Breaking News

LOCAL NEWS

ಬೆಳಗಾವಿಯಲ್ಲಿ ರೆಡಿಯಾಗುತ್ತಿದೆ ಇಂದಿರಾ ಕ್ಯಾಂಟೀನ್….!!!

ಬೆಳಗಾವಿ- ಬೆಳಗಾವಿ ನಗರದಲ್ಲಿ ಆರು ಇಂದಿರಾ ಕ್ಯಾಂಟೀನ್ ಗಳು ಮಂಜೂರಾಗಿದ್ದು ಮಾದರಿ ಇಂದಿರಾ ಕ್ಯಾಂಟೀನ್ ಕಟ್ಟಡ ಫಟಾ ಫಟ್ ಅಂತಾ ನಗರದ ನಾಥ ಫೈ ಸರ್ಕಲ್ ನಲ್ಲಿ ರೆಡಿಯಾಗುತ್ತಿದೆ ವಿಶೇಷ ಕ್ರೇನ್ ಗಳನ್ನು ಬಳಿಸಿ ಕಾಂಕ್ರೀಟ್ ಬಿಡಿ ಭಾಗಗಳಿಗೆ ಬೋಲ್ಟ್ ಬಿಗಿದು ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಸಿದ್ಧಪಡಿಸಲಾಗುತ್ತಿದೆ ಬೆಳಗಾವಿಯ ನಾಥ ಪೈ ಸರ್ಕಲ್ ನಲ್ಲಿ ಜೋಡಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ಬುಧವಾರ ಸಂಜೆಯೊಳಗೆ ರೆಡಿಯಾಗಲಿದ್ದು ಬಸವೇಶ್ವರ ಸರ್ಕಲ್ ( ಗೋವಾವೇಸ್) …

Read More »

ಅಧಿಕಾರಿಗಳ ನಿರ್ಲಕ್ಷ್ಯ ಟಿಸಿ ಮೇಲೇ ಪ್ರಾಣ ಬಿಟ್ಟ ಲೈನ್ ಮನ್.

ಬೆಳಗಾವಿ- ಕಿತ್ತೂರು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಲೈನಮನ್ ಸಾವನ್ನಪ್ಪಿದ ಘಟನೆ ಕಿತ್ತೂರು ತಾಲೂಕಿನ ಬೈಲೂರ ಗ್ರಾಮದಲ್ಲಿ ನಡೆದಿದೆ ಈರಣ್ಣ ತಿಗಡಿ( ೨೭) ಟಿಸಿ ಮೇಲೆ ಸಾವನ್ನಪ್ಪಿದ ಲೈನಮನ್ ಆಗಿದ್ದು ಕಿತ್ತೂರಿನ ತಿಗಡೊಳ್ಳಿ ಮತ್ತು ತೆಗೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ ಟಾನ್ಸ್ ಪಾರ್ಮರ್ ( ಟಿಸಿ) ಏರಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಹಾಕಿದ ಹೆಸ್ಕಾಂ ಅಧಿಕಾರಿಗಳು ಅಮಾಯಕನ ಸಾವಿಗೆ ಕಾರಣರಾಗಿದ್ದಾರೆ ಬೆಳಿಗ್ಗೆ ಟಿಸಿ ಏರಿ ಕೆಲಸಾ ಮಾಡುವುದಕ್ಕೆ ಮುನ್ನ ಲೈನ್ …

Read More »

ಕರ್ನಾಟಕದಲ್ಲಿ ಮಹಾದಾಯಿಗಾಗಿ ಬಂದ್ ಗೋವಾದಲ್ಲಿ ಬಚಾವ್ ಯಾತ್ರೆ..

