Breaking News

LOCAL NEWS

ರಾಣಿ ಶುಗರ್ಸ್ ಚುನಾವಣೆ: ಮತ ಎಣಿಕೆ ಪ್ರಾರಂಭ

ಕಿತ್ತೂರು ತಾಲೂಕಿನ ಪ್ರತಿಷ್ಠಿತ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬುಧವಾರ ಚುನಾವಣೆ ನಡೆದಿದ್ದು, ಶೇ 83.6 ಮತದಾನವಾಗಿದೆ. ಮತದಾನ ಪ್ರಕ್ರಿಯೆ ಮುಗಿದ ನಂತರ ಮತಗಟ್ಟೆಗಳಿಂದ ಎಣಿಕೆ ಕೇಂದ್ರಕ್ಕೆ ಡಬ್ಬಿಗಳನ್ನು ಸಾಗಿಸಲಾಗಿದ್ದು, ಅಲ್ಲಿ ಮತಗಳ ವಿಂಗಡಣೆ ಕಾರ್ಯ ಭರದಿಂದ ಸಾಗಿದೆ. 6 ಎಣಿಕೆ ಟೇಬಲ್ ಹಾಕಲಾಗಿದೆ. ಅಲ್ಲಿ 25 ಮತಗಳ ಕಟ್ ಮಾಡಲಾಗುತ್ತಿದೆ. ಮತಗಳ ವಿಂಗಡಣೆ ಕಾರ್ಯ ಮುಗಿದ ಕೂಡಲೇ ಮೊದಲು ಮಹಿಳಾ ಸ್ಥಾನಗಳ ಮತಗಳನ್ನು ಎಣಿಕೆಗೆ ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ …

Read More »

ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆ 37 ಅಭ್ಯರ್ಥಿಗಳು ಕಣದಲ್ಲಿ

ಬೆಳಗಾವಿ : ಕೋವೀಡ್ ನಿಯಮಾವಳಿಗಳು ಜಾರಿಯಲ್ಲಿರುವಾಗ ನಿಯಮಾವಳಿಗಳ ಪ್ರಕಾರ ಮಲ್ಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಗದ್ದುಗೆ ಇಂದು ಬಿರುಸಿನಿಂದ ಮತದಾನ ನಡೆಯುತ್ತಿದೆ. ಕಿತ್ತೂರು ಕ್ಷೇತ್ರದ ಜೀವನಾಡಿಯಾಗಿದ್ದ ಈ ಕಾರ್ಖಾನೆ ಆರ್ಥಿಕವಾಗಿ ದಿವಾಳಿಯಾಗಿದೆ,ಇಷ್ಟು ದಿನ ಈ ಕಾರ್ಖಾನೆಯಲ್ಲಿ ದರ್ಬಾರ್ ಮಾಡಿದ ಘಟಾನುಘಟಿ ನಾಯಕರು ಚುನಾವಣೆಯಿಂದ ದೂರ ಉಳಿದಿದ್ದು,ಖಾನಾಪೂರ ಕ್ಷೇತ್ರದ ಜೆಡಿಎಸ್ ಧುರೀಣ ನಾಸೀರ ಬಾಗವಾನ್,ಮತ್ತು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲರ ಪುತ್ರ ಪ್ರಕಾಶ್ ಗೌಡ ಪಾಟೀಲ ನೇತ್ರತ್ವದ …

Read More »

ಬೆಳಗಾವಿಯಲ್ಲಿ ಡೋಂಟ್ ಕೇರ್ ರೂಲ್ ಜಾರಿಯಲ್ಲಿದೆ,ಪ್ಲೀಸ್ ಡೋಂಟ್ ಡಿಸ್ಟರ್ಬ್….!!

