Breaking News

LOCAL NEWS

ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯ ಕತ್ತು ಹಿಸುಕಿದ ಪಾಪಿ ಪತಿ

ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯನ್ನು ಕೊಲೆ ಮಾಡಿದ ಪಾಪಿ ಪತಿ ಬೆಳಗಾವಿ: ಹೆಣ್ಣು ಹಡೆದರೆ ಪಾಪ,ಹಡೆದವಳಿಗೆ ಅದರ ಶಾಪ ಎನ್ನುವಂತೆ ಹೆಣ್ಣು ಹಡೆದ ಹೆಣ್ಣು ಅದೆಷ್ಟೋ ಕಷ್ಟ ಅನುಭವಿಸುತ್ತಾಳೆ,ಕೊನೆಗೆ ಈ ಪಾಪಿ ಸಮಾಜದಲ್ಲಿ ಯಾವ ರೀತಿ ತನ್ನ ಜೀವ ಕೊಡುತ್ತಾಳೆ ಅನ್ನೋದಕ್ಕೆ ಬೆಳಗಾವಿಯಲ್ಲಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿಯಾಗಿದೆ.ಪ್ರೇಮಿಗಳ ದಿನದಂದೇ ಪಾಪಿ ಪತಿಯೊಬ್ಬ ತನ್ನ ಮಡದಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕತ್ತು ಹಿಸುಕಿ ಪತಿಯಿಂದಲೇ ಪತ್ನಿಯ ಹತ್ಯೆಗೈದಿರುವ …

Read More »

ಫೆಬ್ರುವರಿ 20 ರಂದು ಬೆಳಗಾವಿಗೆ ಬರಲಿದೆ ಸಮಾಜವಾದಿ ಸಮಾಗಮ ಯಾತ್ರೆ

ಬೆಳಗಾವಿ- ಭಾರತವನ್ನು ಒಂದುಗೂಡಿಸು,ಸಂವಿಧಾನ ರಕ್ಷಿಸು ಎಂಬ ಘೋಷವಾಕ್ಯದೊಂದಿಗೆ ಜನೇವರಿ 30 ರಿಂದ ದೆಹಲಿಯ ರಾಜಘಾಟದಿಂದ ಆರಂಭವಾದ ಭಾರತ ಪರಿಕ್ರಮ ಯಾತ್ರೆ ಫೆಬ್ರುವರಿ 20 ರಂದು ಬೆಳಗಾವಿಗೆ ಬರಲಿದೆ ಊ ಯಾತ್ರೆಯಲ್ಲಿ ಸಮಾಜವಾದಿ ನಾಯಕರುಗಳಾದ ಅರುಣಕುಮಾರ ಶ್ರೀ ವಾಸ್ತವ, ಸುನೀಲಂ,ಬಿಜೆ ಪಾರೀಕ,ಮೇಧಾ ಪಾಟ್ಕರ್, ಸೇರಿಂದತೆ ಹಲವಾರು ಜನ ಸಮಾಜವಾದಿ ನಾಯಕರು ಈ ಯಾತ್ರೆಯಲ್ಲಿದ್ದಾರೆ ಎಂದು ಸಮಾಜವಾದಿ ಸಮಾಗಮದ ಸಂಯೋಜಕ ಅರವಿಂದ ದಳವಾಯಿ ತಿಳಿಸಿದರು. ಫೆಬ್ರುವರಿ 20 ರಂದು ಈ ಯಾತ್ರೆ ಬೆಳಿಗ್ಗೆ …

Read More »

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಡಿಜಿಟಲ್ ಲೈಬ್ರರಿ

ಬೆಳಗಾವಿ- ಬೆಳಗಾವಿ ನಗರ ಸುಂದರ ನಗರ,ಸ್ಮಾರ್ಟ್ ಸಿಟಿ,ರಾಜ್ಯದ ಎರಡನೇಯ ರಾಜಧಾನಿಯಾಗಿರುವ ನಮ್ಮ ಬೆಳಗಾವಿ ಹೈಟೆಕೆ ಸಿಟಿಯಾಗುತ್ತಿದೆ.ಜೊತೆಗೆ ಮೆಟ್ರೋಪಾಲಿಟಿನ್ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿದೆ. ಬೆಳಗಾವಿ ನಗರದಲ್ಲಿ ಎಲ್ಲಿ ನೋಡಿದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿಯ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆ ಆಗುತ್ತಿವೆ.ಅಶೋಕ ನಗರ,ಹನುಮಾನ ನಗರ ಸೇರಿದಂತೆ ನಗರದ ಇತರ ಭಾಗಗಳಲ್ಲಿ ಹೈಟೆಕ್ ಸ್ವೀಮೀಂಗ್ ಫೂಲ್ ಗಳು,ಒಳಾಂಗಣ ಕ್ರೀಡಾಂಗಣಗಳು ನಿರ್ಮಾಣವಾಗಿದ್ದು,ಮೈದಾನಗಳು ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈಗ …

Read More »

ಬಾಕ್ಸನಲ್ಲಿ ದೊರೆತ ಎರಡು ತಿಂಗಳ ಹೆಣ್ಣು ಮಗು…

ಬೆಳಗಾವಿ- ಎರಡು ತಿಂಗಳ ಹೆಣ್ಣು ಮಗುವನ್ನು ರಟ್ಟಿನ ಬಾಕ್ಸನಲ್ಲಿ ಹಾಕಿ ಅಂಗಡಿ ಎದುರು ಬಿಟ್ಟು ಹೋದ ಘಟನೆ ಬೆಳಗಾವಿಯ ರೈಲು ನಿಲ್ಧಾಣದಲ್ಲಿ ನಡೆದಿದೆ. ಅಂಗಡಿ ಎದುರು ಬಿಟ್ಟು ಹೋದ ಬಾಕ್ಸ್ ನಿಂದ ಮಗು ಅಳುತ್ತಿರುವದನ್ನು ಕೇಳಿ ಅಂಗಡಿಕಾರ ಬಾಕ್ಸ ಬಿಚ್ವಿದಾಗ ಎರಡು ತಿಂಗಳ ಮಗು ಪತ್ತೆಯಾಗಿದೆ. ಜನೇವರಿ 12 ರಂದು ಇದೇ ಮಾದರಿಯಲ್ಲಿ ಅದೇ ಅಂಗಡಿಯ ಎದುರು ಹೆಣ್ಣು ಮಗುವನ್ನು ಬಿಡಲಾಗಿತ್ತು ಇಂದು ಬೆಳಿಗ್ಗೆ ಅದೇ ಜಾಗದಲ್ಲಿ ಮತ್ತೊಂದು ಹೆಣ್ಷು …

Read More »

ಬೆಳಗಾವಿಯ ಈ ಜೋಡಿ ಇಂದಿನ ಯುವ ಪೀಳಿಗೆಗೆ ಮಾದರಿ

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಕುಟುಂಬಳ ಜೋಡಿಯೊಂದು ಸಿಂಪಲ್ ಮದುವೆ ಮಾಡಿಕೊಂಡು ಇಂದಿನ ಯುವ ಪೀಳಿಗೆಗೆ ಸಾಕ್ಷಿಯಾಗಲು ಹೊರಟಿದೆ.ಹಾರು ತುರಾಯಿ ಬ್ಯಾಂಡ್ ಬಾಜಾ ಇಲ್ಲದೇ ಮಹೇಶ್ ಫೌಂಡೇಶನ್ ದಲ್ಲಿ ಆಶ್ರಯ ಪಡೆದಿರುವ ಮಕ್ಕಳೆದುರು ಮದುವೆ ಮಾಡಿಕೊಳ್ಳುತ್ತಿದೆ. ಈ ಅಪರೂಪದ ಸಿಂಪಲ್ ಮದುವೆಗೆ ಬೆಳಗಾವಿಯ ಮಹೇಶ್ ಫೌಂಡೇಶನ್ ಸಾಕ್ಷಿಯಾಗಲಿದ್ದು ,ಬೆಳಗಾವಿಯ ಚಂದ್ರಕಾಂತ ಗವಾನಿ ಮತ್ತು ವೀಣಾ ಅವರ ವಿವಾಹ ಕಾರ್ಯಕ್ರಮ ನಾಳೆ ಮಹೇಶ್ ಫೌಂಡೇಶನ್ ನ ಸಭಾಂಗಣದಲ್ಲಿ ಸರಳವಾಗಿ ನಡೆಯಲಿದೆ. ಈ ಮದುವೆಯ …

Read More »

ಕೆ ಎಲ್ ಇ ಸಂಸ್ಥೆಯ ಅದ್ಯಕ್ಷರಾಗಿ ಮಹಾಂತೇಶ್ ಕೌಜಲಗಿ,ಕಾರ್ಯಾದ್ಯಕ್ಷರಾಗಿ ಪ್ರಭಾಕರ ಕೋರೆ ಅವಿರೋಧ ಆಯ್ಕೆ

