Breaking News

LOCAL NEWS

17.75 ಲಕ್ಷದಲ್ಲಿ 30×40 ಜಾಗೆಯಲ್ಲಿ ಎರಡು ಬೆಡ್ ರೂಮ್ ಮನೆ

ಬೆಳಗಾವಿ- ಬೆಳಗಾವಿ ನಗರ ಹಾಗು ಸುತ್ತಮುತ್ತಲಿನ ಗ್ರಾಮಗಳ ಮಧ್ಯಮ ವರ್ಗದ ಜನರ ಮನೆ ಕಟ್ಟಿ ಕೊಳ್ಳುವ ಕನಸು ನನಸು ಮಾಡಲು ಬೆಳಗಾವಿಯ ನವಹಿಂದ ಟೌನ್ ಶಿಪ್ ಡೆವಲಪರ್ಸ ಕೈಗೆಟಕುವ ಯೋಜನೆಯನ್ನು ರೂಪಿಸಿದೆ ಬೆಳಗಾವಿಯ ಸಾಂಬ್ರಾ ರಸ್ತೆಯಲ್ಲಿಯ ಮುದಗಾ ಕ್ರಾಸ್ ನಲ್ಲಿ ನವ ಹಿಂದ ಟೌನ್ ಶಿಪ್ ಡೆವಲಪ್ ಮಾಡಲಾಗಿದ್ದು 30×40 ಜಾಗೆಯಲ್ಲಿ ಎರಡು ಬೆಡರೂಮ್ ಸಾಮರ್ಥ್ಯದ ಆಕರ್ಷಕ ಮನೆಯನ್ನು ಕೇವಲ 17.75 ಲಕ್ಷ ರೂ ದಲ್ಲಿ ದೊರಕಿಸಿ ಕೊಡಲಿದೆ ಕೇವಲ …

Read More »

ಬಿಗ್ ಬಝಾರ್ ಮೇಲೆ ಆಹಾರ ಸಂರಕ್ಷಣಾಧಿಕಾರಿ ದಾಳಿ ಐದು ಸಾವಿರ ದಂಡ

ಬೆಳಗಾವಿ- ಬೆಳಗಾವಿ ನಗರದ ಖಾನಾಪೂರ ರಸ್ತೆಯಲ್ಲಿರುವ ಅನಿಗೋಳ ಕ್ರಾಸ್ ನಲ್ಲಿರುವ ಬಿಗ್ ಬಝಾರ್ ಮೇಲೆ ದಾಳಿ ಮಾಡಿರುವ ಆಹಾರ ಸಂರಕ್ಷಣಾಧಿಕಾರಿ ಅಧಿಕಾರಿ ಎಂಎಸ್ ಪಲ್ಲೇದ ದಾಳಿ ಮಾಡಿದ್ದಾರೆ ಬಿಗ್ ಬಝಾರ್ ನಲ್ಲಿ ಔಟ್ ಡೇಟೆಡ್ ಬಿಸ್ಕೀತ್ ಪ್ಯಾಕೇಟ್ ಗಳನ್ನು ಮಾರಾಟ ಮಾಡುವ ಬಗ್ಗೆ ಗ್ರಾಹಕರೊಬ್ಬರು ಆಹಾರ ಸಂರಕ್ಷಣಾಧಿಕಾರಿ ಅವರಿಗೆ ದೂರು ಸಲಗಲಿಸಿದ್ದರು ಈ ಕುರಿತುದಾಳಿ ಮಾಡಿರುವ ಅಧಿಕಾರಿಗಳು ಅವಧಿ ಮುಗಿದ ಬಿಸ್ಕೀತ್ ಪ್ಯಾಕೇಟ್ ಗಳನ್ನು ವಶ ಪಡಿಸಿಕೊಂಡು ಐದು ಸಾವಿರ ದಂಡ …

Read More »