ಬೆಳಗಾವಿ- ಜೀವ ಅಂದ್ಮೇಲೆ ಹೊಟ್ಟೆಗೆ ಹಿಟ್ಡು ನೀರು ನಿದ್ದೆ ಬೇಕೆ ಬೇಕು ಆದ್ರೆ ಮನುಷ್ಯನಿಗೆ ಇಲ್ಲೇ ಊಟ ಇಲ್ಲೇ ನಿದ್ದೆ ಅನ್ನೋ ಸ್ಥಳ ಮತ್ತು ಸಮಯ ನಿಗದಿ ಆಗಿರುತ್ತೆ. ಪಾಪ ಮೂಕ ಜೀವಿಗೆ ಇದು ಡಿಸಿ ಕಚೇರಿ ಇಲ್ಲಿ ಮಲಗಬಾರದು,ಇಲ್ಲಿ ಮಲಗಿದ್ರೆ ಕೇಸ್ ಹಾಕ್ತಾರೆ ಅನ್ನೋದು ಗೊತ್ತೆ ಇಲ್ಲ,ಪೋಲೀಸರ ಹೆದರಿಕೆಯೂ ಅವರಿಗಿಲ್ಲ,ಎಲ್ಲೋ ಹೊಟ್ಟೆತುಂಬ ತಿಂದು ಬಂದ್ಮೇಲೆ ನಿದ್ದೆ ಬಂದಿದೆ,ಹೀಗಾಗಿ ಅವರು ಡಿಸಿ ಕಚೇರಿ ಆವರಣದಲ್ಲಿ ಮಲಗಿ, ರಿಲ್ಯಾಕ್ಸ್ ಮಾಡುತ್ತಿದ್ದ ದೃಶ್ಯ …

Read More »

ಬೆಳಗಾವಿಯಲ್ಲಿ ಲ್ಯಾಂಡ್‌ ಆಗದೇ ಮೂರು ವಿಮಾನಗಳು ವಾಪಸ್…..!

ಬೆಳಗಾವಿ- ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬೆಳಗಾವಿ ಜಿಲ್ಲೆಯಲ್ಲಿ ಭಯಾನಕ ಮಳೆ ಸುರಿಯುತ್ತಿರುವ ಪರಿಣಾಮ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮೂರು ವಿಮಾನಗಳು ಲ್ಯಾಂಡಿಂಗ್ ಆಗದೇ ವಾಪಸ್ ಆಗಿವೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಇಂದು ಸೋಮವಾರ ,ಹೈದ್ರಾಬಾದ,ತಿರುಪತಿ,ಮತ್ತು ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದವರೆಗೂ ಬಂದ ವಿಮಾನಗಳು ವಿಪರೀತ ಮಳೆ ಮತ್ತು ಮುಸುಕು ಇರುವ ಕಾರಣ ಹಿಂತಿರುಗಿ ಹೋಗಿವೆ‌. ಇಂದು ಬೆಳಿಗ್ಗೆ 8.50 ಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಸ್ಪೈಸ್ …

Read More »

ಲಂಚ ಪ್ರತಿಬಂಧಕ ಕಾಯ್ದೆ,ಕಾರ್ಯಾಗಾರ,ಆನ್ ಲೈನ್ ಉಪನ್ಯಾಸ

ಕಳಗಾವಿ, -: ಭ್ರಷ್ಟಾಚಾರ ನಿಗ್ರಹ ದಳ ಉತ್ತರ ವಲಯ, ಬೆಳಗಾವಿ ವತಿಯಿಂದ ಲಂಚ ಪ್ರತಿಬಂಧಕ ಕಾಯ್ದೆ-೧೯೮೮ (ತಿದ್ದುಪಡಿ-೨೦೧೮) ನೇದ್ದಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಕಾರ್ಯಾಗಾರ ಸುವರ್ಣ ವಿಧಾನಸೌಧದಲ್ಲಿ ಆರಂಭಗೊಂಡಿದೆ. ಬೆಂಗಳೂರಿನ ಎಸಿಬಿ ಕೇಂದ್ರ ಕಚೇರಿಯ ಐಜಿಪಿ ಎಂ. ಚಂದ್ರಶೇಖರ ಅವರು ಸೋಮವಾರ (ಅ.12) ಕಾರ್ಯಾಗಾರವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಬೆಳಗಾವಿಯ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ ಎನ್. ವ್ಹಿ., ರಾಜ್ಯ ಮಾಹಿತಿ ಆಯೋಗದ …

Read More »

