Breaking News

LOCAL NEWS

ಬದಲಾವಣೆಗೆ ತಕ್ಕಂತೆ ಪತ್ರಿಕೋದ್ಯಮದ ಆದ್ಯತೆ ಕೂಡ ಬದಲಾಗಿದೆ-ಗೋವೀಂದ್ ಕಾರಜೋಳ

ಬೆಳಗಾವಿ- ಬಬದಲಾವಣೆ ಜಗದ ನಿಯಮ. ಅದೇ ರೀತಿ ಕಾಲಘಟ್ಟದ ಬದಲಾವಣೆಗೆ ತಕ್ಕಂತೆ ಪತ್ರಿಕೋದ್ಯಮದ ಆದ್ಯತೆ ಕೂಡ ಬದಲಾಗಿದೆ. ಹಿಂದೆ ದೇಶಪ್ರೇಮವೇ ಪತ್ರಿಕೋದ್ಯಮದ ಬಂಡವಾಳವಾಗಿತ್ತು. ಇದೀಗ ಆ ಪ್ರೇಮ ಕಡಿಮೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾದ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ಮಹಾತ್ಮಾ ಗಾಂಧೀಜಿ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದವರು.ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ …

Read More »

ದೇವಸ್ಥಾನ ಪ್ರವೇಶ ವಿಚಾರದಲ್ಲಿ ದಲಿತ ಸಮುದಾಯಕ್ಕೆ ಬಹಿಷ್ಕಾರ…!

ಬೆಳಗಾವಿ- ಗ್ರಾಮದ ದ್ಯಾಮವ್ವನ ಜಾತ್ರೆಯಲ್ಲಿ ದಲಿತರಿಗೆ ಗ್ರಾಮದ ಸವರ್ಣೀಯರು ದೇವಸ್ಥಾನ ಪ್ರವೇಶ ಹಾಗೂ ಹಣೆಗೆ ಬಂಡಾರ ಹಚ್ಚದೇ ದಲಿತರಿಗೆ ಬಹಿಷ್ಕಾರ ಹಾಕಿದ ಘಟನೆ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಚಿಕ್ಕ ಮುನ್ನೋಳ್ಳಿ ಗ್ರಾಮದಲ್ಲಿ ನಡೆದಿದೆ.ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ನಂದಗಡ ಠಾಣೆ ಪೋಲಿಸರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸವರ್ಣೀಯರು ಮತ್ತು ದಲಿತರ ನಡುವಿನ ಬಿಕ್ಕಟ್ಟ ಬಗೆಹರಿಸಿ, ಸಂಧಾನಕ್ಕೆ ಯತ್ನ ಮಾಡಿದ್ದಾರೆ. ನಮ್ಮ ಗ್ರಾಮದಲ್ಲಿ ಕ್ಷೌರೀಕರು ದಲಿತರಿಗೆ …

Read More »

ಬೆಳಗಾವಿಯಲ್ಲಿ ನಾಳೆ, ಮೂರು ವರ್ಷದ ಮುನ್ನೋಟ…

ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಮೇ ೨೯ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬೆಳಗಾವಿಯ ನೆಹರೂ ನಗರದ ಕೆಎಲ್‌ಇ ಜೀರಗೆ ಸಭಾಭವನದಲ್ಲಿ ಮೂರು ವರ್ಷಗಳ ಮುನ್ನೋಟ ಮತ್ತುಮಾಧ್ಯಮ ಹಾಗೂ ಕಾನೂನು ವಿಷಯ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅಧ್ಯಕ್ಷತೆ ವಹಿಸುವರು. ಜಿಲ್ಲಾಉಸ್ತುವಾರಿ ಸಚಿವ ಗೋವಿಂದ …

Read More »

ಬೆಳಗಾವಿಯ Mango ಮೇಳದಲ್ಲಿ ಶುಗರ್ ಪ್ರೀ ಮಾವು….!!!

