Breaking News

LOCAL NEWS

ಉಡುಪಿಯ ಕೃಷ್ಣಮಠದಲ್ಲಿ ಇಫ್ತಿಯಾರ್ ಕೂಟ…ಶ್ರೀರಾಮ ಸೇನೆ ಆಕ್ರೋಶ

ಬೆಳಗಾವಿ- ಉಡಪಿ ಕೃಷ್ಣ ಮಠದಲ್ಲಿ ಇಫ್ತಿಯಾರ ಕೂಟ ಏರ್ಪಡಿಸಿದ ಪೇಜಾವರ ಶ್ರೀಗಳ ಕ್ರಮವನ್ನು ಖಂಡಿಸಿ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಶ್ರೀರಾಮ ಸೇನೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ರಮಾಕಾಂತ ಕೋಡುಸ್ಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ವ್ಯೆಕ್ತಪಡಿಸಿದರು ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳಿಂದ ಜನ ಇಪ್ತಿಯಾರ ಕೂಟ, ನಮಾಜ್ ಮಾಡಿಸಿದನ್ನ …

Read More »

ಮೂರು ಸ್ಥಾಯಿ ಸಮೀತಿಗಳು ಕನ್ನಡಿಗರ ಪಾಲು..ಎಂಈಎಸ್ ದಿಕ್ಕಾಪಾಲು…

ಮೂರು ಸ್ಥಾಯಿ ಸಮೀತಿಗಳು ಕನ್ನಡಿಗರ ಪಾಲು..ಎಂಈಎಸ್ ದಿಕ್ಕಾಪಾಲು… ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡವಿರೋಧಿ ಎಂಈಎಸ್ ಈಗ ಸಂಪೂರ್ಣವಾಗಿ ಅಸ್ತಿತ್ವವನ್ನು ಕಳೆದುಕೊಂಡಿದೆ ಇಂದು ನಡೆದ ಸ್ಥಾಯಿ ಸಮೀತಿಗಳ ಅಧ್ಯಕ್ಷರ ಚುನಾವಣೆಯಲ್ಲಿ ಎಂಈಎಸ್ ಗೆ ತೀವ್ರ ಮುಖಭಂಗವಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಈಎಸ್ ಗೆ ಸ್ಪಷ್ಟ ಬಹುಮತ ಇದ್ದರೂ ಸಹ ಪಾಲಿಕೆಯ ನಾಲ್ಕು ಸ್ಥಾಯಿ ಸಮೀತಿಗಳಲ್ಲಿ ಮೂರು ಸಮೀತಿಗಳು ಕನ್ನಡಿಗರ ಪಾಲಾಗಿ ಮೂರು ಸಮೀತಿಗಳ ಅಧ್ಯಕ್ಷರಾಗಿ ಕನ್ನಡಿಗರು ದಿಗ್ವಿಜಯ ಸಾಧಿಸಿದ್ದಾರೆ ಪೂರ್ಣ …

Read More »

ಬೆಳಗಾವಿಯ 280 ಬಾರ್ ಗಳು ಬಚಾವ್ 140 ಬಾರ್ ಗಳು ಬಂದ್..

,ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಬೆಳಗಾವಿ ಜಿಲ್ಲೆಯಲ್ಲಿರುವ ಹಾಯವೇ ಪಕ್ಕದ 140 ಬಾರ್ ಗಳನ್ನು ಬಂದ್ ಮಾಡಲಾಗಿದೆ ಎಂದು ಬೆಳಗಾವಿಯ ಅಬಕಾರಿ ಇಲಾಖೆ ಡಿಸಿ ಮಂಜುನಾಥ್ ಹೇಳಿದ್ದಾರೆ ಸುಪ್ರೀಂಕೋರ್ಟ್ ಆದೆಶ ಹಿನ್ನಲೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಾರ್ ಬಂದ ಆದೇಶ ಹಿನ್ನಲೆ ಜಿಲ್ಲೆಯ 140 ಬಾರ್ ಗಳು ಮುಚ್ಚಿಕೊಂಡಿವೆ ಜಿಲ್ಲೆಯಲ್ಲಿ ಒಟ್ಟು ೬೧೫ ಬಾರ್ ಇದ್ದು ಈ ಮೊದಲು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ …

Read More »

ಪೋಲೀಸರ ಬಲೆಗೆ ಪೋಲೀಸನೇ ಬಿದ್ದ….

