Breaking News

LOCAL NEWS

ಹುದ್ದೆ ತ್ರಿಬಲ್….ಹೊಡೆದೋಡಿಸ್ತಾರೆ ಟ್ರಬಲ್ …. ದಿನನಿತ್ಯ ಅಲೆದಾಡಬೇಕು ಇವರು ಟೇಬಲ್ ಟು ಟೇಬಲ್ ಅದಕ್ಕೆ ಇವರು ಎಬಲ್…!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರಿಗೆ ಪಾಲಿಕೆ ಆಯುಕ್ತರ ಜವಾಬ್ದಾರಿಯ ಜೊತೆಗೆ ಸ್ಮಾರ್ಟ್ ಸಿಟಿ ಎಂಡಿ ಯ ಜವಾಬ್ದಾರಿ ಹಾಗು ಅಪರ ಜಿಲ್ಲಾಧಿಕಾರಿಗಳ ಚಾರ್ಜ ನೀಡಲಾಗಿದೆ ಸ್ಮಾರ್ಟ್ ಸಿಟಿ ಎಂಡಿ ಜಿಯಾವುಲ್ಲಾ ಒಂದು ತಿಂಗಳ ಕಾಲ ರಜೆ ಮೇಲೆ ತೆರಳಿದ್ದು ಈ ಹುದ್ದೆಯ ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲಿಯೇ ಈಗ ಅಪರ ಜಿಲ್ಲಾಧಿಕಾರಿಗಳು ಜನೇವರಿ ಹತ್ತರವರೆಗೆ ರಜೆ ಮೇಲೆ ತೆರಳಿರುವದರಿಂದ ಈ ಹುದ್ದೆಯ ಜವಾಬ್ದಾರಿ ಯನ್ನು ಪಾಲಿಕೆ …

Read More »

ಬೆಳಗಾವಿಯ ಡ್ರಗ್ಸ ರೂವಾರಿ ಆಕಾಶ್ ದೇಸಾಯಿ ಸೇರಿದಂತೆ ನಾಲ್ವರಿಗೆ ಹತ್ತು ವರ್ಷ ಜೈಲು ,ತಲಾ ನಾಲ್ಕು ಲಕ್ಷ ರೂ ದಂಡ

ಬೆಳಗಾವಿ- ಆಶಿಶ್ ಡ್ರಗ್ಸ್ ರೂವಾರಿ ಬೆಳಗಾವಿಯ ಆಕಾಶ ದೇಸಾಯಿ ಸೇರಿದಂತೆ ನಾಲ್ವರು ಆರೋಪಿಗಳಿಗೆ ಬೆಲಗಾವಿಯ ಎರಡನೇ ಹೆಚ್ಚುವರಿ ನ್ಯಾಯಾಲಯ ಹತ್ತು ವರ್ಷ ಜೈಲು ಶಿಕ್ಷೆ ಮತ್ತು ತಲಾ ನಾಲ್ಕು ಲಕ್ಷ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ. 2007 ರಲ್ಲಿ ನಿಂಬಾಳಕರ್ ಬೆಲಗಾವಿಯ ಎಸ್ ಪಿ ಆಗಿದ್ದ ಸಂದರ್ಭದಲ್ಲಿ ಟಿಳಕವಾಡಿ ಪೊಲೀಸರು ಆಶಿಶ್ ಡ್ರಗ್ಸ್ ಜತೆಗೆ ಆಕಾಶ ದೇಶಯಿ ಸೇರಿದಂತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. …

Read More »