ಡೈವೋರ್ಸ್ ಕೇಸ್ ವಾಪಸ್ ಪಡೆಯಲು ಕಲ್ಯಾಣ ಪತ್ನಿ ನಿರ್ಧಾರ

ಬೆಳಗಾವಿ- ಪ್ರೇಮಕವಿ ಕೆ.ಕಲ್ಯಾಣ ಕುಟುಂಬದಲ್ಲಿ ಈಗ ಮತ್ತೆ ಪ್ರೇಮಕಾವ್ಯ ಶುರುವಾಗಿದ್ದು ಕಲ್ಯಾಣ ಅವರ ಪತ್ನಿ ಡೈವೋರ್ಸ್ ಕೇಸ್ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಬೆಳಗಾವಿಯ ಹೊಟೇಲ್ ವೊಂದರಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಕೆ. ಕಲ್ಯಾಣ ಅವರ ಪತ್ನಿ ಮನೆಯಲ್ಲಿ ಕೆಲಸದವರನ್ನು ಇಡುವಾಗ ಅವರ ಬಗ್ಗೆ ಪೂರ್ಣವಾದ ಮಾಹಿತಿ ಪಡೆದುಕೊಳ್ಳಬೇಕು ಮನಯ ಕೆಲಸದವಳಿಂದ ನಾನು ಮೋಸ ಹೋದ ಹಾಗೆ ಬೇರೆ ಯಾರೂ ಮೋಸ ಹೋಗಬಾರದು,ಅವರು ಹೇಳಿದ್ದೆ ನಿಜ ಎಂದು ನಾನು ನಂಬಿಕೊಂಡಿದ್ದೆ ಆದ್ರೆ …

Read More »

ಎಂ.ಪಿ ಟಿಕೆಟ್,, ಅಮರನಾಥ ಜಾರಕಿಹೊಳಿ ಹೇಳಿದ್ದೇನು ಗೊತ್ತಾ….?

  *KMF ನಿರ್ದೇಶಕರಾದ ಶ್ರೀ ಅಮರ್ ನಾಥ್ ರಮೇಶ್ ಜಾರಕಿಹೊಳಿ‌ ಅವರ ಹೇಳಿಕೆ* ನಾನು ವಯಸ್ಸಿನಲ್ಲಿ ತುಂಬಾ ಚಿಕ್ಕವನು. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ ಇನ್ನೂ ಸಾಕಷ್ಟು ಕೆಲಸ‌ ಮಾಡುವ ಮನಸ್ಸಿದೆ. ನನ್ನ ತಂದೆಯವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಗೋಕಾಕ್ ಕ್ಷೇತ್ರದ ಸಾರ್ವಜನಿಕರ ಕುಂದು‌ ಕೊರತೆಗಳನ್ನು ಆಲಿಸಿ ; ಸಮಸ್ಯೆಗಳನ್ನು ಪರಿಹರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಸನ್ಮಾನ್ಯ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿಯವರು …

Read More »

ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ ನಿಲುವು ಸ್ಪಷ್ಟಪಡಿಸಿ

ಬೆಳಗಾವಿ ರಾಜ್ಯದಲ್ಲಿರುವ ವಿವಿಯಿಂದ ಪರೀಕ್ಷೆ ನಡೆಸುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸರಕಾರ ಮತ್ತು ವಿವಿಯ ನಡುವೆ ಸಮನ್ವಯತೆ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆಗ್ರಹಿಸಿ ಸೋಮವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೆಲ ವಿಶ್ವವಿದ್ಯಾಲಯಗಳು ಪಠ್ಯಕ್ರಮವನ್ನು ಬದಲಾವಣೆ ಮಾಡಿದ್ದಾರೆ. ಅವು ಇಲ್ಲಿಯವರೆಗೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಕೈಗೆ ಸೇರಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಿಂದಿನ ಸೆಮಿಸ್ಟರ್ ಅಧ್ಯಯನ ಮಾಡಬೇಕೋ ಅಥವಾ ಈಗೀನ ಸಮಿಸ್ಟರ್ …

Read More »

ಮೈಯ್ಯಾಗ ದೇವರು ಬಂದಿದ್ದ….ಆರು ಕೋಟಿ ಆಸ್ತಿ ನುಂಗಿದ್ದ….!

ಬೆಳಗಾವಿ- ರಿಮೋಟ್ ಕಂಟ್ರೋಲ್ ಯುಗದಲ್ಲೂ ಜನ ಮಾಟ ಮಂತ್ರಕ್ಕೆ ಕಂಟ್ರೋಲ್ ಕಳೆದುಕೊಳ್ಳುತ್ತಾರೆ ಅಂದ್ರೆ ನಂಬಲಾಗುತ್ತಿಲ್ಲ,ಪ್ರೇಮ ಕವಿ ಕೆ.ಕಲ್ಯಾಣ ಕುಟುಂಬದಲ್ಲಿ ಮಾಟ ಮಂತ್ರದ ಪ್ರಭಾವ ಬೀರೀದ್ದು ಮೈಯ್ಯಾಗ ಬಂದ ದೇವ್ರು ಆರು ಕೋಟಿ ಆಸ್ತಿ ನುಂಗಿದ ರೋಚಕ ಕಹಾನಿ ಈಗ ಬಯಲಾಗಿದೆ ಮಾಟ,ಮಂತ್ರವಾದಿ ಶಿವಾನಂದ ವಾಲಿಯ ಆಟ ಬೀಳಗಿಯಿಂದ ಡೈರೇಕ್ಟ್ ಬೆಂಗಳೂರಿಗೆ ತಲುಪಿದೆ,ಬೀಳಗಿಯ ಮಂತ್ರವಾದಿ,ಶಿವಾನಂದ ವಾಲಿ ಕೆ.ಕಲ್ಯಾಣ ಅವರ ಮನೆಯ ಕೆಲಸದವಳನ್ನು ಪಟಾಯಿಸಿ ನಂತರ ಕೆ.ಕಲ್ಯಾಣ ಮನೆಗೆ ಹೋಗಿ, ಮಾಟ ಮಂತ್ರ …