ಬೆಳಗಾವಿ- ಮಹಾದಾಯಿ ಬಚಾವ್ ಆಂದೋಲನವನ್ನು ಗೋವಾ ರಾಜ್ಯದ ಪರಿಸರವಾದಿಗಳು ಆರಂಭಿಸಿದ್ದಾರೆ ಮಹಾದಾಯಿ ನದಿ ನೀರಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯದಲ್ಲಿ ನಾಳೆ ಬಂದ್​ ಆಚರಿಸಲಾಗುತ್ತಿದೆ. ಅತ್ತ ಗೋವಾದಲ್ಲಿ ಮಹಾದಾಯಿ ನದಿ ನೀರು ಉಳಿಸಿಕೊಳ್ಳಲು ಮಹದಾಯಿ ಬಚಾವ್ ಆಂದೋಲನವೊಂದು ಇಂದೇ ಪ್ರಾರಂಭವಾಗಿದೆ. ಗೋವಾ ಸುರಕ್ಷಾ ಮಂಚ್ ಮುಖಂಡ ಆನಂದ್ ಶಿರೋಡ್ಕರ್ ನೇತೃತ್ವದಲ್ಲಿ ಇಂದಿನಿಂದ 7 ದಿನಗಳ ಕಾಲ ಗೋವಾದ್ಯಂತ ಮಹದಾಯಿ ಬಚಾವ್ ಯಾತ್ರೆ ನಡೆಯಲಿದೆ. ಕರ್ನಾಟಕದ ಗಡಿಭಾಗದಲ್ಲಿರುವ ಸೂರಲ್​ನ ಐತಿಹಾಸಿಕ ಸಾತೇರಿ ಕೇಳಬಾವಿ …

Read More »

ಗಣರಾಜ್ಯೋತ್ಸವದ ನಿಮಿತ್ಯ ಶಾಂತಿ ಮತ್ತು ಏಕತೆ ಗಾಗಿ ಭಾರತ ಮಾತಾ ಬೈಕ್ ರ್ಯಾಲಿ…

ಬೆಳಗಾವಿ- ಗಣರಾಜ್ಯೋತ್ಸವದ ನಿಮಿತ್ಯ ಬೆಳಗಾವಿ ನಗರದಲ್ಲಿ ಶಾಂತಿ ಮತ್ತು ಏಕತೆಗಾಗಿ ಬಿಜೆಪಿ ಮುಖಂಡ ಅನೀಲ ಬೆನಕೆ ಅವರ ನೇತ್ರತ್ವದಲ್ಲಿ ಭಾರತ ಮಾತಾ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಗಣರಾಜ್ಯೋತ್ಸವದ ದಿನದಂದು ಬೆಳಿಗ್ಗೆ 10 ಘಂಟೆಗೆ ನಗರದ ಸಂಬಾಜಿ ಉದ್ಯಾನವನದಲ್ಲಿ ಭಾರತ ಮಾತೆಗೆ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ ಗೆ ಚಾಲನೆ ನೀಡಲಾಗುವದು ಮೆರವಣಿಗೆ ಐದು ಅಶ್ವಗಳ ಸಾರಥ್ಯ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿ ರಾಷ್ಟ್ರಾಭಿಮಾನ ರಾಷ್ಟ್ರಪ್ರಜ್ಞೆ ಮೂಡಿಸುವ ಜೊತೆಗೆ ಬೆಳಗಾವಿಯಲ್ಲಿ …

Read More »

ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ವ್ಯೆಕ್ತಿ ನಾನಲ್ಲ- ಸತೀಶ ಜಾರಕಿಹೊಳಿ