ಎಂಈಎಸ್ ಕಾರ್ಯಕರ್ತರಿಗೆ ವಿಘ್ನ ಸಂತೋಷಿಗಳು ಎಂದ ಗದುಗಿನ ತೋಂಟಧಾರ್ಯ ಶ್ರೀಗಳು

ಬೆಳಗಾವಿಯಲ್ಲಿ ಗದುಗಿನ ತೋಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿಗಳು ನಾಡದ್ರೋಯಿ ಎಂಇಎಸ್ ಕಾರ್ಯಕರ್ತರು ವಿಘ್ನ ಸಂತೋಷಿಗಳು ಎಂದು ಅಭಿಪ್ರಾಯಪಟ್ಟಿದ್ದು ಇಲ್ಲಿಯ ಸಕಲ ಸವಲತ್ತುಗಳನ್ನು ಅನುಭವಿಸಿ ನಮ್ಮ ನೆಲದಲ್ಲೇ ನಿಂತು ನಮ್ಮ ನೆಲಕ್ಕೆ ದಿಕ್ಕಾರ ಕೂಗಿ ಬೊಗಳುತ್ತಿದ್ದ ಇವರಿಗೆ ಡಿಸಿ ಜಯರಾಂ ಲಗಾಮು ಹಾಕಿದ್ದಾರೆ ಎಂದು ಹೇಳಿದ್ದಾರೆ ನಗರದ ಸುವರ್ಣ ವಿಧಾನಸೌಧದಲ್ಲಿ ಎಂಈಎಸ್ ವಿರುದ್ಧ ಗುಡುಗಿದ ಶ್ರೀಗಳು ಮರಾಠಿಯಲ್ಲಿ ದಾಖಲೆ ಕೊಡಿ ಎಂದು ಎಂಇಎಸ್ ಕಾರ್ಯಕರ್ತರ ಒತ್ತಾಯವಿಚಾರ ಪ್ರಸ್ತಾಪಿಸಿದ ಶ್ರೀಗಳು ಎಂಇಎಸ್ ಗೆ …

Read More »

ಸಾಧಕರಿಗೆ ಸತ್ಕಾರ …ಸುವರ್ಣ ಸೌಧದಲ್ಲಿ ಚಮತ್ಕಾರ…ಇರಲಿ ಇದೇ ಮಮಕಾರ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ವಸತಿ ನಿಲಯಗಳಲ್ಲಿ ಇದ್ದುಕೊಂಡು sslc ಮತ್ತು PUC ಪರೀಕ್ಷೆಯಲ್ಲಿ ಶೇ 90/. ಕ್ಕಿಂತಲೂ ಹೆಚ್ಚು ಅಂಕ ಪಡೆದ ಜಾಣ ಜಾಣೆಯರಿಗೆ ಜಿಲ್ಲಾಡಳಿತದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಜಿಲ್ಲೆಯ 600 ಪ್ರತಿಭಾವಂತರಿಗೆ ಸತ್ಕರಿಸಿ ಗೌರವಿಸಿ ಪ್ರತಿಯೊಬ್ಬರಿಗೂ ತಲಾ ಹತ್ತು ಸಾವಿರ ರೂ ಪ್ರೋತ್ಸಾಹ ಧನ ನೀಡಿ ಅಭಿನಂದಿಸಲಾಯಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಜಯರಾಂ ಹಾಸ್ಟೇಲ್ ಗಳಲ್ಲಿ ಇದ್ದುಕೊಂಡು …

Read More »