ಬೆಳಗಾವಿ- ಬೆಳಗಾವಿ ಮಹಾನಗರದ ಕ್ಲಬ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಹ್ಯುಮ್ ಪಾರ್ಕ್ ನಲ್ಲಿ ಮಾವುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ.ಈ ಮ್ಯಾಂಗೋ ಮೇಳದಲ್ಲಿ ಬಗೆ,ಬಗೆಯ ಮಾವುಗಳು ಮಾರಾಟಕ್ಕೆ ಬಂದಿದ್ದು,ಈಬಾರಿ ಸ್ವರ್ಣಲೇಖಾ ಎಂಬ ಶುಗರ್ ಪ್ರೀ ಮಾವಿನಹಣ್ಣು ಕೂಡಾ ಬಂದಿರುವದು ವಿಶೇಷ. ಮೇ 26 ರಿಂದ ನಡೆಯುತ್ತಿರುವ ಮ್ಯಾಂಗೋ ಮೇಳ ನಾಳೆ ಭಾನುವಾರ ರಾತ್ರಿಯವರೆಗೂ ನಡೆಯಲಿದ್ದು ಇಲ್ಲಿ ರತ್ನಾಗಿರಿ ಆಫುಸು,ಪೈರಿ,ಧಾರವಾಡ ಆಫುಸು,ಪೈರಿ,ಮಲಗೋಬಾ,ಸೇರಿದಂತೆ ಹತ್ತು ಹಲವು ತಳಿಯ ಮಾವುಗಳು ಇಲ್ಲಿ ಪ್ರದರ್ಶನ …

Read More »

ಕರುನಾಡೇ… ಎಂಇಎಸ್ ಗುಂಡಾಗಿರಿ, ನೋಡೇ….!!!

ಬೆಳಗಾವಿ-ಬೆಳಗಾವಿಯ ಮಡಿಲಲ್ಲಿ ಇರುವ ಪುಟ್ಟಗ್ರಾಮ ಧಾಮಣೆ. ಈ ಗ್ರಾಮದಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ ಇದ್ದರೂ ಸಹ,ಕನ್ನಡ ಅಭಿಮಾನಕ್ಕೆ ಇಲ್ಲಿ ಯಾವುದೇ ಕೊರತೆ ಇಲ್ಲ.ಆದರೂ ಬಹುಸಂಖ್ಯಾತ ಎಂಇಎಸ್ ಪುಂಡರ ಪುಂಡಾಟಿಕೆ ಇಲ್ಲಿ ನಿರಂತರವಾಗಿ ನಡೆಯುತ್ತಿದೆ.ಗ್ರಾಮಸ್ಥರು ಪುಂಡರ ಪುಂಡಾಟಿಕೆಯನ್ನು ಸಹಿಸುತ್ತಲೇ ಇದ್ದು ಜಿಲ್ಲಾಡಳಿತ ಮಾತ್ರ ಇಲ್ಲಿ ಮೂಕ ಪ್ರೇಕ್ಷಕ. ಧಾಮಣೆ ಗ್ರಾಮದಲ್ಲಿ ನಿನ್ನೆ ಕನ್ನಡದ ಹುಡುಗ ಸಿದ್ದು ಸೈಬನ್ನವರ ಮದುವೆ ನಡೆದಿತ್ತು.ಮದುವೆ ಮುಗಿದ ಬಳಿಕ ಕುಟುಂಬಸ್ಥರು, ಬಂಧು ಬಳಗದವರು ರವಿಚಂದ್ರನ್ ಅಭಿನಯದ …

Read More »

ಕನ್ನಡ ಹಾಡು ಹಚ್ಚಿ ಕುಣಿದಿದ್ದಕ್ಕೆ, ವಧು-ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರಿಂದ ಹಲ್ಲೆ

ವಧು-ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರಿಂದ ಹಲ್ಲೆ ಬೆಳಗಾವಿ-ಬೆಳಗಾವಿಯಲ್ಲಿ ಮತ್ತೆ ಪುಂಡಾಟಿಕೆ ಮೆರೆದ ಎಂಇಎಸ್ ಗೂಂಡಾಗಳು ಬೆಳಗಾವಿ ಪಕ್ಕದ ಧಾಮಣೆ ಗ್ರಾಮದಲ್ಲಿ ಕನ್ನಡದ ಹುಡುಗರ ಜೊತೆ ಗಲಾಟೆ ಮಾಡಿದ್ದಾರೆ. ಬೆಳಗಾವಿ ಅಧಿವೇಶನ ವೇಳೆ ಗೂಂಡಾವರ್ತನೆ ತೋರಿದ ಎಂಇಎಸ್ ಗೂಂಡಾಗಳಿಂದ ಮತ್ತೆ ಕಿರಿಕ್ ಶುರುವಾಗಿದೆ. *ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಚ್ಚಿದ್ದಕ್ಕೆ ಎಂಇಎಸ್ ಗುಂಡಾಗಳು ಕನ್ನಡದ ಹುಡುಗರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು ವಧು-ವರ ಸೇರಿ ಕನ್ನಡಿಗ …

