Breaking News

LOCAL NEWS

14 ರಂದು ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳ ದಂಡು ಬೆಳಗಾವಿಗೆ

ಬೆಳಗಾವಿ- ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಬೆಳಗಾವಿ ಸಾಂಬ್ರಾ ವಿಮಾಣ ನಿಲ್ಧಾಣವನ್ನು ಮೇಲ್ದರ್ಜೆಗೇರಿಸಲಾಗಿದ್ದು ಹೊಸ ಏರ್ ಪೋರ್ಟ್ ಉದ್ಘಾಟನೆಯ ಕಾರ್ಯಕ್ರಮ 14 ರಂದು ನಡೆಯಲಿದೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಕೇಂದ್ರ ವಿಮಾನಯಾನ ಸಚಿವ ಪಿ ಅಶೋಕ ಗಜಪತಿ ರಾಜು ಅವರು ಜಂಟಿಯಾಗಿ 14 ರಂದು ಮಧ್ಯಾಹ್ನ 12-30 ಕ್ಕೆ ಮೇಲ್ದರ್ಜೇಗೇರಿದ ಹೊಸ ಸಾಂಬ್ರಾ ಏರ್ ಪೋರ್ಟ್ ಉದ್ಘಾಟಿಸುತ್ತಾರೆ ಕೇಂದ್ರ ಸಚಿವ ಸದಾನಂದಗೌಡ,ಅನಂತಕುಮಾರ,ರಾಜ್ಯದ ಕೈಗಾರಿಕಾ ಸಚಿವ ಆರ್ ವ್ಹಿ ದೇಶಪಾಂಡೆ, …

Read More »

24 ರಂದು ಹುಕ್ಕೇರಿ ಹಿರೇಮಠಕ್ಕೆ ರಾಮದೇವ ಬಾಬಾ

  ಬೆಳಗಾವಿ- ಪ್ರತಿವರ್ಷ ವಿಭಿನ್ನ ಶೈಲಿಯಲ್ಲಿ ದಸರಾ ಮಹೋತ್ಸವ ಆಚರಿಸಿ ಭಾವೈಕ್ಯತೆ ಸಾರುವ ಹುಕ್ಕೇರಿಯ ಹಿರೇಮಠ ಈ ಬಾರಿಯ ದಸರಾ ಮಹೋತ್ಸವವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಲು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿದೆ ಹುಕ್ಕೇರಿಯ ಹಿರೇಮಠದಲ್ಲಿ ಸೆಪ್ಟೆಂಬರ 21 ರಿಂದ 30 ರವರೆಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಪಿಠಾರೋಹಣದ ರಜತ ಮಹೋತ್ಸವದ ಸಂಬ್ರಮ ದಸರಾ ಮಹೋತ್ಸವದಲ್ಲಿ ಕೂಡಿಕೊಂಡಿರುವದರಿಂದ ಈ ಬಾರಿಯ ದಸರಾ ಉತ್ಸವ ಮತ್ತಷ್ಟು ಅದ್ಧೂರಿಯಾಗಿ …

Read More »

ಬರ್ಮಾ ಹತ್ಯಾಕಾಂಡ ಖಂಡಿಸಿ ಬೀದಿಗಿಳಿದ ಬೆಳಗಾವಿಯ ಸಾವಿರಾರು ಮುಸ್ಲೀಮರು

ಬೆಳಗಾವಿ- ಬರ್ಮಾ ದೇಶದಲ್ಲಿ ಮುಸ್ಲಿಂ ಸಮುದಾಯದ ಮೇಲಿನ ಹತ್ಯಾಕಾಂಡವನ್ನು ಖಂಡಿಸಿ ಬೆಳಗಾವಿಯ ಮುಸ್ಲಿಂ ಬಾಂಧವರಿಂದ ಬೃಹತ್ ಪ್ರತಿಭಟನೆ ನಡೆಯಿತು ನಗರದ ಫೋರ್ಟ್ ರಸ್ತೆಯಲ್ಲಿರುವ ಪೀಪಲಕಟ್ಟಾ ಬಳಿ ಸೇರಿದ ಸಾವಿರಾರು ಜನ ಮುಸ್ಲೀಂ ಬಾಂಧವರು ಬರ್ಮಾ ದೇಶದಲ್ಲಿ ಮುಸ್ಲೀಂ ಸಮುದಾಯದ ನರಮೇಧ ನಡೆಯುತ್ತಿದೆ ಅಲ್ಲಿಯ ಜನ ಹಾದಿ ಬೀದಿಯಲ್ಲಿ ಮುಸ್ಲೀಂ ಸಮುದಾಯದ ಮಕ್ಕಳನ್ನು ವೃದ್ಧರನ್ನು ಅಮಾನವೀಯ ವಾಗಿ ಕೊಲ್ಲ ಲಾಗುತ್ತಿದೆ ವಿಶ್ವಸಂಸ್ಥೆ ಕೂಡಲೇ ಭರ್ಮಾ ದೇಶದ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು …

