲ್ಲಿ ಲಕ್ಷಾಂತರ ಭಕ್ತರು …

Read More »

ಹೊನ್ನಿಹಾಳ ಮರ್ಡರ್ ಕೇಸ್ ಮತ್ತೆ ಇಬ್ಬರು ಆರೋಪಿಗಳ ಬಂಧನ

ಹೊನ್ನಿಹಾಳ ಯೋಧನ ಕೊಲೆ ಪ್ರಕರಣ. ಇಬ್ಬರು ಆರೋಪಿಗಳ ಬಂಧನ ಬೆಳಗಾವಿ- ಯೋಧನ ಹತ್ಯೆ ಮಾಡಿ ಗೊಡಚಿನಮಲ್ಕಿಯಲ್ಲಿ ಶವ ಎಸೆದ ಪ್ರಕರಣಕ್ಕೆ ಸಮಂಧಿಸಿದಂತೆ ಮಾರಿಹಾಳ ಪೋಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹೊನ್ನಿಹಾಳ ಗ್ರಾಮದಲ್ಲಿ ಯೋಧನ ಹೆಂಡತಿ ಕಾರಿನ ಚಾಲಕನ ಜೊತೆ ಸೇರಿ ತನ್ನ ಗಂಡನ ಕೊಲೆ ಮಾಡಿ ಗೊಡಚಿನಮಲ್ಕಿಯಲ್ಲಿ ಶವ ಎಸೆದಿದ್ದರು ಈ ಪ್ರಕರಣಕ್ಜೆ ಸಮಂಧಿಸಿದಂತೆ ಮಾರಿಹಾಳ ಪೋಲೀಸರು ಅಂಜಲಿ ಮತ್ತು ಅವಳ ಪ್ರಿಯಕರನನ್ನು ಬಂಧಿಸಿದ್ದರು ಈ ಕೊಲೆ ಪ್ರಕರಣದಲ್ಲಿ …

Read More »

ಪಾತಾಳಕ್ಕಿಳಿದ ಕ್ಯಾಬೀಜ್ ಬೆಲೆ…. ಬೀದಿಗೆ ಬಂದ ರೈತ…..!!!!

ಪಾತಾಳಕ್ಕಿಳಿದ ಕ್ಯಾಬೀಜ್ ಬೆಲೆ ಬೀದಿಗೆ ಬಂದ ರೈತ…..!!!! ಬೆಳಗಾವಿ- ಬೆಳಗಾವಿಯ ತರಕಾರಿ ಮಾರ್ಕೆಟ್ ನಲ್ಲಿ ಕ್ಯಾಬೀಜ್ ಬೆಲೆ ಕೆಜಿ ಗೆ 50 ಪೈಸೆ ಇಷ್ಟು ದರದಲ್ಲಿ ಕ್ಯಾಬೀಜ್ ಬೆಳೆದ ರೈತನಿಗೆ ಕ್ಯಾಬೀಜ್ ಕಟಾವ್ ಮಾಡಿದ ಕೂಲಿಯೂ ಸಿಗೋದಿಲ್ಲ ,ಕ್ಯಾಬೀಜ್ ಬೆಲೆ ಪಾತಾಳಕ್ಕೆ ತಲುಪಿರುವ ಕಾರಣ ಕ್ಯಾಬೀಜ್ ಬೆಳೆದ ರೈತ ಬೀದಿಗೆ ಬಂದಿದ್ದಾನೆ ಬೆಳಗಾವಿ ಸಮೀಪದ ಕಡೋಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕ್ಯಾಬೀಜ್ ಬೆಳೆಯಲಾಗುತ್ತಿದೆ.ಅದರ ಬೆಲೆ ಏಕಾ ಏಕಿ ಕುಸಿದಿರುವದರಿಂದ ಹೈರಾಣಾಗಿರುವ …

Read More »

ಮಹಾದಾಯಿ ಕಾನೂನು ತೊಡಕು ನಿವಾರಣೆ ನಂತರ ಕಾಮಗಾರಿ-ರಮೇಶ್ ಜಾರಕಿಹೊಳಿ

ಬೆಳಗಾವಿ-ಮಹಾದಾಯಿ ನದಿ ನೀರಿನ ಹಂಚಿಕೆ ಕುರಿತು ಸರ್ವೋಚ್ಛ ನ್ಯಾಯಾಲಯದ ಐತೀರ್ಪಿನ್ವಯ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಪೂರ್ಣಪ್ರಮಾಣದಲ್ಲಿ ಕಾನೂನು ತೊಡಕು ನಿವಾರಣೆಯ ನಂತರ ಕಳಸಾ ಬಂಡೂರಿ ನಾಲಾ ಯೋಜನೆಯ ಅನುಷ್ಟಾನವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ನೀರಾವರಿ ಖಾತೆ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಅಂತಿಮ ತೀರ್ಪು ಬರುವ ಜುಲೈ ತಿಂಗಳಿನಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ನಾಡಿದ್ದು …