ಪೋಲೀಸ್ ಕಾನ್ ಸ್ಟೇಬಲ್ ನನ್ನು ಪೋಲೀಸರೇ ಬಂಧಿಸಿದ್ದು ಯ್ಯಾಕೆ ಗೊತ್ತಾ… ಬೆಳಗಾವಿ-ನಗರದ ಮಾರ್ಕೆಟ್ ಯಾರ್ಡ ಬಳಿ ಆಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಪೋಲೀಸ್ ಕಾನ್ಸ್‌ಟೇಬಲ್ ನೊಬ್ಬ ಪೋಲೀಸರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ನಗರದ ಮಾರ್ಕೇಟ್ ಯಾರ್ಡ ಬಳಿ ವಿವಿಧ ಕಂಪನಿಗಳ ಸರಾಯಿ ಬಾಟಲ್ ಗಳನ್ನು ಮಾರಾಟ ಮಾಡುತ್ತಿರುವಾಗ ಎಪಿಎಂಸಿ ಮತ್ತು ಸಿಸಿಬಿ ಪೋಲೀಸರು ಜಂಟಿಯಾಗಿ ದಾಳಿ ಮಾಡಿ ಕೆಎಸ್ ಆರ್ ಪಿ ಪೇದೆಯನ್ನು ರೆಡ್ …

Read More »

ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಅಥಣಿ ಸಜ್ಜು

ಕೆಂಪವಾಡ ಬಸವೇಶ್ವರ ಏತ ನೀರಾವರಿಗೆ ಇಂದು ಶಂಕು ಸ್ಥಾಪನೆ. ಬೆಳಗಾವಿ- ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಸೇರಿದ್ದರೂ ಕೂಡ ಜಲಕ್ಷಾಮದಿಂದ ನರಳುತ್ತಿದ್ದ ಅಥಣಿ ತಾಲೂಕಿನ ಉತ್ತರ ಭಾಗಕ್ಕೆ ನೀರಾವರಿ ಸೌಲಭ್ಯ ವಿಸ್ತರಿಸುವ ನಿಟ್ಟಿನಲ್ಲಿ ಕೈಗೆತ್ತಿಕೊಂಡಿರುವ ಕೆಂಪವಾಡ ಬಸವೇಶ್ವರ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಅಥಣಿ ನಗರದ ಭೋಜರಾಜ ಮೈದಾನದಲ್ಲಿ ಶಂಕು ಸ್ಥಾಪನೆ ಸಮಾರಂಭ ನಡೆಯಲಿದ್ದು ಅಥಣಿ ತಾಲೂಕಿನಿಂದ ಸುಮಾರು  1 …

Read More »