Read More »

ಇಂದು ಗುರುವಾರ ಬೆಳಗಾವಿಗೆ, ಬಿಜೆಪಿ ನಾಯಕರ ದಂಡು…!!!

ಇಂದು ಬೆಳಗಾವಿಗೆ,ಬಿಜೆಪಿ ನಾಯಕರ ದಂಡು…!!! ಬೆಳಗಾವಿ- ಬೆಳಗಾವಿಯಲ್ಲಿ ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆ ರಂಗೇರಿದೆ.ಇಂದು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ವಾಯುವ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಣಮಂತ ನಿರಾಣಿ,ಶಿಕ್ಷಕರ ಮತಕ್ಷೇತ್ರದಿಂದ ಅರುಣ ಶಹಾಪೂರ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಈ ಸಂಧರ್ಭದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಜಿಲ್ಲಾ ಮಂತ್ರಿ ಗೋವಿಂದ ಕಾರಜೋಳ,ಸಚಿವರಾದ ಮುರುಗೇಶ್ ನಿರಾಣಿ,ಉಮೇಶ್ ಕತ್ತಿ,ಶಶಿಕಲಾ ಜೊಲ್ಲೆ, ಮಾಜಿ …

Read More »

ಶಾಸಕ ಅನೀಲ ಬೆನಕೆ ಅವರಿಗೆ ಡ(ಟ್ರ)ಬಲ್ ಜವಾಬ್ದಾರಿ….!!!

ಬೆಳಗಾವಿ – ಶಾಸಕ ಅನೀಲ ಬೆನಕೆ ಅವರನ್ನು ಬೆಳಗಾವಿ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲ ಅವರು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾಗಿರುವ ಅನೀಲ ಬೆನಕೆ ಅವರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿ ನೀಡಿರುವ ವಿಚಾರವನ್ನು ಹಲವರು ಭಿನ್ನ, ವಿಭಿನ್ನ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಹಾಲಿ ಶಾಸಕರಾಗಿರುವ ಅನೀಲ ಬೆನಕೆ ಅವರ ಬದಲಿಗೆ ಲಿಂಗಾಯತ ಸಮಾಜದ ಅಭ್ಯರ್ಥಿಗೆ ಈಬಾರಿ ಬಿಜೆಪಿ ಟಿಕೆಟ್ ಸಿಗಲಿದೆ. …

Read More »

ಬೆಳಗಾವಿಯ ಪತ್ರಕರ್ತರು ಈಗ ವ್ಹಾಲಿಬಾಲ್ ಆಟಗಾರರು…

ಬೆಳಗಾವಿ: ಪತ್ರಕರ್ತರು ಸದಾ ಒತ್ತಡದಿಂದ ಕೆಲಸ ಮಾಡೋದು ಎಲ್ಲರಿಗೂ ಗೊತ್ತಿರುವ ವಿಚಾರ. ಒತ್ತಡದಲ್ಲಿ ಇರುವಂತಹ ಪತ್ರಕರ್ತರಿಗಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ದಿಲೀಪ್ ಕುರಂದವಾಡೆ ಆಯ್ಕೆಯಾದ ದಿನದಿಂದ ಸದಾ ಒಂದಿಲ್ಲೊಂದು ವಿಭಿನ್ನ ಕಾರ್ಯ ಮಾಡುತ್ತಿದ್ದಾರೆ. ಸದ್ಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ ನಿಯೋಜಿತ ಸ್ಥಳದಲ್ಲಿ ಪತ್ರಕರ್ತರು ಬಿಡುವಿನ ವೇಳೆಯಲ್ಲಿ ವ್ಹಾಲಿಬಾಲ್ ಆಡಲು ವ್ಯವಸ್ಥೆ ಮಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಮಾಧ್ಯಮ …

Read More »

ಬೆಳಗಾವಿಯ, ಗೋದಾಮಿನಲ್ಲಿದ್ದ 900 ಚೀಲ ಗೊಬ್ಬರ ಸ್ವಾಹಾ…!!