Read More »

ಜಿಲ್ಲೆಯ 12 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ

ಬೆಳಗಾವಿ,ಬೇಸಿಗೆ ಆರಂಭಗೊಂಡಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಅಧಿಕಾರಿಗಳು ಈಗಿನಿಂದಲೇ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ‌.ಎಲ್.ಅತೀಕ್ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಫೆ.29) ನಡೆದ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ 12 ಗ್ರಾಮ ಪಂಚಾಯತಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡುಬಂದಿದ್ದು, ಮಾರ್ಚವರೆಗೆ ಇನ್ನೂ ಹೆಚ್ಚಿನ ಸಂಖ್ಯೆಯ …

Read More »

ಬಿಜೆಪಿ ಸಿಂಬಾಲ್,ಎಂಈಎಸ್ ಕಂಗಾಲ್,ಕಾಂಗ್ರೆಸ್ಸಿಗೆ ಸವಾಲ್…!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಗ್ರಹಣ ಹಿಡಿದಿದೆ‌.ಚುನಾವಣೆ ಯಾವಾಗ ನಡೆಯುತ್ತದೆ ಅನ್ನೋದು ಗೊತ್ತಿಲ್ಲ.ಆದ್ರೆ ಚುನಾವಣೆಯ ಕಾವು ಆರಂಭವಾಗಿರುವುದು ಸತ್ಯ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸಿಂಬಾಲ್ ಮೇಲೆ ಚುನಾವಣೆ ಎದುರಿಸಲು ನಿರ್ಧರಿಸಿದೆ .ಬಿಜೆಪಿಯ ಈ ನಿರ್ಧಾರ ಮಹಾರಾಷ್ಟ್ರ ಏಕೀಕರಣ ಸಮೀತಿಗೆ ನಡುಕ ಹುಟ್ಟಿಸಿದೆ.ಕಾಂಗ್ರೆಸ್ ಚಿಂತೆಗೆ ಬಿದ್ದಿದೆ ,ಜೆಡಿಎಸ್ ಬಂಡಾಯ ನಾಯಕರಿಗೆ ಬಲೆ ಹಾಕಲು ಚಿಂತನೆ ಮಾಡುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಷ್ಟು ದಿನ ಭಾಷಾ ಆಧಾರದ ಮೇಲೆ ಚುನಾವಣೆ ನಡೆಯುತ್ತಿತ್ತು.ಕನ್ನಡ …

Read More »

ಮಲ್ಲಮ್ಮನ‌ ಬದುಕು ನಮಗೆ ಆದರ್ಶವಾಗಲಿ: ಸಚಿವೆ ಶಶಿಕಲಾ ಜೊಲ್ಲೆ

  ಬೆಳಗಾವಿ :ರಾಜ್ಯ ಮತ್ತು ಪ್ರಜೆಗಳಿಗೆ ಸಂಕಟ ಬಂದಾಗ ಕೈಗೆ ಖಡ್ಗ ತೆಗೆದುಕೊಂಡು ಕೆಚ್ಚೆದೆಯ ಹೋರಾಟ ಮಾಡಿದ ವೀರವನಿತೆಯರ ಬದುಕು ನಾವು ಮಾದರಿಯಾಗಿಟ್ಟುಕೊಳ್ಳಬೇಕು. ಇಂತಹ ವೀರ ಮಹಿಳೆಯರ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ‌ ಜೊಲ್ಲೆ ಕರೆ ನೀಡಿದರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಬೆಳವಡಿ ಮಲ್ಲಮ್ಮ …

Read More »