ಕೆ ಎಲ್ ಇ ಸಂಸ್ಥೆಯ ಅದ್ಯಕ್ಷರಾಗಿ ಮಹಾಂತೇಶ್ ಕೌಜಲಗಿ,ಕಾರ್ಯಾದ್ಯಕ್ಷರಾಗಿ ಪ್ರಭಾಕರ ಕೋರೆ ಅವಿರೋಧ ಆಯ್ಕೆ ಬೆಳಗಾವಿ- ರಾಷ್ಟ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿರುವ ಬೆಳಗಾವಿ ಕೆ ಎಲ್ ಇ ಸಂಸ್ಥೆಯ ಅದ್ಯಕ್ಷರಾಗಿ ಮಹಾಂತೇಶ್ ಕೌಜಲಗಿ,ಕಾರ್ಯಾದ್ಯಕ್ಷರಾಗಿ ಪ್ರಭಾಕರ ಕೋರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗಾವಿಯಲ್ಲಿ ಪತ್ರಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಕೆ ಎಲ್ ಇ ಸಂಸ್ಥೆಯ ಕಾರ್ಯಾದ್ಯಕ್ಷ ಪ್ರಭಾಕರ ಕೋರೆ 104 ವರ್ಷಗಳ ಇತಿಹಾಸ, 270 ಅಂಗ ಸಂಸ್ಥೆಗಳನ್ನು …

Read More »

ಯಾವುದೇ ಖಾತೆ ಕೆಟ್ಟ ಇರೋಲ್ಲ ಜನರ ಸೇವೆ ಮಾಡೋದೆ ಮುಖ್ಯ- ಶ್ರೀಮಂತ ಪಾಟೀಲ

ಯಾವುದೇ ಖಾತೆ ಕೆಟ್ಟ ಇರೋಲ್ಲ ಜನರ ಸೇವೆ ಮಾಡೋದೆ ಮುಖ್ಯ- ಶ್ರೀಮಂತ ಪಾಟೀಲ ಬೆಳಗಾವಿ-ಸಚಿವರಾದ ಬಳಿಕ ಮೊದಲಬಾರಿ ಬೆಳಗಾವಿಗೆ ಆಗಮಿಸಿದ ಶ್ರೀಮಂತ ಪಾಟೀಲ್ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ್ರು ಶ್ರೀಮಂತ ಪಾಟೀಲ್‌ಗೆ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಸ್ವಾಗತಿಸಿದರು ಜವಳಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದಾರೆ ನಿನ್ನೆ ಅಧಿಕಾರಿಗಳ ಜೊತೆ ನೂತನ ಯೋಜನೆಗಳ ಬಗ್ಗೆ ಚರ್ಚಿಸಿದ್ದೇನೆ ಮಹೇಶ್ ಕುಮಟಳ್ಳಿ ಗೂ …

Read More »

ಬೆಳಗಾವಿಗೆ ಭೇಟಿ ನೀಡಿದ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದೇನು ಗೊತ್ತಾ…?

ಬೆಳಗಾವಿಗೆ ಭೇಟಿ ನೀಡಿದ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದೇನು ಗೊತ್ತಾ…? ಬೆಳಗಾವಿ- ಬೆಳಗಾವಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತಾಡಿದ್ರು ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಚುನಾವಣೆ ಸೋಲು, ಗೆಲುವು ಸಹಜ. ಚುನಾವಣೆಯಲ್ಲಿ ನಮ್ಮ ಕಡೆಯಿಂದ ಪ್ರಯತ್ನ ಆಗಿದೆ. ಧರ್ಮದ ಹೆಸರಿನಲ್ಲಿ ಬಿಜೆಪಿ ಪ್ರಚಾರ ಮಾಡಿತು. ಇದಕ್ಕೆ ದೆಹಲಿಯಲ್ಲಿ ಬಿಜೆಪಿಗೆ ಯಶಸ್ಸು ಸಿಕ್ಕಿಲ್ಲ ಎಂದರು ಒಡೆದು ಆಳುವ …

Read More »

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ…!!

ಬೆಳಗಾವಿ- ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸರ್ಕಾರ ಬದಲಾಯಿಸಿದೆ.ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಬದಲಾಯಿಸಿ ರಮೇಶ್ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇಂದು ಮದ್ಯಾಹ್ನದ ಹೊತ್ತಿಗೆ ಸರ್ಕಾರ ರಮೇಶ್ ಜಾರಕಿಹೊಳಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.

