Breaking News

LOCAL NEWS

ಜಿಲ್ಲಾ ಆಸ್ಪತ್ರೆಯ ಯಡವಟ್ಟು ಮಹಿಳಾ ರೋಗಿ ಮಿಸ್ಸಿಂಗ್

ಬೆಳಗಾವಿ- ಮತ್ತೆ ಬೆಳಗಾವಿ ಜಿಲ್ಲಾಸ್ಪತ್ರೆ ಸಿಬ್ಬಂದಿ ಯಡವಟ್ಟಿನಿಂದ ವಯೋವೃದ್ಧಿ ಮಹಿಳಾ ರೋಗಿಯೊಬ್ಬಳು ಮಿಸ್ಸಿಂಗ್ ಆಗಿದ್ದಾಳೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸುಮೀತ್ರಾ ಸುರೇಶ ಜೋಶಿ 60 ವಯಸ್ಸು ಕಾಣೆಯಾದ ರೋಗಿ. ಕಳೆದ ಫೆಬ್ರುವರಿ 5ರಂದು ರೋಗಿ ಸುಮೀತ್ರಾಳನ್ನ ಜಿಲ್ಲಾಸ್ಪತ್ರೆಯ ಸೈಕ್ಯಾಟ್ರಿಕ್ ವಾರ್ಡನಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ರು. ನಿನ್ನೆ ಬೆಳಗ್ಗೆ 10.30ಕ್ಕೆ ಸೈಕ್ಯಾಟ್ರಿಕ್ ವಾರ್ಡನಿಂದ ರೋಗಿ ಸುಮೀತ್ರಾ ನಾಪತ್ತೆಯಾಗಿದ್ದಾಳೆ. ನಿನ್ನೆ ಸುಮೀತ್ರಾ ಪುತ್ರ ಶಶಿಧರ ಆಸ್ಪತ್ರೆಗೆ ಆಗಮಿಸಿ ಪರಿಶೀಲಿಸಿದಾಗ ಕಾಣೆಯಾಗಿರುವ ವಿಚಾರ ಬೆಳಕಿಗೆ …

Read More »

ಕಿತ್ತೂರ ಕಾಂಗ್ರೆಸ್ ನಲ್ಲಿ ಬಂಡಾಯದ ಬಿರುಗಾಳಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಬಾಬಾಸಾಹೇಬ

ಬೆಳಗಾವಿ-ವೀರರಾಣಿ ಕಿತ್ರೂರ ಚನ್ನಮ್ಮಾಜಿಯ ಕ್ರಾಂತಿಯ ನೆಲ ಕಿತ್ತೂರಿನಲ್ಲಿ ರಾಜಕೀಯ ಕ್ರಾಂತಿ ನಡೆದಿದೆ ಕಿತ್ತೂರ ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಕಿತ್ತಾಟ ನಡೆದು ಕಾಂಗ್ರೆಸ್ ನ ಪ್ರಬಲ ಟಿಕೆಟ್ ಆಕಾಂಕ್ಷಿ ಬಾಬಾಸಾಹೇಬ ಪಾಟೀಲ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಕಾಂಗ್ರೆಸ್ ಟಿಕೆಟ್ ಸಿಗೋದಿಲ್ಲ ಎಂಬುದು ಖಾತ್ರಿಯಾದ ಮೇಲೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರಲು ನಿರ್ಧರಿಸಿರುವ ಬಾಬಾಸಾಹೇಬ ಪಾಟೀಲ ಫೆಬ್ರವರಿ 10 ರಂದು ಕಿತ್ತೂರ ಕ್ಷೇತ್ರದ ಸಂಪಗಾಂವ ಗ್ರಾಮದಲ್ಲಿ ತಮ್ಮ …

Read More »