ಮಹಾದಾಯಿ ವಿಚಾರದಲ್ಲಿ ಸದ್ಯಕ್ಕೆ ಸಂಬ್ರಮ ಬೇಡ- ರಮೇಶ್ ಜಾರಕಿಹೊಳಿ

ಬೆಳಗಾವಿ- ಕೇಂದ್ರ ಸರ್ಕಾರ ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸಿದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಜಲಸಂಪನ್ಮೂಲ ಸಚಿವರನ್ನು ಸ್ವಾಗತಿಸಲು ಬೆಳಗಾವಿಯ ರಾಣಿ ಚನ್ಬಮ್ಮ ಏರ್ಪೋರ್ಟಿನಲ್ಲಿ ನೂರಾರು ರೈತರು ಆಗಮಿಸಿದ್ದರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದ್ರು, ಬೆಳಗಾವಿ ಏರ್‌ಪೋರ್ಟ್ ಎದುರು ರಮೇಶ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ. ಕನ್ನಡಪರ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರಿಂದ ಕ್ಷೀರಾಭಿಷೇಕ.ಆಡಲಾಯಿತು. ವಿಮಾನ ನಿಲ್ದಾಣದಲ್ಲಿ ರೈತರಿಂದ ಸಚಿವರಿಗೆ ಅಭಿನಂದನೆ ಸಲ್ಲಿಸಲಾಯಿತು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ …

Read More »

ಮಲಪ್ರಬಾ ನದಿ ನೀರಿನ ಬಳಕೆ ಕುರಿತು ವಿವಾದ ಸಲ್ಲದು- ಜಗದೀಶ್ ಶೆಟ್ಟರ್

ಬೆಳಗಾವಿ- ಮಲಪ್ರಭಾ ನದಿಯಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಸುತ್ತಮುತ್ತಲಿನ ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಡಿಪಿಆರ್ ರೆಡಿಯಾಗುತ್ತಿದೆ ಈ ಯೋಜನೆಯ ಕುರಿತು ನಮ್ಮ ನಮ್ಮಲ್ಲಿಯೇ ಜಗಳಾಡುವದು ಸರಿಯಲ್ಲ ಕುಡಿಯುವ ನೀರು ಎಲ್ಲರಿಗೂ ಬೇಕು ಆತಂತರಿಕ ಕಚ್ಚಾಟ ಬೇಡ ಎಂದು ಬೃಹತ್ತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೋರಾಟಗಾರರಿಗೆ ಕಿವಿಮಾತು ಹೇಳಿದರು. ಬೆಳಗಾವಿಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮಲಪ್ರಭಾ …

Read More »

ಬೆಳಗಾವಿ ಜಿಲ್ಲೆಗೂ ಒಂದು ಸಾವಿರ ಕೋಟಿ ಬಂಡವಾಳ- ಜಗದೀಶ್ ಶೆಟ್ಟರ್

ಬೆಳಗಾವಿ-ಬೆಳಗಾವಿಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ 162ಕಂಪನಿಗಳು ಭಾಗವಹಿಸಿವೆ 9,500 ಉದ್ಯೋಗವಕಾಶವಿದ್ದು ಹದಿನಾರು ಸಾವಿರಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಭಾಗವಹಿಸಿದ್ದು ಯುವ ಬಂಧುಗಳು ಕಂಪನಿಗಳು ನಡೆಸುವ ಸಂದರ್ಶನಗಳನ್ನು ಎದುರಿಸಿ ಉದ್ಯೋಗಾವಕಾಶಗಳನ್ನು ಪಡೆಯಬೇಕೆಂದು ಬೃಹತ್ತ್ ಕೈಗಾರಿಕಾ,ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಶುಭ ಹಾರೈಸಿದರು ಬೆಳಗಾವಿಯಲ್ಲಿ ಬೆಳಗಾವಿ,ಧಾರವಾಡ ವಿಭಾಗದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು ಕೈಗಾರಿಕೆಗಳು ಬೆಳೆದರೆ ಹೆಚ್ಚಿನ ಉದ್ಯೋಗವಾಕಾಶ ಸಿಗಲು ಸಾಧ್ಯ ಇದಕ್ಕೂ ಮೊದಲು ಕೈಗಾರಿಕೆಗಳು ಬೆಂಗಳೂರಿಗೆ ಸೀಮೀತವಾಗಿದ್ದವು,ಅನೇಕ …

Read More »