ಥರ್ಡ ಗೇಟ್ ರೆಲ್ವೆ ಟ್ರ್ಯಾಕ್ ಮೇಲೆ ಮತ್ತೆ ಇಬ್ಬರ ಆತ್ಮಹತ್ಯೆ

ಥರ್ಡ ಗೇಟ್ ರೆಲ್ವೆ ಟ್ರ್ಯಾಕ್ ಮೇಲೆ ಗಂಡ,ಹೆಂಡತಿಯ ಆತ್ಮಹತ್ಯೆ ಬೆಳಗಾವಿ- ಬೆಳಗಾವಿಯ ಟಿಳಕವಾಡಿಯ ರೆಲ್ವೆ ಥರ್ಡ ಗೇಟ್ ಬಳಿ ಮತ್ತೆ ಇಬ್ಬರು ರೈಲು ಗಾಲಿಗೆ ತೆಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನ ಇಂದು ಸಂಜೆ ನಡೆದಿದೆ ವೈಭವ ನಗರದ ವಿಕ್ರಮ ಪಾಟೀಲ ಮತ್ತು ಇತನ ಹೆಂಡತಿ ಸ್ಮೀತಾ ಮಿರಜ ಹುಬ್ಬಳ್ಳಿ ಪ್ಯಾಸೇಂಜರ ರೈಲಿಗೆ ತೆಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆತ್ಮ ಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ತಿಳಿದು ಬಂದಿದ್ದು ರೆಲ್ವೆ …

Read More »

ಬೆಳಗಾವಿಯಲ್ಲಿ ಶಾಹು ಮಹಾರಾಜರ ಪುತ್ಥಳಿ ನಿರ್ಮಿಸಲು ಆಗ್ರಹ

ಬೆಳಗಾವಿ: ನಗರದಲ್ಲಿ ಶಾಹು ಮಹಾರಾಜರ ಪ್ರತಿಮೆ ಅಳವಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಕಾರ್ಯಕರ್ತರು ಪಾಲಿಕೆ ಮಹಾಪೌರ ಸಂಜೋತಾ ಬಾಂದೇಕರಗೆ ಮಂಗಳವಾರ ಮನವಿ ಸಲ್ಲಿಸಿದರು. ನಗರದಲ್ಲಿ ಶಾಹು ಮಹಾರಾಜರ ಪ್ರತಿಮೆ ಅಳವಡಿಸಲಾಗುವುದು ಎಂದು ಈ ಹಿಂದೆ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇಲ್ಲಿವರೆಗೆ ಅನುಷ್ಠಾನ ಮಾಡುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಶಾಹು ಮಹಾರಾಜರು 100 ವರ್ಷದ ಹಿಂದೆ ಬಡ ಮಕ್ಕಳಿಗೆ ಶಾಲೆ ಕಲಿಸಿದ್ದಾರೆ. ಸರ್ವಧರ್ಮದ ಜನರನ್ನು …

Read More »

ತೆಲೆ ಬಾಚ್ಕೊಳ್ಳಿ ಹೆಲ್ಮೆಟ್ ಹಾಕೊಳ್ಳಿ ಲೈಸನ್ಸ ಇಟ್ಕೊಳ್ಳಿ…!

ಬೆಳಗಾವಿ- ನಗರದ ಕ್ಯಾಂಪ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಆರಂಭ ವಾದ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರ ಈಗ ಕ್ರಿಯಾಶೀಲವಾಗಿದ್ದು ನಗರದಲ್ಲಿ ಟ್ರಾಫಿಕ್ ರೂಲ್ಸ ಗಳನ್ನು ಉಲ್ಲಂಘಿಸಿದ 500 ಕ್ಕೂಹೆಚ್ಚು ವಾಹನ ಸವಾರರ ಮನೆಗೆ ದಂಡದ ನೋಟೀಸ್ ರವಾನೆ ಆಗಿದೆ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರದಲ್ಲಿ ದೊಡ್ಡ ಸ್ಕ್ರೀನ್ ಇದೆ ನಗರದಲ್ಲಿ ಅಳವಡಿಸಲಾಗಿರುವ 90 ಕ್ಯಾಮರಾಗಳ ದೃಶ್ಯಗಳನ್ನು ಕೇಂದ್ರದಲ್ಲಿ ಹತ್ತಕ್ಕೂ ಹೆಚ್ಚು ಜನ ಪೋಲೀಸರು ನಿರಂತರವಾಗಿ ನೋಡುತ್ತಾರೆ ಹೆಲ್ಮೆಟ್ ಹಾಕಿಕೊಳ್ಳದ,ಟ್ರಾಫಿಕ್ ಸಿಗ್ನಲ್ …

Read More »

ಬತ್ತ ಹೋಯ್ತು…ಎತ್ತು ಹೋಯ್ತು..ರೆಂಟೆ ಹೊತ್ತು ಉಳುಮೆ ಮಾಡುವ ಸ್ಥಿತಿ ಬಂತು..