Read More »

ಶಿವಾನಂದ ವಾಲಿ,ಮಾಟ ಮಾಡಿ ,5 ರಿಂದ 6 ಕೋಟಿ ಕೆ.ಕಲ್ಯಾಣ ಆಸ್ತಿ ಕಬಳಿಕೆ.

ಬೆಳಗಾವಿ-ಶಿವಾನಂದ ವಾಲಿ,ಮಾಟ ಮಾಡಿ ,5 ರಿಂದ 6 ಕೋಟಿ ಕೆ.ಕಲ್ಯಾಣ ಆಸ್ತಿ ಕಬಳಿಕೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಕಾನೂನು ಸುವ್ಯವಸ್ಥೆಯ ಡಿಸಿಪಿ ಡಾ.ವಿಕ್ರಮ್ ಆಮಟೆ ತಿಳಿಸಿದ್ದಾರೆ. ಸೋಮವಾರ ಮಾಳಮಾರುತಿ ಠಾಣೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪ್ರೇಮಕವಿ, ಸಾಹಿತಿ ಕೆ.ಕಲ್ಯಾಣ ದಾಂಪತ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆಯಲ್ಲಿ ಚಿಟಿಂಗ್ ಮತ್ತು ಅಪಹರಣ ದೂರು ದಾಖಲಿಸಿದ ಪರಿಣಾಮ ಗಡ್ಡೇಕರ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಿ ಕಲ್ಯಾಣ ಅವರ ಪತ್ನಿ ಹಾಗೂ …

Read More »

ಬೆಳಗಾವಿಯಲ್ಲಿ ಜನಜಾಗೃತಿಗಾಗಿ ಸೈಕಲ್ ರ್ಯಾಲಿ

ಬೆಳಗಾವಿ- ಬೆಳಗಾವಿಯಲ್ಲಿ,ವ್ಯಸನಮುಕ್ತ ಭಾರತ,ಡ್ರಗ್ಸ್ ಮುಕ್ತ ಭಾರತ,ಫಿಟ್ ಇಂಡಿಯಾ,ಕೊರೋನಾ ಮುಂಜಾಗೃತಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು,ಕೆ ಎಸ್ ಆರ್ ಪಿ ಪೋಲೀಸ್ ಮತ್ತು ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಗಾವಿಯಲ್ಲಿ ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಚನ್ನಮ್ಮನ ವೃತ್ತದಲ್ಲಿ ಬೆಳಗಾವಿ ನಗರ ಪೋಲೀಸ್ ಆಯುಕ್ತರು,ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ,ರ್ಯಾಲಿಗೆ ಹಸಿರು ನಿಶಾನೆ ತೋರಿಸಿದರು, ವಿವಿಧ ವಿಷಯಗಳ ಕುರಿತು ಜನಜಾಗೃತಿ ಮೂಡಿಸುವ ಸೈಕಲ್ ರ್ಯಾಲಿ ಯಲ್ಲಿ ಪೋಲೀಸ್ ಅಧಿಕಾರಿಗಳು ಗಣ್ಯರು ಭಾಗವಹಿಸಿದ್ದರು. …

Read More »