ಸ್ಮಾರ್ಟ ಸಿಟಿ ಯೀಜನೆಯಲ್ಲಿ ಸ್ಮಾರ್ಟ್ ಹೆರಿಗೆ ಆಸ್ಪತ್ರೆ ನಿರ್ಮಾಣ

ಬೆಳಗಾವಿ- ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕುಂದಾನಗರಿ ಬೆಳಗಾವಿಯನ್ನು ಇನ್ನಷ್ಟು ಸ್ಮಾರ್ಟ್ ಮಾಡಲು ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ ಈ ಯೋಜನೆಯಲ್ಲಿ ಎರಡು ಸ್ಮಾರ್ಟ್ ಹೆರಿಗೆ ಆಸ್ಪತ್ರೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಐದು ಕೋಟಿ ಇಪ್ಪತ್ತು ಲಕ್ಷ ರೂ ವೆಚ್ಚದಲ್ಲಿ ಮುತ್ಯಾನಟ್ಟಿ ಮತ್ತು ವಡಗಾಂವ ಪ್ರದೇಶದಲ್ಲಿ ಎರಡು ಸ್ಮಾರ್ಟ್ ಹೆರಿಗೆ ಆಸ್ಪತ್ರೆಗಳು ನಿರ್ಮಾಣ ಮಾಡುವ ಯೋಜನೆ ರೂಪಿಸಿ ನಗರಾಭಿವೃದ್ಧಿ ಇಲಾಖೆಯ ಮಂಜೂರಾತಿಗೆ ಪ್ರಸ್ತಾವಣೆ ಸಲ್ಲಿಸಲಾಗುದ್ದು ಈ ಯೋಜನೆಗೆ ಶೀಘ್ರದಲ್ಲಿಯೇ ಟೆಂಡರ್ ಕರೆಯುವ ದಾಗಿ …

Read More »

ಸರ್ಕಾರಿ MSIL ಲಿಕ್ಕರ್ ಅಂಗಡಿಗಾಗಿ …ಕಾಗವಾಡದಲ್ಲಿ ಕದನ…!!!!

ಬೆಳಗಾವಿ- ನಮ್ಮೂರಿಗೆ ಸರಾಯಿ ಅಂಗಡಿ ಬೇಡವೇ ಬೇಡ ಎಂದು ಕೆಲವು ಗ್ರಾಮಗಳ ಮಹಿಳೆಯರು ಪ್ರತಿಭಟನೆ ಮಾಡಿದ್ದನ್ನು ನಾವು ಕೇಳಿದ್ದೇವೆ ನೋಡಿದ್ದೇವೆ ಓದಿದ್ದೇವೆ ಆದ್ರೆ ನಮ್ಮೂರಿಗೆ MSIL ಲಿಕ್ಕರ್ ಅಂಗಡಿ ಬೇಕೇ ಬೇಕು ಅಂತ ಕಾಗವಾಡ ನಗರದ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಎಲ್ಲರ ಗಮನ ಸೆಳೆದಿದ್ದಾರೆ ಕಾಗವಾಡ ನಗರದಲ್ಲಿ ಖಾಸಗಿ ವೈನ್ ಶಾಪ್ ಇದೆ ಅವರೆಲ್ಲರೂ ದುಬಾರಿ ದರದಲ್ಲಿ ಲಿಕ್ಕರ್ ಸೇಲ್ ಮಾಡುವದರಿಂದ ನಮ್ಮ ಗಂಡಂಧೀರುಗಳಿಗೆ ಫುಲ್ ಲಾಸ್ ಆಗುತ್ತಿದೆ …

Read More »

ಉಚಗಾಂವ ಗ್ರಾಮದ ರಂಗೋಲಿಯಲ್ಲಿ ರಂಗಿದ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ಸೋಮವಾರ ರಂಗೋಲಿಯ ರಂಗೇರಿತ್ತು ಗ್ರಾಮಸ್ಥರು ತಮ್ಮ ಮನೆಯ ಅಂಗಳದಲ್ಲಿ ರಂಗೋಲಿ ಬಿಡಿಸಿ ಲಕ್ಷ್ಮೀ ತಾಯಿ ಫೌಂಡೇಶನ್ ರೂವಾರಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ರಂಗೋಲಿಯಲ್ಲಿ ಅರಳಿಸಿ ಸ್ವಾಗತಿಸಿದ್ದು ವಿಶೇಷವಾಗಿತ್ತು ಉಚಗಾಂವ, ಬೆಕ್ಕಿನಕೇರಿ,ಬಸೂರ್ತೆ.ಅತವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಲಕ್ಷ್ಮೀತಾಯಿ ಫೌಂಡೇಶನ್ ವತಿಯಿಂದ ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಸೋಮವಾರ ಬೆಳಿಗ್ಗೆ ಲಕ್ಷ್ಮೀ ಹೆಬ್ಬಾಳಕರ ಅವರು ಉಚಗಾಂವ ಗ್ರಾಮದ ಗಣಪತಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವ …

Read More »