Read More »

ಲಿಂಗಾಯತ ಸಮಾಜಕ್ಕೆ ಶ್ಯಾಮನೂರ ಶಿವಶಂಕರಪ್ಪನವರ ಕೊಡುಗೆ ಏನು ? ಮುನವಳ್ಳಿ ಪ್ರಶ್ನೆ

ಬೆಳಗಾವಿ- ಲಿಂಗಾಯತ ಸಮಾಜದ ಹೆಸರಿನಲ್ಲಿ ಶ್ಯಾಮನೂರು ಶಿವಶಂಕರಪ್ಪ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿಕೊಳ್ಳುವದರ ಜೊತೆಗೆ ರಾಜಕೀಯ ಲಾಭ ಪಡೆದುಕೊಂಡಿದ್ದಾರೆ ಲಿಂಗಾಯತ ಸಮಾಜಕ್ಕೆ ಅವರ ಕೊಡುಗೆ ಏನು ? ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಪ್ರಶ್ನಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ ಲಿಂಗಾಯತ ಸಮಾಜದ ಮಠಾಧೀಶರು ಸಮಾಜದ ನಾಯಕರು ಸೇರಿಕೊಂಡು ಲಿಂಗಾಯತ ಧರ್ಮ ಘೋಷಣೆಗೆ ಹೋರಾಟ ಮಾಡುತ್ತಿರುವಾಗ ಶ್ಯಾಮನೂರ ಶಿವಶಂಕರಪ್ಪ ಅವರು ಸಚಿವ ಎಂ ಬಿ ಪಾಟೀಲರನ್ನು ನೋಡಿಕೊಳ್ಳುತ್ತೇನೆ …

Read More »

ಕಾಮುಕನಿಗೆ ಹಿಂಡಲಗಾ ಜೈಲಿನಲ್ಲಿ ಕೈದಿಗಳಿಂದ ಗೂಸಾ….!

ಬೆಳಗಾವಿ: ನಿನ್ನೆ ಪುಟ್ಟ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೆ ಯತ್ನಿಸಿ ಬೆಳಗಾವಿ ಹಿಂಡಲಗಾ ಜೈಲು ಪಾಲಾದ ಕಾಮುಕನಿಗೆ ಜೈಲು ಕೈದಿಗಳಿಂದ ಗೂಸಾ ಕೊಟ್ಟು ಆತಿಥ್ಯ ನೀಡಲಾಗಿದೆ ಆರೋಪಿ ಕಾಮುಕ ಸುಭಾಶ್ ನಾಯಕ್ ಗೆ ಜೈಲಿನಲ್ಲಿ ಗೂಸಾ ಕೊಟ್ಟ ಕೈದಿಗಳು ಕಾಮುಕ ನಡೆಸಿದ ನೀಚ ಕೃತ್ಯ ಖಂಡಿಸಿದ್ದಾರೆ ಹಿಗ್ಗಾಮುಗ್ಗಾ ಥಳಿಸಿದ ಜೈಲಿನ ಕೈದಿಗಳು ಕಾಮುಕನ ಮೇಲೆ ಆಕ್ರೋಶ ವ್ಯೆಕ್ತಪಡಿಸಿದ್ದಾರೆ ನಂತರ ಆರೋಪಿಯನ್ನ ಪ್ರತ್ಯೇಕವಾಗಿರಿವ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ಬೆಳಗಾವಿ ಸುದ್ಧಿಗೆ ಹಿಂಡಲಗಾ …

Read More »

ಅತ್ಯಾಚಾರಕ್ಕೊಳಗಾದ ಹೆಣ್ಣು ಮಗುವಿನ ಸ್ಥಿತಿ ಚಿಂತಾಜನಕ

ಬೆಳಗಾವಿ-ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣ ಕುರಿತು ಬೆಳಗಾವಿಯ ಯುವಕರು ತೀವ್ರ ಆಕ್ರೋಶ ವ್ಯೆಕ್ತಪಡಿಸಿದ್ದಾರೆ ಅರೋಪಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುವ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಜಿಲ್ಲಾ ಆಸ್ಪತ್ರೆಯ ಬಳಿ ಜಮಾಯಿಸಿದ ಯುವಕರು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಪಟ್ಟು ಹಿಡದಿರುವ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಯ ಬಳಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ಏರ್ಪಡಿಸಲಾಗಿದೆ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ದ್ವಾರದಲ್ಲಿ …