ಹಿಂಡಲಗಾ ಜೈಲಿನಲ್ಲಿ ಕಾಶ್ಮೀರಿ ವಿಧ್ಯಾರ್ಥಿಗಳನ್ನು ಭೇಟಿಯಾದ ಬೆಂಗಳೂರಿನ ಮೂವರು ವಕೀಲರು

ಬೆಳಗಾವಿ : ಹುಬ್ಬಳ್ಳಿ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೂವರು ವಕೀಲರು ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಗ್ರಹಕ್ಕೆ ಮೂವರು ನ್ಯಾಯವಾದಿಗಳು ಭೇಟಿ ನೀಡಿದ್ದಾರೆ.‌ ಬೆಳ್ಳೆಂಬೆಳ್ಳಗ್ಗೆ ವಕೀಲರ ತಂಡ ಆರೋಪಿಗಳನ್ನು ಭೇಟಿ ಮಾಡಿ, ವಕಾಲತ್ತು ಅರ್ಜಿಗೆ ಸಹಿ ಹಾಕಿಸಿಕೊಳ್ಳುವ ಪ್ರಕ್ರಿಯೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಿಂದ ಆಗಮಿಸಿದ ಮೂವರು ವಕೀಲರು ತಂಡ ಆರೋಪಿಗಳ ಬಳಿ …

Read More »

ದೆಹಲಿಯಲ್ಲೇ ಠಿಖಾನಿ ಹೂಡಿ ಮಹಾದಾಯಿ ಗೆಜೆಟ್ ಹೊರಡಿಸುವಲ್ಲಿ ಯಶಸ್ವಿಯಾದ ಜಾರಕಿಹೊಳಿ ಸಾಹುಕಾರ್….!!!

ಬೆಳಗಾವಿ- ರಮೇಶ್ ಜಾರಕಿಹೊಳಿ ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಮಹಾದಾಯಿ ಕುರಿತು ಕರ್ನಾಟಕಕ್ಕೆ ಮಹಾ ಗೆಲುವು ಸಿಕ್ಕಿದೆ ದೆಹಲಿಯಲ್ಲಿ ಗೋವಾ ಸರ್ಕಾರ ಮಹಾದಾಯಿ ಗೆಜೆಟ್ ಪ್ರಕಟಿಸಿದಂತೆ ಕೇಂದ್ರ ಸರ್ಕಾರದ ಮುಂದೆ ತಿಪ್ಪರಲಾಗ ಹಾಕಿದ್ರೂ ಇದನ್ನು ಲೆಕ್ಕಿಸದ ಕೇಂದ್ರ ಸರ್ಕಾರ ನಿನ್ನೆ ರಾತ್ರಿ ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸಿ ಮಹಾಯಿಯ ನೀರು ಬಳಿಸಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ಅನುಮತಿ ಸಿಕ್ಕಿದೆ. ರಮೇಶ್ ಜಾರಕಿಹೊಳಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮಾನ್ಯ …

Read More »

ಹಾಲಿನಲ್ಲಿ ವಿಷ..,ಹುಷಾರ್……..!!!!

ಬೆಳಗಾವಿ- ಹಾಲಿಗೆ ಪಾಮ್ ಆಯಿಲ್ ಮಾನವನ ಜೀವಕ್ಕೆ ಅತ್ಯಂತ ಅಪಾಯಕಾರಿ ಆಗಿರುವ ರಾಸಾಯನ ಬೆರೆಸಿ ಹಾಲು ಮಾರುವ ದಂಧೆಗೆ ಅಥಣಿ ಪೋಲೀಸರು ಬ್ರೇಕ್ ಹಾಕಿದ್ದಾರೆ. ಅಥಣಿಯಲ್ಲಿ ಸರಣಿ ಕಾರ್ಯಾಚರಣೆ ನಡೆಸಿರುವ ಪೋಲೀಸರು ಇಂದು ಅಥಣಿ ಠಾಣೆಯ ವ್ಯಾಪ್ತಿಯಲ್ಲಿರುವ ಅರಳಿಹಟ್ಟಿ ಗ್ರಾಮದ ಹದ್ದಿಯಲ್ಲಿರುವಜಾಧವ ತೋಟದ ಮೇಲೆ ದಾಳಿ ಮಾಡಿ ಹಾಲಿಗೆ ಮಿಕ್ಸ ಮಾಡಲು ತರಲಾಗಿದ್ದ ಪಾಮ್ ಆಯಿಲ್‌ ಡಬ್ಬಿಗಳನ್ನು ವಿಷಕಾರಿ ರಾಸಾಯನಗಳಾದ maybi,lactose,lactiz,ಪೌಡರಿನ ಚೀಲಗಳನ್ನು ,ಮೂರು ಮಿಕ್ಸರ್ ಗಳು ಸೇರಿದಂತೆ ಇತರ …

Read More »