ಬೆಳಗಾವಿ- ಜೆಡಿಎಸ್ ನವರು ನನ್ನ ಜೊತೆ ಮಾತನಾಡಿಲ್ಲ. ನಾ‌ನು ಪಕ್ಷ ಬಿಡುವ ಚಿಂತನೆ ಮಾಡಿಲ್ಲ ಅಸಮಾಧಾನ ಇರುವುದು ಜಿಲ್ಲೆಯ ಮಟ್ಟಿಗೆ ರಾಜ್ಯಮಟ್ಟಕ್ಕೆ ಸಂಬಂಧ ಇಲ್ಲ. ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವ ಪ್ರಶ್ನೆ ಇಲ್ಲ ಎಂದು ಬೆಳಗಾವಿಯಲ್ಲಿ ಸತೀಶ ಜಾರಕಿಹೋಳಿ ಹೇಳಿದ್ದಾರೆ ಅವರನ್ನು ಭೇಟಿಯಾದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಈಗಾಗಲೇ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಅಧಿಕಾರಕ್ಕಾಗಿ ಬದಲಾವಣೆಯಾವುದಿಲ್ಲ ಸಿದ್ದಾಂತಕ್ಕೆ ಮಾತ್ರ ಬದಲಾಗುತ್ತೇನೆ ಅಧಿಕಾರ ನೀಡಿದ ಕಡೆ ನಾನು …

Read More »

ಕಟ್ಟಿಮನಿ ಟ್ರಸ್ಟ್‍ನ ಅಧ್ಯಕ್ಷರಾಗಿ ಪ್ರೊ. ಮಲ್ಲಕಾರ್ಜುನ ಹಿರೇಮಠ

  *ಕಟ್ಟಿಮನಿ ಶತಮಾನೋತ್ಸವದ ಸಂಭ್ರಮ, ಸ್ವಂತ ಕಟ್ಟಡಕ್ಕೆ ಅಳಲು* ಡಾ. ಎಂ.ಎಂ. ಕಲಬುರ್ಗಿ ಅವರ ಸಾವಿನ ನಂತರ ಕಳೆದ ಎರಡು ವರ್ಷದಿಂದ ಖಾಲಿಯಾಗಿ ಉಳಿದ ಬೆಳಗಾವಿಯಲ್ಲಿನ ಡಾ. ಬಸವರಾಜ್ ಕಟ್ಟಿಮನಿ ಟ್ರಸ್ಟ್‍ನ ನೂತನ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ಇಂದು ಅಧಿಕಾರ ವಹಿಸಿಕೊಂಡರು. ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2019 ನೇ ಸಾಲಿಗೆ ಬಸವರಾಜ ಕಟ್ಟಿಮನಿ ಅವರು ಜನಿಸಿ  ನೂರು ವರ್ಷಗಳ ಆಗುತ್ತವೆ. ಅವರ …

Read More »

ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ್ಹಂಗ..ಗ್ರಾಮೀಣದಾಗ ಸಂಜಯ್ ಪಾಟೀಲರನ್ನು ಬ್ಯಾನ್ ಮಾಡ್ರೀ- ಎಂ ಬಿ ಪಾಟೀಲ

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಂದಿನಿಂದ ವಿಧಾನಸಭೆಯ ಪರ್ವ ಆರಂಭವಾಯಿತು ಕೆಪಿಸಿಸಿ ಅಧ್ಯಕ್ಷರಾದ ಡಾ ಜಿ ಪರಮೇಶ್ವರ, ಡಿಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಇತರ ನಾಯಕರು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರ ಪರವಾಗಿ ಫುಲ್ ಬ್ಯಾಟಿಂಗ್ ನಡೆಸಿದರು ಹಿರೇಬಾಗೇವಾಡಿಯ ಎಪಿಎಂಸಿ ಆವರಣದಲ್ಲಿ ನಡೆದ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ ಈ ಬಾರಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ …

Read More »

ಸಿದ್ಧನಬಾವಿ ಗುದ್ದಲಿ ಪೂಜೆಗಾಗಿ ಕಾಂಗ್ರೆಸ್ ಬಿಜೆಪಿ ಗುದ್ದಾಟ….ಕಾರ್ಯಕರ್ತರ ತಳ್ಳಾಟ..