Read More »

ಎರಡು ವರ್ಷದ ಮಗುವಿನ ಮೇಲೆ ಕಾಮುಕನ ಅಟ್ಟಹಾಸ ಮಮ್ಮಲ ಮರಗಿದ ಜನ

ಬೆಳಗಾವಿ ಬೆಳಗಾವಿಯಲ್ಲಿ ಕಾಮುಕನೊಬ್ಬ ತನ್ನ ಅಟ್ಟಹಾಸ ಮೆರೆದಿದ್ದಾನೆ. ಎರಡು ವರ್ಷದ ಕಂದಮ್ಮನನ್ನ ಅತ್ಯಾಚಾರ ಮಾಡಿ, ಕೊಲೆಗೆ ಯತ್ನಿಸಿದ್ದಾನೆ. ಬಾಲಕಿ ತ್ರೀವ್ರ ರಕ್ತಸ್ರಾವದಿಂದ ನರಳಿದ್ರು ಕರುಣೆ ತೋರದ ಪಾಪಿ, ಕುಡಿದ ಮತ್ತಿನಲ್ಲಿ ಬಾಲಕಿಗೆ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿದ್ದಾನೆ. ಸದ್ಯ ಅಸ್ವಸ್ಥ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಇಂಥದೊಂದು ಅಮಾನವಿಯ ಘಟನೆ ನಡೆದಿದ್ದು,ಕಾಮುಕನೊಬ್ಬ ತನ್ನ ಕಾಮವಾಂಚೆಗೆ ಮುಗ್ದ ಕಂದಮ್ಮನನ್ನ ಬಳಸಿಕೊಂಡಿದ್ದಾನೆ. ಪ್ರಪಂಚದ …

Read More »

ಕೋರ್ಟ್ ರಸ್ತೆಯ ಬ್ಯಾರಿಕೇಡ್ ಗಳಿಗೆ ಕಾಂಕ್ರೀಟ್,ವಕೀಲರ ಜೊತೆ ವಾಗ್ವಾದ

  ಬೆಳಗಾವಿ- ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ರಸ್ತೆಯಲ್ಲಿರುವ ಬ್ಯಾರೀಕೇಡ್ ಗಳನ್ನು ಎರಡು ದಿನದ ಹಿಂದೆ ಕೆಲವು ಕಿಡಗೇಡಿಗಳು ಕಿತ್ತು ಬೀಸಾಕಿದ ಹಿನ್ನಲೆಯಲ್ಲಿ ಇಂದು ರಾತ್ರಿ ಪೋಲೀಸರ ಬಿಗಿ ಭದ್ರತೆಯಲ್ಲಿ ರಸ್ತೆಯಲ್ಲಿ ಮತ್ತೇ ಬ್ಯಾರಿಕೇಡ್ ಗಳನ್ನು ಅಳವಡಿಸಿ ಕಾಂಕ್ರೀಟ್ ಹಾಕುವ ಮೂಲಕ ಬ್ಯಾರೀಕೇಡ್ ಗಳನ್ನು ಇನ್ನಷ್ಟು ಭದ್ರಗೊಳಿಸಲಾಯಿತು ಎಸಿಪಿ ಶಂಕರ ಮಾರಿಹಾಳ ಅವರ ನೇತ್ರತ್ವದ ಪೋಲೀಸರ ತಂಡ ಬಿಗೆ ಭದ್ರತೆಯಲ್ಲಿ ಬ್ಯಾರೀಕೇಡ್ ಗಳಿಗೆ ಕಾಂಕ್ರೀಟ್ ಹಾಕುವ ಕಾಮಗಾರಿ ಆರಂಭಿಸಿದ ಬಳಿಕ …

Read More »