ಸತತ ಮೂರನಾಲ್ಕು ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗದೇ ಭೀಕರ ಬರ ಕಾಣಿಸಿಕೊಂಡಿದೆ.ಅನ್ನದಾತ ತೀವ್ರ ಸಂಕಷ್ಟಕ್ಕೀಡಾಗಿದ್ದಾನೆ.ಬತ್ತ ನೆಲ ಬಿಟ್ಟು ಏಳಲಿಲ್ಲ ಕಬ್ಬು ಸೊರಗಿತು ಸೋಯಾಬೀನ್ ಗೆ ದೇವರೇ ಗತಿ ಎನ್ನುವ ಪರಿಸ್ಥಿತಿ ಎದುರಾಗಿದೆ ಜಾನುವಾರುಗಳಿಗೆ ಮೇವಿಲ್ಲದ ಕಾರಣ ಅವುಗಳ ಮೂಕವೇದನೆ ನೋಡಲಾಗದೇ ರೈತರು ತಮ್ಮ ಎತ್ತುಗಳನ್ನ ಮಾರಾಟ ಮಾಡಿದ್ದಾರೆ. ಸದ್ಯ ಉಳಿಮೆ ಮಾಡಲು ಎತ್ತುಗಳ ಇಲ್ಲದ ಕಾರಣ ರೈತ ಉಳಿಮೆ ಮಾಡಲು ಪರದಾಡುತ್ತಿದ್ದಾನೆ. ಕೈಯಲ್ಲಿ ಹಣವಿಲ್ಲದ ಬಡ ರೈತರು ಹಿಂದು ಮುಂದೆ …

Read More »

ಪತ್ರಕರ್ತರ ಮೃಲಿನ ಜೈಲು ಶಿಕ್ಷೆಯನ್ನು ವಾಪಸ್ ಪಡೆಯಲು ಒತ್ತಾಯ

ಬೆಳಗಾವಿ- ಹಕ್ಕುಚ್ಯುತಿ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರಿಗೆ ಜೈಲು ಶಿಕ್ಷೆ ಆದೇಶ ವಿಚಾರ ವನ್ನು ಖಂಡಿಸಿ ಬೆಳಗಾವಿಯ ಪತ್ರಕರ್ತರು ಮತ್ತು ಜನಪರ ಸಂಘಟನೆಗಳ ನಾಯಕರು ನಗರದಲ್ಲಿ ಪ್ರತಿಭಟನೆ ಮಾಡಿ ಜೈಲು ಶಿಕ್ಷೆ ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯ ಮಾಡಿದರು ಬೆಳಗಾವಿಯಲ್ಲಿ ಪತ್ರಕರ್ತರು ಹಾಗೂ ಜನಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಭಾಧ್ಯಕ್ಷರು ವಿಧಿಸಿದ ಆದೇಶ ವಾಪಸ್ ಪಡೆಯಲು ಆಗ್ರಹ ಪಡಿಸಲಾಯಿತು ಜಿಲ್ಲಾಧಿಕಾರಿ ಮೂಲಕ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ …

Read More »