ನನ್ನ ಮೂಲ ಬೇರು ಕನ್ನಡ ಅದನ್ನು ನಾನೇಂದಿಗೂ ಮರೆಯೋದಿಲ್ಲ- ನಂದಿನಿ

ನಾವು ನಮ್ಮ ಮೂಲ ಬೇರುಗಳನ್ನು ಮರೆಯುವಂತಿಲ್ಲ : ಯುಪಿಎಸ್‍ಸಿ ಟಾಪರ್ ನಂದಿನಿ ಕೆ.ಎಅರ್. ಅವರ ನೆಲಮೂಲ ಸಂಸ್ಕøತಿಯ ಕಾಳಜಿಯ ಮಾತುಗಳು ಕನ್ನಡ ನೆಲದ ಸಂಸ್ಕøತಿಯಲ್ಲಿಯೇ ಬೆಳೆದ ಬಂದು ನಾನು ಸಹಜವಾಗಿ ನನಗೆ ಕನ್ನಡದ ಬಗ್ಗೆ ಆಸಕ್ತಿ ಅಭಿಮಾನ ಮೂಡಲು ಕಾರಣವಾಗಿದ್ದು, ನಮ್ಮ ಅಭಿವೃದ್ಧಿಯನ್ನು ನಮ್ಮ ನೆಲ ಮೂಲದಿಂದಲೇ ಕಂಡುಕೊಳ್ಳಲು ಮುಂದಾದಾಗ ಯಶಸ್ವಿ ಕಾಣಲು ಸಾಧ್ಯವಿದೆ ಎ|ಂದು ಯುಪಿಎಸ್‍ಸಿ ಪರೀಕ್ಷೆಯಲ್ಲಿ ದೇಶದಲ್ಲಿಯೇ ಪ್ರಥಮ ರ್ಯಾಂಕ್‍ದೊಂದಿಗೆ ಪೂರೈಸಿದ ಅಚ್ಚ ಕನ್ನಡತಿ ನಂದಿನಿ ಕೆ. …

Read More »

ಜಿಲ್ಲಾಧಿಕಾರಿ ಎನ್. ಜಯರಾಮ್‍ರ ಮಾನವೀಯ ಮಿಡಿತಕ್ಕೆ ಇನ್ನೊಂದು ನಿದರ್ಶನ

  ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರಿಗೆ ಬಡ- ಅಸಹಾಯಕ ಮಕ್ಕಳ ಬಗ್ಗೆ ವಿಶೇಷ ಪ್ರೀತಿ, ಮಮತೆ ಹಾಗೂ ಕಾಳಜಿ. ಕಳೆದ ವರ್ಷ ದೀಪಾವಳಿ ಹಬ್ಬವನ್ನು ನಿರ್ಗತಿಕ ಮಕ್ಕಳೊಂದಿಗೆ ಸಂಭ್ರಮಿಸಿ ಕಳೆದ ಆ ಮಕ್ಕಳ ಮನದಲ್ಲಿ  ಉಲ್ಲಾಸ, ಪ್ರೋತ್ಸಾಹ ತುಂಬಿರುವ ಸನ್ನಿವೇಶ ಸಂದರ್ಭದ ನೆನಪು ಸಾರ್ವಜನಿಕರ ಮನನದಲ್ಲಿ ಹಸಿರಾಗಿದೆ. ಅಂದು ಆ ಮಕ್ಕಳನ್ನು ತಮ್ಮ ಮನೆಗೆ ಆಹ್ವಾನಿಸಿ, ಅವರೊಂದಿಗೆ ಊಟ ಮಾಡಿ, ಹಾಡು ಹೇಳಿ, ಉಭಯ ಕುಶಲೋಪರಿ ವಿಚಾರಿಸಿ, ಮಹೋನ್ನತ …

Read More »

ಕರ್ನಾಟಕ ಬಂದ್ ಗೆ ಸಂಘಟನೆಗಳ ಬೆಂಬಲ ಪ್ರತಿಭಟನೆ

  ಬೆಳಗಾವಿ- ಕರ್ನಾಟಕ ಬಂದ್ ಕರೆಯನ್ನು ಬೆಂಬಲಿಸಿ ಹಲವಾರು ಕನ್ನಡಪರ ಸಂಘಟನೆಗಳು ಬೆಳಗಾವಿ ನಗರದಲ್ಲಿ ಪ್ರತಿಭಟನೆ ನಡೆಸಿದರು ಆದರೆ ನಗರದ ಜನಜೀವನ ಸಹಜವಾಗಿತ್ತು ಹಲವಾರು ಕನ್ನಡಪರ ಸಂಘಟನೆಗಳು ಸಂಸದ ಸುರೇಶ ಅಂಗಡಿ ಅವರ ನಿವಾಸದ ಮುಂದೆ ಧರಣಿ ನಡೆಸಿ ಎಂಈಎಸ್ ಸಂಘಟನೆಯನ್ನು ನಿಷೇಧಿಸಬೇಕು ಕಳಸಾ ಬಂಡೂರಿ ನಾಲಾ ವಿಷಯದ ಕುರಿತು ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು ಬಂದ್ ಬೆಂಬಲಿಸಿ ಹಲವಾರು ಸಂಘಟನೆಗಳು ಪ್ರತಭಟನೆ ನಡೆಸಿದರು …