ಗೋಕಾಕ ಜಲಪಾತಕ್ಕೆ ಹಾರಿ ಬೆಳಗಾವಿಯ ದಂಪತಿಗಳು ಸಾವು

ಬೆಳಗಾವಿ- ಗೋಕಾಕ ಜಲಪಾತಕ್ಕೆ ಹಾರಿ ದಂಪತಿಗಳ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದದೆ ನ್ಯಾಮದೇವ ಔದಕರ (೬೫) ಸುಮಿತ್ರಾ ಔದಕರ (೫೮) ಮೃತ ದುರ್ದೈವಿಗಳಾಗಿದ್ದು ಇವರು ಬೆಳಗಾವಿ ಜಿಲ್ಲೆ ಗೋಕಾಕ ಹೊರವಲಯದಲ್ಲಿರೋ ಗೋಕಾಕ ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮೃತರು ಬೆಳಗಾವಿಯ ಖಡೆಬಜಾರ ನಿವಾಸಿಗಳು ಎಂದು ತಿಳಿದು ಬಂದಿದೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ನಿನ್ನೆ ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಶವಗಳು …

Read More »

ಗೌರಿ ಲಂಕೇಶ್ ಹತ್ಯೆಗೂ ಹಿಂದೂ ಸನಾತನ ಸಂಸ್ಥೆಗೂ ಯಾವುದೇ ಸಮಂಧವಿಲ್ಲ

ಬೆಳಗಾವಿ ಗೌರಿ ಲಂಕೇಶ್ ಹತ್ಯೆಗೂ ಹಿಂದೂ ಸನಾತನ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ದೇಶದಲ್ಲಿ ಸನಾತನ ಸಂಸ್ಥೆ ಆತಂಕವಾದಿ ಸಂಘಟನೆ ಎಂದು ರಾಜಕೀಯ ಪಕ್ಷಗಳು ಹೇಳಿಕೊಂಡು ತಿರುಗಾಡುತ್ತಿವೆ ಎಂದು ಹಿಂದೂ ಸನಾತನ ಸಂಸ್ಥೆಯ ಪ್ರತಿಭಾ ತಾವರೆ ಹೇಳಿದರು. ಭಾನುವಾರ ಹಿಂದೂ ಜನಜಾಗೃತಿ ಬಹೃತ ಧರ್ಮ‌ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಕೆಲ‌ ರಾಜಕೀಯ ಪಕ್ಷಗಳು ಹಿಂದೂ ಜನ ಜಾಗೃತಿ ಸಮಿತಿ ಆತಂಕವಾದಿ‌ ಸಂಘಟನೆ ಎಂದು‌‌ ಬಿಂಬಿಸುತ್ತಿವೆ. ಸನಾತನ ಸಂಸ್ಥೆ ಹಿಂದೂ ಸಂಘಟನೆಯಲ್ಲಿ ತೋಡಗಿ‌ಕೊಂಡಿದೆ.‌ಆದರೆ …

Read More »

ಬೆಳಗಾವಿಯ ಅಟೋ ನಗರದ ಮಟನ್ ಫ್ಯಾಕ್ಟರಿ ಗೆ ಬೆಂಕಿ..

ಬೆಳಗಾವಿ- ಬೆಳಗಾವಿ ನಗರದ ಅಟೋ ನಗರದಲ್ಲಿರುವ ಮಟನ್ ಫ್ಯಾಕ್ಟರಿ ಗೆ ಶಾರ್ಟ್ ಸರ್ಕ್ಯುಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ಪ್ರಮಾಣದ ಹಾನಿಯಾಗಿದೆ ಅಟೋ ನಗರದಲ್ಲಿರುವ ಎಂಜಲ್ ಇಂಡಸ್ಟ್ರೀಸ್ ಮಟನ್ ಫ್ಯಾಕ್ಟರಿಯ ಪ್ಯಾಕಿಂಗ್ ವಿಭಾಗದ ರಟ್ಟಿನ ಪ್ಯಾಕಿಂಗ್ ದಾಸ್ತಾನಕ್ಕೆ ಬೆಂಕಿ ತಗಲಿದ್ದು ಅಪಾರ ಪ್ರಮಾಣ ಹಾನಿಯಾಗಿದೆ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂಧಿ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂಜಲ್ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಮಟನ್ ಪ್ಯಾಕ್ ಮಾಡಿ ಅದನ್ನು …

Read More »

ಮಹಾಜನ ವರದಿ ಒಪ್ಪದ ಮಹಾರಾಷ್ಟ್ರದಿಂದ ಮಹಾದಾಯಿ ಕುರಿತು ಕಿತಾಪತಿ….