ಹೊಸ ವರ್ಷದ ಹೊಸ್ತಿಲಲ್ಲಿ ಬೆಳಗಾವಿಯಲ್ಲಿ ವ್ಯೆಕ್ತಿಯ ಬರ್ಬರ ಹತ್ಯೆ…

ಬೆಳಗಾವಿ- ಬೆಳಗಾವಿಯ ಅಲಾರವಾಡ್ ಬ್ರಿಡ್ಜ್ ಬಳಿ ಅಪರಿಚಿತ ವ್ಯೆಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ ಅಲಾರವಾಡ್ ಬ್ರಿಡ್ಜ್ ಬಳಿ ಹೊಸ ವರ್ಷ ಆಚರಣೆಯ ಮುನ್ನ ವ್ತೆಕ್ತಿಯೊಬ್ಬನ ತೆಲೆಗೆ ಮಾರಕಾಸ್ತ್ರಗಳಿಂದ ತೆಲೆಯ ಮೇಲೆ ಹಲ್ಲೆ ಮಾಡಿ ಎಡಗೈ ಬೆರಳುಗಳನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಹತ್ಯೆ ಮಾಡಿದ ಸ್ಥಳದಲ್ಲಿ ಖಾಲಿ ಸರಾಯಿ ಬಾಟಲ್ ಗ್ಲಾಸುಗಳು ಪತ್ತೆಯಾಗಿದ್ದು ನಿನ್ನೆ ರಾತ್ರಿ ಪಾರ್ಟಿ ಮಾಡುವಾಗ ಈ ಹತ್ಯೆ ನಡೆದಿರಬಹುದು …

Read More »

ಬೆಳಗಾವಿಯ ಶಿವಾಜಿ ಉದ್ಯಾನವನಕ್ಕೆ ಅಭಿವೃದ್ಧಿಯ ಸ್ಪರ್ಶ

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಈಗ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು ಶಾಸಕ ಅಭಯ ಪಾಟೀಲ ಇಂದು ಬೆಳಗಿನ ಜಾವ 7 ,ಘಂಟೆಗೆ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನ ದ ಅಭಿವೃದ್ಧಿಗೆ ಚಾಲನೆ ನೀಡಿದರು ಒಂದು ಕೋಟಿ ಮೂವತ್ತು ಲಕ್ಷ ರೂ ವೆಚ್ಚದಲ್ಲಿ ಉದ್ಯಾನವನದ ಅಭಿವೃದ್ಧಿ ಆಕರ್ಷಕ ಮಕ್ಕಳ ಆಟಕೀಯ ಸಾಮುಗ್ರಿಗಳ ಅಳವಡಿಕೆ ,ಪುಟ್ ಪಾತ್ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಭಯ ಪಾಟೀಲ ಪೂಜೆ ನೆರವೇರಿಸಿ ಚಾಲನೆ …

Read More »

ಬೆಳಗಾವಿಯಲ್ಲಿ 1ಕೋಟಿ 81 ಸಾವಿರ ಖೋಟಾ ನೋಟು ಪತ್ತೆ ಮಾಡಿದ ಪೋಲೀಸರು

ಬೆಳಗಾವಿ:ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ೧ ಕೋಟಿ ೮೧ ಸಾವಿರ ರೂಪಾಯಿ ಮೌಲ್ಯದ ಖೋಟಾ ನೋಟು ಜಪ್ತಿ ಮಾಡಿದ್ದಾರೆ. ಈ ಪ್ರಕರಣದ ತನಿಖೆಗೆ ಸಿಐಡಿಗೆ ಹಸ್ತಾಂತರ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಿ.ಸಿ ರಾಜಪ್ಪ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ವಡಗಾವಿಯ ಆಶೀಫ್ ಶೇಖ್ ಮತ್ತು ಶ್ರೀನಗರದ ರಫೀಕ ದೇಸಾಯಿ ಬಂಧಿತ ಆರೋಪಿತರು. …

Read More »

ಯಾರೂ ರಾಜಿನಾಮೆ ಕೊಡಲ್ಲ – ಸತೀಶ್ ಜಾರಕಿಹೊಳಿ

ಬೆಳಗಾವಿ-ಸಚಿವರಾದ ನಂತರ ಮೊದಲ ಭಾರಿ ಬೆಳಗಾವಿಗೆ ಸತೀಶ ಜಾರಕಿಹೊಳಿ‌ ಭೇಟಿ ನೀಡಿ ಬೆಳಗಾವಿಯ ಚನ್ನಮ್ಮ ಪ್ರತಿಮೆ, ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ, ಬಸವೇಶ್ವರ ಪ್ರತಿಮೆ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆ, ಸವಾಲುಗಳಿವೆ ಇವೆ. ಹಂತ ಹಂತವಾಗಿ ಪರಿಹಾರ ಮಾಡಲು ಪ್ರಯತ್ನ ಮಾಡುತ್ತೇನೆ ಬೆಳಗಾವಿ ನಗರದ ಅಭಿವೃದ್ಧಿ ಬಗ್ಗೆ ನಿರೀಕ್ಷೆ ಹೊಂದಿದ್ದಾರೆ. ಜೊತೆಗೆ …