ಸೋಮವಾರ ರಮಜಾನ್ ಈದುಲ್ ಫಿತರ್ ಹಬ್ಬ

  ಬೆಳಗಾವಿ- ಬೆಳಗಾವಿಯ ಅಂಜುಮನ್ ಹಾಲ್ ನಲ್ಲಿ ನಡೆದ ಚಾಂದ ಕಮೀಟಿಯ ಸಭೆಯಲ್ಲಿ ಸೋಮವಾರ ಪವಿತ್ರ ರಮಜಾನ್ ಈದುಲ್ ಫಿತ್ರ ಹಬ್ಬವನ್ನು ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಚ ರಾಜು ಸೇಠ ಅವರ ಅಧ್ಯಕ್ಷತೆಯಲ್ಲಿ ನಡೆದ ಚಾಂದ ಕಮೀಟಿಯ ಸಭೆಯಲ್ಲಿ ಮುಸ್ಲೀಂ ಸಮಾಜದ ಮೌಲ್ವಿಗಳು ಮತ್ತು ಮುಖಂಡರು ಭಾಗವಹಿಸಿದ್ದರು ಚಾಂದ ಕಮೀಟಿಯ ಸದಸ್ಯರು ಚಂದ್ರ ದರ್ಶನದ ಬಗ್ಗೆ ದೆಹಲಿ.ಬೆಂಗಳೂರು ಮುಂಬಯಿ ಸೇರಿದಂತೆ ದೇಶದ ವಿವಿಧ ಮಹಾನಗರಗಳ ಚಾಂದ …

Read More »

ಬೆಳಗಾವಿಯಲ್ಲಿ ಇಫ್ತಿಯಾರ್ ಕೂಟ ,ಡಿಸಿ ಜಯರಾಂ ಭಾಗಿ

ಬೆಳಗಾವಿ: ನಗರದ ದರ್ಬಾರ ಗಲ್ಲಿಯಲ್ಲಿ ಶಾಸಕ ಫಿರೋಜ್ ಸೇಠ ಅವರು ಪವಿತ್ರ ರಮಜಾನ್ ಹಬ್ಬದ ನಿಮಿತ್ಯ ಇಫ್ತಿಯಾರ ಕೂಟವನ್ನು ಆಯೋಜಿಸಿದ್ದರು. ಜಿಲ್ಲಾಧಿಕಾರಿ ಎನ್.ಜಯರಾಂ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ದೂರ ದೂರದ ಗ್ರಾಮಗಳಿಂದ ರಮಜಾನ್ ಹಬ್ಬದ ಖರೀದಿಗಾಗಿ ಬೆಳಗಾವಿ ಮಾರುಕಟ್ಟಿಗೆ ಬಂದಿದ್ದ ಸಾವಿರಾರು ಜನರಿಗೆ ಖಡೇಬಜಾರನಲ್ಲಿ ಇಫ್ತಿಯಾರ ವ್ಯವಸ್ಥೆ ಮಾಡಲಾಗಿತ್ತು. ಇಫ್ತಿಯಾರ ಕೂಟದ ಮೊದಲು ಜಿಲ್ಲಾಧಿಕಾರಿ ಎನ್.ಜಯರಾಂ ಶಾಸಕ ಫಿರೋಜ್ ಸೇಠ, ರಾಜು ಸೇಠ, ನಗರ ಸೇವಕರಾದ ಜಯಶ್ರೀ ಮಾಳಗಿ, ಶಾಂತಾ …

Read More »

ಎಂಈಎಸ್ ಗೆ ಫಜೀತಿ..ಕನ್ನಡಿಗರಿಗೆ ಒಲಿದ ಒಂದೇ ಒಂದು ಸಮೀತಿ…!

ಬೆಳಗಾವಿ:ತೀವ್ರ ಕುತೂಹಲ ಕೆರಳಿಸಿದ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಲೆಕ್ಕ ಸ್ಥಾಯಿ ಸಮಿತಿ ಕನ್ನಡಿಗರ ಪಾಲಾದರೆ, ಉಳಿದ ಮೂರು ಸ್ಥಾಯಿ ಸಮಿತಿಗಳು ಆಡಳಿತರೂಢ ಮರಾಠಿ ಗುಂಪಿನ ಪಾಲಾಗಿವೆ. ಆಡಳಿತ ಮತ್ತು ವಿರೋಧಿ ಗುಂಪಿನ ಭಿನ್ನಮತದ ಪರಿಣಾಮ ಮೂರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದಿದ್ದು, ಈ ಮೂರು ಸಮಿತಿಗಳ ಮೇಲೆ ಮರಾಠಿಗರ ಗುಂಪು ಹಿಡಿತ ಸಾಧಿಸಿದೆ. ವಿವಿಧ ಸ್ಥಾಯಿ ಸಮಿತಿಗಳಿಗೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ. ಲೆಕ್ಕಗಳ ಸ್ಥಾಯಿ …