Read More »

ಎಸಿ ರೂಮ್ ನಲ್ಲಿ ಕುಳಿತುಕೊಂಡು ಪಾಲಿಸಿ ಮಾಡುವ ಸರ್ಕಾರ ನಮ್ಮದಲ್ಲ

ಎಸಿ ರೂಮ್ ನಲ್ಲಿ ಕುಳಿತುಕೊಂಡು ಪಾಲಿಸಿ ಮಾಡುವ ಸರ್ಕಾರ ನಮ್ಮದಲ್ಲ ಬೆಳಗಾವಿ- ಕೇಂದ್ರ ಸರ್ಕಾರ ಮೂರು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ದೇಶಾದ್ಯಂತ ಸಬ್ ಕೆ ಸಾಥ್ ಸಬಕಾ ವಿಕಾಸ್ ಹೆಸರಿನಲ್ಲಿ 900 ಕಾರ್ಯಕ್ರಮಗಳು ನಡೆಯುತ್ತಿವೆ ಕೇಂದ್ರ ಸರ್ಕಾರದ ಯೋಜನೆಗಳನ್ನು ನೂರಕ್ಕೆ ನೂರರಷ್ಟು ದೇಶದ ನಾಗರಿಕರಿಗೆ ತಲುಪುಸುವದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಠೋಡ್ ತಿಳಿಸಿದ್ದಾರೆ ಅವರು ಸೋಮವಾರ …

Read More »

ರಕ್ಕಸಕೊಪ್ಪ ಜಲಾಶಯ ಖಾಲಿ…ನಗರದಲ್ಲಿ ನೀರಿನ ಸಮಸ್ಯೆ

ಬೆಳಗಾವಿ – ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ನೆಲ ಹಿಡಿದಿದ್ದು ಜಲಾಶಯ ಸಂಪೂರ್ಣವಾಗಿ ಖಾಲಿ ಆಗುವ ಹಂತ ತಲುಪಿದೆ ರಕ್ಕಸಕೊಪ್ಪ ಜಲಾಶಯದಿಂದ ಬೆಳಗಾವಿಯ ಹಿಂಡಲಗಾ ಪಂಪ್ ಹೌಸ್ ಗೆ ದಿನನಿತ್ಯ ಹನ್ನೆರಡು MGD ನೀರಿನ ಬದಲು ಕೇವಲ ಆರು MGD ನೀರು ಪಂಪ್ ಮಾಡಲಾಗುತ್ತಿದ್ದು ಬೆಳಗಾವಿ ನಗರದ 24×7 ನೀರು ಪೂರೈಕೆಯ ಪ್ರದೇಶಗಳಲ್ಲಿ ಸೇರಿದಂತೆ ನಗರದ ಕೆಲವು ಪ್ರದೇಶಗಳಲ್ಲಿ ಕಳೆದ ಐದು ದಿನಗಳಿಂದ …

Read More »

ರೈತರ ಹತ್ಯೆ ಖಂಡಿಸಿ ಘರ್ಜಿಸಿದ ಯುವ ಪಡೆ

ಬೆಳಗಾವಿ: ಮದ್ಯ ಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ್  ಹಾಗೂ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡದಿರುವುದನ್ನು ಖಂಡಿಸಿ ಬೆಳಗಾವಿ ಯುಥ್ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆದು ಪ್ರತಿಭಟನೆ ನಡೆಸಲು ಹೊರಟಾಗ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ರವಿವಾರ ನಡೆಯಿತು. ಮದ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ರೈತರ ಮೆಲೆ ಸಾಲ ಮನ್ನಾ ಮಾಡುವ ಹೋರಾಟ ನಡೆಸುತ್ತಿರುವಾಗ ಅಲ್ಲಿನ ಸರಕಾರ ರೈತರ ಮೇಲೆ ಗೋಲಿ ಬಾರ್ ನಡೆಸಿ ಹತ್ಯೆ ಮಾಡಿಲ್ಲ. ಈ ಸ್ಥಳಕ್ಕೆ …