ದೈರ್ಯವಂತ ಕನಕಪೂರ ಬಂಡೆಗೆ ಸಿಬಿಐ ಎದುರಿಸಲು ಆಗಲ್ವೆ…

ಬೆಳಗಾವಿ-ನೀವು ಧೈರ್ಯವಂತ.. ಕನಕಪೂರದ ಬಂಡೆ.. ಎಲ್ಲವನ್ನೂ ಎದುರಿಸೋರು ಸಿಬಿಐ ಎದುರಿಸಕ್ಕಾಗಲ್ವೆ ನಿಮಗೆ ಎಂದು ನಳಿನ್‌ಕುಮಾರ್ ಕಟೀಲ್,ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಟಾಂಗ್ ಕೊಟ್ಟರು. ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಕೋರ್ ಕಮೀಟಿ ಸಭೆ ನಡೆಸಿದ ಬಳಿಕ, ಮಾದ್ಯಮಗಳ ಜೊತೆ ಮಾತನಾಡಿದ್ರು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವೆಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಸಿಬಿಐ ಸ್ವತಂತ್ರ ಸಂಸ್ಥೆ, ಕಾಂಗ್ರೆಸ್ ಕಾಲಘಟ್ಟದಲ್ಲಿ ನಿರ್ಮಾಣ ಆಗಿರೋದು, ಕಾಂಗ್ರೆಸ್ …

Read More »

ಬೆಳಗಾವಿ ನಗರದ ನಾಲೆಗಳಲ್ಲಿ ಬೋಟುಗಳು ಓಡಾಡ್ತಾವೆ ಅಂತ್ರಪ್ಪೋ…..!!!

ಬೆಳಗಾವಿ- ಬೆಳಗಾವಿ ನಗರದಲ್ಲಿ ಹವಾರು ನಾಲೆಗಳಿವೆ,ಈ ನಾಲೆಗಳಲ್ಲಿ ಬೋಟುಗಳು ಓಡಾಡಬೇಕು,ಅನ್ನೋದು ಶಾಸಕ ಅಭಯ ಪಾಟೀಲ ಅವರ ಯೋಜನೆಯಾಗಿತ್ತು,ಈ ಯೋಜನೆ ಅನುಷ್ಠಾನ ಗೊಳಿಸಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನೀರಾವರಿ ನಿಗಮ ಬೆಳಗಾವಿ ನಗರದ ನಾಲೆಗಳನ್ನು ಸುಧಾರಿಸಿ,ನಾಲೆಗಳಲ್ಲಿ ಬೋಟುಗಳನ್ನು,ಸಿಟಿ ಬಸ್ ಗಳಂತೆ ಓಡಾಡಸಲು ಯೋಜನೆ ರೂಪಿಸಲು ಕನ್ಸಲ್ಟನ್ಸಿ ಕಂಪನಿಗೆ ಗುತ್ತಿಗೆ ನೀಡಲು ಟೆಂಡರ್ ಕರೆದಿದೆ. ಬೆಳಗಾವಿ ನಗರದ ಲೇಂಡಿ,ನಾಲಾ,ಜಕ್ಕೇರಿ ನಾಲಾ,ನಾಗಝರಿ ನಾಲೆಗಳನ್ನು ಸುಧಾರಿಸುವ,ಬೋಟುಗಳನ್ನು ಓಡಾಡುವ ಹಾಗೆ,ಅಭಿವೃದ್ಧಿಪಡಿಸಲು ಯೋಜನೆ …

Read More »

ಮಹಾದಾಯಿ ಸಮಸ್ಯೆ ಕೇಂದ್ರ ಸಚಿವರ ಜೊತೆ ಸಾಹುಕಾರ್ ಚರ್ಚೆ

*ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದ:* *ಕೇಂದ್ರ ಸಚಿವರೊಂದಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ* ಬೆಂಗಳೂರು, ಅಕ್ಟೋಬರ್ ೧೦-೨೦೨೦: ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಗೋವಾ ರಾಜ್ಯಗಳು ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಹೊಸ ವಿವಾದ ಸೃಷ್ಟಿಸಲು ಮುಂದಾಗಿದ್ದು, ಈ ವಿವಾದಗಳಿಂದ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಮತ್ತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ …

Read More »

ಕನ್ನಡ ಹೋರಾಟಗಾರ, ಶಶಿಧರ ಘೀವಾರಿ ಇನ್ನಿಲ್ಲ

ಬೆಳಗಾವಿ- ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರ,ಪತ್ರಕರ್ತ,ಸಿರಿಗನ್ನಡ ಪ್ರತಿಷ್ಠಾನದ ಸಂಸ್ಥಾಪಕ ಶಶಿಧರ ಘೀವಾರಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಸಿರಿಗನ್ನಡ ಪ್ರತಿಷ್ಠಾನದ ಸಂಸ್ಥಾಪಕರಾದ ಅವರು ಕಳೆದ ಎರಡು ದಶಕಕಗಳಿಂದ ,ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡುತ್ತ ಬಂದಿದ್ದ ಅವರು ,ನಾಡೋಜ,ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದರು.

Read More »