Read More »

ಉಮೇಶ್ ಕತ್ತಿಗೆ ,ಮಂತ್ರಿಯ ದೀಕ್ಷೆ…. ಸಾಹುಕಾರ್ ಲಕ್ಷ್ಮಣ ಸವದಿಗೆ ಅಗ್ನಿ ಪರೀಕ್ಷೆ……!!!!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ ಉಮೇಶ್ ಕತ್ತಿ ಮಂತ್ರಿಸ್ಥಾನಕ್ಕಾಗಿ ದೆಹಲಿಯಲ್ಲಿ ಲಾಭಿ ನಡೆಸಿದ್ದರೆ,ಇತ್ತ ಬೆಂಗಳೂರಿನಲ್ಲಿ ಡಿಸಿಂ ಲಕ್ಷ್ಮಣ ಸವದಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಫೆಬ್ರುವರಿ 17 ರಂದು ವಿಧಾನ ಪರಿಷತ್ತಿನ ಚುನಾವಣೆ ನಡೆಯಲಿದೆ ಈ ಚುನಾವಣೆಯಲ್ಲಿ ಅಡಳಿತಾರೂಢ ಬಿಜೆಪಿಗೆ ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಮಾಸ್ಟರ್ ಪ್ಲ್ಯಾನ್ ಸಿದ್ಧ ಪಡಿಸಿವೆ.ಬಿಜೆಪಿಯ ಅಭ್ಯರ್ಥಿ ಲಕ್ಷ್ಮಣ ಸವದಿ ಅವರನ್ನು ಸೋಲಿಸುವದಕ್ಕಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಪಕ್ಷೇತರ …

Read More »

ಬೈಕ್ ಗೆ ಟ್ಯಾಂಕರ್ ಡಿಕ್ಕಿ ಸ್ಥಳದಲ್ಲೇ ಬೈಕ್ ಸವಾರನ ಸಾವು.

ಬೆಳಗಾವಿ- ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಇಂದು ಬುಧವಾರ ಬೆಳಿಗ್ಗೆ ಎಂಟು ಘಂಟೆಗೆ ಬೆಳಗಾವಿ-ಖಾನಾಪೂರ ರಸ್ತೆಯಲ್ಲಿ ನಡೆದಿದೆ ಬೆಳಗಾವಿ- ಖಾನಾಪೂರ ರಸ್ತೆಯ ಜಾಧವ ನಗರ ಸಮೀಪ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ ಈ ಅಪಘಾತ ಸಂಭವಿಸಿದ್ದು,48 ವರ್ಷ ವಯಸ್ಸಿನ ಕರನಸಿಂಗ್ ರಜಪೂತ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕರಣಸಿಂಗ್ ರಜಪೂತ ಜಾಧವ ನಗರದಿಂದ ಉದ್ಯಮಬಾಗ್ ಕ್ಕೆ ಹೋಗುವಾಗ ಈ ದುರ್ಘಟನೆ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ವಾಘವಾಡೆ ಗ್ರಾಮದಲ್ಲಿ ನಾಲ್ಕು ಕಂಟ್ರಿ ಪಿಸ್ತೂಲ್ ಗಳ ಪತ್ತೆ….

ಬೆಳಗಾವಿ ಗ್ರಾಮೀಣ ಕ್ಷೇತ್ರದ ವಾಘವಾಡೆ ಗ್ರಾಮದಲ್ಲಿ ನಾಲ್ಕು ಕಂಟ್ರಿ ಪಿಸ್ತೂಲ್ ಗಳ ಪತ್ತೆ…. ಬೆಳಗಾವಿ- ಕಸದ ರಾಶಿಯಲ್ಲಿ ನಾಲ್ಕು ಕಂಟ್ರಿ ಪಿಸ್ತೂಲ್‌ಗಳು ಪತ್ತೆಯಾಗಿವೆ ಬೆಳಗಾವಿ ತಾಲೂಕಿನ ವಾಘವಾಡೆ ಗ್ರಾಮದಲ್ಲಿ ಕಸದ ರಾಶಿಯನ್ನು ಡಂಪ್ ಮಾಡುವಾಗ ಈ ಪಿಸ್ತೂಲ್ ಗಳು ಪತ್ತೆಯಾಗಿವೆ. ಫೆಬ್ರವರಿ 8ರಂದು ಪತ್ತೆಯಾಗಿರುವ ನಾಲ್ಕು ಕಂಟ್ರಿಮೇಡ್ ಪಿಸ್ತೂಲ್‌ಗಳ ಸುತ್ತ ಅನೇಕ ಅನುಮಾನದ ಹುತ್ತಗಳು ಹುಟ್ಡಿಕೊಂಡಿವೆ ಸ್ಥಳೀಯರು ಸ್ವಚ್ಛತಾ ಕಾರ್ಯ ಕೈಗೊಂಡ ವೇಳೆ ಪತ್ತೆ ಈ ಕಂಟ್ರಿ ಪಿಸ್ತೂಲ್ ಗಳು …