Read More »

ಮಂಗಳವಾರ ಬೆಳಗಾವಿಗೆ ನೂತನ ಸಚಿವರ ಆಗಮನ

ಬೆಳಗಾವಿ- ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದು ಪ್ರಮಾಣವಚನ ಸ್ವೀಕರಿಸಿರುವ ಸತೀಶ್ ಜಾರಕಿಹೊಳಿ ಮಂಗಳವಾರ ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ ಬೆಳಿಗ್ಗೆ 11-00 ಘಂಟೆಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸಾರ್ವಜನಿಕರನ್ನು ಭೇಟಿಯಾಗಲಿರುವ ಅವರು 26 ರಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ

Read More »

ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿ ಮಾಡುವದೇ ನಮ್ಮ ಗುರಿ – ಅನೀಲ ಬೆನಕೆ

ಬೆಳಗಾವಿ :ಕಡಿಮೆ ಅವಧಿಯಲ್ಲಿ ಭಾರತವನ್ನು ಸುಧಾರಣೆ‌ ಮಾಡಿ ಇಡೀ‌ ವಿಶ್ವವೇ ದೇಶದ ಕಡೆ ನೋಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿಯನ್ನಾಗಿಸುವ ಗುರಿ ಮೋದಿ‌ ಬ್ರಿಗೇಡ್ ಹಾಗೂ ಎಲ್ಲರು ಹೊಂದಬೇಕು ಎಂದು ಶಾಸಕ ಅನಿಲ ಬೆನಕೆ ಹೇಳಿದರು. ಅವರು ರವಿವಾರ ನಗರದ ಖಾಸಗಿ ಹೊಟೇಲ್ ನಲ್ಲಿ ನಾಲ್ಕು ಜಿಲ್ಲೆಯ ಮೋದಿ ಬ್ರಿಗೇಡ್ ನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಭಾರತ ವಿಶ್ವಗುರು ಮಾಡಿದ್ದ‌ ಶ್ರೇಯ ಪ್ರಧಾನಿ ನರೇಂದ್ರ‌ ಮೋದಿ …

Read More »

ಬೆಳಗಾವಿಗೆ ಕಾಂಗ್ರೆಸ್ ನಾಯಕರು ದಂಡು, ಮಾದ್ಯಗಳ ವಿರುದ್ಧ ರಮೇಶ್ ಕಿಡಿ……!!!

ಬೆಳಗಾವಿ-ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ನಾಯಕರ ದಂಡು. ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರ ದಂಡೇ ಆಗಮಿಸಿತು ಜಮಖಂಡಿಯಲ್ಲಿ ಶಾಸಕ ಆನಂದ ನ್ಯಾಮಗೌಡ ಅವರ ಅಭಿನಂಧನಾ ಸಮಾರಂಭದಲ್ಲಿ ಭಾಗಿಯಾಗಲು ಕಾಂಗ್ರೆಸ್ ನಾಯಕರು ಜಮಖಂಡಿಗೆ ತೆರಳುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದರು ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಲೋಕಸಭೆ ಚುನಾವಣೆ ಕಾಂಗ್ರೆಸ್ …

Read More »