Read More »

ಕುಡಿಯಲು ಹಣ ಕೊಡದ ತಾಯಿಯನ್ನೇ ಮರ್ಡರ್ ಮಾಡಿದ ಕಿರಾತಕ ಮಗ

ಕುಡಿಯಲು ಹಣ ನೀಡದ್ದಕ್ಕೆ ಮಗನಿಂದಲೆ ತಾಯಿಯ ಹತ್ಯೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆಯಲ್ಲಿ ನಡೆದಿದೆ ಬೆಳಗಾವಿ ತಾಲೂಕು ಗುಗ್ರಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು ಸಾರಾಯಿ ಕುಡಿಯಲು ಹಣ ನೀಡದ್ದಕ್ಕೆ ಸುರೇಶ್ ದೇಶೂರಕರ್ ೨೮ ಎಂಬ ಕಿರಾತಕ ತನ್ನ ತಾಯಿಯನ್ನೇ ಹತ್ಯೆ ಮಾಡಿ ಪರಾರಿಯಾಗಿದ್ದ ಇತನನ್ನು ಕಾಕತಿ ಪೋಲೀಸರು ಬಂಧಿಸಿದ್ದಾರೆ ನಿನ್ನೆ ರಾತ್ರಿ ಕಿರಾತಕ ಕುಡಿಯಲು ತನ್ನ ತಾಯಿಯ ಹತ್ತಿರ ಹಣ ಕೇಳಿದ್ದಾನೆ ತಾಯಿ ನನ್ನ ಹತ್ತಿರ ಹಣ ಇಲ್ಲವೆಂದಾಗ …

Read More »

ಗೋವಾ ಬೀಚ್ ನಲ್ಲಿ ಮಜಾ ಮಾಡುವ ಮೊದಲೇ ಕೈಗಳಿಗೆ ಬೇಡಿ ಬಿತ್ತು….

  ಬೆಳಗಾವಿ- ಬೆಳಗಾವಿ ವ್ಯಾಪಾ ರಿಯೊಬ್ಬನ ಕಣ್ಣಿಗೆ ಕಾರದಪುಡಿ ಎರಚಿ ಒಂಬತ್ತು ಲಕ್ಷ 88 ಸಾವಿರ ದೋಚಿಕೊಂಡು ಗೋವಾ ಬೀಚ್ ಗೆ ಹೋಗಿ ಮಸಾಜ್ ಮಾಡಿಸಿಕೊಂಡು ಕ್ಯಾಸಿನೋ ದಲ್ಲಿ ಇನ್ನಷ್ಟು ಹಣ ಸಂಪಾದಿಸಬೇಕೆಂದು ಪ್ಲ್ತಾನ್ ಮಾಡಿಕೊಂಡಿದ್ದ ಖದೀಮರು ಗೋವಾ ಬೀಚ್ ನಲ್ಲಿ ಮಜಾ ಮಾಡುವ ಮೊದಲೇ ಕೈಗಳಿಗೆ ಬೇಡಿ ಹಾಕಿಸಿಕೊಂಡಿದ್ದಾರೆ ಜೂನ್ 1 ರಂದು ರಾತ್ರಿ ಬೆಳಗಾವಿಯ ವ್ಯಾಪಾರಿ ಅನೀಲ ಪೋರವಾಲ ಕಣ್ಣಿಗೆ ಕಾರದಪುಡಿ ಎರಚಿ 9 ಲಕ್ಷ 88 …

Read More »