Read More »

ಬೆಳಗಾವಿ ಪಾಲಿಕೆ ಸಭೆಯಲ್ಲಿ ಮೊಳಗಿದ ನಾಡಗೀತೆ,ಡಿಸಿ ಜಯರಾಂ ಜಿಂದಾಬಾದ್…

ಬೆಳಗಾವಿ ಪಾಲಿಕೆ ಸಭೆಯಲ್ಲಿ ಮೊಳಗಿದ ನಾಡಗೀತೆ,ಡಿಸಿ ಜಯರಾಂ ಜಿಂದಾಬಾದ್… ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಇತಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಾಡಗೀತೆ ಮೊಳಗಿತು ಚುನಾವಣಾ ಅಧಿಕಾರಿಯಾಗಿದ್ದ ಡಿಸಿ ಜಯರಾಂ ಪಾಲಿಕೆಯಲ್ಲಿ ನಾಡಗೀತೆ ನುಡಿಸಲು ಸೂಚಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ ಶನಿವಾರ ಪಾಲಿಕೆಯಲ್ಲಿ ಸ್ಥಾಯಿ ಸಮೀತಿಗಳ ಚುನಾವಣೆ ನಡೆಯಿತು ಚುನಾವಣಾ ಅಧಿಕಾರಿಗಳಾಗಿ ಡಿಸಿ ಜಯರಾಂ ಭಾಗವಹಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಿದರು ಆರಂಭದಲ್ಲಿ ಕೋರಂ ಭರ್ತಿ ಆಗಿದೆ ಐದು ನಿಮಿಷದೊಳಗಾಗಿ …

Read More »

ಖಡೇ ಬಝಾರ್ ಪೋಲೀಸರ ಭರ್ಜರಿ ಬೇಟೆ 5kg ಬೆಳ್ಳಿ 8 kg ಶ್ರೀಗಂಧ ವಶ

  ಬೆಳಗಾವಿ – ನಗರದ ಖಡೇಬಝಾರ್ ಪೋಲೀಸರು ಭರ್ಜರಿ ಬೇಟೆಯಾಡಿ ಮುಂಬಯಿಯಿಂದ ಬೆಳಗಾವಿಗೆ ಬೆಳ್ಳಿ ಮತ್ತು ಶ್ರೀಗಂಧದ ಕಟ್ಟಿಗೆಯನ್ನು ಸ್ಮಗಲಿಂಗ್ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಬೇಧಿಸಿದ್ದಾರೆ ಆಕ್ರಮವಾಗಿ ಬೆಳ್ಳಿ ಸಾಗಾಣಿಕೆ ಮತ್ತು ಶ್ರೀಗಂಧದ ಕಟ್ಟಿಗೆ ಸ್ಮಗಲಿಂಗ್ ಸಮಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ಖಡೇಬಝಾರ್ ಪೋಲೀಸರು ಐದು ಕೆಜಿ ಅರವತ್ತು ಗ್ರಾಂ ಬೆಳ್ಳಿ ಮತ್ತು ಎಂಟು ಕೆಜಿ ಶ್ರೀಗಂಧದ ಕಟ್ಟಿಗೆಯನ್ನು ವಶ ಪಡಿಸಿ ಕೊಂಡಿದ್ದಾರೆ ಬೆಳ್ಳಿ ಸಾಗಾಣಿಕೆ ಪ್ರಕರಣಕ್ಕೆ ಸಮಂಧಿಸಿದಂತೆ ಮುಂಭೈ …

Read More »