ಸಿದ್ಧನಭಾವಿ ಕೆರೆಯ ಅಂಗಳದಲ್ಲಿ ರಾಜಕೀಯ ಗುದ್ದಾಟ ಬೆಳಗಾವಿ- ಹಿರೇಬಾಗೇವಾಡಿ ಗ್ರಾಮದ ಸಿದ್ದನಬಾವಿ ಕೆರೆಯ ಅಂಗಳ ರಾಜಕೀಯ ಗುದ್ದಾಟಕ್ಕೆ ಸಾಕ್ಷಿಯಾಯಿತು ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆಗಮಿಸುತ್ತಿದ್ದಂತೆಯೇ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುವ ಮೂಲಕ ಕೆಲ ಕಾಲ ಆತಂಕದ ವಾತಾವರಣ ಸೃಷ್ಠಿಸಿದರು ಕಾಂಗ್ರೆಸ್ ಕಾರ್ಯಕರ್ತ ರು ಲಕ್ಷ್ಮೀ ರಾಹುಲ್ ಎಂದು ಘೋಷಣೆ ಕೂಗಿದರೆ ಇನ್ನೊಂದು ಕಡೆ ಬಿಜೆಪಿ ಕಾರ್ಯಕರ್ತರು ಮೋದಿ ಸಂಜಯ್ …

Read More »

ಮನೆಯಲ್ಲಿ ಜಗಳಾಡಿದ್ರು ಪೋಸ್ಟಮಾರ್ಟಮ್ ರೂಮ್ ನಲ್ಲಿ ಒಂದಾದ್ರು….

ಬೆಳಗಾವಿ- ವಿಜಯಪೂರ ಜಿಲ್ಲೆಯಿಂದ ಬೆಳಗಾವಿಗೆ ದುಡಿಯಲು ಆಗಮಿಸಿದ್ದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಕತಿ ಬಳಿಯ ಅಲತಗಾ ಗ್ರಾಮದಲ್ಲಿ ನಡೆದಿದೆ ವಿಜಯಪೂರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಯಲಗೂಡ ತಡಾದಿಂದ ಬೆಳಗಾವಿಗೆ ಬಂದು ಅಲತಗಾ ಗ್ರಾಮದ ಗೋಡಂಬಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಅಂಜಲಿ ರವಿ ರಾಠೋಡ್,25 ವರ್ಷದ ರವಿ ರಾಮಚಂದ್ರ ರಾಠೋಡ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ ನಿನ್ನೆ ಸಂಜೆ ಮನೆಯಲ್ಲಿ ಇಬ್ಬರು ಯಾವುದೋ ಕಾರಣಕ್ಕಾಗಿ ಪರಸ್ಪರ ಜಗಳಾಡಿದ್ದಾರೆ ಗಂಡನನ್ನು …

Read More »

ಪೋಲೀಸರಿಂದ .ಪೋಲೀಸರ ವಾಹನಕ್ಕೆ ಲಾಕ್….ಸಾರ್ವಜನಿಕರ ಶಾಕ್…!!!!

ಬೆಳಗಾವಿ- ಬೆಳಗಾವಿ ನಗರದಲ್ಲಿ ಕಂಡು ಕಂಡಲ್ಲಿ ವಾಹನ ಪಾರ್ಕ ಮಾಡುವದನ್ನು ತಡೆಯಲು ಪೋಲೀಸರು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳ ಚಕ್ರಗಳಿಗೆ ಲಾಕ್ ಹಾಕುವ ಕಾರ್ಯಾಚರಣೆ ನಡೆಸಿದ್ದು ಇಂದು ಸಂಜೆ ಪೋಲೀಸರು ಪೋಲೀಸ್ ಅಧಿಕಾರಿಯ ವಾಹನಕ್ಕೆ ಲಾಕ್ ಮಾಡುವ ಮೂಲಕ ನಿಯಮ ಉಲ್ಲಂಘಿಸಿ ದರೆ ಎಲ್ಲರಿಗೂ ಕಾನೂನು ಒಂದೇ ಎನ್ನುವ ಸಂದೇಶ ರವಾನಿಸಿದ್ದಾರೆ ಇಂದು ಸಂಜೆ ನಗರದ ಕ್ಲಬ್ ರಸ್ತೆಯಲ್ಲಿ ವಾಹನ ನಿಲ್ಲಿಸಿ ಹೊಟೇಲ್ ನಲ್ಲಿ ಉಪಹಾರ ಸೇವಿಸುತ್ತಿರುವಾಗ ಟ್ರಾಫಿಕ್ ಪೋಲೀಸರು …