ಮೂಡಲಗಿ ಬಂದ್….. ಬೀದಿಗಿಳಿದ ಜನ, ಟಯರ್ ಗೆ ಬೆಂಕಿ ಸರ್ಕಾರದ ವಿರುದ್ಧ ಆಕ್ರೋಶ

ಬೆಳಗಾವಿ- ಗೋಕಾಕ ತಾಲೂಕಿನ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಿ ಅಧಿಕೃತವಾಗಿ ಘೋಷಣೆ ಮಾಡಿದ್ದರು ಏಕಾಏಕಿ ಸರ್ಕಾರ ಮೂಡಲಗಿ ತಾಲೂಕು ರಚನೆ ಕೈಬಿಟ್ಟಿರುವುದರಿಂದ ಆಕ್ರೋಶಗೊಂಡ ನಾಗರೀಕರು ಇಂದು ಬೀದಿಗಿಳಿದು ಪ್ರತಿಭಟನೆ  ನಡೆಸುತ್ತಿದ್ದು, ಮೂಡಲಗಿ ಪಟ್ಟಣದಲ್ಲಿ ತ್ಚೇಶಮಯ ವಾತಾವರಣ ನಿರ್ಮಾಣಗೊಂಡಿದೆ. ರಾಜ್ಯ ಸರ್ಕಾರ ಮೂಡಲಗಿ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ರಚಿಸಿದ್ದು, ಗೆಜೆಟ್ ಕೂಡ ಹೊರಡಿಸಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಹೊಸ ತಾಲೂಕುಗಳ ರಚನೆ ಪಟ್ಟಿಯಲ್ಲಿ ಮೂಡಲಗಿಯನ್ನು ಕೈ ಬಿಟ್ಟಿದ್ದರಿಂದ ನಿಯೋಜಿತ ಮೂಡಲಗಿ ತಾಲೂಕಾ  ಚಾಲನಾ ಸಮಿತಿ …

Read More »

ಸೆಪ್ಟೆಂಬರ್ 21 ರಿಂದ ಬೆಳಗಾವಿಯ ರೆಲ್ವೆ ಓವರ್ ಬ್ರಿಡ್ಜನಲ್ಲಿ ಸಂಚಾರ ಬಂದ್..

ಬೆಳಗಾವಿ- ಬೆಳಗಾವಿ ನಗರದ ಖಾನಾಪೂರ ರಸ್ತೆಯಲ್ಲಿರುವ ರೆಲ್ವೆ ಓವರ್ ಬ್ರಿಡ್ಜ ನಲ್ಲಿ ಸೆಪ್ಟೆಂಬರ್ 21 ರಿಂದ ವಾಹನ ಸಂಚಾರ ಬಂದ್ ಆಗಲಿದೆ ಶತಮಾನ ಕಂಡಿರುವ ಈ ರೆಲ್ವೆ ಮೇಲ್ಸೇತುವೆ ಶೀಥಿಲಗೊಂಡಿದ್ದು ಅದನ್ನು ನೆಲಸಮ ಮಾಡುವಂತೆ ಮಾದ್ಯಮಗಳು ಈ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದವು ರೆಲ್ವೆ ಇಲಾಖೆ,ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪರಶೀಲನೆ ಮಾಡಿ ಈ ಸೇತುವೆ ಅಪಾಯದ ಅಂಚಿನಲ್ಲಿದೆ ಎಂದು ವರದಿ ನೀಡಿದ್ದವು …

Read More »

ಮೂಡಲಗಿ ಗೆ ಸರ್ಕಾರದ ಮೂಗುದಾರ…ನಿಪ್ಪಾಣಿ ಕಾಗವಾಡಗೆ ತಾಲೂಕಿನ ಹಾರ…!

  ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಐತಿಹಾಸಿಕ ಹಿನ್ನೆಲೆಯುಳ್ಳ ಜಿಲ್ಲೆಯಾಗಿದ್ದು ಈಗ ಭೌಗೋಳಿಕವಾಗಿ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿ ಹೊರಹೊಮ್ಮಲಿದೆ ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಹನ್ನೊಂದು ತಾಲ್ಲೂಕುಗಳ ಇದ್ದು ಜಲ್ಲೆಯ ನಿಪ್ಪಾಣಿ ಮತ್ತು ಕಾಗವಾಡ ತಾಲ್ಲೂಕಿನ ಸ್ಥಾನಮಾನ ಪಡೆದಿದ್ದು ಬೆಳಗಾವಿ ಜಿಲ್ಲೆ ಈಗ ಒಟ್ಟು ಹದಿಮೂರು ತಾಲ್ಲೂಕು ಗಳನ್ನು ಹೊಂದಿರುವ ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಲಿದೆ ಸರ್ಕಾರ ಈ ಹಿಂದೆ ಹೊರಡಿಸಿದ ಗೆಜೆಟ್ ದಲ್ಲಿ ಗೋಕಾಕ ತಾಲ್ಲೂಕಿನ ಮೂಡಲಗಿ ಗ್ರಾಮವೂ …

Read More »