ಬೆಳಗಾವಿ-ಗೋದಾಮಿನಲ್ಲಿದ್ದ 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನ ಮಾಡಿದ ಘಟನೆ,ಬೆಳಗಾವಿ ತಾಲೂಕಿನ ದೇಸೂರು ರೇಲ್ವೆ ನಿಲ್ದಾಣ ಬಳಿ ನಡೆದಿದೆ. 12 ಲಕ್ಷ ಮೌಲ್ಯದ RCF DAP ರಾಸಾಯನಿಕ ಗೊಬ್ಬರ ನಿನ್ನೆ ರಾತ್ರಿ ಕಳವು ಆಗಿವೆ.ಗೋದಾಮಿನಲ್ಲಿದ್ದ ಗೊಬ್ಬರ ಚೀಲಗಳು ಏಕಾಏಕಿ ಮಾಯವಾಗಿದ್ದು ಹೇಗೆ? ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. 900 ಗೊಬ್ಬರ ಚೀಲ ಸಾಗಿಸಲು ಕನಿಷ್ಟ ಎರಡು ಲಾರಿಗಳಾದರೂ ಬೇಕು,ಪರಿಚಯಿಸ್ಥರಿಂದಲೇ ಗೋದಾಮಿನಲ್ಲಿದ್ದ ಗೊಬ್ಬರ ಚೀಲ ಕಳ್ಳತನ ಶಂಕೆ …

Read More »

ನಾಳೆ ಬೆಳಗಾವಿಗೆ ಬರುವ V I P ಯಾರು ಗೊತ್ತಾ…??

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಪರಿಷತ್ ಚುನಾವಣೆಯ ಕಾವು ಏರಿದೆ.ವಾಯುವ್ಯ ಪದವೀಧರ, ಹಾಗೂ ಶಿಕ್ಷಕರ ಮತಕ್ಷೇತ್ರದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಘಟಾನುಘಟಿ ನಾಯಕರನ್ನು ಕಣಕ್ಕಿಳಿಸಿದ್ದು.ಕಾಂಗ್ರೆಸ್ ಪಕ್ಷ ನಾಳೆ ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದೆ. ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಿರಿಯ ಕಾಂಗ್ರೆಸ್ ಮುಖಂಡ, ಪ್ರಕಾಶ್ ಹುಕ್ಕೇರಿ,ಹಾಗೂ ಈ ಕ್ಷೇತ್ರದ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ್ ಅವರು ನಾಳೆ ಬುಧವಾರ ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಕರ್ನಾಟಕ …

Read More »

ಮತ್ತೆ ಸುದ್ದಿಯಾದ್ರು,ಬೆಳಗಾವಿಯ ಲಕ್ಷ್ಮಣ ಸವದಿ….!!

ಬೆಳಗಾವಿ- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ಸಿಂಗ್ ಅವರು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಬಿಜೆಪಿಯಿಂದ ಆಯ್ಕೆ ಆಗುವ ನಾಲ್ಕು ಜನ ಅಭ್ಯರ್ಥಿಗಳ ಪಟ್ಟಿಗೆ ಸಹಿ ಹಾಕಿದ್ದು ಈ ಪಟ್ಟಿಯಲ್ಲಿ ಮಾಜಿ ಸಿಎಂ ಬೆಳಗಾವಿಯ ಹಿರಿಯ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಅವರ ಹೆಸರು ಇದೆ. ಲಕ್ಷ್ಮಣ ಸವದಿ ಅವರು ಅಥಣಿ ವಿಧಾಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡುತ್ತಾರೆ.ಹಾಲಿ ಶಾಸಕ ಮಹೇಶ್ ಕುಮಟೊಳ್ಳಿ ಅವರಿಗೆ ಬಾರಿ ಬಿಜೆಪಿ ಟಿಕೆಟ್ ಸಿಗೋದಿಲ್ಲ,ಎನ್ನುವ ಸುದ್ದಿ ಹರದಾಡಿತ್ತು.ಆದ್ರೆ …

Read More »

ನಾಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಹೈ ಪವರ್ ಮೀಟೀಂಗ್…!!!