ಯಾವುದೇ ಖಾತೆ ಕೊಟ್ಟರೂ ಜನರ ಪರವಾಗಿ ಕೆಲಸ ಮಾಡ್ತೀನಿ

ಬೆಳಗಾವಿ- ಸಚಿವ ಸಂಪುಟದ ವಿಸ್ತರಣೆ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ ಸಂಪುಟ ಸೇರ್ಪಡೆ ಬಗ್ಗೆ ಈವರೆಗೂ ಪಕ್ಷದಿಂದ, ಸರ್ಕಾರದಿಂದ ಅಧಿಕೃತವಾಗಿ ಮಾಹಿತಿ ಬಂದಿಲ್ಲಾ. ಆದ್ರೆ ಮಾಧ್ಯಮಗಳಿಂದ ಸಂಪುಟ ಸೇರ್ಪಡೆ ಬಗ್ಗೆ ಗೊತ್ತಾಗಿದೆ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ ಮಂತ್ರಿ ಆದ್ರೆ ಬೆಳಗಾವಿ ಜಿಲ್ಲೆಗೆ ಮತ್ತೆ ರಾಜಕೀಯ ವೈಭವೀಕರಣ ಬರಬೇಕಿದೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ನನ್ನನ್ನು ಈ ಹಿಂದೆ ಸಚಿವ ಸ್ಥಾನ ಕೈಬಿಟ್ಟಿದ್ದು …

Read More »

ಕಲಾಪ ವೀಕ್ಷಣೆಗೆ ಬಂದವರು ಛೀ…. ಥೂ… ಅಂದರು..

ಬೆಳಗಾವಿ ಗಡಿನಾಡಿನಲ್ಲಿ ಚಳಿಗಾಲದ ಅಧಿವೇಶನ ‌ನಡೆಯುತ್ತಿದೆ. ನಮ್ಮ ಮಂತ್ರಿಗಳು, ಶಾಕರು ಯಾವ ರೀತಿ ಹೋರಾಟ ಮಾಡುತ್ತಾರೆ ಎಂದು ನೋಡಲು ಬೆಳಗಾವಿ ನಗರದ 75 ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಕಲಾಪ ನೋಡಲು ಸೌಧಕ್ಕೆ ಬಂದಿದ್ದರು. ಆದರೆ ಇಂದು ಗುರುವಾರ ಇಂದು ಗದ್ದಲದ ಗುರುವಾರ ಆಗುವುದು ಎಂದು ಶಾಲಾ ಮಕ್ಕಳಿಗೆ ತಿಳಿದಿರಲಿಲ್ಲ. ಬೆಳಿಗ್ಗೆ ಬಂದು ಕಲಾಪ ನೋಡಲು ಸರದಿಯಲ್ಲಿ ನಿಂತ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಗದ್ದಲ ಮಾಡಿದವರಿಗೆ ಹಾಗೂ ಕಲಾಪ …

Read More »

ಸಚಿವ ಸಂಪುಟ ವಿಸ್ತರಣೆ ,ಲಕ್ಷ್ಮೀ ಹೆಬ್ನಾಳಕರ ಗೆ ದೆಹಲಿಗೆ ಬುಲಾವ್

ಬೆಳಗಾವಿ- ರಾಜ್ಯದಲ್ಲಿ ಸಚಿವ ಸಂಪುಟದ ವಿಸರಣೆ ಮಾಡುವ ಸುದ್ಧಿ ಖಾತ್ರಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಲಾಭಿಯ ಜಾತ್ರೆ ನಡೆಯುತ್ತಿದೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ನಾಳೆ ದೆಹಲಿಗೆ ಬುಲಾವ್ ಬಂದಿದ್ದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೂ ಬುಲಾವ್ ಬಂದಿದ್ದು ವಿಶೇಷವಾಗಿದೆ ಸಚಿವ ರಮೇಶ ಜಾರಕಿಹೊಳಿ ಅವರ ಬದಲಾಗಿ ಸತೀಶ್ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥಾನ ಸಿಗುವ ಸುದ್ಧಿ ಈಗ ಜಿಲ್ಲೆಯಾದ್ಯಂತ ದಟ್ಟವಾಗಿ ಹರಡಿದೆ ಜಯಮಾಲಾ …

Read More »