ಮಹಾದಾಯಿ ಗೋವಾ ರಾಜ್ಯದ ಸಂಜೀವಿನಿ ಮಹಾರಾಷ್ಟ್ರ ಗೃಹ ಸಚಿವರ ಉವಾಚ.. ಬೆಳಗಾವಿ- ಗೋವಾ ಚಿಕ್ಕರಾಜ್ಯ ,ಮಹಾರಾಷ್ಟ್ರ ಮತ್ತು ಕರ್ನಾಟಕ ದೊಡ್ಡ ರಾಜ್ಯಗಳು ಗೋವಾ ಸಣ್ಣ ತಮ್ಮ ಇದ್ದ ಹಾಗೆ ,ಹಿರಿಯ ಸೋದರರಂತಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಕಿರಿಯ ತಮ್ಮನ ಬಗ್ಗೆ ಕಾಳಜಿ ಮಾಡಬೇಕು ಮಹಾದಾಯಿ ಗೋವಾ ರಾಜ್ಯದ ಸಂಜೀವಿನಿ ಇದ್ದ ಹಾಗೆ ಎಂದು ಮಹಾರಾಷ್ಟ್ರ ಗೃಹ ಸಚಿವ ದೀಪಕ ಕೇಸರಕರ ಹೇಳುವ ಮೂಲಕ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿಯುವ ಕೆಲಸ …

Read More »

ಬೆಳಗಾವಿಯಲ್ಲಿ ಉಚಿತವಾಗಿ ಟೋಮೋಟೋ ವಿತರಿಸಿದ ರೈತ

ಬೆಲೆ ಕುಸಿತ, ರೈತನಿಂದ ಉಚಿತ ಟೋಮೆಟೋ ವಿತರಿಸಿ ಪ್ರತಿಭಟನೆ ಬೆಳಗಾವಿ- ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ರೈತನಿಂದ ವಿನೂತನ ಪ್ರತಿಭಟನೆ ನಡೆಯಿತು ಟೋಮೆಟೋ ಬೆಲೆ ಕುಸಿದ ಕಾರಣ ಉಚಿತ ಟೊಮ್ಯಾಟೊ ನೀಡಿ ವಿನೂತನ ಪ್ರತಿಭಟನೆ ನಡೆಸಲಾಯಿತು ಟೊಮ್ಯಾಟೊ ಬೆಲೆ ಕುಸಿದ ಪರಿಣಾಮವಾಗಿ ರೈತನಿಂದ ಉಚಿತವಾಗಿ ಟೊಮ್ಯಾಟೊ ನೀಡಿ ಪ್ರತಿಭಟನೆ ಅನ್ನದಾತ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಎಲ್ಲರ ಗಮನ ಸೆಳೆದ ಟೊಮ್ಯಾಟೊ ಬೆಳೆದ ನಾರಾಯಣ್ ಪಾಟೀಲ ಎಂಬ ರೈತನಿಂದ …

Read More »

BIG TRICOLOR FLAG READY TO FLY IN THE SKY

Belagavi,  – Highest height flag post  National Flag with measuring 80 X 120 is ready to fly in the sky at   BUDA premises  in Belagavi. The estimated cost of the project is 1.63 crores rupees. According to Belagavi city corporation (BCC) commissioner Shashidhar Kurera  The Flag post height is 109 …

Read More »

ಫೆಬ್ರುವರಿ 4 ರಂದು ಬೆಳಗಾವಿಯಲ್ಲಿ ಹಿಂದೂ ಸಮಾವೇಶ

ಬೆಳಗಾವಿ- ಬೆಳಗಾವಿಯಲ್ಲಿ ಫೆಬ್ರುವರಿ 4 ರಂದು ಬೃಹತ್ತ ಹಿಂದೂ ಜನಜಾಗೃತಿ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ದೇಶದ ವಿವಿಧ ಹಿಂದೂ ಸಂಘಟನೆಗಳ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ ಹಿಂದೂ ಜನಜಾಗೃತಿ ಸಮೀತಿ ಆಯೋಜಿಸಿರುವ ಈ ಹಿಂದೂ ಸಮಾವೇಶ ಬೆಳಗಾವಿಯ ವಡಗಾಂವ ಪರಿಸರದಲ್ಲಿನ ಆದರ್ಶ ಕಾಲೇಜು ಮೈದಾನ ದಲ್ಲಿ ಫೆಬ್ರುವರಿ ನಾಲ್ಕರಂದು ಸಂಜೆ ಆರು ಘಂಟೆಗೆ ಆರಂಭವಾಗಲಿದೆ ಎಂದು ಸಮೀತಿಯ ಮುಖಂಡ ಸುಧೀರ ಹೇರೇಕರ ತಿಳಿಸಿದ್ದಾರೆ ಬೆಳಗಾವಿಯಲ್ಲಿ ನಡೆಯುವ ಸಮಾವೇಶದಲ್ಲಿ ಹಿಂದೂ ಸಂಘಟನೆಗಳ …

Read More »