ಬೆಳಗಾವಿ-ವಾಯುವ್ಯ ಪದವೀಧರ, ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಸಿದ್ದತೆ ಕುರಿತು ಬೆಳಗಾವಿಯಲ್ಲಿ ಬಿಜೆಪಿ ಮಹತ್ವದ ಸಭೆ ನಡೆಸಿದ ಬೆನ್ನಲ್ಲಿಯೇ,ನಾಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸಭೆ ನಡೆಯಲಿದೆ. ನಾಳೆ ಸೋಮವಾರ ಬೆಳಿಗ್ಗೆ 11-00 ಗಂಟೆಗೆ ಬೆಳಗಾವಿಯ ಹೊಟೇಲ್ ಸಂಕಮ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಕಾಂಗ್ರೆಸ್ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಹಾಲಿ,ಮಾಜಿ ಶಾಸಕರು,ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ವಾಯುವ್ಯ ಪದವೀಧರ ಮತಕ್ಷೇತ್ರದ ಕಾಂಗ್ರೆಸ್ …

Read More »

ಗೋವಾದಲ್ಲಿ ಕಾರು ಮರಕ್ಕೆ ಡಿಕ್ಕಿ,ಬೆಳಗಾವಿಯ ಮೂವರ ದುರ್ಮರಣ..

ಬೆಳಗಾವಿ: ಗೋವಾಕ್ಕೆ ಪ್ರವಾಸಕ್ಕೆ ಹೋಗಿದ್ದವರ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಬೆಳಗಾವಿಯ ಮೂವರು ಯುವಕರು ಮೃತಪಟ್ಟ ಘಟನೆ ಮಾಪುಸಾದ ಕುಚೇಲಿ ಬಳಿ ಭಾನುವಾರ ನಸುಕಿನ ಜಾವ ನಡೆದಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ರೋಹನ ಗಡಾದ(26), ನಾಯರ್‌ ಅನಗೋಳಕರ್‌(28) ಹಾಗೂ ಸನ್ನಿ ಅನ್ವೇಕರ್‌(31) ಮೃತಪಟ್ಟವರು. ಇದೇ ಪ್ರಕರಣದಲ್ಲಿ ವಿಶಾಲ ಕಾರೇಕರ್‌(27) ಗಂಭೀರವಾಗಿ ಗಾಯಗೊಂಡಿದ್ದಾರೆ.

Read More »

ಬೆಳಗಾವಿ TO ಗೋಕಾಕ್ ಹೇರಾಯಿನ್ ಸಪ್ಲಾಯ್ ಮೂವರ ಅರೆಸ್ಟ್

ಗೋಕಾಕ ನಗರದಲ್ಲಿ ಹೆರಾಯಿನ್, ಗಾಂಜಾ ವಶ ; ನಾಲ್ವರ ಆರೆಸ್ಟ್ ಬೆಳಗಾವಿ – ನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬೆಳಗಾವಿಯ ಮೂವರು ಮತ್ತು ಖರೀದಿಗೆ ಮುಂದಾಗಿದ್ದ ಗೋಕಾಕದ ಒಬ್ಬನನ್ನು ಗೋಕಾಕ್ ನಗರದಲ್ಲಿ ಬಂಧಿಸಿರುವ ಪೊಲೀಸರು ಭಾರಿ ಪ್ರಮಾಣದಲ್ಲಿ ಪೆನ್ನಿಯನ್ನು ವಶಪಡಿಸಿಕೊಂಡಿದ್ದಾರೆ. ಗೋಕಾಕ ಪಿಡಬ್ಲೂಡಿ ಐಬಿಯ ಹತ್ತಿರ ಬೆಳಗಾವಿಯ ಅಬ್ದುಲ್‌ಖಾದಿರ @ ಜಿಯಾ ನಾಯಿಕ, ಮೋಸಿನ್ ಜಮಾದಾರ ಮತ್ತು ಸಲ್ಮಾನ ಮುಲ್ಲಾ ಇವರು ತಮ್ಮ ಕಾರ್ (ನಂಬರ ಕೆಎ-5l-ಎಮ್ ಸಿ0787 ನೇದ್ದರಲ್ಲಿ) …

Read More »