ಬೆಳಗಾವಿ ಅಭಿವೃದ್ಧಿಗೆ ಪಾಲಿಕೆಯಿಂದ 500 ಕೋಟಿ ರೂ ಪ್ರಸ್ತಾವನೆ

ಬೆಳಗಾವಿ-ಬೆಳಗಾವಿ ಅಧಿವೇಶನದ ಕೊಡುಗೆಯಾಗಿ ಬೆಳಗಾವಿ ನಗರದ ಅಭಿವೃದ್ಧಿಗೆ 500 ಕೋಟಿ ರೂ ವಿಶೇಷ  ಅನುದಾನ ನೀಡುವಂತೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಸರ್ಕಾರಕ್ಕ 500 ಕೋಟಿ ರೂ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದ್ದಾರೆ ಬೆಳಗಾವಿ ಮಹಾನಗರದ ರಸ್ತೆಗಳ ಅಭಿವೃದ್ಧಿ,ನಾಲೆಗಳ ಅಭಿವೃದ್ಧಿ,ಗಾರ್ಡನ್ ಗಳ ಅಭಿವೃದ್ಧಿ ಸೇರಿದಂದೆ ಬೆಳಗಾವಿ ಜನತೆಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ 500 ಕೋಟಿ ರೂ ವೆಚ್ಚದ ಯೋಜನೆ ರೂಪಿಸಿ …

Read More »

ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಅರಬೆತ್ತಲೆ ಪ್ರತಿಭಟನೆ

ಬೆಳಗಾವಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಬೇಕೆಂದು ಆಗ್ರಹಿಸಿ‌ ಮಂಗಳವಾರ ಸುವರ್ಣ ಗಾರ್ಡಣ ಬಳಿ ಕರ್ನಾಟಕ ರಾಜ್ಯ ಡಾ.ಬಾಬುಜಗಜೀವನರಾಮ್ ಜನಜಾಗೃತಿ ವೇದಿಕೆ ಕಾರ್ಯಕರ್ತರು ಅರೇಬೇತಲ್ಲೆ ಪ್ರತಿಭಟನೆ ನಡೆಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜೇಷ್ಠತಾ ಮುಂಬಡ್ತಿಯನ್ನು ಸುಗ್ರಿವಾಜ್ಞೆ ಹೊರಡಿಸಿ ಯಥಾ ಸ್ಥಿತಿಯಲ್ಲಿ ಮುಂದುವರೆಸಬೇಕು. ಲಮಾಣಿ, ಕೊರಚ, ಕೊರವ ಜಾತಿಯಲ್ಲಿ ಕಾನೂನು ಬಾಹಿರವಾಗಿ ಸೇರಿಕೊಂಡಿರುವವರನ್ನು ಕೈಬಿಡಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ. ಈ …

Read More »

ಸದನದಲ್ಲಿ ವಿಟಿಯು ಅವ್ಯವಹಾರ ಸದ್ದು

ಬೆಳಗಾವಿ-ವಿಧಾನಸಭೆಯಲ್ಲಿಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೋಟ್ಯಂತರ ರುಪಾಯಿ ಅವ್ಯವಹಾರ ಪ್ರಕರಣ ಪ್ರತಿಧ್ವನಿಸಿತು. ಪ್ರಶ್ನೋತ್ತರ ವೇಳೆಯಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು, ವಿಟಿಯು ಅವ್ಯವಹಾರ ಪ್ರಸ್ತಾಪಿಸಿದಲ್ಲದೇ, ಈ ಪ್ರಕರಣ ಸಂಬಂಧ ಕೇಶವ ನಾರಾಯಣ ಮೂರ್ತಿ ವರದಿ ನೀಡಿದ್ದು,ಈ ವರದಿಯಲ್ಲಿ ಕಳಪೆ ಕಾಮಗಾರಿ ನಡೆದಿರುವ ಕುರಿತು ಉಲ್ಲೇಖಿಸಲಾಗಿದೆ ಎಂದು ಹೇಳಿದರು. ಮಧ್ಯಪ್ರವೇಶಿಸಿದ ಬಾಗಲಕೋಟೆ ಶಾಸಕ ವೀರಣ್ಣ ಚರಂಚಿಮಠ ಅವರು, ಉತ್ತರ ಕರ್ನಾಟಕ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಲ್ಲಿ ಕೋಟ್ಯಂತರ …

Read More »