ಹಳ್ಳ ಹಿಡಿದ ಬೆಳಗಾವಿ ಕಾಂಗ್ರೆಸ್ ಭವನ ಕಟ್ಟಡ ಕಾಮಗಾರಿ

ಬೆಳಗಾವಿ- ಬೆಳಗಾವಿ ಜಿಲ್ಲೆ ಐತಿಹಾಸಿಕ ಜಿಲ್ಲೆ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿಯೇ ಮೊಟ್ಟ ಮುದಲ ಕಾಂಗ್ರೆಸ್ ಮಹಾ ಅಧಿವೇಶನ ನಡೆದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ವಂತ ಕಚೇರಿ ಕಟ್ಟಡ ಆಗಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಕನಸು ಕಂಡಿದ್ದರು ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಜಿಲ್ಲಾಧ್ಯಕ್ಷರಾಗಿರುವಾಗ ಕಚೇರಿ ಕಟ್ಟಡ ನಿರ್ಮಾಣದ ಪ್ರಸ್ತಾವನೆಯನ್ನು ಆಗಿನ ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ ಅವರ ಮುಂದಿಟ್ಟಾಗ ಸತೀಶ ಜಾರಕಿಹೊಳಿ ಅವರು ಸರ್ಕಾರದ ಮೇಲೆ ಒತ್ತಡ …

Read More »

ಚನ್ನಮ್ಮ ವಿವಿ ನೇಮಕಾತಿ ಆಕ್ರಮ,ವಿವಿಧ ಸಂಘಟನೆಗಳ ಕಿಡಿ

ಬೆಳಗಾವಿ- ಗಡಿನಾಡು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲೀಗ ಭಾರಿ ಅಕ್ರಮಗಳ ಹೂರಣವೇ ಬೆಳಕಿಗೆ ಬರತೊಡಗಿದೆ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತರುವ ಆಕ್ರಮಗಳನ್ನು ತಡೆಯುವಂತೆ ವಿವಿಧ ದಲಿತ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಕ್ರಮಕ್ಕಾಗಿ ವಾರದ ಗಡುವು ನೀಡಿದೆ ವಿವಿಯಲ್ಲಿನ ಅಕ್ರಮ ನೇಮಕಾತಿಗಳ ಕುರಿತು ವಿಚಾರಣೆ ನಡೆಸಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹಲವು ಸತ್ಯ ಸಂಗತಿಗಳನ್ನ ಹೊರಹಾಕಿದ್ದು ಅಕ್ರಮ ನೇಮಕಾತಿ ಹೊಂದಿದ ಕುಲಸಚಿವರು ಸೇರಿದಂತೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ …

Read More »

ಮಾರುತಿ ಝನ್ ಕಾರ್ ಹರಿದು ನಲವತ್ತು ಕುರಿಗಳ ಸಾವು

ಬೆಳಗಾವಿ- ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಮಾರುತಿ ಝನ್ ಕಾರು ಹರಿದು ನಲವತ್ತಕ್ಕೂ ಹೆಚ್ವು ಕುರಿಗಳು ಸಾವನ್ನೊಪ್ಪಿದ ಘಟನೆ ನಡೆದಿದೆ ಕಾರ್ ಕುರಿಗಳ ಮೇಲೆ ಹರಿದ ಪರಿಣಾಮ ೪೦ ಕುರಿಗಳು ಸಾವನ್ನೊಪ್ಪಿವೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿ ಕಟಕೋಳ ಸಮೀಪ ಸಾಲಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ ಬಾಗಲಕೋಟ ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಲೋಕಾಪುರದಿಂದ ಹೊರಟ ಕಾರ್ ಕುರಿಗಳ ಹರಿದು ರಸ್ತೆಯಲ್ಲಿ ರಕ್ತದೋಕುಳಿ ನಡೆದಿದೆ ಕಟಕೋಳ ಪೊಲಿಸ್ ಠಾಣೆ …

Read More »

ಗೌರಿ ಲಂಕೇಶ ಹತ್ಯೆ ಪ್ರಕರಣ ಸಿಬಿಐ ಗೆ ಒಪ್ಪಿಸಿ- ಹೆಬ್ಬಾಳಕರ

ಬೆಳಗಾವಿ- ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಖಂಡಿಸಿ.. ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದಿಂದ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮೇಣದ ಬತ್ತಿ ಹಚ್ಚಿ ಗೌರಿ ಲಂಕೇಶ ಅವರಿಗೆ ಶೃದ್ಧಾಂಜಲಿ ಅರ್ಪಿಸುವದರ ಜೊತೆಗೆ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು ಕರ್ನಾಟಕದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. …

Read More »