ಹೆದ್ದಾರಿ ಪಕ್ಕದ ಸರಾಯಿ ಅಂಗಡಿಗಳ ಸ್ಥಳಾಂತರಕ್ಕೆ ನೋಟೀಸ್ ಜಾರಿ

ಬೆಳಗಾವಿ- ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಹೆದ್ಧಾರಿ ಮತ್ತು ರಾಜ್ಯ ಹೆದ್ದಾರಿಯ 500 ಮೀಟರ್ ಸುತ್ತಳತೆಯಲ್ಲಿರುವ ಎಲ್ಲ ಮದ್ಯದ ಅಂಗಡಿಗಳನ್ನು ಬಾರ್ ಆ್ಯಂಡ ರೆಸ್ಟೀರೆಂಟ್ ಗಳನ್ನು ಸ್ಥಳಾಂತರ ಮಾಡುವಂತೆ ಅಬಕಾರಿ ಉಪ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ 426 ಹೆದ್ದಾರಿ ಪಕ್ಕದಲ್ಲಿ ಸರಾಯಿ ಅಂಗಡಿಗಳು ಮತ್ತು ಬಾರ್ ಗಳಿದ್ದು ಇವುಗಳನ್ನು ಜೂನ್ 30 ಮದ್ಯರಾತ್ರಿಯವರೆಗೆ ಸ್ಥಳಾಂತರ ಮಾಡದಿದ್ದರೆ ಲೈಸನ್ಸ ಸ್ಥಗಿತ ಗೊಳಿಸಲಾಗುವದು ಎನ್ನುವ ಎಚ್ಚರಿಕೆಯನ್ನು ನೋಟಿಸ್ …

Read More »

ಸಂಸದೀಯ ಕಾರ್ಯದರ್ಶಿಗಳಿಗೆ ಸರ್ಕಾರ ಎಷ್ಟು ದುಡ್ಡು ಖರ್ಚು ಮಾಡಿದೆ ಗೊತ್ತಾ.?

ಬೆಳಗಾವಿಯಲ್ಲಿ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ದಾಖಲೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಸಂಸದೀಯ ಕಾರ್ಯದರ್ಶಿ ಗಳಿಗೆ ಎಷ್ಟು ದುಡ್ಡು ಖರ್ಚಾಗುತ್ತಿದೆ ಸರ್ಕಾರದ ಎಷ್ಟು ಹಣ ಪೋಲಾಗುತ್ತಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ರಾಜ್ಯ ಸರ್ಕಾರದಿಂದ ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಲಕ್ಷಾಂತರ ರುಪಾಯಿ ಹಣ ಪೋಲಾಗುತ್ತಿದೆ ಸರ್ಕಾರ 16 ತಿಂಗಳಲ್ಲಿ 12 ಜನ ಸಂಸದೀಯ ಕಾರ್ಯದರ್ಶಿಗಳಿಗೆ 3 ಕೋಟಿ 64 ಲಕ್ಷ 72 ಸಾವಿರ ಭತ್ತೆಗಾಗಿ ವೆಚ್ಚ ಮಾಡಿದೆ. …

Read More »

ಯಡಿಯೂರಪ್ಪ ಅವರನ್ನು ಭೇಟಿಯಾದ ಶಿವಾಜಿ ಸುಂಠಕರ

  ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಟಕ ಮುಕ್ತಾಯದ ಹಂತದಲ್ಲಿದೆ ಮಾಜಿ ಮಹಾಪೌರ ವಿಜಯ ಮೋರೆ ಎಂಈಎಸ್ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದರೆ ಇನ್ನೊಬ್ಬ ಮಾಜಿ ಮಹಾಪೌರ ಶಿವಾಜಿ ಸುಂಠಕರ ತಮ್ಮ ಬೆಂಬಲಿಗ ನಾಯಕರೊಂದಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ ಸೋಮವಾರ ಮಾಜಿ ಮಹಾಪೌರ ಶಿವಾಜಿ ಸುಂಠಕರ ಮತ್ತು ಎಂಈಎಸ್ ತಾಲೂಕಾ ಪಂಚಾಯ್ತಿ ಸದಸ್ಯ ಅಷ್ಟೇಕರ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಚಿಕ್ಕೋಡಿಯಲ್ಲಿ ಮಾಜಿ …

Read More »