Read More »

ಬೆಳಗಾವಿಯ ಆಝಾದ್ ನಗರದಲ್ಲಿ ಯುವಕರ ನಡುವೆ ಫೈಟ್….

ಬೆಳಗಾವಿಯ ಆಝಾದ್ ನಗರದಲ್ಲಿ ಯುವಕರ ನಡುವೆ ಫೈಟ್…. ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ದಿನಾಂಕ ಘೋಷಣೆ ಆಗಿಲ್ಲ,ಚುನಾವಣೆ ನಡೆಯುವ ಲಕ್ಷಣ ಗಳೂ ಕಾಣುತ್ತಿಲ್ಲ ಆದ್ರೆ ಬೆಳಗಾವಿಯ ಕೆಲವು ವಾರ್ಡುಗಳಲ್ಲಿ ಭವಿಷ್ಯದ ಕಾರ್ಪೋರೇಟರ್ ಗಳ ನಡುವೆ ಜಗಳ ಶುರುವಾಗಿದೆ. ನಾನು ದೊಡ್ಡವನು,ನೀನು ದೊಡ್ಡವನ್ನು ಅಂತಾ ಬೆಳಗಾವಿಯ ಆಝಾದ್ ನಗರದಲ್ಲಿ ಕಳೆದು ಒಂದು ವಾರದ ಹಿಂದೆಯೇ ಯುವಕರ ಎರಡು ಗುಂಪುಗಳ ಮದ್ಯ ಫೈಟ್ ಶುರುವಾಗಿತ್ತು,ಯುವಕರ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ …

Read More »

ಶ್ರೀರಾಮಲು ಡಿಸಿಎಂ ಆದ್ರೆ ಸಂತಸ- ರಮೇಶ್ ಜಾರಕಿಹೊಳಿ

ಶ್ರೀರಾಮಲು ಡಿಸಿಎಂ ಆದ್ರೆ ಸಂತಸ- ರಮೇಶ್ ಜಾರಕಿಹೊಳಿ ಬೆಳಗಾವಿ- .ನಾನು ಡಿಸಿಎಂ ಸ್ಥಾನವಾಗಲಿ,ಅಥವಾ ಜಲಸಂನ್ಮೂಲ ಖಾತೆಯನ್ನು ಕೇಳಿರಲಿಲ್ಲ ಶ್ರೀರಾಮಲು ಡಿಸಿಎಂ ಸ್ಥಾನ ಕೊಟ್ಟರೆ ಸಂತಸ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ದೆಹಲಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಗೋವಾದಲ್ಲಿ ಕೋರ್ಟ್ ಡೇಟ್ ಇತ್ತು ಅದನ್ನು ಮುಗಿಸಿ ನೇರವಾಗಿ ದೆಹಲಿಗೆ ಬಂದಿದ್ದೇನೆ,ಸಾದ್ಯವಾದರೆ ಇವತ್ತು ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ ಇಲ್ಲಾ ಅಂದ್ರೆ ನಾಳೆ ಭೇಟಿಯಾಗ್ತೇನಿ,ಮಹೇಶ್ ಕುಮಟೊಳ್ಳಿ ಅವರಿಗೆ ಒಳ್ಳೆಯ …

Read More »

CAA,NRC ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ

  ಬೆಳಗಾವಿ ಪೌರತ್ವ ತಿದ್ದುಪಡಿ ಮಸೂದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿ ಬೆಳಗಾವಿ ವಿವಿಧ ಸಂಘಟನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಒಂದು ಜಾತಿ, ಧರ್ಮವನ್ನು ಹೊರಗಿಟ್ಟು ಕಾನೂನು ರೂಪಿಸಿರುವ ಕೇಂದ್ರ ನಡೆ ದೇಶಕ್ಕೆ ಆತಂಕ ವಿಷಯ, ಪೌರತ್ವ ಕಾಯ್ದೆ ವಿರೋಧಿಸಿ ಸೋಮವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಡಳಿತ ಮೂಲಕ ಕೇಂದ್ರ …

Read More »