Read More »

ರಾಜ್ಯದ 176 ತಾಲ್ಲೂಕುಗಳಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ- ಆರ್ ವ್ಹಿ ದೇಶಪಾಂಡೆ

ಬೆಳಗಾವಿ-ರಾಜ್ಯ ಸರಕಾರ 176 ತಾಲೂಕುಗಳಲ್ಲಿ ಆಯುಷ್ ಆಸ್ಪತ್ರೆ ಸ್ಥಾಪನೆಗೆ ಮುಂದಾಗಿದೆ ಎಂದು ಬೃಹತ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ ಬೆಳಗಾವಿಯಲ್ಲಿ ಎ.ಎಂ ಶೇಖ ಶಿಕ್ಷಣ ಸಮೂಹದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವೈದ್ಯಕೀಯ ಕ್ಷೇತ್ರಕ್ಕೆ ಇವತ್ತು ಬಹಳ ಬೇಡಿಕೆ ಇದೆ. ವೈದ್ಯಕೀಯ ಸಂಶೋಧನೆಯಿಂದ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಯಾಗುತ್ತಿರಬಹುದು. ಆದರೆ, ಆರೋಗ್ಯವೇ ಕೊನೆಯವರೆಗೆ ಬದುಕು ನೀಡುತ್ತದೆ ಎಂದು ಸಚಿವರು ಹೇಳಿದರು ನಾವು ಬದುಕಿರುವವರೆಗೂ ಆರೋಗ್ಯವಾಗಿರಬೇಕು. ಸಾತ್ವಿಕ ಆಹಾರ ಸಿಗಬೇಕು. …

Read More »

ಕರ್ಪೂರದಿಂದ ಕಾರಿಗೆ ಬೆಂಕಿ ಹಚ್ಚುವ ಸೈಕೋ ಡಾಕ್ಟರ್ ಕೊನೆಗೂ ಅಂದರ್…

    ಬೆಳಗಾವಿ- ಬೆಳಗಾವಿ ನಗರದಲ್ಲಿ ಹಲವಾರು ದಿನಗಳಿಂದನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಮದ್ಯರಾತ್ರಿ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದ ಸೈಕೋ ಡಾಕ್ಟರ್ ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾನೆ ಬೆಳಗಾವಿಯ ವಿಶ್ವೇಶರಯ್ಯ ನಗರದ ವಿವೇಂತಾ ಅಪಾರ್ಟ್ ಮೆಂಟಿನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾದ ಕಾರಿಗೆ ನಿನ್ನೆ ರಾತ್ರಿ ಬೆಂಕಿ ಹಚ್ಚಲು ಯತ್ನಿಸುವಾಗ ಅಲ್ಲಿಯ ವಾಚ್ ಮನ್ ರೆಡ್ ಹ್ಯಾಂಡಾಗಿ ಸೈಕೋ ಡಾಕ್ಟರ್ ನನ್ನು ಹಿಡಿದು ಪೋಲೀಸರಿಗೆ ಮಾಹಿತಿ ನೀಡಿದ್ದಾನೆ ಪೋಲೀಸರು ಅಲ್ಲಿಗೆ …

Read More »

ಬೆಳಗಾವಿಯಲ್ಲಿ ಕಾರಿಗೆ ಬೆಂಕಿ ಹಚ್ವುತ್ತಿದ್ದ ಸೈಕೋ ಡಾಕ್ಟರ್ ಯಾರು ಗೊತ್ತಾ…?