ಫಸಲ್ ಭಿಮಾ ಯೋಜನೆಯಲ್ಲಿ ಬ್ರಷ್ಟಾಚಾರ ಕಾಂಗ್ರೆಸ್ ಕಿಸಾನ್ ಸೆಲ್ ಆರೋಪ

ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಫಸಲ ವಿಮಾ ಯೋಜನೆಯಲ್ಲಿ ರಾಷ್ಟ್ರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಈ ಕುರಿತು ಸಿಬಿಐಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ ಎಂದು  ಕೆಪಿಸಿಸಿ ಕಿಸಾನ ಅಧ್ಯಕ್ಷ ಸಚಿನ ಮೀಗಾ ಆರೋಪಿಸಿದರು. ಶುಕ್ರವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪ್ರಧಾನಿ ಮೋದಿ ಅವರು ಬೆಳಗಾವಿಗೆ ಆಗಮಿಸಿ ಫಸಲ ವಿಮಾ ಯೋಜನೆಯಲ್ಲಿ ಜಾರಿಗೆ ತಂದಿದ್ದರು. ಅದರಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಖಾಸಗಿ …

Read More »

ಬೆಳಗಾವಿಯಲ್ಲಿ ಮಗನಿಂದಲೇ ತಂದೆಯ ಕೊಲೆ

ಬೆಳಗಾವಿ,- ಬೆಳಗಾವಿಯ ಆಂಜನೇಯ ನಗರದಲ್ಲಿ ಮಗನೊಬ್ನ ತನ್ನ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ ಆಂಜನೇಯ ನಗರದ ನಿವಾಸಿ 70 ವರ್ಷದ ಉಮಾಕಾಂತ ದಂಡಾವತಿಮಠ ಹತ್ಯೆಯಾದ ದುರ್ದೈವಿಯಾಗಿದ್ದಾರೆ ಬೈಲಹೊಂಗದಲ್ಲಿ ದಿನವಿಡೀ ಆಸ್ಪತ್ರೆಯಲ್ಲಿ ಸೇವೆ ಮಾಡಿ ರಾತ್ರಿ ಬೆಳಗಾವಿಗೆ ಬರುತ್ತಿದ್ದ ಡಾ ಉಮಾಕಾಂತ್ ನಿನ್ನೆ ರಾತ್ರಿ ಬೈಲಹೊಂಗಲದಿಂದ ಬೆಳಗಾವಿಗೆ ಬಂದ ನಂತರ ಮಗ ರವಿ ತಂದೆಯ ಜೊತೆಗೆ ಜಗಳಾಡಿದ್ದ ಎಂದು ಹೇಳಲಾಗಿದೆ ರಾಡ್ ನಿಂದ ಹಲ್ಲೆ ಮಾಡಿದ ರವಿ ಎಪ್ಪತ್ತು …

Read More »

ನಕಲಿ ಬಂಗಾರ..ಅಸಲಿ ಆರೋಪಿಗಳು ಅಂದರ್ ….

ಬೆಳಗಾವಿ- ಬೆಳಗಾವಿ ಎಪಿಎಂಸಿ ಪೊಲೀಸರ ಭರ್ಜರಿ ಬೇಟೆಯಾಡಿದ್ದಾರೆ ನಕಲಿ ಬಂಗಾರ ನೀಡಿ ವಂಚಿಸುತ್ತಿದ್ದ ಜಾಲ್ ಪತ್ತೆ ಮಾಡಿರುವ ಪೋಲೀಸರು ವಂಚಕರನ್ನು ಬಂಧಿಸಿದ್ದಾರೆ ಅಸಲಿ ಬಂಗಾರ ನೀಡುವುದಾಗಿ ಜನರಿಗೆ ಮೋಸ ಮಾಡುತ್ತಿದ್ದ ಮೂವರ ಬಂಧಿಸಲಾಗಿದ್ದು ಎಪಿಎಂಸಿ ಸಿಪಿಐ ಜೆ.ಎಂ.ಕಾಲಿಮಿರ್ಚಿ ತಂಡದಿಂದ ಕಾರ್ಯಾಚರಣೆ ನಡೆಸಲಾಗಿತ್ತು ಬೆಳಗಾವಿ ತಾಲೂಕಿನ ಸಾಂಬ್ರಾ ಬಳಿ ವಂಚಕರು ಪೋಲೀಸರ ಬಲೆ ಬಿದ್ದಿದ್ದಾರೆ ಬೈಲಹೊಂಗಲ ಮೂಲದ ವಿಶಾಲ ಪಾಟೀಲ 38, ದಿಲಾವರಸಾಬ ಮುರಗಿ 33 ಹಾಗೂ ಶಿವಪ್ಪಾ ಉಪ್ಪಾರ 59 …

Read More »