ಬೆಳಗಾವಿ- ಮುಖಕ್ಕೆ ಮುಸುಕು ಹಾಕಿ ರಾತ್ರಿ ಹೊತ್ತು ಎಲ್ಲರೂ ಮಲಗಿರುವಾಗ ಮನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದ ಸೈಕೋ ಡಾಕ್ಟರ್ ನನ್ನು ಪತ್ತೆ ಮಾಡುವಲ್ಲಿ ಕೊನೆಗೂ ಬೆಳಗಾವಿಯ ಪೋಲೀಸರು ಯಶಸ್ವಿಯಾಗಿದ್ದಾರೆ ಬೆಳಗಾವಿಯ ಜಾಧವ ನಗರದಲ್ಲಿ ರಾತ್ರೋ.ರಾತ್ರಿ ಏಳು ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗುತ್ತದ್ದ ಸೈಕೋ ಭೀಮ್ಸ ಆಸ್ಪತ್ರೆಯ ಡಾಕ್ಟರ್ ಎಂಬುದು ಗೊತ್ತಾಗಿದೆ ಗುಲ್ಬರ್ಗ ಮೂಲದ ಡಾಕ್ಟರ್ ಅಮೀತ ಗಾಯಕವಾಡ ಎಂಬಾತನನ್ನು ಬೆಳಗಾವಿ ಪೋಲೀಸರು ತಮ್ಮ ವಶಕ್ಕೆ …

Read More »

ಬೆಳಗಾವಿ ರೆಲ್ವೆ ಟ್ರ್ಯಾಕ್ ಮೇಲೆ ಮಹಿಳೆಯ ಸುಸ್ಸಾಯಿಡ್..

ಬೆಳಗಾವಿ- ಜೀವನದಲ್ಲಿ ಚಿಗುಪ್ಸೆಗೊಂಡ ಕ್ಯಾಂಪ್ ಪ್ರದೇಶದ 80 ವರ್ಷದ ವೃದ್ಧೆಯೊಬ್ಬಳು ಚಲಿಸುವ ರೈಲಿಗೆ ತೆಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಕ್ಯಾಂಪ್ ಪ್ರದೇಶದ ಅವೋಲಿಯನ್ ಅಂಥೋಣಿ ಲೂಯಿಸ್ ಎಂದು ಗುರುತಿಸಲಾಗಿದೆ ಬೆಳಿಗ್ಗೆ 9-30 ಘಂಟೆ ಸುಮಾರಿಗೆ ಬೆಳಗಾವಿಯ ಟಿಳಕವಾಡಿಯ ಫಸ್ಟ್ ಗೇಟ ಬಳಿ ರೇಲ್ವೆ ಟ್ರ್ಯಾಕ್ ಮೇಲೆ ಮಹಿಳೆಯ ಶವ ನೋಡಿ ಸಾರ್ವಜನಿಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ ಸಾರ್ವಜನಿಕರೊಬ್ನರು ಮೃತ ಮಹಿಳೆಯನ್ನು ಗುರುತಿಸಿ …

Read More »

ಬೆಳಗಾವಿಯಲ್ಲಿ ಏಳು ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬೆಳಗಾವಿ ಜಾಧವ್ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ ಏಳು ಕಾರುಗಳಿಗೆ ಕಿಡಗೇಡಿಗಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ ಮನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ನಂಬರ್ ಇಲ್ಲದ ಕಾರಲ್ಲಿ ಹೆಲ್ಮೇಟ್ ದರಿಸಿ ಬಂದಿದ್ದರು ಎಂದು ಹೇಳಲಾಗಿದೆ ಜಾಧವ ನಗರದ ಒಟ್ಟು ೭ ವಾಹನಗಳು ಸುಟ್ಟು ಭಸ್ಮವಾಗಿವೆ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂಧಿ ಆಗಮಿಸಿ ಅಗ್ನಿ ನಂದಿಸಿದ್ದಾರೆ ಬೆಳಗಾವಿ ಎ.ಪಿ.ಎಂ.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಡರಾತ್ರಿ …

Read More »